Homeಮುಖಪುಟಉದ್ಯೋಗ ಖಾತರಿ ಕೆಲಸ ಹುಡುಕುತ್ತಿರುವ ಪದವೀಧರರ ಕತೆಗಳು: ಉತ್ತರ ಪ್ರದೇಶದಲ್ಲಿ ನಿರುದ್ಯೋಗದ ಸ್ಥಿತಿ ಗಂಭೀರ

ಉದ್ಯೋಗ ಖಾತರಿ ಕೆಲಸ ಹುಡುಕುತ್ತಿರುವ ಪದವೀಧರರ ಕತೆಗಳು: ಉತ್ತರ ಪ್ರದೇಶದಲ್ಲಿ ನಿರುದ್ಯೋಗದ ಸ್ಥಿತಿ ಗಂಭೀರ

- Advertisement -
- Advertisement -

ಕೊರೊನಾ ಲಾಕ್‌ಡೌನ್‌ ದೇಶದ ಎಲ್ಲಾ ರಾಜ್ಯಗಳನ್ನು ಹಲವಾರು ವಿಷಯಗಳಲ್ಲಿ ಬಾಧಿಸುತ್ತಿದ್ದರೆ ದೇಶದ ದೊಡ್ಡ ರಾಜ್ಯವೆನಿಸಿಕೊಂಡ ಉತ್ತರಪ್ರದೇಶವನ್ನು ತುಸು ಹೆಚ್ಚೆ ಬಾಧಿಸುತ್ತಿದೆ. ಲಾಕ್‌ಡೌನ್‌ ನಂತರ ರಾಜ್ಯಕ್ಕೆ ಮರಳಿರುವ 30 ಲಕ್ಷ ವಲಸೆ ಕಾರ್ಮಿಕರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿಯೇ ಸ್ನಾತಕೋತ್ತರ ಪದವೀಧರರು ಸಹ ಉದ್ಯೋಗ ಖಾತರಿ ಕೆಲಸಗಳಿಗಾಗಿ ಹುಡುಕುತ್ತಿರುವ ದಯನೀಯ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಎನ್‌ಡಿಟಿವಿ ವಿಶೇಷ ವರದಿ ಮಾಡಿದ್ದು ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ.

“ನಾನು ಬಿಬಿಎ ಪದವಿ ಹೊಂದಿದ್ದೇನೆ ಆದರೆ ನನಗೆ ಯಾವುದೇ ಯೋಗ್ಯವಾದ ಕೆಲಸ ಸಿಗಲಿಲ್ಲ. ಅಂತಿಮವಾಗಿ, ನಾನು ತಿಂಗಳಿಗೆ 6,000-7,000 ರೂ ವೇತನ ಸಿಗುವ ಕೆಲಸಕ್ಕೆ ಸೇರಿದೆ. ನಂತರ ಲಾಕ್ ಡೌನ್ ಕಾರಣದಿಂದ ಆ ಕೆಲಸವೂ ಸಹ ಹೋಗಿದೆ. ಆದ್ದರಿಂದ, ನಾನು ನನ್ನ ಹಳ್ಳಿಗೆ ಹಿಂತಿರುಗಿದ್ದು, ಇಲ್ಲಿ ನಮ್ಮ ಗ್ರಾಮ ಪ್ರಧಾನ್ (ಗ್ರಾಮ ಮುಖ್ಯಸ್ಥ) ನನಗೆ ನರೇಗ ಅಡಿಯಲ್ಲಿ ಕೂಲಿ ಕೆಲಸ ಪಡೆಯಲು ಸಹಾಯ ಮಾಡಿದರು ”ಎಂದು ಬಿಬಿಎ ಪದವಿ ಪಡೆದ ಸತೇಂದ್ರ ಕುಮಾರ್ ಹೇಳುತ್ತಾರೆ.

ರೋಷನ್ ಕುಮಾರ್ ಸ್ನಾತಕೋತ್ತರ ಪದವೀಧರರಲ್ಲಿ ಒಬ್ಬರು. ಅವರು ಕೊಳಗಳನ್ನು ಅಗೆಯುವುದು ಮತ್ತು ಗ್ರಾಮೀಣ ರಸ್ತೆಗಳನ್ನು ಹಾಕುವುದು ಮುಂತಾದ ಶ್ರಮದಾಯಕ ಕೆಲಸಗಳನ್ನು ಮಾಡಲು ಸಿದ್ಧರಿದ್ದಾರೆ. ಇದು ಕೌಶಲ್ಯರಹಿತ ಕಾರ್ಮಿಕರು ಮಾಡುವ ಕೆಲಸವಾಗಿದೆ. “ನಾನು ಯೋಗ್ಯ ಕೆಲಸ ಮಾಡುತ್ತಿದ್ದೆ ಮತ್ತು ಒಂದಷ್ಟು ಹಣವನ್ನು ಸಂಪಾದಿಸುತ್ತಿದ್ದೆ ಆದರೆ ಲಾಕ್ ಡೌನ್ ನಂತರ ನನ್ನನ್ನು ಕೆಲಸ ಬಿಡಲು ಕೇಳಲಾಯಿತು” ಎಂದು ಎಂಎ ಪದವಿ ಪಡೆದ ರೋಷನ್ ಕುಮಾರ್ ಹೇಳಿದರು.

ಎಂ.ಎ ಪದವೀಧರರಾದ ಸುರ್ಜಿತ್ ಕುಮಾರ್ ಅವರು ಕೂಲಿ ಕೆಲಸವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳುತ್ತಾರೆ. “ನನಗೆ ಎಂಎ ಮತ್ತು ಬಿ.ಎಡ್ ಪದವಿ ಇದೆ ಮತ್ತು ನಾನು ಕೆಲಸ ಹುಡುಕುವ ಮೊದಲು ಲಾಕ್‌ಡೌನ್ ವಿಧಿಸಲಾಯಿತು” ಎಂದು ಅವರು ಹೇಳುತ್ತಾರೆ.

ಲಾಕ್‌ಡೌನ್‌ಗೆ ಮೊದಲು ಒಂದು ದಿನಕ್ಕೆ ಸರಾಸರಿ 20 ನರೇಗ ಕೂಲಿ ಕಾರ್ಮಿಕರು ಇದ್ದರು. ಈಗ ಆ ಸಂಖ್ಯೆ ದಿನಕ್ಕೆ 100 ಕ್ಕಿಂತ ಹೆಚ್ಚಾಗಿದೆ, ಅದರಲ್ಲಿ ಕನಿಷ್ಠ ಐದನೇ ಒಂದು ಭಾಗದವರು ಪದವಿ ಪಡೆದವರು ಅಥವಾ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡವರು. ಲಾಕ್‌ಡೌನ್‌ನಲ್ಲಿ ಉದ್ಯೋಗ ಮತ್ತು ಜೀವನೋಪಾಯವನ್ನು ಕಳೆದುಕೊಂಡವರು ನರೇಗ ಕೆಲಸಕ್ಕೂ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಜುನೈದ್‌ಪುರದ ಗ್ರಾಮ ಮುಖ್ಯಸ್ಥ ವೀರೇಂದ್ರ ಸಿಂಗ್ ಹೇಳುತ್ತಾರೆ.

ರಾಜ್ಯಕ್ಕೆ ಮರಳಿದ 30 ಲಕ್ಷ ವಲಸಿಗರಿಗೆ ಉದ್ಯೋಗ ಒದಗಿಸಲು ಯೋಗಿ ಆದಿತ್ಯನಾಥ್ ಸರ್ಕಾರವು ಎಂಜಿಎನ್‌ಆರ್‌ಇಜಿಎಗೆ ಹೆಚ್ಚಿನ ಕೆಲಸ ಮಾಡಿಸಲು ತಿಳಿಸಿದೆ.

ಕಳೆದ ತಿಂಗಳು, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, “ಆತ್ಮ ನಿರ್ಭಾರ ಭಾರತ್ ಅಭಿಯಾನ್” ಪ್ಯಾಕೇಜ್ ಅಡಿಯಲ್ಲಿ ಐದನೇ ಮತ್ತು ಅಂತಿಮ ಹಂತದ ಕ್ರಮಗಳನ್ನು ವಿವರಿಸುವಾಗ ನರೇಗಾಕ್ಕೆ ಪ್ರಸ್ತುತ ಬಜೆಟ್ ಅಂದಾಜು 60,000 ಕೋಟಿ ರೂ ಇದ್ದು, ಹೆಚ್ಚುವರಿ 40,000 ಕೋಟಿ ರೂ.ಗಳನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದರು.

ದೇಶಾದ್ಯಂತ ಸುಮಾರು 14 ಕೋಟಿ ಜನರು ಎಂಜಿಎನ್‌ಆರ್‌ಇಜಿಎ ಜಾಬ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಪ್ರತಿ ಕಾರ್ಡ್ ಹೊಂದಿರುವವರಿಗೆ ಈ ವರ್ಷ 100 ದಿನಗಳ ಖಾತರಿಯ ಕೆಲಸವನ್ನು ಪಡೆಯಲು ಸಾಧ್ಯವಾದರೆ ಸರ್ಕಾರಕ್ಕೆ 2.8 ಲಕ್ಷ ಕೋಟಿ ರೂ ಖರ್ಚಾಗುತ್ತದೆ. ಇದಲ್ಲದೇ ಏಪ್ರಿಲ್ 1 ರಿಂದ ದೇಶಾದ್ಯಂತ ಕನಿಷ್ಠ 35 ಲಕ್ಷ ಜನರು ಎಂಜಿಎನ್‌ಆರ್‌ಇಜಿಎಗೆ ಅರ್ಜಿ ಸಲ್ಲಿಸಿದ್ದಾರೆ, ಇದು ಈ ದಶಕದಲ್ಲಿ ಅತಿ ಹೆಚ್ಚು.

“ಎಂಜಿಎನ್‌ಆರ್‌ಇಜಿಎ ಜಾಬ್ ಕಾರ್ಡ್‌ಗಳಿಗೆ ಉದ್ಯೋಗ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಬಜೆಟ್ ಅಗತ್ಯವಿದೆ. ಎಂಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸ ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಪಡೆಯಬೇಕು ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು” ಎಂದು ಅರ್ಥಶಾಸ್ತ್ರಜ್ಞ ರೀತಿಕಾ ಖೇರಾ ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...