ವಾಟಿಸ್ಸೆ ಬಂದ ಕೂಡಲೆ ಜುಮ್ಮಿ ಏನೋ ಹೊಳೆದಂತೆ.
“ಲೇ ವಾಟಿಸ್ಸೆ ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ” ಎಂದಳು.
“ನಿನಿಗೇನಾಯ್ತಕ್ಕ ಇಂತ ಮಾತಾಡ್ತೀ.”
“ಪ್ರಪಂಚನೆ ಹೆದರಿಕಂಡು ಕುಂತದೆ ಇವುಳಿಗೆ ವಳ್ಳೆದಾಯ್ತಂತೆ ಇದಕೇನೇಳ್ತಿಯಪ್ಪ” ಎಂದ ಉಗ್ರಿ.
“ಅಕ್ಕನೆ ಹೇಳ್ತಳೆ ಬುಡು. ಅದೇನೇಳಕ್ಕ.”
“ನಮ್ಮೂರು ಮಂದ್ಲಿದ್ದಂಗಾಯ್ತು ಕಂಡ್ಳ.”
“ಯಂಗೇ ಅಂತ.”
“ಹೆಚ್ಚುಕಮ್ಮಿ ಇಪ್ಪತ್ತು ಮನೆ ಬಾಗಲಾಕಿದ್ದೊ ಕಂಡ್ಳ, ಅವುರ್ಯಲ್ಲ ಬೆಂಗಳೂರು ಸೇರಿಕಂಡಿದ್ರು. ಈಗ್ಯಲ್ಲ ಬಂದು ಬಾಗಲತಗದವುರೆ ಕತ್ಲೆ ಮನೆ ಬೆಳಕಾದೊ.”
“ಓಟರ್ಲಿಸ್ಟು ಪಿಲಪ್ಪಾದ ರಾಜಕಾರಣಿಯಂಗೆ ಖುಷಿಯಾಗಿದ್ದಿಯಲ್ಲಕ್ಕ. ಜನಕೆ ಇದ್ದ ಜಾಗದಲ್ಲಿ ಕ್ಯಲಸಿರಲಿಲ್ಲ. ಯಲ್ಲ ಬೆಂಗಳೂರಿಗೋಗಿದ್ರು, ಕರೋನಾ ಕಾಯಿಲಗೆ ಹೆದರಿ ತಿರಗ ಊರಿಗೆ ಬಂದವುರೆ ಅಷ್ಟೆಯ.”
“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”
“ಊರಿಗೆ ಕಳೆ ಬರದು ದುಡಿಯೋಕೈಗೆ ಕ್ಯಲಸಿದ್ದಾಗ ಕಣಕ್ಕ. ಕ್ಯಲಸಿಲ್ದೊರ ಮಕ ನೋಡಕ್ಕಾದತೆ?”
“ಅಲ್ಲಾ ಕಣೊ ವಾಟಿಸ್ಸೆ ರಾಜಕಾರಣಿಗಳಿಗ್ಯಾವ ಕ್ಯಲಸದೊ ಆದ್ರು ಅವುರ ಮಕ ನೋಡು ಯಂಗೆ ಲಕಲಕ ಅಂತ ವಳಿತದೆ” ಎಂದ ಉಗ್ರಿ.
“ಅದೇನೊ ನಿಜ ಆ ಸಿ.ಟಿ ರವಿ ಅನ್ನೊ ಮಿನಿಸ್ಟ್ರಿಗೆ ಪಾಪ ಏನೂ ಕ್ಯಲಸಿಲ್ಲ ಅದ್ಕೆ ಲೇಖನ ಬರಿತ ಕುಂತವುನೆ.”
“ಏನು ಬರದವುನೆ.”
“ನಾವು ಚೀಣಾ ದೇಸದ ಪದಾರ್ಥ ಬಳಸಬಾರ್ದು ನಾವೇ ತಯಾರು ಮಾಡಿಕಬೇಕು ಅಂತ ಬರದವುನೆ.”
“ಅಲ್ಲಾ ಕಣೊ ವಾಟಿಸ್ಸೆ ಅವುನ ಮನೆಲಿರೊ ಅರ್ದಕ್ಕರ್ದ ಪದಾರ್ಥ ಚೀಣಾ ದೇಸದ ಪದಾರ್ಥ. ಅಂತದ್ರಲ್ಲಿ ಲೇಖನ ಬರಿತನೆ ಅಂದ್ರೆ, ಅವುನ ಮನೆಲಿರೊ ಚೀಣಾ ದೇಸದ ಪದಾರ್ಥವ ವರಿಕಾಕಿ ಬೆಂಕಿ ಹಚ್ಚಿ ಅಮ್ಯಾಲೆ ಲೇಖನ ಪಾಕನ ಬರಿಬೇಕಲವೇನೊ.”
“ಬಿಜೆಪಿಗಳೇ ಅಂಗಲವೇನೊ, ಹೇಳದೊಂದು ಮಾಡದೊಂದು. ಯಲ್ಲಾನು ನಾವೇ ತಯಾರು ಮಾಡಿಕಬೇಕು ಅಂದ್ರೆ ಈ ಚೆಡ್ಡಿಗಳ ಕೈಲಿ ಏನಾಯ್ತದಪ್ಪಾ ಅಂದ್ರೇ, ಅವು ಕುಂಕುಮ ಗಂಧವ ಅವೇ ತಯಾರಿಸತ್ತವೆ? ಮಡಿ ಪಂಚೆ, ಟವಲ್ಲು, ಗಂಟೆ, ಮಂಗಳಾರತಿ ತಟ್ಟೆ ಕರ್ಪೂರನು ಬೇಕಾದ್ರೆ ಮಾಡಿಕತ್ತವೆ. ಇನ್ನುಳದಂಗೆ ಪೂಜಾರಿ ಕೈಲಿರೊ ಮೊಬೈಲು, ಗಡಿಯಾರ, ಮಂಗಳಾರತಿ ತಟ್ಟಿಗೆ ಬಿದ್ದ ಕಾಸಿನ ಲೆಕ್ಕ ಬರಿಯೋ ಪೆನ್ನೂ ಕೂಡ ಚೀಣಾ ದೇಸದ್ದೆಯಪ್ಪ ಅಂತದರಲ್ಲಿ ಚೀಣಾ ದೇಸದಿಂದ ಬರೋ ಪದಾರ್ಥವ ತಾವೇ ತಯಾರಿಸಿಕೊಳಕ್ಕಾದತೆ.”
“ಸಿ.ಟಿ ರವಿ ಅಂದ್ರೆ ಅವುನ್ಯಾರ್ಲ.”
“ಇದೇನಕ್ಕ ಹಿಂಕೇಳ್ತಿ ಅವುನು ಚಿಕ್ಕಮಗಳೂರು ಕಡೆ ರಾಜಕಾರಣಿ. ಬಾಬಾಬುಡನ್ಗಿರಿಯ ದತ್ತಪೀಠ ಮಾಡಕ್ಕೊಗಿ ಗಲಾಟೆ ಎಬ್ಬಿಸಿ ಎಮ್ಮೆಲ್ಲೆ ಆದೋನು. ಈಗ ಮಂತ್ರಿಯಾಗ್ಯವುನೆ, ಕರೋನಾ ಕಾಯ್ಲದ ಕಾರಣಕ್ಕೆ ಕ್ಯಲಸಕ್ಕೆ ಬಾರದೋನಂಗಾಗ್ಯವುನೆ.”
“ಅದ್ಯಾಕಂಗಾದ.”
“ಅವುನೊಬ್ಬನೆ ಅಂಗಾಗಿಲ್ಲ ಕಣಕ್ಕ ಇಡೀ ಎಡೂರಪ್ಪನ ಸಂಪುಟವೇ ಅಂಗಾಗ್ಯದೆ. ಮಂತ್ರಿಗಳಾಗಿ ಮ್ಯರಿತ ಸನ್ಮಾನ ಮ್ಯರವಣಿಗೆ ದೇಸಭಕ್ತಿ ಬಾಸಣ ಮಾಡಿಕಂಡು ಮೋದಿ ಹೊಗಳಿಕಂಡು ಮ್ಯರಿಯನ ಅಂತ ಇದ್ದೊರಿಗೆ ಶನಿ ವಕ್ರಿಸಿದಂಗೆ ಕರೋನಾ ವಕ್ರಿಸಿಬುಡ್ತು ಹಂಗಾಗಿ ಯಲ್ಲ ಡಲ್ಲಾಗ್ಯವುರೆ.”
“ಎಡೂರಪ್ಪನೆ ಡಲ್ಲಾಗ್ಯವುರೆ.”
“ಅವುನ್ಯಾವತ್ತು ಲವುಲವಿಕೆ ಆಗಿದ್ನೊ ಪಾಪ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಪೈಲ್ಸ್ ತರ ಶೋಭಾ ಕಾಡಿದ್ಲು, ಈಗ ಕರೋನಾ ಕಾಡ್ತಾ ಅದೆ. ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಕ್ಕೆ ಆಗಲಿಲ್ಲ.”
“ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಿದೋರು ಅಂದ್ರೆ ಸಿದ್ದರಾಮಯ್ಯ, ಕುಮಾರಣ್ಣ ಕಣೊ.”
“ಸಿದ್ದರಾಮಯ್ಯನಿಗಿಂತ ಕುಮಾರಣ್ಣ ಕಣೊ ಎಂಜಾಯ್ ಮಾಡಿದ್ದು.”
“ಅದ್ಯಂಗ್ಲಾ ಎಂದಳು ಜುಮ್ಮಿ.”
“ಕುಮಾರಣ್ಣ ಕ್ಯಲಸದ ಒತ್ತಡ ಜಾಸ್ತಿಯಾಯ್ತು ಅಂದ್ರೆ ರಾಧಿಕನ ಮನೆಗೋಗಿ ಮನಗಿಬುಡತಿದ್ದ. ಆಗ ಎಂ.ಪಿ ಪ್ರಕಾಸಿದ್ರು ಯಲ್ಲನು ನೋಡಿಕಳರು. ಈಗ ಹೋಟ್ಳಲ್ಲಿದ್ದ ಕಣಕ್ಕ ಮುಖ್ಯಮಂತ್ರಿಯಾದೊನು ಹೋಟ್ಳಲ್ಲಿರತರೇನಕ್ಕ ಅದ್ಕೆ ಪವರ್ ಕಳಕಂಡ.”
“ಆ ಹೋಟ್ಳು ರೂಮು ದೆಸೆರೂಮಂತೆ ಕಣೊ. ಅದರಲ್ಲಿದ್ದಾಗ ಮುಖ್ಯಮಂತ್ರಿಯಾದೆ ಅದಕೆ ಅದರೊಳಗಿದ್ದಿನಿ ಅಂದಿದ್ದ.”
“ಸರಿಯಪ್ಪ ಆ ರೂಮಲ್ಲೆ ಇದ್ದಾಗ ಮುಖ್ಯಮಂತ್ರಿಗಿರಿ ಕಳಕಂಡನಲ್ಲ ಅದಕೇನೇಳ್ತನೆ.”
“ಅದನ್ನ ತಗದು ಶಾಸಕರ ಮ್ಯಾಲಾಕ್ತನೆ. ಏನೇ ಆಗ್ಲಿ ಕುಮಾರಣ್ಣ ಅವುರ್ಯಲ್ಲ ಈ ಬಿಜೆಪಿಗಳಷ್ಟು ಕ್ಯಟ್ಟೊರಲ್ಲ ಕಣೊ ಈ ಮುಂಡೆ ಮಕ್ಕಳು ಭ್ಯಳೆಮ್ಯಾಲೆ ಎರಗತಾಯಿರೋ ಮಿಡತೆ ದಂಡಿದ್ದಂಗೆ. ಯಲ್ಲನು ವಕ್ಕತಿಂದ ಸರ್ವನಾಶ ಮಾಡ್ತರೆ ನೋಡ್ತಾಯಿರು.”
“ !?
ಇದನ್ನು ಓದಿ: