- Advertisement -
- Advertisement -
ನಿಖಿಲ್ ಕುಮಾರಸ್ವಾಮಿ ಮದುವೆ ಗುಂಗಿನಲ್ಲಿದ್ದಾರೆ. ಆದರೆ ಇನ್ನೊಂದು ಗುಂಗು ಅವರ ಮನಸ್ಸಲಿದೆ. ಅದೇನೆಂದರೆ ಎಪಿಅರ್ಜುನ್ ನಿರ್ದೇಶನದಲ್ಲಿ ಹೊಸದೊಂದು ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸ 50%ರಷ್ಟು ಮುಗಿದಿದೆಯಂತೆ. ಹಿಂದೆದಿಂಗಿಂತ ಇಂದು ಭಿನ್ನವಾಗಿರಲಿದೆ ಎಂದು ಸ್ವತಃ ನಿಖಿಲ್ ಹೇಳಿಕೊಂಡಿದ್ದಾರೆ. ಲಾಕ್ಡೌನ್ ಇಲ್ಲದೇ ಹೋಗಿದ್ದರೆ, ಇನ್ನಷ್ಟು ಕೆಲಸವಾಗಿರುತ್ತಿತ್ತು. ಆದರೆ ವೆಡ್ಲಾಕ್, ಅಂದ್ರೆ ವಿವಾಹ ಬಂಧನಕ್ಕೆ ಒಳಗಾಗುವುದೂ ಆದ್ಯತೆಯಾಗಿರುವುದರಿಂದ ನಿಖಿಲ್ ಅವರ ಹೊಸ ಪ್ರಾಜೆಕ್ಟ್ ಸ್ವಲ್ಪ ಮುಂದೆ ಹೋಗಿದೆ.
ರಂಗಭೂಮಿಯ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆಯಂತೆ. ಐರಾವತ್, ಕಿಸ್ ನಂತರ ಯಾವುದೇ ಸಿನಿಮಾಗಳ ನಿರ್ದೇಶನಕ್ಕೆ ಇಳಿಯದ ಅರ್ಜುನ್ ಭಾರಿ ಕತೆಯೊಂದಿಗೆ ನಿಖಿಲ್ನನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ. ನಿಖಿಲ್ ತಮ್ಮ ವೃತ್ತಿಜೀವನದಲ್ಲೇ ಇಂಥದ್ದೊಂದು ಸಿನಿಮಾ ಕಥೆ ಆಯ್ಕೆ ಮಾಡಿಕೊಂಡಿರುವುದು ಇದೇ ಮೊದಲು ಎಂದು ಉತ್ಸಾಹದಲ್ಲಿದ್ದಾರಂತೆ.