Homeರಂಜನೆ`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

- Advertisement -
- Advertisement -

`ನಾನು ಎಜ್ಜಾಟ್ಲಿ ಇಸಕಂಠ ಪರಂಪರೆಯವ್ನು. ಮಾಧ್ಯಮುದವ್ರು ನನ್ನನ್ನು ಉಗುದು ಉಪ್ಪಿನ್ಕಾಯಿ ಹಾಕಿದ್ರು ಐ ಡೋಂಟ್ ಕೇರ್. ಅವ್ರಿಗೆ ಹ್ಯೆದ್ರಿಕ್ಯೆಂಡು ನಾನಾಡೊ ಮಾತು ನಿಲ್ಸೋಕೆ ನಾನೇನು ರಣಹ್ಯೇಡಿ ಅಪ್ಪ ಅಮ್ಮುಗೆ ಹುಟ್ಟಿದೋನಲ್ಲ. ಬೈ-ದು-ಬೈ ಮುಠ್ಠಾಳತನುವ ಬಂಡ್ವಾಳ ಮಾಡ್ಕ್ಯಂಡಿರೋ ಈ ಬುದ್ದಿಜ್ಯೀವಿಗಳು ನಂ ಹಿಂದೂತ್ವಕ್ಕೆ ಮಸಿ ಬಳೀತಾ ಕುಂತವ್ರೆ ಕಣ್ರಿ. ಅವ್ರಿಗೆ ಕಡಿವಾಣ ಹಾಕ್ಲೇಬೇಕು’

– ಅನಂತ್ ಕುಮಾರ್ ಹೆಗಡೆ, ಕಾಮನ್‍ಸೆನ್ಸ್ ಕಳ್ಕೊಂಡಿರೋ ಕೇಂದ್ರ ಮಂತ್ರಿ

* * * *

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ. ನಂ ಜಿಲ್ಲಾ ಕಾರ್ಯಕರ್ತುರು ನನ್ನನ್ನ ಮಂತ್ರಿ ಮಾಡ್ದಿದ್ದಕ್ಕೆ ಬೆಂಗ್ಳೂರಿಗೆ ಹ್ವೋಗಿ ಪಕ್ಸುದ ಸದಸ್ಯತ್ವುಕ್ಕೆ ರಾಜೀನಾಮೆ ಬಿಸಾಕಿ ಬಂದಿದಾರೆ ಅಂತ ಪೇಪರ್ರು, ಟೀವಿಲಿ ನೋಡಿ ತಿಳ್ಕಂಡಿದಿನೆ ವರ್ತು ಹೆಚ್ಚೇನು ಗೊತ್ತಿಲ್ಲ. ನನ್ ಮ್ಯೇಲಿನ ಅಭಿಮಾನುಕ್ಕೆ ಹಂಗೆ ಮಾಡ್ಯವ್ರೆ ಆಟೆಯಾ. ಅಲ್ಲಾ ಕಣ್ರೀ ಜನಸೇವೆಗಿಂತ ಮಂತ್ರಿ ಪದುವಿ ದೊಡ್ಡದಾ. ತೆಗ್‍ತೆಗೀರಿ, ಶಾಸಕನಾಗೆ ಜನಸೇವೆ ಮಾಡ್ತೀನಿ ನೋಡ್ತಾ ಇರಿ. ಐ ಪ್ರಾಮಿಸ್ ಯೂ…’

– ಶಾಮನೂರು ಶಿವಶಂಕರಪ್ಪ, ಇಳಿವಯಸ್ಸಿನ ನವಚೈತನ್ಯದ ವೈರಾಗಿ ರಾಜಕಾರಣಿ

* * * *

`ಲುಕ್ ಮೈ ಡಿಯರ್ ಹಿಂದೂ ಭಾಯಿಜಾನ್ಸ್. ನಂ ರಾಜ್ಯುದಾಗೆ ಕ್ವೊಲೆಗುಳಾದ್ರೆ ಮೋದಿ ಮಹಾತ್ಮುರನ್ನ ಕೆಲವ್ರು ಪ್ರಸ್ನೆ ಮಾಡ್ತಾರೆ. ನಾನು ಏನ್ ಹೇಳ್ತೀನಿ ಅಂದ್ರೆ, ಗೌರಿ ಮಲ್ಡರ್‍ಗೂ ಮ್ವೋದಿಗೂ ಏನ್ ಸಮಂಧ ಉಂಟು ನೀವೇ ಹೇಳ್ರಿ. ನಂ ರಾಜ್ಯುದಲ್ಲಿ ನಾಯಿ ಸತ್ರೆ, ಆ ಮಹಾತ್ಮುರು ಯಾಕೆ ಉತ್ರ ಕೊಡ್ಬೇಕು ಅಂತೀನಿ’

-ಪ್ರಮೋದ್ ಮುತಾಲಿಕ್, ತನಿಖೆಗೆ ಬೆಚ್ಚಿ ಬಿದ್ದಿರೋ ಆರೆಸ್ಸೆಸ್‍ನ ಸಾಪ್ಟ್‍ಶತ್ರು.

* * * *

`ಹಡೆಯೋ ಶಕ್ತಿ ಇದ್ದಾಗ್ಲೆ ಲಗ್ನಾ ಮಾಡ್ಬೇಕ್ರಿ..! ಹೊತ್ತಿಗೆ ಸರ್ಯಾಗಿ ಲಗ್ನಾ ಮಾಡ್ಲಿಲ್ಲ ಅಂದ್ರೆ, ಏನೂ ಪ್ರಯೋಜುನ ಇರಲ್ಲ. ಅಟಲ್ ಬಿಯಾರಿ ವಾಜ್ಪೇಯಿ ಹತ್ತಾರು ವರ್ಸ ಮೊದ್ಲೇ ಈ ದ್ಯೇಸುಕ್ಕೆ ಪರ್ದಾನಿ ಆಗ್ಬುಟ್ಟಿದ್ದ್ರೆ, ನಂ ದ್ಯೇಸುದ ಚಿತ್ರಾನೆ ಬ್ಯಾರೆ ಆಗ್ತಿತ್ತು ಕಣ್ರೀ’

– ಶಿವಾನಂದ ಎಸ್. ಪಾಟೀಲ್, ಆರೋಗ್ಯ ಮಂತ್ರಿಯಾದ ಹಡೆಯೋ ಡಿಪಾರ್ಟ್‍ಮೆಂಟ್ ಸ್ಪೆಷಲಿಸ್ಟು

* * * *

ದೇವ್ರತ್ರ ಹ್ವೋಗೊ ವಯಸ್ಸಾಗಿರೋ ಶ್ರೀರಾಮಸೇನೆಯ ಹೆಡ್ಡಾಪೀಸು ಮುತಾಲಿಕ್ಕು ಈಗ್ಲಾದ್ರು ಸಮಾಜುಕ್ಕೆ ಉಳಿ ಹಿಂಡೋದು ಬಿಟ್ಟ್‍ಬಿಟ್ಟಿ, ಸನ್ನಡುತೆ ಹಾದೀಲಿ ಬದುಕ್ಲಿ. ದೇವ್ರತ್ರ ಹ್ವೋಗಕ್ಕೆ ಟಿಕೇಟ್ ತಕೊಂಡು ಏರ್‍ಪೋರ್ಟ್‍ನಲ್ಲಿ ಕಾಯ್ತಾ ಕೂತಿರೋ ಆಯಪ್ಪನ ಬಗ್ಗೆ ನಂಗೆ ಭಾರೀ ನೋವಿದೆ ಕಣ್ರೀ. ಫಸ್ಟು ಎಸ್ಸೈಟಿನೋರು ಆವಯ್ಯುನ ಹಿಡ್ಕಂಡು ತನುಖೆ ಮಾಡ್ಬೇಕು ನೋಡ್ರಿ’

– ಸೀಎಂ ಇಬ್ರಾಹಿಂ, ರಸವತ್ತಾಗಿ ಕನ್ನಡ
ಮಾತಾಡೋ ಖಾದಿ ಸಾಬಣ್ಣ.

* * * *

`ನಾನು ಮಂತ್ರಿಗಿರಿ ಮ್ಯಾಕೆ ಶ್ಯಾನೆ ಆಸೆ ಮಡಿಕ್ಕ್ಯಂಡಿದ್ದೆ. ಆದ್ರೆ ಕೆಲವ್ರ ಹಿಕಮತ್ತಿನಿಂದ ಕೈ ತ್ಯೆಪ್ಪಿ ಹೋಗೈತಿ. ಪರ್ವಾಗಿಲ್ಲ ಶಾಸಕಿಯಾಗೆ ಜನ್ರ ಸೇವೆ ಮಾಡ್ತೀನಿ. ಬೈ-ದು-ಬೈ ನಂ ಪಕ್ಸುದ ವರಿಸ್ಟ್ರು ಅದ್ಯಾವ ಮಾನದಂಡ ನೋಡಿ ಜೈಮಾಲಾಗೆ ಸಚಿವೆ ಮಾಡಿದ್ರೋ ನಾ ಕಾಣೆ. ಮೋಸ್ಟ್ಲೀ, ಆಯಮ್ಮನ `ಸೇವೆ’ ಕಂಡು ತಥಾಸ್ತು ಅಂದಿರ್ಬೈದು. ಅಯ್ಯೋ, ಕಂಡೋರ ಇಚಾರ ನಮಿಗ್ಯಾಕೆ ಬಿಡ್ರೀ…’

– ಲಕ್ಷ್ಮಿ ಹೆಬ್ಬಾಳ್ಕರ್, ಮಿನಿಸ್ಟ್ರು ಕುರ್ಚಿಗೆ ಹಾಕಿದ್ದ ಕರ್ಚೀಪಿನಲ್ಲೇ ಕಣ್ಣೊರೆಸಿಕೊಳ್ತಿರೋ ಡೀಕೇಶಿ ಅನುಯಾಯಿ.

* * * *

`ನೋಡಿ… ಮೂವತ್ತೆಂಟು ಸೀಟು ಗ್ಯೆದ್ದ ಪಕ್ಸುಕ್ಕೆ ಎಪ್ಪತ್ತೆಂಟು ಗ್ಯೆದ್ದ ನ್ಯಾಷುನಲ್ ಪಾರ್ಟಿ ಬೆಂಬಲ ನೀಡುತ್ತೆ ಅಂದ್ರೆ, ಅದರ ಹಿಂದೆ ದ್ಯೇವ್ರ ಅನುಗ್ರಹ ಇದೆ ಅಂತ್ಲೇ ಅರ್ತ. ಕುಮಾರಸ್ವಾಮಿಯೋರಿಗೆ ಬಹುಮತ ಸಿಕ್ಕಿಲ್ಲ ಅನ್ನೋ ನೋವು ನನಿಗೆ ಇರೋದು ನಿಜಾ… ಅಧಿಕಾರ ಕೊಟ್ರೂ ದೇವ್ರು ಅವ್ರನ್ನ ಪರೀಕ್ಸ ಮಾಡ್ತಾ ಕುಂತವ್ನೆ. ಒಂದು ವರ್ಸ ಯಾವ ಚ್ಯಿಂತೇನೂ ಇಲ್ಲ. ಆಮ್ಯಾಲೆ ಹೆಂಗೋ ಗೊತ್ತಿಲ್ಲ’

– ದೇವೇಗೌಡ್ರು, ಜನತಾದಳದ ಜಾತ್ಯತೀತ ಮುತ್ಸದ್ದಿ

* * * *

`ಈ ವಿಮರ್ಶಕರು ಏನು ಅದಾರಲ್ರೀ, ಅವುರೇ ದೊಡ್ಡ ಕ್ವೊಲೆಗಡುಕರು. ಮಹಾನ್ ಪಕ್ಷಪಾತಿಗಳು. ನನ್ನ ಹೆಸುರಲ್ಲೇ `ಗೌಡ’ ಇದೆ ಅನ್ನೋ ಕಾರುಣಕ್ಕೇ ಇವುನನ್ನು ಮಟ್ಟ ಹಾಕ್ಬೇಕು ಅನ್ನೋ ಹಂತಕ್ಕೆ ವಿಮರ್ಶೆ ಇಳುದೋಗ್ಯದೆ. ಇಂಥೋರು ಗ್ವೋಡೆ, ಕಬ್ಬುಣದ ಸರಳುಗಳ್ನ ನಿರ್ಮಿಸ್ತಾ ಕುಂತವ್ರೆ. ಥೂತ್ತೇರಿ…’

– ದೊಡ್ಡರಂಗೇಗೌಡ್ರು,
ಮೋದಿ ಸ್ತುತಿಯ ಕಂಡಕಾವ್ಯ ಬರೆದು ಪದ್ಮಶ್ರೀ
ಋಣ ತೀರಿಸಿದ ಗ್ರಾಮ್ಯ ಸೊಗಡಿನ ಸಾಹಿತಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...