ಯುವಕನೊಬ್ಬ ನೇಣುಹಾಕಿಕೊಂಡ ಸ್ಥಿತಿಯಲ್ಲಿ ನೇತುಬಿದ್ದಿರುವ ಮೃತದೇಹ ತುಮಕೂರಿನ ಬಟವಾಡಿ ಬ್ರಿಜ್ ಬಳಿ ಕಂಡುಬಂದಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಇಲ್ಲಿ ನೇಣುಬಿಗಿದು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಈ ಹಿಂದೆ ತುಮಕೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ರವಿ ಹತ್ಯೆಯಾದ ಸ್ಥಳಕ್ಕೆ ಹತ್ತು-ಹದಿನೈದು ಮೀಟರ್ ದೂರದಲ್ಲಿ ಯುವಕನ ದೇಹ ನೇತು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 4ರ ಬಟವಾಡಿ ಬಲಭಾಗದ ದೇವರಾಯನಪಟ್ನ ಮತ್ತು ಬೆಂಗಳೂರಿಗೆ ಹೋಗುವ ತಿರುವಿನಲ್ಲಿ ಕಬ್ಬಿಣದ ಕಂಬಿಗೆ ದಾರದಿಂದ ನೇಣುಬಿಗಿಯಲಾಗಿದೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾತ್ರಿ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಜನರು ಮತ್ತು ವಾಹನ ಸಂಚಾರ ಇಲ್ಲದಿರುವ ಸಮಯದವನ್ನು ನೋಡಿಕೊಂಢೇ ಹತ್ಯೆ ಮಾಡಿ ಇಲ್ಲಿ ನೇಣುಹಾಕಿ ಹೋಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತ ವ್ಯಕ್ತಿಯನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿ ಕೇಂದ್ರದ ಮಧು ಎಂದು ಗುರುತಿಸಲಾಗಿದೆ.
ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಬಟವಾಡಿ ಬ್ರಿಡ್ಜ್ ನಲ್ಲಿ ಕಂಬಿಯೊಂದು ಇದೆ. ಆ ಕಂಬಿಗೆ ನೇಣುಹಾಕಿಕೊಂಡಂತೆ ಕಂಡುಬರುತ್ತಿದ್ದರೂ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಯುವಕನ ಸಾವಿನ ಕುರಿತು ವಿವಿಧ ಆಯಾಮಗಳಿಂದ ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ತುಮಕೂರು: ಗ್ಯಾಸ್ ಸೋರಿಕೆ ಭಯದಿಂದ ಗ್ರಾಮ ತೊರೆಯುತ್ತಿರುವ ಜನರು