ಮಲ್ಲಿ |
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಸುಳ್ ಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಿರುವುದು ಪೋಸ್ಟ್ಕಾರ್ಡ್ ಪೋರ್ಟಲ್. ಕುಳಿತರೆ ಸುಳ್ಳು, ನಿಂತರೆ ಸುಳ್ಳು, ಉಸಿರಾಡಿದರೆ ಸುಳ್ಳು, ಹೂಸಿದರೆ ಸುಳ್ಳು-ಇದು ಪೋಸ್ಟ್ಕಾರ್ಡ್ ಸಂಸ್ಥಾಪಕ ಚೆಡ್ಡಿ ಮಹೇಶ ಹೆಗಡೆಯ ಧ್ಯೇಯವಾಕ್ಯ. ಆತ ಪದವಿ ಓದಿದವರನ್ನೂ ಯಾಮಾರಿಸುವಂತೆ ಸುಳ್ ಸುದ್ದಿ ಹರಡುತ್ತಾನೆ. ಈಗಷ್ಟೇ ಕೇಂದ್ರ ಸರ್ಕಾರ ‘ಕಾಂಗ್ರೆಸ್’ನ ಪ್ರಣಬ್ ಮುಖರ್ಜಿಗೆ ಭಾರತರತ್ನ ನೀಡಿದೆ. ಅದಿರಲಿ, ಈಗ ನಾವು ಪ್ರಸ್ತಾಪಿಸುತ್ತಿರುವ ವಿಷಯ ಎಂದರೆ, ಪ್ರಣಬ್ ಮುಖರ್ಜಿ ಸೋನಿಯಾ ಗಾಂಧಿ ವಿರುದ್ಧ ತಮ್ಮ ನಾಲ್ಕನೇ ಪುಸ್ತಕದಲ್ಲಿ ಕಿಡಿ ಕಾರಿದ್ದಾರೆ ಎಂದು ಪೋಸ್ಟ್ಕಾರ್ಡ್ ಹೇಳುತ್ತ ಬಂದ ಸುಳ್ ಸುದ್ದಿಯ ಕುರಿತು. ಐದು ತಿಂಗಳ ಹಿಂದೆಯೇ ಈ ಕೆಲಸವನ್ನು ಅದು ಶುರು ಮಾಡಿತ್ತು.
ಇನ್ನೂ ಪುಸ್ತಕವೇ ಪ್ರಕಟವಾಗಿಲ್ಲ. ಅದರ ಒಂದು ಸಣ್ಣ ಭಾಗವನ್ನು ಸುಳ್ಳನ್ನೇ ಉಸಿರಾಡುವ ಪೋಸ್ಟ್ಕಾರ್ಡ್ ಡಾಟ್ ನ್ಯೂಸ್ ಪ್ರಕಟಿಸಿತ್ತು ಮತ್ತು ಅದು ಆಗಾಗ ವೈರಲ್ ಆಗುತ್ತಲೇ ಇದೆ, ಚುನಾವಣೆ ಬಂತಲ್ಲ, ಮತ್ತಷ್ಟು ಜೋರಾಗಿಯೇ ಹರಡಲಿದೆ.
ಮಿಥ್ಯ: ಪೋಸ್ಟ್ಕಾರ್ಡ್ ಪ್ರಕಾರ, ಮಾಜಿ ರಾಷ್ಟ್ರÀಪತಿ ಪ್ರಣಬ್ ಮುಖರ್ಜಿ ಅವರ ಪುಸ್ತಕದಿಂದ ಆಯ್ದ ಭಾಗ ಹೀಗಿದೆ:
“ನರೆಂದ್ರ ಮೋದಿಯವರ ಒಂದನೇ ವರ್ಷದ ಆಡಳಿತ ಮುಗಿದಾಗ, ಅವರು ಅಲ್ಲಿವರೆಗೆ ಮಾಡಿದ್ದ ಕೆಲಸಗಳನ್ನು ಮೆಚ್ಚಿ ನಾನು ಅವರನ್ನು ಹೊಗಳಿದ್ದೆ. ಸೋನಿಯಾ ಗಾಂಧಿಯವರಿಗೆ ಇದು ಸಿಟ್ಟು ಬರಿಸಿತು.
ಒಮ್ಮೆ ಸಂಸತ್ತಿನಲ್ಲಿ ಭಾಷಣ ಮುಗಿಸಿ ಹೊರಬರುವಾಗ ಸೋನಿಯಾ ನನಗೆ ಎದುರಾದರು. ಅವರ ಜೊತೆಗಿದ್ದ ಗುಲಾಮ್ ನಬಿ ಅಜಾದ್ ಮತ್ತು ಮಣಶಂಕರ್ ಅಯ್ಯರ್ ನನಗೆ ಗೌರವದಿಂದ ಹಾರೈಸಿದರು. ಆದರೆ ಸೋನಿಯಾ ಸುಮ್ಮನೆ ನಿಂತಿದ್ದರು. ನಾನೇ ಮೊದಲು ಅವರಿಗೆ ಹಾರೈಸಬೇಕೆಂದು ಅವರು ಬಯಸಿದ್ದರು. ಅವರ ಎದುರು ಈ ದೇಶದ ಪ್ರಥಮ ಪ್ರಜೆ ನಿಂತಿದ್ದಾರೆ ಎಂಬುದನ್ನೇ ಅವರು ಮರೆತಿದ್ದರು.
ಪ್ರಣಬ್ ಮುಖರ್ಜಿಯಾಗಿ ಅಲ್ಲ, ಈ ದೇಶದ ರಾಷ್ಟ್ರಪತಿ ನಾನು ಎಂಂಬುದನ್ನು ಅವರು ಒಪ್ಪಿಕೊಳ್ಳಬೇಕಿತ್ತು.
ಸೋನಿಯಾರ ಈ ವರ್ತನೆ ನನ್ನೊಳಗೆ ತೀವ್ರ ನೋವನ್ನು ಉಂಟು ಮಾಡಿತು…”
ಮೇಲಿನ ಘಟನೆ 2015ರ ಮೇನಲ್ಲಿ ನಡೆಯಿತು ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್ಕಾರ್ಡ್ ಪ್ರಕಾರ ಇದು ಪ್ರಣಬ್ ಮುಖರ್ಜಿ ಅವರ ಪುಸ್ತಕದ ಒಂದು ಭಾಗ. ಇದನ್ನು ನಂಬಿದ ಅಮಾಯಕರು ಮತ್ತು ಸುಳ್ಳೆಂದು ಗೊತ್ತಿರುವ ಸಾವಿರಾರು ಕಿರಾತಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತ ಅನಗತ್ಯವಾಗಿ ಸೋನಿಯಾ ಗಾಂಧಿಯವರ ಮೇಲೆ ಆಕ್ರಮಣ ನಡೆಸುತ್ತಲೇ ಬಂದಿದ್ದಾರೆ.
ಸತ್ಯ: ಪ್ರಣಬ್ ಅವರ ಉದ್ದೇಶಿತ ಪುಸ್ತಕ 2018ರ ಡಿಸೆಂಬರ್ನಲ್ಲಿ ಪ್ರಕಟನೆಯಾಗಲಿದೆ ಎಂದು ಅದರ ಪ್ರಕಟಣಾ ಹಕ್ಕು ಪಡೆದಿರುವ ರೂಪಾ ಪ್ರಕಾಶನ ಸಂಸ್ಥೆ ಹೇಳಿತ್ತು. (ಈಗಲೂ ದು ಪ್ರಕಟವಾಗಿಲ್ಲ) ಅಂದರೆ ಪ್ರಣಬ್ರವರು ಈಗಾಗಲೇ ಕಾಗದದಲ್ಲಿ ಬರೆದಿರಬಹುದಾದ ಅಥವಾ ಕಂಪ್ಯೂಟರ್ನಲ್ಲಿ ಕೀ-ಇನ್ ಮಾಡಿರಬಹುದಾದ ಕಾಪಿಯನ್ನು ಪೋಸ್ಟ್ಕಾರ್ಡ್ ಕದ್ದಿರಬಹುದು ಅಂತಾ ಭಾವಿಸೋಕೂ ಆಸ್ಪದವಿಲ್ಲ. ಏಕೆಂದರೆ ಆಗ ಪ್ರಕಾಶಕರು ಮತ್ತು ಪ್ರಣಬ್ ಮುಖರ್ಜಿ ಕಚೇರಿ ಪ್ರಕಾರ ಅವರಿನ್ನೂ ಬರೆಯಲು ಶುರೂನೇ ಮಾಡಿರಲಿಲ್ಲ!
ಈ ಮೊದಲು ಪ್ರಣಬ್ ಬರೆದ ದ ಡೆಮಾಕ್ರಟಿಕ್ ಡಿಕೇಡ್, ದ ಟರ್ಬುಲೆಂಟ್ ಇಯರ್ಸ್ ಮತ್ತು ದ ಕೊಅಲಾಯನ್ಸ್ ಇಯರ್ಸ್- ಪುಸ್ತಕಗಳಲ್ಲಿ ಪ್ರಣಬ್ ಮೇಲಿನ ವಿಷಯ ಬರೆದಿಲ್ಲ, ಬರೆಯಲು ಸಾಧ್ಯವೂ ಇಲ್ಲ. ಏಕೆಂದರೆ ಇವು ಯಾವುವು 2004ರ ನಂತರದ ವಿಷಯ ಒಳಗೊಂಡಿಲ್ಲ. ಹಾಗಾದರೆ ಬರಲಿರುವ ನಾಲ್ಕನೇ ಪುಸ್ತಕ ‘ದ ಪ್ರೆಸಿಡೆನ್ಸಿಯಲ್ ಇಯರ್ಸ್’ ಪುಸ್ತಕದಲ್ಲಿ ಮೇಲಿನಂತೆ ಬರೆಯಬಹುದೇನೋ ಎಂದು ಗೆಸ್ ಮಾಡಲೂ ಆಗಲ್ಲ. ಏಕೆಂದರೆ ಪ್ರಣಬ್ ಎಂದೂ ಸಾರ್ವಜನಿಕವಾಗಿ ಸೋನಿಯಾರ ಬಗ್ಗೆ ಆಕ್ಷೇಪದ ಮಾತು ಆಡಿಲ್ಲ.
ಆಗ ಸ್ಪಷ್ಟೀಕರಣ ನೀಡಿದ್ದ ಪ್ರಣಬ್ ಕಚೇರಿ, ‘ಉದ್ದೇಶಿತ ಪುಸ್ತಕ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಎಂದು ಘೋಷಿಸುವಲ್ಲಿಗೆ ಮುಗಿಯುತ್ತದೆ. ರಾಷ್ಟ್ರಪತಿಯಾದ ನಂತರದ ಘಟನೆಗಳು ಇದರಲ್ಲಿ ಬರುವುದೇ ಇಲ್ಲ. ಈ ಪುಸ್ತಕವು 2004-2012ರವರೆಗಿನ ಅವಧಿಗೆ ಸಿಮೀತ. ಇನ್ನು ಮೇ, 2015ರ ವಿಷಯ (ಅಂದರೆ ಪೋಸ್ಟ್ಕಾರ್ಡ್ನ ಸುಳ್ಳು) ಇದರಲ್ಲಿ ಹೇಗೆ ಬರಲು ಸಾಧ್ಯ?’ ಎಂದು ಪ್ರಕಟಣೆ ನೀಡುವ ಮೂಲಕ ಪೋಸ್ಟ್ಕಾರ್ಡ್ ಕುತಂತ್ರವನ್ನು ಬಯಲು ಮಾಡಿತ್ತು.
(ಕೃಪೆ:Altnews.com)