Homeನಿಜವೋ ಸುಳ್ಳೋFact check: ಕೇಂದ್ರ ಸರ್ಕಾರ ನಮ್ಮ ಮೊಬೈಲ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದೆಯೇ?

Fact check: ಕೇಂದ್ರ ಸರ್ಕಾರ ನಮ್ಮ ಮೊಬೈಲ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದೆಯೇ?

2019 ರ ವರದಿಯು ಫೇಸ್‌ಬುಕ್ ಮೆಸೆಂಜರ್, ಸಿಗ್ನಲ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ನೀಡುವ ಸುರಕ್ಷತೆಯನ್ನು ಹೋಲಿಸಿದಾಗ ನಾಲ್ಕು ಅಪ್ಲಿಕೇಶನ್‌ಗಳಲ್ಲಿ ಸಿಗ್ನಲ್ ಎಂಬ ಆಪ್ ಅತ್ಯುನ್ನತ ಗುಣಮಟ್ಟದ ಭದ್ರತೆಯನ್ನು ಹೊಂದಿದೆ.

- Advertisement -
- Advertisement -

ಭಾರತ ಸರ್ಕಾರವು ಎಲ್ಲಾ ರೀತಿಯ ಆನ್‌ಲೈನ್ ಮತ್ತು ದೂರವಾಣಿ ಸಂವಹನಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ರಾಜಕೀಯ ಅಥವಾ ಧರ್ಮಕ್ಕೆ ಸಂಬಂಧಿಸಿದ ಸಂದೇಶಗಳನ್ನು ರವಾನಿಸದಂತೆ ಜನರನ್ನು ಕೇಳಿದೆ ಎಂದು ವಾಟ್ಸಾಪ್ ಸಂದೇಶವೊಂದು ವೈರಲ್ ಆಗಿದ್ದು “ಅಲ್ಟ್ ನ್ಯೂಸ್” ಇದರ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದೆ.

ವೈರಲ್ ಸಂದೇಶಗಳು ಹೀಗಿವೆ “ನಾಳೆಯಿಂದ ಭಾರತದಲ್ಲಿ ಹೊಸ ಸಂವಹನ ನಿಯಮಗಳಿವೆ. ಎಲ್ಲಾ ಕರೆಗಳನ್ನು ದಾಖಲಿಸಲಾಗುತ್ತದೆ, ಎಲ್ಲಾ ಫೋನ್ ಕರೆ ರೆಕಾರ್ಡಿಂಗ್‌ಗಳನ್ನು ಉಳಿಸಲಾಗತ್ತದೆ, ವಾಟ್ಸಾಪ್, ಟ್ವಿಟರ್, ಫೇಸ್‌ಬುಕ್, ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ನಿಮ್ಮ ಸಾಧನಗಳು ಸಚಿವಾಲಯ ವ್ಯವಸ್ಥೆಗಳಿಗೆ ಸಂಪರ್ಕ ಹೊಂದಿವೆ. ಯಾವುದೇ ಪೋಸ್ಟ್‌ಗಳು ಅಥವಾ ವೀಡಿಯೊಗಳನ್ನು ಫಾರ್ವರ್ಡ್ ಮಾಡಬೇಡಿ, ಸರ್ಕಾರ / ಪ್ರಧಾನಿ ಇತ್ಯಾದಿಗಳ ಬಗ್ಗೆ ರಾಜಕೀಯ / ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನೀವು ಸ್ವೀಕರಿಸುತ್ತೀರಿ. ಯಾವುದೇ ರಾಜಕೀಯ ಮತ್ತು ಧಾರ್ಮಿಕ ಚರ್ಚೆಯಲ್ಲಿ ಯಾವುದೇ ಸಂದೇಶವನ್ನು ಬರೆಯುವುದು ಅಥವಾ ರವಾನಿಸುವುದು ಈಗ ಅಪರಾಧ …. ವಾರಂಟ್ ಇಲ್ಲದೆ ಬಂಧನ …ಇದು ತುಂಬಾ ಗಂಭೀರವಾಗಿದೆ. ಅನಗತ್ಯ ಸಂದೇಶಗಳನ್ನು ಕಳುಹಿಸದಂತೆ ನೋಡಿಕೊಳ್ಳಿ. ಕಾಳಜಿ ವಹಿಸಲು ಈ ಬಗ್ಗೆ ಎಲ್ಲರಿಗೂ ತಿಳಿಸಿ. ನಿಮ್ಮ ಸ್ನೇಹಿತರು ಮತ್ತು ಇತರರಿಗೆ ತಿಳಿಸಿ”

ಈ ಮಾಹಿತಿ ಹರಡುತ್ತಿದ್ದಂತೆ ವಾಟ್ಸಪ್ ಗಳಲ್ಲಿ ಸಂದೇಶವನ್ನು ಕೇವಲ ಅಡ್ಮಿನ್‌ಗಳು ಮಾತ್ರ ಹಾಕುವಂತೆ ಮಾಡಲಾಗಿತ್ತು. ಹಲವರು ಇದು ಸಂವಿಧಾನ ವಿರೋಧಿಯಾದ್ದು ಜನರ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲವೆಂದು ವಾದಿಸಿದ್ದರೂ ಸುಳ್ಳು ಸಂದೇಶ ನಿರಂತರವಾಗಿ ಹರಡಲಾಗುತ್ತಿತ್ತು.

ಮಾರ್ಚ್ 24 ರಂದು, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ “ಅಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ” ಎಂಬ ಸಂದೇಶವನ್ನು ಟ್ವಿಟರ್ ಮೂಲಕ ಹೇಳಿತ್ತು.

ವಾಟ್ಸಾಪ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (E2EE) ಎಂಬ ವಿಷಯವಿದೆ, ಇದರರ್ಥ “ನೀವು ಮತ್ತು ನೀವು ಸಂವಹನ ನಡೆಸುತ್ತಿರುವ ವ್ಯಕ್ತಿ ಮಾತ್ರ ಕಳುಹಿಸಿದದನ್ನು ಓದಬಹುದು. ಇದರ ನಡುವೆ ಯಾರೂ ಇರುವುದಿಲ್ಲ, ವಾಟ್ಸಾಪ್ ಕೂಡಾ ಓದುವುದಿಲ್ಲ”. ನೀವು ಸಂದೇಶ ಕಳುಹಿಸಿರುವ ವ್ಯಕ್ತಿ ನಿಮ್ಮ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳದ ಹೊರತು ಹಾಗೂ ಅಥವಾ ನಿಮ್ಮ ಮೊಬೈಲ್ ಸುರಕ್ಷತೆಯಲ್ಲಿ ಉಲ್ಲಂಘನೆಯಾಗದಿದ್ದರೆ E2EE ಸಂಭಾಷಣೆಗಳು ಖಾಸಗಿಯಾಗಿರುತ್ತವೆ.

ಫೇಸ್‌ಬುಕ್ ಮೆಸೆಂಜರ್ ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸಕ್ರಿಯಗೊಳಿಸಿ ಬರುವುದಿಲ್ಲ. ಆದರೆ ಇದು ‘ರಹಸ್ಯ ಸಂಭಾಷಣೆ’ ಎಂಬ ವೈಶಿಷ್ಟ್ಯವನ್ನು ಹೊಂದಿದೆ, ಅದು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಂತೆಯೇ ಕೆಲಸ ಮಾಡುತ್ತದೆ. ಅಂತೆಯೇ, ಟ್ವಿಟರ್ ತನ್ನ ನೇರ ಸಂದೇಶಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಹೊಂದಿಲ್ಲ. 2018 ರ ಟೆಕ್ ಕ್ರಂಚ್ ವರದಿಯ ಪ್ರಕಾರ, ಟ್ವಿಟರ್ ಫೇಸ್‌ಬುಕ್‌ನ ರಹಸ್ಯ ಸಂಭಾಷಣೆಯನ್ನು ಹೋಲುವ ವೈಶಿಷ್ಟ್ಯವನ್ನು ಹೊಂದಲು ಪರೀಕ್ಷೆಗಳನ್ನು ನಡೆಸುತ್ತಿದೆ.

ಎಲ್ಲಾ E2EE ಮೆಸೇಜಿಂಗ್ ಅಪ್ಲಿಕೇಶನ್‌ಗಳು ಒಂದೇ ರೀತಿ ಇರುವುದಿಲ್ಲ. ಟೆಕ್ ಬ್ಲಾಗ್ ಆದ ಟಾಮ್ಸ್ ಗೈಡ್, ಆಂಡ್ರಾಯ್ಡ್ ಅಥವಾ iOS ಆಗಿ ಲಭ್ಯವಿರುವ ವಿವಿಧ E2EE ಅಪ್ಲಿಕೇಶನ್ಗಳನ್ನು ಪಟ್ಟಿ ಮಾಡಿದೆ. ಯುಎಸ್ ಮೂಲದ ಎಂಗಡ್ಜೆಟ್ ಎಂಬ ಟೆಕ್ ನ್ಯೂಸ್ ವೆಬ್‌ಸೈಟ್  2019 ರ ವರದಿಯು ಫೇಸ್‌ಬುಕ್ ಮೆಸೆಂಜರ್, ಸಿಗ್ನಲ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ನೀಡುವ ಸುರಕ್ಷತೆಯನ್ನು ಹೋಲಿಸಿದಾಗ ನಾಲ್ಕು ಅಪ್ಲಿಕೇಶನ್‌ಗಳಲ್ಲಿ ಸಿಗ್ನಲ್ ಎಂಬ ಆಪ್ ಅತ್ಯುನ್ನತ ಗುಣಮಟ್ಟದ ಭದ್ರತೆಯನ್ನು ಹೊಂದಿದೆ.

ಇದಕ್ಕೂ ಮೊದಲು ವಾಟ್ಸಪ್ಪಿನಲ್ಲಿ, ಫೋನ್ ಸಂಭಾಷಣೆಯ ಆಡಿಯೊ ಕ್ಲಿಪ್ ವೈರಲ್ ಆಗಿದ್ದು, ಜೂನ್ 15 ರವರೆಗೆ ಭಾರತದಲ್ಲಿ ಲಾಕ್ ಡೌನ್ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದೆ ಎಂದು ತಪ್ಪಾಗಿ ಸಂದೇಶ ಹರಡಲಾಗಿತ್ತು.


ಇದನ್ನೂ ಓದಿ: ವಿಶ್ವ ಆರೋಗ್ಯ ಸಂಸ್ಥೆಯ ಪ್ರೋಟೋಕಾಲ್ ಪ್ರಕಾರ ಲಾಕ್‌ಡೌನ್‌ ಜೂನ್‌ವರೆಗೂ ವಿಸ್ತರಣೆಯೆಂಬುದು ಸುಳ್ಳು ಸುದ್ದಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...