Homeರಂಜನೆಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

- Advertisement -
- Advertisement -

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ, ಇವತ್ತು ನಂ ದೇಸುದಾಗೆ ಏನೇನ್ ಅನಾನುಕೂಲ ಆಗ್ಯದೆ ಅನ್ನೋದುನ್ನ ಮರತುಬಿಡಿ. ಅಜಮಾಸು ನಲುವತ್ತು ವರ್ಸುದ ಹಿಂದಿನ ಇತಿಹಾಸುವ ಒಸಿ ನ್ಯೆಪ್ತಿ ಮಾಡ್ಕಳಿ. ಅದುಕ್ಕೆ ಸಮಂಧಪಟ್ಟಂಗೆ ಜಾಗೃತ್ರಾಗಿ. ಅವುತ್ತು ಈ ದ್ಯೇಸುದ ಮ್ಯಾಕೆ ಎಮುರ್ಜೆನ್ಸಿ ಹ್ಯೇರಿದ್ದವುರು, ಅದುನ್ನು ವಿರೋಧಿಸಿದ್ದವುರು, ಇವತ್ತು ಕೇವುಲ ಅಧಿಕಾರುಕ್ಕಾಗಿ ಒಬ್ಬರ ಕೈಯೊಳಿಕ್ಕೆ ಮತ್ತೊಬ್ಬರು ಕೈ ಜ್ಯೋಡಿಸ್ಕ್ಯಂಡ ಕುಂತವುರೆ. ಅವುರಿಗೆ ತಕ್ಕುನ ಪಾಟ ಕಲುಸಿ. ಈಗ ನಾನು ಮೂರು ಸಲ ಎಮುರ್ಜನ್ಸಿ ಅಂತೀನಿ, ನೀವೆಲ್ಲ ಕೈಯೆತ್ತಿ ಅಂಗೇ ಆಕ್ಷುನ್ ಮಾಡ್ಕ್ಯಂತ ರಿಪೀಟ್ ಮಾಡಿ…..’
– ನರೇಂದ್ರ ಮೋದಿ, ಮಾತಿಗೆ ಮರುಳಾದ ದೇಶಕ್ಕೆ ಸಿಕ್ಕಿರೋ ದುಬಾರಿ ದೊರೆ

*****

ಅನಂತ್ಕುಮಾರ್ ಹೆಗುಡೆ ಒಬ್ಬ ಲೋಪರ್ರು ಕಣ್ರೀ… ನೀಚ ಕಣ್ರೀ… ಹುಬ್ಳಿಯಾಗೆ ಯಾರೋ ಹಾರುಸಿದ್ದ ಧ್ವಜುವಾ ನಾನೇ ಹಾರುಸಿದ್ದು ಅಂತ ಆರೆಸ್ಸೆಸ್ನೋರ ಸಭೆಗಳುಲ್ಲಿ ಹ್ಯೇಳ್ಕಂಡ ತಿರುಗ್ಯಾಡ್ತಾ ಅವುನೆ. ಅವುನು ಎಲ್ಲರಿಗೂ ಹೊಡುದವುನೆ. ಬೀಜೇಪಿ ಪಾಲ್ಟಿ ಆಪಿಸ್ನಾಗೇ ಆ ಇಸ್ವೇಸ್ವರ ಹೆಗುಡೆ ಕಾಗೇರಿಗೆ ಯಕ್ಕಡಾ ತಕೊಂಡು ಹೊಡುದಿದ್ದ. ಅವುನಂಥಾ ನೀಚ ಇಡಿ ದೇಸುದಾಗೇ ಯಾರು ಇಲ್ಲ ಬಿಡಿ. ಅವುನು ನಂ ಜಿಲ್ಲೆಗೆ ಸಂಸುದ ಆಗ್ಯಿರೋದೆ ದುರಂತ’
– ಆನಂದ್ ಆಸ್ನೋಟಿಕರ್, ಕರಾವಳಿ ಭಾಗದ ಜೆಡಿಎಸ್ ಪಳೆಯುಳಿಕೆ

*****

ಈ ತಾಜಮಹಲು ಏನ್ ಇದ್ಯೆಲಾ, ಅದು ಅಕ್ಚುಲೀ ಸಿವುನ ದ್ಯೇವುಸ್ತಾನುವಂತೆ. ಅಂಥಾ ದ್ಯೇವುಸ್ತಾನ ಕಂ ಮಹಲುನ್ನ ಹೊಡೆಯೋಕ್ಕೆ ಅಂತ ನಂ ಯೂಪಿ ಸೀಎಂ ಸ್ವಾಮಿಗೊಳಾದ ಆದಿತ್ಯನಾಥುರು ಹೊಂಟವುರೆ. ಅವುರೇನಾದ್ರು ದಿಟವಾಗ್ಲೂ ಆ ಕ್ಯೆಲುಸಕ್ಕೆ ಕೈ ಹಾಕುದ್ರೆ, ಅದುಕ್ಕೆ ಹ್ಯೆಗಲು ಕ್ವೊಡಕ್ಕೆ ನಾನೂ ಸಿದ್ದ. ಬೇಕಾರೆ ಬೀಜೇಪಿಗೂ ಸೇರ್ಕಂಬುಡ್ತೀನಿ. ಜ್ವತೀಗೆ ಇಪ್ಪತ್ತು ಸಾವುರ ಜನಾನು ಕರ್ಕಂಬತ್ತೀನಿ. ಈ ಆಪರ್ರು ಒಪ್ಕಂಡಾರಾ ನಂ ಯೂಪಿ ಸೀಎಂ…
– ಆಜಂ ಖಾನ್, ಸಮಾಜವಾದಿ ಪಾರ್ಟಿಯ ಕಾಂಟ್ರವರ್ಸಿಯಲ್ ಕಿಲಾಡಿ

*****

ನಂ ಕರ್ನಾಟುಕದಲ್ಲಿರೋ ಪರಬಾಸಿಕರನ್ನ ನಡು ರಸ್ತೇನಾಗೇ ಸುಟ್ಟು ಹಾಕ್ಬೇಕು ಕಣ್ರೀ. ಅವುರೆಲ್ಲ ಇಲ್ಲಿಗೆ ಬಂದು ವಕ್ಕರಿಸಿಕ್ಯಂಡಿದ್ದುರಿಂದ್ಲೇ ಬೆಂಗ್ಳೂರು ನಂ ಕೈತ್ಯೆಪ್ಪಿ ಹೋಗೈತಿ. ಅವುರನ್ನು ಇಲ್ಲಿಂದ ಹೊರಕ್ಕೆ ದೂಡಕ್ಕೆ ನಾವೆಲ್ಲ ಮತ್ತೆ ಚಳುವಳಿ ಸುರು ಮಾಡ್ಬೇಕಾಗೈತಿ. ಜೈ ಕನ್ನುಡಾಂಬೆ…                                                                                  – ವಾಟಾಳ್ ನಾಗರಾಜ್, ವಿಚಿತ್ರ ಚಳುವಳಿಗಳ ಸಚಿತ್ರ ಕಾರ್ಟೂನ್

*****

ನಾ ಹ್ಯೇಳ್ತೀನಿ ಕ್ಯೇಳಿ, ಈ ಸಮ್ಮಿಸ್ರು ಸರ್ಕಾರ ಬಾಳ ದಿನ ಉಳಿಯಂಗಿಲ್ಲ. ಯಾಕಂದ್ರೆ ನಂ ಬಳ್ಳಾರಿ ರಾಜ್ಯುದ ಇತಿಹಾಸುದಾಗೆ ಯಾವ ಕೊಲೀಷನ್ ಗೋರ್ಮೆಂಟೂ ಪುಲ್‍ಟೇಮು ಅಧಿಕಾರುವ ಮಾಡಿದ ಎಜ್ಜಾಂಪಲ್ಲೇ ಇಲ್ಲ. ಅಂತದ್ರಾಗೆ ಇವುರು ಮಾಡ್ಯಾರಾ? ನೋ ಚಾನ್ಸ್. ಬಿದ್ದೋಯ್ತರೆ ನೋಡ್ತಾ ಇರಿ…
– ಬೀ ಶ್ರೀರಾಮುಲು, ಬಿಜೆಪಿಯ ಗಡ್ಡಧಾರಿ ಅವತಾರ ಪುರುಷ

*****

ಈ ಮಠಾಧೀಸರು ಏನವುರಲ್ಲ, ಅವುರು ಅಧಿಕಾರ ಇದ್ದಕಡೀಕೆ ವಾಲಿಕ್ಯಂತಾರೆ. ಜನುರ ಕಷ್ಟ ಸುಖದ ಬಗ್ಗೆ ಮಾತಾಡೋದು ಬುಟ್ಟು, ರಾಜಕಾರಣುದಾಗೆ ಮೂಗು ತ್ವೂರ್ಸಕ್ಕೆ ಬತ್ತಾರಲ್ಲ, ಇವ್ರಿಗೆ ಏನನ್ನಬೇಕು? ಇವತ್ತು ಸಿದ್ರಾಮಯ್ಯುನ ಪರುವಾಗಿ ಮಾತಾಡೊ ಕುರುಬರ ಸ್ವಾಮಿ, ಅವತ್ತು ಇದೇ ಸಿದ್ರಾಮಯ್ಯ ನನಿಗೆ ಅನ್ಯಾಯ ಮಾಡುವಾಗ ಎತ್ತಗೋಗಿದ್ರು. ಯಾಕೆ, ನಾನು ಕುರುಬನಲ್ಲುವಾ…?
– ಎಚ್ಚ್ ವಿಶ್ವನಾಥ್, ಗೌಡರ ಹಟ್ಟಿಯ ನಿರಾಶ್ರಿತ ಶಿಬಿರದ ಫಲಾನುಭವಿ

*****

ಸ್ವಿಸ್ ಬ್ಯಾಂಕಿನಾಗೆ ಇಟ್ಟಿರೋ ಭಾರತೀಯರ ಹಣ ಕಳುದ ವರ್ಸ ಡಬಲ್ ಆಗ್ಯದೆ ಅನ್ನೋ ಸುದ್ದಿ ನನಿಗೂ ಬಂದದೆ. ಹಾಗಂತ ಅದು ಬ್ಲ್ಯಾಕ್ ಮನಿ ಅಲ್ಲಾ ಕಣ್ರೀ. ನಂ ಎನ್ನಾರೈಗಳು ಶ್ಯಾನೆ ಕಸ್ಟಪಟ್ಟು ದುಡುದು ಕೂಡಿಟ್ಟ ನ್ಯಾಯಬದ್ಧ ಹಣ ಆಗಿರ್ಬೈದಲ್ವಾ. ಯಾಕ್ರೀ ನಂ ಜನುಕ್ಕೆ ಕನ್‍ಫ್ಯೂಜ್ ಮಾಡ್ತೀರಾ?
– ಪಿಯೂಷ್ ಗೋಯೆಲ್, ಬ್ಲ್ಯಾಕ್‍ಮನಿ ಸ್ಪೆಷಲಿಸ್ಟ್
ಮೋದಿ ಸಂಪುಟದ ಮನಿ ಮಂತ್ರಿ

*****

ಲುಕ್ ಮೈ ಡಿಯರ್ ಫ್ರೆಂಡ್ಸ್, ಒಂದು ಸತ್ಯುವ ಹ್ಯೇಳ್ತೀನಿ ಅರುಗಿಸಿಕೊಳ್ಳಿ. ನಾವು ಇವತ್ತು ಪ್ಲ್ಯಾಸ್ಟಿಕ್ ಕುರ್ಚಿನಾಗೆ ಕೂತ್ಕಂಡಿರೋದ್ಕೆ ಆ ಕಾಂಗ್ರೆಸ್ ಪಾಲ್ಟಿಯೇ ಕಾರುಣ. ಅಕಸುಮಾತ್ ಎಪ್ಪತ್ತು ವರ್ಸುದ ಹಿಂದೆಯೇ ದೇಸುದಾಗೆ ಬೀಜೇಪಿ ಅಧಿಕಾರುಕ್ಕೆ ಬಂದಿದ್ದ್ರೆ ಎಲ್ರೂ ಬ್ಯೆಳ್ಳಿ ಕುರ್ಚಿನಾಗೆ ಕುಂತ್ಕಂಡಿರ್ತಿದ್ವಿ. ಎಲ್ಡು ಸಾವುರದ ಹತ್ರೊಂಬ್ವತ್ತರ ಎಲೆಕ್ಸೆನ್ನಾಗೆ ಒಂದು ಹ್ವುಲೀನ ಸೋಲುಸಕ್ಕೆ ಕಾಗ್ಯಣ್ಣ, ನರಿಯಣ್ಣ, ತ್ವಾಳಣ್ಣ, ಕರಿಡ್ಯಣ್ಣಗಳು ಒಂದಾಗ್ಯವೆ. ಈ ಕತ್ತೆಕ್ಯಿರುಬಗಳು ಗ್ಯೆಲ್ಲಬೇಕೊ, ಅಥುವಾ ನಂ ಹ್ವುಲಿ ಗ್ಯೆಲ್ಲಬೇಕೊ ನೀವೇ ಡಿಸೈಡ್ ಮಾಡಿ…
– ಅನಂತ್‍ಕುಮಾರ್ ಹೆಗಡೆ, ನಾಲಿಗೆ ನರದ ಸ್ವಾಧೀನ ಕಳೆದುಕೊಂಡಿರುವ ಕೇಂದ್ರ ಮಂತ್ರಿ

*****

ಒಬ್ಬೊಬ್ರ ಅಕೋಂಟಿಗೂ ಹದುನೈದು ಲಕ್ಸುವ ರೊಕ್ಕ ಹಾಕ್ತೀನಿ ಅಂತ ಎಲೆಕ್ಸನ್ ಟೇಮಿನಾಗೆ ಹ್ಯೇಳಿ, ಕಡೀಕೆ ಹದುನೈದ್ರುಪಾಯುನೂ ಹಾಕದ ಮ್ವೋದಿಯವುರಿಗೆ ನಂ ಸೀಎಂ ಕುಮಾರ್ಸೋಮಿ ಬಗ್ಗೆ ಮಾತಾಡಕ್ಕೆ ಅದೆಂತದೋ ಅಂತಾರಲ್ಲ, ಅದು ಇಲ್ಲ ಕಣ್ರೀ. ಸೋನ್ಯಾ ಗಾಂದಿ, ರಾಹುಲ್ ಗಾಂದಿ ಇಬ್ರೂನುವೆ, ಬೇಸರತ್ ಬೆಂಬುಲವ ಕೊಡ್ತೀವಿ ನೀವು ಜೇಡಿಯೆಸ್ ಗೋರ್ಮೆಂಟ್ ಮಾಡ್ಕಳಿ ಅಂತ ಹ್ಯೇಳಿದ್ದ್ರು. ಆದ್ರೆ ನಂ ದ್ವೊಡ್ಡಗೌಡ್ರು ಬ್ಯಾಡ, ಬ್ಯಾಡ ಇಬ್ರೂ ಕೂಡೇ ಸರ್ಕಾರುವ ಮಾಡನ ಅಂತೇಳಿದ್ದುಕ್ಕೆ ಇವತ್ತು ಸಮ್ಮಿಸ್ರು ಸರ್ಕಾರ ಆಗ್ಯದೆ. ಅದು ಐದು ವರ್ಸ ಅಲ್ಲಾಡಕಿಲ್ಲ ನೋಡ್ತಾ ಇರಿ…
– ಸಾರಾ ಮಹೇಶ್, ಮೇಡಂ ಭವಾನಿಯವರ ಕೃಪಾಶೀರ್ವಾದ ಇರುವ ಜೆಡಿಎಸ್ ಮಂತ್ರಿ

*****

ನಂ ಮ್ವೋದಿ ಸಾಹೇಬ್ರು ಪರ್ದಾನಿಯಾದ ಮ್ಯಾಕೆ ದ್ಯೇಸ ಶ್ಯಾನೆ ಅಭಿರುದ್ದಿ ಆಗ್ಯದೆ. ಕಳುದ ಎಂಟೇ ತಿಂಗ್ಳಾಗೆ ನಲ್ವತ್ತ್ವೊಂದು ಲಕ್ಸ ಉದ್ಯೋಗ ಹುಟ್ಕ್ಯಂಡವೆ ಮಹಾಸಯುರೆ. ಯಪ್ಪತ್ತು ವರ್ಸುದಿಂದ ಉದ್ದಾರುವೇ ಆಗುದೇ ಹಾಳು ಕ್ವೊಂಪ್ಯೆಯಾಗಿದ್ದ ಈಶಾನ್ಯುದ ರಾಜ್ಯಗಳು ಮ್ವೋದಿಯವುರ ಆಡಳಿತುದಾಗೆ ಯಾಪಾಟಿ ಉದ್ದಾರ ಆಗ್ಯವೆ ಅಂದ್ರೆ, ನಂಗೆ ಯೋಳಕ್ಕೆ ಮಾತ್ವುಗಳೇ ಬತ್ತಿಲ್ಲ ಕಣ್ರೀ, ಆಹ್ಞಾ…ಹಾ.. ಹಾ.. ಇಲ್ನೋಡಿ ಥೇಟು ನನ್ ಹಲ್ಲುಗುಳ ಥರಾ ಹೊಳೀತಾ ಕುಂತವೆ. ಇನ್ನು ಸಿಟಿಗುಳಂಗೆ ನಂ ಹಳ್ಳ್ಯಿಗುಳೂ ಸಿಕ್ಕಾಪಟ್ಟೆ ಇಂಪ್ರೂವ್ ಆಗ್ಯವೆ..
– ಡಿ.ವಿ.ಸದಾನಂದ ಗೌಡ, ಅಳುವಾಗ್ಲೂ ನಗುತ್ತಿರುವಷ್ಟೇ ಕಳೆಯಿಂದ
ಕಾಣುವ ಬಿಜೆಪಿಯ ವಜ್ರದಂತಿ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...