Homeಮುಖಪುಟಲಾಕ್‌ಡೌನ್ ಎಫೆಕ್ಟ್: ಬಡವರ ಹೊಟ್ಟೆ ತುಂಬಿಸುತ್ತಿರುವ Mercy Mission ಕಾರ್ಯಕ್ಕೊಂದು ಸೆಲ್ಯೂಟ್!

ಲಾಕ್‌ಡೌನ್ ಎಫೆಕ್ಟ್: ಬಡವರ ಹೊಟ್ಟೆ ತುಂಬಿಸುತ್ತಿರುವ Mercy Mission ಕಾರ್ಯಕ್ಕೊಂದು ಸೆಲ್ಯೂಟ್!

- Advertisement -
- Advertisement -

ಭಾರತ ನಿಜಕ್ಕೂ ಕೊರೋನಾಗೆ ಬೆಚ್ಚಿ ಬಿದ್ದಿದೆಯೋ ಇಲ್ಲವೋ? ಆದರೆ, ಬೆಂಗಳೂರಿನಂತಹ ಮಹಾ ನಗರಗಳಲ್ಲಿ ವಾಸಿಸುವ ಸಮಾಜದ ತಳವರ್ಗದ ಜನ ಒಪ್ಪೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿರುವ ಲಾಕ್‌ಡೌನ್‌ಗೆ  ಬೆಚ್ಚಿದ್ದಾರೆ.

ಭಾರತದಂತಹ ದೇಶದಲ್ಲಿ ಲಾಕ್‌ಡೌನ್ ಘೋಷಿಸುವುದು ಸುಲಭ. ಆದರೆ, ದಿನನಿತ್ಯದ ಆಹಾರಕ್ಕೆ ಅದೇ ದಿನ ದುಡಿಯುವ ಅನಿವಾರ್ಯತೆಗೆ ಸಿಲುಕಿ ಬದುಕುತ್ತಿರುವ ಜನರಿಗೆ ಸತತ 21 ದಿನಗಳ ಕಾಲ ಎರಡು ಹೊತ್ತಿನ ಊಟ ಹಾಗೂ ಆರೋಗ್ಯ ಸಲಕರಣೆಗಳನ್ನು ಒದಗಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಬೆಂಗಳೂರಿನಲ್ಲೇ ಸುಮಾರು ಸಾವಿರದಷ್ಟು ಬಡಜನರ, ಶ್ರಮಿಕರ ಏರಿಯಾಗಳಿವೆ. ಇಲ್ಲಿನ ಬಡ ಜನರಿಗೆ ಊಟ ಒದಗಿಸುವುದು ಅವರ ಕಷ್ಟಕ್ಕೆ ಸ್ಪಂದಿಸುವುದು ಕೇವಲ ಸರ್ಕಾರದಿಂದ ಮಾತ್ರ ಆಗುವ ಕೆಲಸವಲ್ಲ. ಇಂತಹ ಕೆಲಸಕ್ಕೆಂದೆ ತನ್ನನ್ನು ಮುಡಿಪಾಗಿಟ್ಟುಕೊಂಡು ಇಂತಹ ಸಂದಿಗ್ಧ ಸಂದರ್ಭದಲ್ಲಿ ಸ್ಲಂ ಭಾಗದ ಬಡ ವರ್ಗದ ಜನರ ಹೊಟ್ಟೆ ತುಂಬಿಸುತ್ತಿರುವ ಎನ್‌ಜಿಓ ಸಂಸ್ಥೆಯೇ Mercy Mission.

ಪ್ರತಿನಿತ್ಯ ಸಾವಿರಾರು ಬಡವರ ಹೊಟ್ಟೆ ತುಂಬಿಸುತ್ತಿದೆ ಈ Mercy Mission!

Mercy Mission ಎಂಬುದು ಕೇವಲ ಒಂದು ಸ್ವಯಂ ಸೇವಾ ಸಂಘವಲ್ಲ. ಬದಲಿಗೆ ಜನಪರ ಕೆಲಸದಲ್ಲಿ ತೊಡಗಿರುವ ಸುಮಾರು 25ಕ್ಕೂ ಹೆಚ್ಚು ಜನಪರ ಸಂಘಟನೆಗಳ ಒಂದು ಒಕ್ಕೂಟ. ಭಾರತದಲ್ಲಿ ಕಳೆದ ಒಂದು ವಾರದಿಂದ ಲಾಕ್‌ಡೌನ್ ಘೋಷಿಸಲಾಗಿದೆ. ಜನರ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ, ಇಂತಹ ಸಂದಿಗ್ಧ ಕಾಲದಲ್ಲಿ ಮರ್ಸಿ ಮೆಷಿನ್ ನಡೆಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ.

ಲಾಕ್‌ಡೌನ್ ‌ನಿದಾಗಿ ಹಸಿದಿರುವವರಿಗೆ ಆಹಾರ ನೀಡಲೆಂದೆ Mercy Mission ಬೆಂಗಳೂರಿನಲ್ಲಿ ಎರಡು ಕಡೆ “ಕಮ್ಯೂನಿಟಿ ಕಿಚನ್” ಹೊಂದಿದೆ. ಉತ್ತರ ಬೆಂಗಳೂರಿಗೆ ಡಿಜೆ ಹಳ್ಳಿ ಹಾಗೂ ದಕ್ಷಿಣ ಬೆಂಗಳೂರಿಗೆ ಈಜಿಪುರದಲ್ಲಿ ಕಮ್ಯೂನಿಟಿ ಕಿಚನ್ ಸ್ಥಾಪಿಸಲಾಗಿದೆ. ಇಲ್ಲಿನ ಅಡಿಗೆ ಮನೆಗಳಲ್ಲಿ ಪ್ರತಿ ಹೊತ್ತಿಗೆ ತಲಾ 2,000 ಜನರಿಗೆ ಆಹಾರ ಸಿದ್ದಪಡಿಸಿ ಹಂಚಲಾಗುತ್ತಿದೆ.

Mercy Mission ಸ್ವಯಂ ಸೇವಾ ಸಂಘಟನೆಯಲ್ಲಿ ದೊಡ್ಡ ಸಂಖ್ಯೆಯ ಸ್ವಯಂ ಸೇವಕರಿದ್ದಾರೆ. ಈ ಸ್ವಯಂ ಸೇವಕರ ಪೈಕಿ ಪ್ರತಿಯೊಬ್ಬರೂ ಪ್ರತಿದಿನ ಇಂತಿಷ್ಟು ಜನರಿಗೆ ಆಹಾರ ತಲುಪಿಸಬೇಕೆಂಬ ಗುರಿ ನೀಡಲಾಗುತ್ತಿದೆ. ಆದಷ್ಟು ಸ್ಲಂ ಭಾಗಕ್ಕೆ ತಮ್ಮದೇ ವಾಹನಗಳಲ್ಲಿ ತೆರಳುತ್ತಿರುವ ಈ ಕಾರ್ಯಕರ್ತರು ಬಡ ಜನರಿಗೆ ಆಹಾರ ಪೂರೈಸುವ ಕೆಲಸಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಮೂರು ಹೊತ್ತು ತಲಾ 2000 ಸಾವಿರ ಜನರ ಹೊಟ್ಟೆ ತುಂಬಿಸುವುದು ಎಂದರೆ ಸುಮ್ಮನೆ ಮಾತಲ್ಲ.

ಇದಲ್ಲದೆ, ಕೆಲವು ಫಾರ್ಮಸಿಗಳಿಂದ ರಿಯಾಯಿತಿ ದರದಲ್ಲಿ ಔಷಧ ಸಾಮಾಗ್ರಿಗಳನ್ನು ಕೊಂಡು ಅದನ್ನು ಬಡವರಿಗೆ ಉಚಿತವಾಗಿ ನೀಡುವ ಕೆಲಸವನ್ನೂ ಈ Mercy Mission ಮಾಡುತ್ತಿದೆ. ಶುಗರ್ ಬಿಪಿಯಂತಹ ಎಲ್ಲಾ ತರದ ಖಾಯಿಲೆ ಹೊಂದಿರುವ ಬಡವರಿಗೂ ಈ ಸೌಲಭ್ಯವನ್ನು ಮರ್ಸಿ ಮಿಷಿನ್ ನೀಡುತ್ತಿದೆ.

ಈ ಕುರಿತು ನಾನುಗೌರಿ.ಕಾಂ Mercy Mission ಸಂಸ್ಥೆ ಪದಾಧಿಕಾರಿಗಳಲ್ಲೊಬ್ಬರಾದ ತೌಸಿಫ್‌ರವರನ್ನು ಮಾತನಾಡಿಸಿತು. ಅವರು “ಈ ಸಂಸ್ಥೆ ಹಲವಾರು ವರ್ಷಗಳಿಂದ ಯಾವುದೇ ಪ್ರಚಾರ ಇಲ್ಲದೆ ಸಮಾಜಮುಖಿ ಕೆಲಸದಲ್ಲಿ ತೊಡಗಿದೆ. ಲಾಕ್‌ಡೌನ್ ಘೋಷಿಸಿದ ನಂತರದ ಕಳೆದ ಒಂದು ವಾರದ ಅವಧಿಯಲ್ಲಿ ಸಾವಿರಾರು ಜನರ ಹಸಿವನ್ನು ನೀಗಿಸಿದೆ. ಆದರೆ, ಸಹಾಯ ಹಸ್ತ ನೀಡುವ ಸಂದರ್ಭದಲ್ಲಿ ನಾವು ಎಲ್ಲಿಯೂ ಸಹ ಹಿಂದೂ-ಮುಸ್ಲಿಂ ಎಂದು ಬೇಧ ಮಾಡುವ ಕೆಲಸಕ್ಕೆ ಮುಂದಾಗಿಲ್ಲ. ಇದು ಬೇಧ ಮಾಡುವ ಸಮಯವಲ್ಲ. ಇಡೀ ಭಾರತ ಒಟ್ಟಾಗಿ ನಿಲ್ಲಬೇಕಾದ ಸಮಯ” ಎನ್ನುತ್ತಾರೆ ಅವರು.

ಒಟ್ಟಾರೆ ಲಾಕ್‌ಡೌನ್‌ನಿಂದಾಗಿ ಮೇಲ್ ಮತ್ತು ಮಧ್ಯಮ ವರ್ಗಕ್ಕಿಂತ ಅಧಿಕ ಪೆಟ್ಟು ತಿನ್ನುತ್ತಿರುವುದು ಸಮಾಜದ ಕೆಳ ಮತ್ತು ಕೂಲಿ ಕಾರ್ಮಿಕ ವರ್ಗ. ಇಂತಹ ಜನರಿಗೆ ದಿನನಿತ್ಯ ಆಹಾರ ಪೂರೈಸುತ್ತಿರುವ Mercy Mission ಕಾರ್ಯ ನಿಜಕ್ಕೂ ಶ್ಲಾಘನೀಯ.


ಇದನ್ನೂ ಓದಿ: ಅಂದು ನೋಟುರದ್ದು, ಇಂದು ಮಹಾವಲಸೆ – ಬಡಜನತೆಯ ನಡು ಮುರಿದ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...