Homeರಾಜಕೀಯಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

ಪ್ರಿಯಾಂಕಾ ಕುಡಿದು ಅರಚಿದರಂತೆ: ಅಮಲೇರಿದ ‘ಭಕ್ತರ’ ಫೇಕ್ ಸ್ಟೋರಿ

- Advertisement -
- Advertisement -

ಪ್ರಿಯಾಂಕ ಗಾಂಧಿಯವರ ಅದಿಕೃತ ರಾಜಕೀಯ ಪ್ರವೇಶದ ಘೋಷಣೆಯ ನಂತರ, ವಿಕೃತ ಬುದ್ಧಿಯ ‘ಭಕ್ತರು’ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಅವಹೇಳನ ಮಾಡಲು ಯತ್ನಿಸುತ್ತಿದ್ದಾರೆ. ಅದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಒಂದು ವಿಡಿಯೋ ಹರಿದಾಡುತ್ತಿದ್ದು ಸುಳ್ಳನ್ನು ಕಕ್ಕುತ್ತ ಸಾಗಿದೆ.
ಮಿಥ್ಯ: ‘ಪಾನಮತ್ತ ನಾಯಕಿ ಕಾಂಗ್ರೆಸ್‍ಗೆ ಹೊಸ ಭರವಸೆ ಇರಬಹುದು, ಆದರೆ ಈ ದೇಶದ ಜನರಿಗಲ್ಲ’ ಎಂಬ ಕ್ಯಾಪ್ಸನ್‍ನೊಂದಿಗೆ ಪ್ರಿಯಾಂಕಾ ಗಾಂಧಿಯ ಒಂದು ವಿಡಿಯೋವನ್ನು ಫೇಸ್‍ಬುಕ್, ವ್ಯಾಟ್ಸಾಪ್, ಟ್ವಿಟರ್‍ಗಳಲ್ಲಿ ಅಮಲೇರಿದ ‘ಭಕ್ತರು’ ತೇಲಿಬಿಟ್ಟಿದ್ದಾರೆ. ‘humlog’ ಎನ್ನುವ ಫೇಸ್‍ಬುಕ್ ಈ ಸುದ್ದಿ ಮೂಲವಾಗಿದ್ದು, ಇದಕ್ಕೆ ಈಗ 98 ಸಾವಿರಕ್ಕೂ ಹೆಚ್ಚು ವ್ಯೂವ್‍ಗಳಿದ್ದು, 3,800ಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಹಮಲೋಗ್ ಫೇಸಬುಕ್ ಪೇಜ್‍ನ ವಿಕೃತ ಬುದ್ಧಿ

ವಿಮಲ್ ಶರ್ಮಾ ಎಂಬ ವ್ಯಕ್ತಿಯ ಫೇಸ್‍ಬುಕ್ ಪೇಜ್ ಕೂಡ ಇದನ್ನೇ ಹರಡುತ್ತ, ‘ಪ್ರತಿದಿನ ಸಂಜೆ ಕುಡಿಯುವವರ ಮೇಲೆ ಕಾಂಗ್ರೆಸ್‍ಗೆ ಭರವಸೆ ಇರಬಹುದು, ದೇಶದ ಜನರಿಗಲ್ಲ. ಒಬ್ಬ ಮದ್ಯವ್ಯಸನಿ ನಾಯಕಿಯಾಗಲು ಸಾಧ್ಯವಿಲ್ಲ….’ ಎಂದೆಲ್ಲ ಬರೆಯಲಾಗಿದೆ.
ಸತ್ಯ: ಇದು ವಿಕೃತ ಮನಸ್ಸಿನ ಬಲಪಂಥಿಯರ ಕೆಲಸವೇ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಪ್ರಚಲಿತದಲ್ಲಿರುವ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಸಿಟ್ಟಿನಿಂದ ಗದರಿದ್ದು ನಿಜ. ಆದರೆ, ಈ ವಿಡಿಯೋ 9 ತಿಂಗಳ ಹಳೆಯದಾಗಿದ್ದು, ಇದನ್ನು ಏಪ್ರಿಲ್ 18, 2018ರಂದು ಎಎನ್‍ಐ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿ ಕೋಪಿತರಾದ ಪ್ರಿಯಾಂಕಾ ಗಾಂಧಿ’ ಎಂಬ ಕ್ಯಾಪ್ಸನ್ ನೀಡಲಾಗಿದ್ದು, ‘ಪರೆಸ್ಪರ ತಳ್ಳಾಡಬೇಡಿ. ನೀವು ಯಾವ ಕಾರಣಕ್ಕೆ ಇಲ್ಲಿ ಸೇರಿದ್ದಿರಿ ಎಂಬುದು ನಿಮಗೆ ಅರಿವಿರಲಿ. ನಿಮಗೆ ಸರಿಯಾಗಿ ವರ್ತಸಲಾಗದಿದ್ದರೆ ಮನೆಗೆ ಹೋಗಿ. ಈಗ ಎಲ್ಲರೂ ಅಲ್ಲಿವರೆಗೆ ಸಾಲಾಗಿ ಸಂಯಮದಿಂದ ನಡೆಯಿರಿ’ ಎಂದು ಗದರಿದರು ಎಂದು ವಿವರಿಸಲಾಗಿದೆ.
ಕಥುವಾ ಮತ್ತು ಉನ್ನಾವೊ ರೇಪ್ ಪ್ರಕರಣಗಳನ್ನು ಖಂಡಿಸಿ, ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಮಧ್ಯರಾತ್ರಿಯ

ವಿಮಲ್ ಶರ್ಮಾ ಎನ್ನುವ ಕೊಳಕನ ಫೇಕ್ ಪೋಸ್ಟ್

ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿನ ಘಟನೆಯಿದು. ಆನರು ಏಕಾಏಕಿ ತಳ್ಳಾಟ ಆರಂಭಿಸಿದಾಗ, ಪ್ರಿಯಾಂಕಾ ಗಾಂಧಿ ಮೇಲಿನಂತೆ ಗದರಿದ್ದಾರೆ. ಈ ಘಟನೆಯನ್ನು ಇಂಡಿಯಾ ಟುದೇ, ಹಿಂದೂಸ್ತಾನ್ ಟೈಮ್ಸ್‍ಗಳು ಕೂಡ ವರದಿ ಮಾಡಿದ್ದವಲ್ಲದೇ ಜನರ ನೂಕಾಟ, ಕಿಡಿಗೇಡಿತನ ತಡೆಯಲು ಪೊಲೀಸರೂ ಶ್ರಮ ಪಡಬೇಕಾಗಿತು. ತಳ್ಳಾಟದಲ್ಲಿ ಪ್ರಿಯಾಂಕಾರ ಮಕ್ಕಳನ್ನೂ ನೂಕಲಾಗಿತ್ತು. ಪಾನಮತ್ತರಾಗಿದ್ದ ಕೆಲವರು ಬ್ಯಾರಿಕೇಡ್‍ಗಳನ್ನು ಕೀಳಲೂ ಯತ್ನಿಸಿದರು ಎಂದು ವರದಿ ಮಾಡಲಾಗಿತ್ತು.
ವಿಡಿಯೋ ವಿಳಾಸ: https://twitter.com/i/status/984515031621668864

ಇದು ಅಸಲಿ ಸತ್ಯ. ಆದರೆ ಕೊಳಕು ಬುದ್ಧಿಯ ಭಕ್ತರು ಈ ವಿಡಿಯೋಕ್ಕೆ ಅವಹೇಳನದ ಕ್ಯಾಪ್ಸನ್ ಹಾಕಿ ಸುಳ್ಳು ಕತೆಯನ್ನು ಹರಡತೊಡಗಿದ್ದಾರೆ. ಕರ್ನಾಟಕದಲ್ಲಿ ವಿಕೃತ ವಿಷಭಟ್ಟನೂ ಕೂಡ ಗೌರಿ ಲಂಕೇಶರ ಕೊಲೆಯ ನಂತೆ ಇದೇ ಮಾದರಿಯಲ್ಲಿ ತನ್ನ ಹಲ್ಕಾ ಬುದ್ಧಿ ತೋರಿಸಿದ್ದ. ಈಗ ಈತನನ್ನು ಹಂಪಿ ಕನ್ನಡ ವಿವಿ ಕಾರ್ಯಕ್ರಮಕ್ಕೆ ಬರದಂತೆ ಓಡಿಸಲಾಗಿದೆ.
ಪ್ರಿಯಾಂಕಾ ಕುರಿತ ಮೇಲಿನ ಫೇಕ್‍ಸ್ಟೋರಿಯನ್ನು ಅಲ್ಟ್‍ನ್ಯೂಸ್, ಡೆಬ್‍ಕೂಪ್, ಬಿಬಿಸಿ (ಹಿಂದಿ)ಗಳು ಬಸ್ರ್ಟ್ ಮಾಡಿದ್ದು ‘ಭಕ್ತರ’ ವಿತಂಡ ಬುದ್ದಿಯನ್ನು ತೆರೆದು ಇಟ್ಟಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...