Homeಪ್ರಪಂಚಡಿಜಿಟಲ್ ವಸಾಹತೀಕರಣದ ಬಾಹುಗಳಲ್ಲಿ ಬಡಪಾಯಿ ಬಡವ

ಡಿಜಿಟಲ್ ವಸಾಹತೀಕರಣದ ಬಾಹುಗಳಲ್ಲಿ ಬಡಪಾಯಿ ಬಡವ

- Advertisement -
- Advertisement -

ಜಾಗತೀಕರಣವನ್ನು ಅರ್ಥ ಮಾಡಿಸುವಲ್ಲಿ ಖ್ಯಾತ ಲೇಖಕಿ ಅರುಂಧತಿ ರಾಯ್ ನೀಡಿದ್ದ ಉದಾಹರಣೆಯೊಂದು ನನಗೆ ಮತ್ತೆಮತ್ತೆ ನೆನಪಾಗುತ್ತಿದೆ. ರಂಪೆಲ್ ಸ್ಟಿಲ್ಟ್‍ಸ್ಕಿನ್ ಎಂಬಾತ ಕುಳ್ಳನ ವೇಷದಲ್ಲಿ ಬಂದು ರೊಟ್ಟಿ ಕೂಡ ಸರಿಯಾಗಿ ಸುಡಲು ಬಾರದ ಹುಡುಗಿಯೊಬ್ಬಳಿಗೆ ಆಪತ್ಕಾಲದಲ್ಲಿ ಸಹಾಯ ಮಾಡುವ ನೆವದಲ್ಲಿ ಅವಳದ್ದೆಲ್ಲವನ್ನೂ ಒಂದೊಂದಾಗಿ ಕಿತ್ತೊಯ್ಯುವ ಕಥೆಯ ನಿದರ್ಶನ ಅದು. ಈ ಜಾಗತೀಕರಣ ನಮ್ಮ ದೇಶವನ್ನು ಆವರಿಸಿ ಕಾಲು ಶತಮಾನವೇ ಕಳೆದುಹೋಗಿದೆ. ಜಾಗತೀಕರಣವು, ಅಂದು ಚಿಂತಕರು ಊಹಿಸಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅನಾಹುತ ಮಾಡುತ್ತಿರುವುದಕ್ಕೆ ನಾವಿಂದು ಸಾಕ್ಷಿಯಾಗಿದ್ದೇವೆ. ಡಿಜಿಟಲ್ ವಸಾಹತೀಕರಣ ಅನ್ನುವುದು ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣವೆಂಬ ಮೂರು ತಾಯಂದಿರು ಕೂಡಿ ಹೆತ್ತ ರಕ್ಕಸ ಸಂತಾನ. ಡಿಜಿಟಲ್ ವಸಾಹತೀಕರಣವನ್ನು 19ನೆಯ ಶತಮಾನದ ವಸಾಹತೀಕರಣವನ್ನು ಗ್ರಹಿಸಿದ ಪರಿಭಾಷೆಯಲ್ಲಿ ಗ್ರಹಿಸಲಾಗದು. ಏಕೆಂದರೆ ಅಂದಿನ ವಸಾಹತೀಕರಣಕ್ಕಿದ್ದ ಪ್ರಭುತ್ವದ ದಾಹ ಇದಕ್ಕಿಲ್ಲ. ಇದರ ದಾಹ ತೃತೀಯ ಜಗತ್ತಿನ ದೇಶಗಳ ಬಡ, ಕೆಳಮಧ್ಯಮ ಮತ್ತು ಮಧ್ಯಮವರ್ಗದ ನೆತ್ತರು ಹೀರುವುದಷ್ಟೇ! ಸಮುದ್ರ ಮಾರ್ಗದ ಮೂಲಕ ಪಸರಿಸಲು ಶತಮಾನಗಳನ್ನೇ ನುಂಗಿಹಾಕಿದ್ದ ಆ ವಸಾಹತುಶಾಹಿಯಂತೆ ಡಿಜಿಟಲ್ ವಸಾಹತೀಕರಣ ಮಂದಗತಿಯದ್ದಲ್ಲ. ಮಿಂಚಿಗಿಂತಲೂ ಕ್ಷಿಪ್ರ. ಜಾಗತೀಕರಣದ ಕಾಲುಗಳಿಗೆ ಆ ಮಿಂಚಿನ ಓಟ ಕೊಟ್ಟದ್ದು ಇಂಟರ್ನೆಟ್ಟಿನ ಮಹಿಮೆ.
ಡಿಜಿಟಲ್ ವಸಾಹತೀಕರಣದ ಹಿನ್ನೆಲೆಯಲ್ಲಿ ಯೋಚಿಸಿದರೆ ಪ್ರಧಾನಿ ಮೋದಿಯವರ ಪ್ರಪಂಚ ಪರ್ಯಟನೆ, ಅವರು ಜಪಿಸಿದ ಡಿಜಿಟಲ್ ಇಂಡಿಯಾದ ಮಂತ್ರÀ, ನೋಟ್‍ಬ್ಯಾನ್, ಕ್ಯಾಶ್‍ಲೆಸ್ ಇಂಡಿಯಾದ ಬಡಬಡಿಕೆ, ಆಧಾರ್ ಲಿಂಕ್ ಕಡ್ಡಾಯ ಇವುಗಳಿಗೆ ಹೊಸ ಅರ್ಥ ಗೋಚರಿಸತೊಡಗುತ್ತದೆ. ರಾಮಾಯಣ ಕಾಲದಲ್ಲೇ ಇಂಟರ್ನೆಟ್ ಇತ್ತು ಎಂಬ ಬಿಜೆಪಿ ಮಂತ್ರಿವರ್ಯರುಗಳ ಮೂರ್ಖ ನಂಬಿಕೆಗಳಿಂದ ಪ್ರೇರಿತವಾಗಿ ಡಿಜಿಟಲ್ ಇಂಡಿಯಾ ಮಾಡಲು ಹೊರಟದ್ದಲ್ಲ. ಅದು ಡಿಜಿಟಲ್ ವಸಾಹತೀಕರಣ ನೆಲೆಗೊಳಿಸುವ ಭಾಗವಾಗಿ ಎನ್ನುವ ಸತ್ಯ ಅರಿವಾಗತೊಡಗುತ್ತದೆ.
ಮೋದಿ ನೋಟ್‍ಬ್ಯಾನ್ ಘೋಷಿಸಿದಾಗ ಅದು, ಮುಂಬರುವ ಚುನಾವಣೆಗಳನ್ನು ಗೆಲ್ಲುವ ಹುನ್ನಾರ, ಬೃಹತ್ ಬಂಡವಾಳಿಗರ ಬ್ಯಾಡ್‍ಡೆಟ್ ಎಂಬ ಸಾಲಮನ್ನಾದಿಂದ ಬರಿದಾದ ಬ್ಯಾಂಕ್ ತುಂಬುವುದಕ್ಕೆ ಕಂಡುಕೊಂಡ ಯೋಜನೆ ಎಂಬ ಮಾತುಗಳು ಒಂದೆಡೆ ಕೇಳಿಬಂದರೆ, ಮತ್ತೊಂದೆಡೆ ಅವರ ಬೆಂಬಲಿಗರು ಅದು ಕಪ್ಪುಹಣ ನಿಯಂತ್ರಿಸುವ ಬ್ರಹ್ಮಾಸ್ತ್ರ ಎಂದು ಕೊಂಡಾಡಿದರು. ಅಸಲಿಗೆ ಇದೂ ಡಿಜಿಟಲ್ ವಸಾಹತೀಕರಣದ ಯೋಜನೆಯಾಗಿದ್ದು, ದೇಶದ ಕಟ್ಟಕಡೆಯ ಪ್ರಜೆಯ ಪುಟ್ಟಗಂಟಿನ ರೂಪಾಯಿಯನ್ನೂ ತಂದು ಬ್ಯಾಂಕಿನಲ್ಲಿ ಸುರಿಯುವಂತೆ ಮಾಡಿ ಪ್ರತಿಯೊಬ್ಬನನ್ನೂ ಡಿಜಿಟಲ್ ವಸಾಹತೀಕರಣದ ವ್ಯಾಪ್ತಿಗೆ ಒಳಪಡಿಸುವುದೇ ಆಗಿತ್ತು.
ಜಾಗತೀಕರಣ ಮತ್ತು ಡಿಜಿಟಲ್ ವಸಾಹತೀಕರಣಗಳ ಸಾಂಸ್ಥಿಕ ರಚನೆಗಳು ಬಂಡವಾಳಿಗರ ಪರವಾಗಿದ್ದು ಅಮೇರಿಕಾದಂತಹ ದೇಶಗಳ ಹಿತಾಸಕ್ತಿಗಳನ್ನು ರಕ್ಷಿಸುವುದೇ ಅವುಗಳ ಧ್ಯೇಯವಾಗಿರುತ್ತದೆ. ಬಡತನ, ದಾರಿದ್ರ್ಯ, ಅಸಮಾನತೆ, ಪರಿಸರ ನಾಶಗಳನ್ನು ಪ್ರೇರೇಪಿಸುವ ಇವುಗಳು ಆಂತರ್ಯದಲ್ಲಿ ಜನವಿರೋಧಿ, ಜೀವವಿರೋಧಿ, ಶ್ರಮವಿರೋಧಿ ಲಕ್ಷಣಗಳನ್ನು ಒಳಗೊಂಡಿರುತ್ತವೆ.
ತೃತೀಯ ಜಗತ್ತಿನ ದೇಶಗಳ ಯಾವುದೋ ಮೂಲೆಯ ಗಂಡಸೊಬ್ಬನನ್ನು ರೋಮಾಂಚನಗೊಳಿಸಲು ಯಾವ ದನಿಯ, ಯಾವ ಪದಗಳ, ಯಾವ ಅಂಗಗಳ ವೀಡಿಯೋ ಪೂರೈಸಬೇಕಿದೆ ಎನ್ನುವುದರಿಂದ ಹಿಡಿದು ಬೃಹತ್ ಯೋಜನೆಗಳಿಗೆ ಬಂಡವಾಳ ಹೂಡುವವರೆಗಿನ ಕಾರ್ಯಯೋಜನೆಗಳು ಇವುಗಳ ತೆಕ್ಕೆಯಲ್ಲಿರುತ್ತವೆ. ಇದಕ್ಕಾಗಿ ಆ ನಿಶಕ್ತ ದೇಶಕ್ಕೆ ಸಾಲದ ರೂಪದ ಗ್ಲೂಕೋಸ್, ವಿಟಮಿನ್ನುಗಳ ಆಮಿಷವೊಡ್ಡಿ ಡಿಜಿಟಲ್ ವಸಾಹತೀಕರಣಕ್ಕೆ ಅವುಗಳನ್ನು ಎದ್ದುಕೂರಿಸಲಾಗುತ್ತಿದೆ. ಮೊಣಕೈ ಗಂಟಿಗೆ ಬೆಲ್ಲ ಸವರಿ ತಮಾಷೆ ನೋಡುವ ಈ ವಿಚಿತ್ರಕ್ಕೆ ಜಿಯೋ ಸಿಮ್ ಮಾರಾಟವೇ ಒಂದು ಸ್ಪಷ್ಟ ನಿದರ್ಶನ.
ಸಾಲಕ್ಕಾಗಿ ವಿಶ್ವಬ್ಯಾಂಕನ್ನೇ ನೆಚ್ಚಿ ಕೂರಬೇಕಾಗಿಲ್ಲ. ಹಾಗೆ ನೋಡಿದರೆ, ಬಂಡವಾಳಿಗರ ಪರವಾಗಿದ್ದರೂ ಕ್ಷಿಪ್ರ ವಿತರಣಾ ವ್ಯವಸ್ಥೆಯಿಲ್ಲದ ಮಂದಗತಿಯ ವಿಶ್ವಬ್ಯಾಂಕ್ ಎಂದರೆ ಬಂಡವಾಳಿಗರಿಗೆ ಅಷ್ಟೇನೂ ಮೋಹವಿಲ್ಲ. ಹಾಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್), ರಪ್ತು ಸಾಲ ನೀಡಿಕೆಯ ಸಂಸ್ಥೆ (ಸಿಇಎ), ವಿಶ್ವವ್ಯಾಪಾರ ಸಂಸ್ಥೆ (ಡಬ್ಲ್ಯೂ.ಟಿ.ಒ) ಮುಂತಾದ ಬೇರೆಬೇರೆ ಹೆಸರಿನ ಆದರೆ ಹೆಚ್ಚೂಕಮ್ಮಿ ಒಂದೇ ಕಾರ್ಯೋದ್ದೇಶದ ಹಲವಾರು ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಎಲ್ಲವೂ ಬಂಡವಾಳಿಗರ ಕೈಗೊಂಬೆಯಂತಾಗಿರುವುದರಿಂದ ಮುಂದೊಂದು ದಿನ ಇವು ಸಾಲ ಪಡೆದ ಸರಕಾರಗಳ ಕೊರಳ ಪಟ್ಟಿ ಹಿಡಿದು ಬಡ್ಡಿ ಸಹಿತ ಸಾಲ ಮರುಪಾವತಿಗೆ ಪಟ್ಟು ಹಿಡಿಯುತ್ತವೆ. ಆಗ ಸರಕಾರಗಳು ಯಾರ ಕತ್ತು ಹಿಸುಕುವ ಅನಿವಾರ್ಯತೆಗೆ ಸಿಲುಕುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಾಗ ಮಾತ್ರ ಈ ಡಿಜಿಟಲ್ ವಸಾಹತೀಕರಣದ ಕರಾಳತೆ ಗೋಚರವಾಗುತ್ತೆ.
ಹಳೆಯ ನೋಟುಗಳು ಬ್ಯಾನ್ ಆದದ್ದರಿಂದ ಕೈಯಲ್ಲಿ ದಮ್ಮಡಿಯೂ ಇಟ್ಟುಕೊಳ್ಳದಂತೆ ಎಲ್ಲವನ್ನೂ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಜನ ನೆಟ್ ಬ್ಯಾಂಕಿಂಗು, ಪೇಟಿಎಮ್ಮು, ಆನ್‍ಲೈನ್ ಟ್ರಾನ್ಸ್‍ಫರು, ಕಾರ್ಡ್ ಬಿಲ್ಲಿಂಗ್ ಮೂಲಕ ಜೀವನ ಬಲು ಸುಲಭವಾಗಿದೆ ಎಂಬ ನಿಟ್ಟುಸಿರು ಬಿಡುವ ವೇಳೆಯಲ್ಲೆ, ಜಿಎಸ್‍ಟಿ ತೆರಿಗೆಯು ನಮಗರಿವಿಲ್ಲದೇ ನಮ್ಮ ಬ್ಯಾಂಕ್ ಇಡಗಂಟನ್ನು ಕತ್ತರಿಸುತ್ತಿತ್ತು. ಈ ನಡುವೆ ಕರನಿರಾಕರಣೆ ಎಂಬ ಕೀರಲು ದನಿಯೊಂದು ಹೊರಟಿತ್ತು. ತೆರಿಗೆ ಕಟ್ಟುವ ವಿಧಾನ ನಮ್ಮ ಕೈಲಿಲ್ಲದೆ ತಾನೇತಾನಾಗಿ ಕತ್ತರಿಸಲ್ಪಡುತ್ತಿವಾಗ, ಇದೊಂದು ಮೋಹಕ ಹುಸಿಯಲ್ಲದೆ ಬೇರೇನಾಗಿರಲಿಲ್ಲ.
ಮೇಲ್ನೋಟಕ್ಕೆ ಇದು ದೇಶದೊಳಗೆ ನಡೆಯುತ್ತಿರುವ ಪ್ರಕ್ರಿಯೆಯಂತೆ ಕಂಡರೂ ಇದರ ಚುಕ್ಕಾಣಿ ಇರೋದು ಡಿಜಿಟಲ್ ವಸಾಹತೀಕರಣದ ವಿದೇಶೀ ಹೂಡಿಕೆದಾರರು ಮತ್ತು ಆ ಹೂಡಿಕೆಗೆ ಸಾಲ ಕೊಡುವ ಸಂಸ್ಥೆಗಳ ಕೈಯಲ್ಲಿ! ಅವು ದೇಶವನ್ನು ಯಾವ ಪರಿ ತನ್ನ ಕಬ್ಜಾದಲ್ಲಿಟ್ಟುಕೊಂಡಿವೆ ಎಂದರೆ, ನಮ್ಮ ದೇಶದ ರೈತರ ಉತ್ಪನ್ನಗಳು ಗೋದಾಮುಗಳಲ್ಲಿ ಕೊಳೆಬೀಳುತ್ತಿದ್ದರೂ, ಆಹಾರ ಧಾನ್ಯಗಳನ್ನೂ ಹೊರಗಿನಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸರ್ಕಾರಗಳು ಸಿಲುಕಿವೆ. ಈ ನೆಲದ ಸ್ವಾವಲಂಬನೆಯ ಕಶೇರು ಮೂಳೆಗೇ ಕೊಟ್ಟ ಪ್ರಹಾರ ಇದು.
ದೇಶವಿದೇಶ ಸುತ್ತುತ್ತಾ ಮನಬಂದಂತೆ ಒಪ್ಪಂದಗಳಿಗೆ ಸಹಿ ಹಾಕುತ್ತಿರುವ ನಮ್ಮ ಪ್ರಧಾನಿಗಳು ಡಿಜಿಟಲ್ ವಸಾಹತೀಕರಣವೆಂಬ ಅಗೋಚರ ಆಕ್ಟೋಪಸ್ಸಿನ ಬಾಹುಗಳಿಗೆ ತಳ್ಳುತ್ತಿರೋದನ್ನು ಜನ ಅರ್ಥ ಮಾಡಿಕೊಳ್ಳಲೇಬೇಕಿದೆ. ಹಿಂದುತ್ವವನ್ನು ಮುಂದೆ ಮಾಡಿಕೊಂಡು ಕುರ್ಚಿ ಹಿಡಿದ ಬಿಜೆಪಿಗೆ ಇದು ತಿಳಿಯದ್ದೇನಲ್ಲ. ಆದ್ದರಿಂದಲೇ ಅದು ಹಿಂದೂ-ಮುಸ್ಲಿಂ ಹಗೆ, ದಲಿತವಿರೋಧಿ ವಿಚಾರಗಳನ್ನು ಜೀವಂತವಿರಿಸುತ್ತಾ, ಫಿಟ್ನೆಸ್ ಮಂತ್ರದಂತಹ ಅಸಂಬದ್ಧ, ಅವೈಜ್ಞಾನಿಕ ಹೇಳಿಕೆಗಳ ಮೂಲಕ ಜನರ ಗಮನವನ್ನು ಬೇರೆಡೆ ತಿರುಗಿಸಲು ಯತ್ನಿಸುತ್ತಿದೆ. ತಾನೇ ಸಾಕಿಕೊಂಡಿರುವ ಟ್ರೋಲ್ ಹೈಕಳು ಆ ಕೆಲಸವನ್ನು ಬಲು ನಿಯತ್ತಿನಿಂದ ಮಾಡುತ್ತಿದ್ದಾರೆ. ಮೋದಿ ಸಂಪುಟದ ಸಚಿವರ ಹೊಣೆಯೂ ಇಂತದ್ದಕ್ಕಷ್ಟೇ ಸೀಮಿತವಾಗಿರೋದು ದುರಂತ. ಕೇವಲ ಜನರಿಗಷ್ಟೇ ಅಲ್ಲ ಒಂದು ಧರ್ಮ, ಒಂದು ಬಣ್ಣ, ಒಂದು ಸಂಸ್ಕೃತಿ ಸ್ಥಾಪಿಸುವ ಭ್ರಮೆ ತುಂಬಿಕೊಂಡಿರುವ ಹಿಂದುತ್ವ ಸಂಘಟನೆಗಳನ್ನೂ ಬಿಜೆಪಿ ಯಾಮಾರಿಸುತ್ತಿದೆ.
ಅಂಗಡಿಯೊಂದರ ಮುಂದೆ ನಿಂತು ಪತ್ರಿಕೆ ಓದುವ ಸಾಮಾನ್ಯನೊಬ್ಬ ನೀರವ್ ಮೋದಿ, ಮಲ್ಯಗಳಂತೆ `ಮೋಷಾ’ ಕೂಡಾ ಓಡಿಹೋಗುವುದಿಲ್ಲವೆನ್ನುವುದು ಯಾವ ಖಾತರಿ? ಎಂದು ಪ್ರಶ್ನಿಸುವ ಹಂತಕ್ಕೆ ಬಂದಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ನಾಳೆ ಬಿಜೆಪಿಯ ಉದ್ದೇಶಿತ ಸರ್ವಾಧಿಕಾರವೇ ಪ್ರತಿಷ್ಠಾಪಿತವಾದರು ಡಿಜಿಟಲ್ ವಸಾಹತೀಕರಣದ ದಾಹ ತಣಿಸಲು `ಡಿಜಿಟಲ್ ಇಂಡಿಯಾ’ವನ್ನು `ಕ್ಯಾಶ್‍ಲೆಸ್ ಇಂಡಿಯಾ’ಗೆ ತಿರುಗಿಸಿ ಜನರನ್ನು ಸುಲಿಯುತ್ತಲೇ ಇದ್ದು ಬಿಡಬಹುದೆನ್ನುವುದೂ ಅಷ್ಟು ಸುಲಭವಿಲ್ಲ. ಕೇವಲ ಬಿಜೆಪಿ ಅಂತಲ್ಲ, ಅದನ್ನು ಬಿಟ್ಟು ಬೇರೆ ಯಾವ ಪಕ್ಷ ಅಧಿಕಾರ ಹಿಡಿದರೂ, ಬ್ಯಾಂಕುಗಳು ದಿವಾಳಿಯೆದ್ದು ‘ಬ್ಯಾಂಕ್ ಲೆಸ್ ಇಂಡಿಯಾ’ ಆಗುವವರೆಗಷ್ಟೇ ಈ ಆಟ. ಯಾಕೆಂದರೆ ಗದ್ದುಗೆ ಮೇಲೆ ಸರ್ವಾಧಿಕಾರಿಯೇ ಕೂತಿದ್ದರು, ಅವನ ಜುಟ್ಟು ಹಿಡಿದು ನಿಯಂತ್ರಿಸುವುದು ಈ ನವ ವಸಾಹತೀಕರಣವೇ!
ಆದರೆ ಕ್ಯಾಶ್‍ಲೆಸ್ ಇಂಡಿಯಾದಿಂದ ಬ್ಯಾಂಕ್‍ಲೆಸ್ ಹಂತಕ್ಕೆ ತಲುಪುವ ನಡುವಿನ ಜನರ ಜೀವನವಿದೆಯೆಲ್ಲ ಅದು ಘನಘೋರವಾಗಿರಲಿದೆ. ಪ್ರಜ್ಞಾವಂತರ ಆತಂಕವಿರೋದು ಈ ವಿಚಾರಕ್ಕೆ. 1971ರಿಂದ 1990ರ ಅವಧಿಯಲ್ಲಿ ರಾಷ್ಟ್ರೀಯ ಹಣಕಾಸು ವ್ಯವಹಾರಗಳ ಸಂರಚನೆಯೇ ನೈಜ ಆರ್ಥಿಕತೆಯಿಂದ ಸಟ್ಟಾ ಮಾರುಕಟ್ಟೆಗೆ ವರ್ಗಾಯಿಸಲ್ಪಟ್ಟ ಹಿನ್ನೆಲೆಯಲ್ಲಿ ಭಾರತದ ನೈಜ ಆರ್ಥಿಕತೆಯ ವ್ಯವಹಾರಗಳ ಪ್ರಮಾಣವು ಶೇ.90 ರಿಂದ ಶೇ.10 ಹಾಗೂ ಶೇ.5ಕ್ಕೆ ಇಳಿದಿತ್ತು. ಕಾರಣವೇನೆಂದರೆ, ಎರಡನೇ ಮಹಾಯುದ್ಧದ ನಂತರ ಜಾಗತಿಕ ಬ್ಯಾಂಕರ್ ಆಗಿ ಮೆರೆದಾಡಲು ಶುರು ಮಾಡಿದ ವಿಶ್ವದ ದೊಡ್ಡಣ್ಣ ಅಮೇರಿಕಾದಿಂದ ಸಾಲ ಪಡೆದ ದೇಶಗಳಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಉಲ್ಬಣಿಸಿತ್ತು. ಆಗ ಅಮೇರಿಕಾದ ಅಧ್ಯಕ್ಷ ನಿಕ್ಸನ್ ಆಡಳಿತವು ಈ ವ್ಯವಸ್ಥೆಯನ್ನು ಅನೂರ್ಜಿತಗೊಳಿಸಿ ದೊಡ್ಡ ಅನಿಯಂತ್ರಿತ ಬಂಡವಾಳ ಹರಿವಿಗೆ ದಾರಿಮಾಡಿಕೊಟ್ಟಿತ್ತು.
ಇದರಿಂದಾಗಿ, ಶೋಚನೀಯ ಸ್ಥಿತಿಯಲ್ಲಿದ್ದ ತೃತೀಯ ಜಗತ್ತಿನ ಕೂಸುಗಳಾದ ಭಾರತದಂತಹ ಬಡ ರಾಷ್ಟ್ರಗಳು ಅನಿವಾರ್ಯವಾಗಿ ಜಾಗತೀಕರಣವನ್ನು ಬರಮಾಡಿಕೊಂಡವು. ಪರಿಣಾಮವಾಗಿ ದೇಶದ ಸಿರಿವಂತರು ಇನ್ನಷ್ಟು ಕೊಬ್ಬುತ್ತಾ ಹೋದರೆ, ಕೆಳ ಮಧ್ಯಮವರ್ಗವು ಮಧ್ಯಮವರ್ಗಕ್ಕೆ ಭಡ್ತಿ ಪಡೆಯಿತು. ಇನ್ನು ಬಡತನ ರೇಖೆಗಿಂತ ಕೆಳಗಿದ್ದ ಜನರು ಹೊಟ್ಟೆ, ಬಟ್ಟೆ, ತಲೆ ಮೇಲಿನ ಸೂರು ಪಡೆದು ನಿಟ್ಟುಸಿರು ಬಿಟ್ಟರು. ದಲಿತ ದಮನಿತರೂ ಶಿಕ್ಷಣ ಪಡೆದು ತಮ್ಮ ಅವಮಾನಕರ ಬದುಕಿನಿಂದ ಆಚೆಗೆ ಇಣುಕುವ ಪ್ರಯತ್ನ ಮಾಡಲು ಸಾಧ್ಯವಾಯಿತು. ಆದರೆ ಈಗ ಡಿಜಿಟಲ್ ವಸಾಹತೀಕರಣವು ಕೊಡುವ ಸಣ್ಣಕೈಯನ್ನು ಸ್ತಬ್ಧಗೊಳಿಸಿ ಕಿತ್ತುಕೊಳ್ಳುವ ದೊಡ್ಡ ಕೈನ ಕರಾಮತ್ತು ಶುರು ಮಾಡಿಕೊಂಡಿದೆ. ಇನ್ನೂ ಸಿಂಪಲ್ಲಾಗಿ ಹೇಳಬೇಕೆಂದರೆ, ಡಿಜಿಟಲ್ ವಸಾಹತಿಕರಣವು ಜನರ ಕೈಗೆ ಸುಲಭವಾಗಿ ಸ್ಮಾರ್ಟ್‍ಫೋನ್, ಇಂಟರ್ನೆಟ್ ಸಿಗುವಂತೆ ಮಾಡಿತು. ಜನ ಖುಷಿಪಟ್ಟರು. ಈಗ ಆ ಸ್ಮಾರ್ಟ್‍ಫೋನ್ ಮೂಲಕವೇ ಜನರ ಸುಲಿಗೆ ಮಾಡಲು ಮುಂದಾಗಿದೆ.
ನವ ಉದಾರವಾದದ ಜನಕನೆಂದು ಖ್ಯಾತಿಪಡೆದ ಆಡಂಸ್ಮಿತ್‍ನ ಚಿಂತನೆಗಳು ಅವನೇ ಗುರುತಿಸಿದ ವ್ಯತಿರಿಕ್ತ ಪರಿಣಾಮಗಳಿಗಿಂತಲೂ ಎಷ್ಟೋಪಟ್ಟು ಭೀಕರವಾದವುಗಳೆಂದು ಸಾಬೀತಾಗತೊಡಗಿದೆ. ರಷ್ಯಾದ ನಿಕೋಲೋಯ್ ಗೊಗೋಲ್ ‘ದ ಓವರ್ ಕೋಟ್’ ಕಾದಂಬರಿ ಬರೆಯುವ ಕಾಲಕ್ಕೆ ರಷ್ಯಾದ ಬಡ ಜನತೆಯ ಪಾಡು ಹೇಗಿತ್ತೆಂದರೆ, ಒಂದು ಬೆಚ್ಚನೆಯ ಕೋಟ್ ಹೊಲಿಸಲೂ ಹಣವಿಲ್ಲದೆ ಹೆಪ್ಪುಗಟ್ಟಿಸುವ ಚಳಿ ತಡೆಯಲು ಮೈಲುಗಟ್ಟಲೆ ಓಡುತ್ತಿದ್ದರಂತೆ. ಓಡಲು ತಾಕತ್ತಿಲ್ಲದವರು ಸಾವನ್ನು ಆಲಂಗಿಸಬೇಕಿತ್ತು! ಇಂದು ನಮ್ಮ ಸ್ಥಿತಿಯೂ ಭಿನ್ನವಾಗಿಲ್ಲ. ಅರುಂಧತಿ ರಾಯ್ ಹೇಳುವ ರಂಪೆಲ್ ಸ್ಟಿಲ್ ಸ್ಕಿನ್ ಎಂಬ ಕುಳ್ಳನ ನಿಜರೂಪವನ್ನು ಅರಿತು, ತೀವ್ರ ಪ್ರತಿರೋಧ ತೋರುವುದರಲ್ಲೇ ಜನರ ಅಳಿವು-ಉಳಿವು ಅಡಗಿದೆ.

– ಕಾದಂಬಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...