Homeಮುಖಪುಟಮರ್ಯಾದೆ ಹತ್ಯೆ ಬಗ್ಗೆ ಸಿನಿಮಾ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್

ಮರ್ಯಾದೆ ಹತ್ಯೆ ಬಗ್ಗೆ ಸಿನಿಮಾ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್

- Advertisement -
- Advertisement -

2018ರಲ್ಲಿ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಪ್ರಣಯ್ ತಂದೆ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಾಲಯದ ನಿರ್ದೇಶನದಂತೆ ಚಲನಚಿತ್ರ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ವಿರುದ್ಧ ತೆಲಂಗಾಣದಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಮ್ ಗೋಪಾಲ್ ವರ್ಮಾರವರು ‘ಮರ್ಡರ್’ ಎಂಬ ಸಿನಿಮಾವನ್ನು ನಿರ್ದೇಶಿಸಿವುದಾಗಿ ಘೋಷಿಸಿದ್ದಾರೆ. ಇದು 2017, 2018ರಲ್ಲಿ ನಡೆದ ಮಾರ್ಯಾದೆ ಹತ್ಯೆ ಪ್ರಕರಣಗಳನ್ನು ಆಧರಿಸಿದೆ ಎಂದು ಅವರು ತಿಳಿಸಿದ್ದರು.

ಈ ವಿಷಯ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಈ ವಿಷಯದ ಬಗ್ಗೆ ಚಿತ್ರ ನಿರ್ಮಿಸುವುದು ಸರಿಯಲ್ಲ ಎಂದು ಸಂತ್ರಸ್ತ ಪ್ರಣಯ್‌ ಅವರ ತಂದೆ ಬಾಲಸ್ವಾಮಿ ನ್ಯಾಯಾಲಯವನ್ನು ಸಂಪರ್ಕಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಣಯ್ ಮತ್ತು ಅವರ ಸಂಬಂಧಿಕರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಬಳಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಹಾಳುಗೆಡವಲು ಪೂರ್ವಾಗ್ರಹಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು ಎಸ್‌ಸಿ / ಎಸ್‌ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ, 2015 ಮತ್ತು ಇತರ ವಿಭಾಗಗಳ ಅಡಿಯಲ್ಲಿ ಈ ಪ್ರಕರಣವನ್ನು ಇಂದು ತೆಲಂಗಾಣದ ಮಿರಿಯಲಗುಡದಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ರಾಮ್‌ ಗೋಪಾಲ್ ವರ್ಮಾ ಜೊತೆಗೆ, ಈ ಪ್ರಕರಣದಲ್ಲಿ ಉದ್ದೇಶಿತ ಚಿತ್ರದ ನಿರ್ಮಾಪಕರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕನ್ನಡದ ಚಿಂತಕ, ಬರಹಗಾರ ಬಿ.ಶ್ರೀಪಾದ್ ಭಟ್ ತಮ್ಮ ಅನಿಸಿಕೆಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “ತಮಿಳುನಾಡಿನಲ್ಲಿ 2017ರಲ್ಲಿ ನಡೆದ ದಲಿತ ಯುವಕ ಶಂಕರ್‌ನ ಮರ್ಯಾದೆಗೇಡು ಹತ್ಯೆಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಹುಡುಗಿಯ ತಂದೆ ಚಿನ್ನಸ್ವಾಮಿಯನ್ನು ಮದ್ರಾಸ್ ಹೈಕೋರ್ಟ್ ತಪ್ಪಿತಸ್ಥನಲ್ಲ ಎಂದು ಬಿಡುಗಡೆಗೊಳಿಸಿದೆ. ಹಾಡು ಹಗಲೆ ನೂರಾರು ಜನರ ಎದುರು ನಡೆದ ಕೊಲೆಯ ಸೂತ್ರಧಾರ ಹುಡುಗಿಯ ತಂದೆಯ ವಿರುದ್ಧ ಸೂಕ್ತ ಸಾಕ್ಷಾದಾರಗಳಿಲ್ಲ ಬಿಡುಗಡೆಯಾಗಿರುವುದು ದುರಂತ.

ಇನ್ನೊಂದೆಡೆ 2018ರಲ್ಲಿ ತೆಲಂಗಾಣದಲ್ಲಿ ನಡೆದ ದಲಿತ ಯುವಕ ಪ್ರಣಯ್‌ನ ಮರ್ಯಾದೆಗೇಡು ಹತ್ಯೆ ಪ್ರಕರಣವನ್ನು ಆಧರಿಸಿ ರಾಮ್ ಗೋಪಾಲ್ ವರ್ಮ ‘ಮರ್ಡರ್’ ಎಂಬ ಸಿನಿಮಾ ನಿರ್ದೇಶಿಸಿದ್ದಾನೆ. ಈತನೇ ಹೇಳಿಕೊಂಡಿರುವಂತೆ ಇದು ಹುಡುಗಿ ಅಮೃತಾಳ ಹಟಮಾರಿತನ ಮತ್ತು ಆಕೆಯ ತಂದೆ ಮಾರುತಿ ರಾವ್‌ನ ಅತಿಯಾದ ಪಿತೃಪ್ರೇಮದಿಂದ ಪ್ರಣಯ್‌ನ ಹತ್ಯೆಯಾಗಿದೆಯಂತೆ. ಅಂದರೆ ದಲಿತ ಎನ್ನುವ ಕಾರಣಕ್ಕೆ ನಡೆದ ಕೊಲೆಯನ್ನು ಕೌಟುಂಬಿಕ ಕಲಹ ಎಂದು ತೋರಿಸಲು ಮುಂದಾಗಿರುವ ರಾಮಗೋಪಾಲ್ ವರ್ಮ ತಾನೊಬ್ಬ ಜೀವವಿರೋಧಿ ನಿರ್ದೇಶಕ ಎಂದು ಸಾಬೀತು ಪಡಿಸಿದ್ದಾನೆ.

ಶಂಕರ್‌ನ ಹತ್ಯೆಯಲ್ಲಿ ಹೈಕೋರ್ಟ್ ತೀರ್ಪು ಬರುವುದಕ್ಕೂ ಒಂದು ದಿನ ಮುಂಚೆ ವರ್ಮಾನ ಸಿನಿಮಾದ ಪೋಸ್ಟರ್ ಬಿಡುಗಡೆಯಾಯಿತು. ಇದು ಕಾಕತಾಳೀಯದಂತಿಲ್ಲ. ಇದುವರೆಗೂ ವರ್ಮಾನ ವರ್ತನೆ ವಿಲಕ್ಷಣ ಎನ್ನುವಂತಿತ್ತು ಆದರೆ ಈಗ ವಿಕೃತಿ ಎಂದು ನಿಜವಾಗಿದೆ.

ದುರಂತವೆಂದರೆ ಜನರ ಸಹಾನಭೂತಿಯೂ ಮರ್ಯಾದೆಗೇಡು ಹತ್ಯೆಯ ಸೂತ್ರಧಾರಾದ ಚಿನ್ನಸ್ವಾಮಿ ಮತ್ತು ಮಾರುತಿ ರಾವ್ ಎಂಬ ತಂದೆಯರ ಪರವಾಗಿರುವುದು. ಇದಕ್ಕೆ ನ್ಯಾಯಾಧೀಶರೂ ಹೊರತಲ್ಲವೇನೊ. ಇದು ಕೇವಲ ದುರಂತ ಮಾತ್ರವಲ್ಲ, ಪ್ರಜ್ಞಾವಂತರ ಸೋಲು ಸಹ. ಹಾಗೆಯೇ ಇದರ ಲಾಭ ಪಡೆಯಲು ಮುಂದಾದ ವರ್ಮಾನಂತಹ ಮಾನಗೇಡಿಗಳು ಈ ಮೂಲಕ ಈ ಜಾತಿ ಕ್ರೌರ್ಯಕ್ಕೆ ತಂದುಕೊಡುವ ಮಾನ್ಯತೆ ಇದೆಯಲ್ಲಾ ಅದು ಮತ್ತಷ್ಟು ಭೀಕರವಾದದ್ದು”. ಎಂದು ಶ್ರೀಪಾದ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಅಂತರ್ಜಾತಿ ವಿವಾಹದಿಂದ ಹತ್ಯೆಯಾದ ಪ್ರಣಯ್ ಹೆಂಡತಿ ಅಮೃತಗೆ ತಂದೆಯಿಂದ ಮತ್ತೆ ಬೆದರಿಕೆ: ದೂರು ದಾಖಲು

ಪ್ರಣಯ್‌ ಕೊಲೆಗಾರ, ಅಮೃತಾಳ ತಂದೆ ಮಾರುತಿರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪ್ರಜ್ನಾವಂತ ನ್ಯೈಜ ವ್ಯಕ್ತಿಗಳೀಗೆ ಮಾತ್ರ ಈ ದೇಶದಲ್ಲಿ ಸವಾಲು ಎದುರಾಗುತ್ತದೆ.

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...