ಮೇ 10 ರಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರ ಶವವು ರಕ್ತಸಿಕ್ತವಾಗಿ ಬೀದಿಯಲ್ಲಿ ಪತ್ತೆಯಾಗಿದೆ. ಈ ರಾಜ್ಯದಲ್ಲಿ ಏನಾಗುತ್ತಿದೆ ಎಂದು ಶಾಸಕ ಜಿಗ್ನೇಶ್ ಮೇವಾನಿ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು “ಏನು ನಡೆಯುತ್ತಿದೆ ಇಲ್ಲಿ? ಗುಣವಂತ್ ಮಕ್ವಾನಾ ಎಂಬ 70 ವರ್ಷದ ಕೋವಿಡ್ -19 ರೋಗಿಯನ್ನು ಮೇ 10 ರಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಈಗ ಅವರ ಶವ ಬೀದಿಯಲ್ಲಿ ಪತ್ತೆಯಾಗಿದೆ! ಹೌದು, ಬೀದಿಯಲ್ಲಿ ರಕ್ತಸಿಕ್ತವಾಗಿ ಸಿಕ್ಕಿದೆ. ಸಿಎಂ ವಿಜಯ್ ರೂಪಾಣಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದು ಬಹುದೊಡ್ಡ ಅಪರಾಧ” ಎಂದು ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ.
Bloody what the hell is going on? Gunawant Makwana, a 70 year old Covid-19 patient was admitted at Ahmedabad Civil Hospital on 10th May and now his body is found on the street! Yes, bloody on the street! Mr. Rupani take moral responsibility and step down. This is just criminal. pic.twitter.com/CkgA2GheRz
— Jignesh Mevani (@jigneshmevani80) May 17, 2020
ಮುಂದುವರೆದು ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಅವರು ಭಾರತದ ಒಳ್ಳೆಯ ಆಸ್ಪತ್ರೆ ಎಂದು ಹೇಳಿಕೊಳ್ಳುವ ಅಹಮದಾಬಾದ್ ಆಸ್ಪತ್ರೆಯ ಸಿಬ್ಬಂದಿ ಗುಣವಂತ್ ಮಕ್ವಾನಾರವರ ಕುಟುಂಬ ಸದಸ್ಯರಿಗೆ ಫೋನ್ ಮಾಡಿ “ಮಕ್ವಾನಾರವರ ಮೃತದೇಹವು 8 ಕಿ.ಮೀ ದೂರದ ಬಸ್ ಸ್ಟಾಪ್ನಲ್ಲಿದೆ ಎಂದು ತಿಳಿಸುತ್ತಾರೆ. ಕೊರೊನಾ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಆಸ್ಪತ್ರೆಯ ಸಿಬ್ಬಂದಿ ಮತ್ತು ಸರ್ಕಾರ ಭಾರೀ ನಿರ್ಲಕ್ಷ್ಯ ವಹಿಸಿದೆ” ಎಂದು ಆರೋಪಿಸಿದ್ದಾರೆ.
ಇಂತ ಕ್ರೂರ ನಿರ್ಲಕ್ಷ್ಯವನ್ನು ದೇಶದ ಎಲ್ಲಿಯೂ ನಾನು ನೋಡಿಲ್ಲ. ಸರ್ಕಾರವು ತನ್ನ ಗುಜರಾತ್ ಮಾಡೆಲ್ನ ಇಮೇಜ್ಗೆ ಚ್ಯುತಿ ಬಾರದಂತೆ ಈ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗದಂತೆ ನೋಡಿಕೊಂಡಿದೆ. ಈ ರೀತಿ ಕೊರೊನ ರೋಗಿಗಳು ಬೀದಿಯಲ್ಲಿ ಶವವಾಗುತ್ತಿರುವುದು ಎರಡನೇ ಪ್ರಕರಣವಾಗಿದ್ದು ಇದೊಂದು ಕ್ರಿಮಿನಲ್ ಅಪರಾಧವಾಗಿದ್ದು, ಸಿಎಂ ವಿಜಯ್ ರೂಪಾಣಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
गुजरात मॉडल ध्वस्त हो चुका है।
गुजरात की स्थिति ऐसी है कि कोरोना के मरीज अस्पताल के बाहर बैठे हैं। उन्हें भगवान के भरोसे छोड़ दिया जा रहा है।
हद्द तो तब हो गयी जब जिस मरीज का अस्पताल में इलाज चल रहा था उसकी लाश 5 दिन बाद बस स्टैंड पर मिलती है।
क्या यही है 'गुजरात मॉडल'? pic.twitter.com/0GIBLOUmoo
— Jignesh Mevani (@jigneshmevani80) May 17, 2020
ಇದು ‘ಗುಜರಾತ್ ಮಾದರಿ’ಯಾದರೆ ಇದನ್ನು ನಾವು ಧ್ವಂಸಗೊಳಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: N-95 ಮಾಸ್ಕ್ ಕೊರತೆ ಬಗ್ಗೆ ದನಿಯೆತ್ತಿದ್ದ ವೈದ್ಯನಿಗೆ ಕೈಕಟ್ಟಿ, ಥಳಿಸಿದ ಪೊಲೀಸರು ; ತೀವ್ರ ಖಂಡನೆ