Homeಕವನಹೌದು ದೀಪ ಹಚ್ಚಬೇಕಿದೆ.. ಅಜ್ಞಾನದೆದೆಯಲ್ಲಿ ವಿಜ್ಞಾನದ ದೀವಿಗೆ ಬೆಳಗಬೇಕಿದೆ

ಹೌದು ದೀಪ ಹಚ್ಚಬೇಕಿದೆ.. ಅಜ್ಞಾನದೆದೆಯಲ್ಲಿ ವಿಜ್ಞಾನದ ದೀವಿಗೆ ಬೆಳಗಬೇಕಿದೆ

- Advertisement -
- Advertisement -

✍?ಮಿಸ್ರಿಯಾ.ಐ.ಪಜೀರ್

ದೀಪ ಹಚ್ಚಬೇಕಿದೆ
——————————

ದಿಢೀರನೆ ಬಿದ್ದ ಬೀಗ ಮುದ್ರೆಗೆ
ಕತ್ತು ಹೊರಳಿಸಲೂ ಸಮಯವಿಲ್ಲದೆ
ಬದುಕನುಳಿಸುವ ಬವಣೆಗೆ
ಕಾಲ್ನಡಿಗೆಯೇ ಸಾಕ್ಷಿಯಾಯಿತು

ಊರ ದಾರಿಯುದ್ದಕ್ಕೂ
ಜೀವತೆತ್ತವರಿಗಾಗಿ
ಮೋಂಬತ್ತಿ ಹಚ್ಚಬೇಕಿದೆ

ಗಂಟೆ ಜಾಗಟೆ ಚಪ್ಪಾಳೆಯ ಪ್ರಹಸನದಿ
ಹೊಮ್ಮಿದ ಅಗಾಧ ಶಕ್ತಿಗೆ
ಬಸವಳಿದ ಜೀವ
ಚೈತನ್ಯ ಪಡೆಯಲಿಲ್ಲ

ಊರ ದಾರಿಯಲಿ ಕಣ್ಣೆವೆ ಮುಚ್ಚಿದ
ಹಸಿದ ಜೀವಗಳೇ, ಕ್ಷಮಿಸಿರೆಂದು
ಮೋಂಬತ್ತಿ ಹಚ್ಚಬೇಕಿದೆ

ವೈರಸಿಗೂ ಟೊಪ್ಪಿಯಿಟ್ಟು
ಪೈಜಾಮ ಉಡಿಸಿ ದಾಡಿಯಿಟ್ಟು
ಕೋವಿ ಕೊಟ್ಟ ಮಾಧ್ಯಮಗಳು
ಕೋಮು ನಂಜೇರಿ ಸತ್ತಿವೆ

ಆತ್ಮಕ್ಕೆ ಕೊಂಚವಾದರೂ
ಶಾಂತಿ ಸಿಗಲೆಂದು
ದೀಪ ಹಚ್ಚಬೇಕಿದೆ

ಉರಿವ ಬೆಳಕ ನಂದಿಸಿ
ನಿಶೆಯೆಡೆಗೆ ಚಲಿಸದೆ
ಐಕ್ಯದಿ ಮೌಢ್ಯವ
ಸುಟ್ಟು ಬಿಡಬೇಕಿದೆ

ಹೌದು ದೀಪ ಹಚ್ಚಬೇಕಿದೆ..
ಅಜ್ಞಾನದೆದೆಯಲ್ಲಿ ವಿಜ್ಞಾನದ
ದೀವಿಗೆ ಬೆಳಗಬೇಕಿದೆ
****************

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...