Homeಮುಖಪುಟಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

ಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

- Advertisement -
- Advertisement -

ಜೀವನ ಕಲೆಗಳು: ಅಂಕಣ-16

ಪರಸ್ಪರ ವೈಯ್ಯುಕ್ತಿಕ ವ್ಯಾಜ್ಯಗಳ ಪರಿಹಾರ

ಜನರು ಒಟ್ಟಾಗಿ ಕೆಲಸ ಮಾಡುತ್ತಿರುವಾಗ ಪರಸ್ಪರ ವೈಯ್ಯುಕ್ತಿಕ ಮತಭೇದ ಮತ್ತು ವ್ಯಾಜ್ಯಗಳು ಸ್ವಾಭಾವಿಕ, ಹಾಗೂ ಸರ್ವೇ ಸಾಮಾನ್ಯ. ಎಲ್ಲಾ ಸಂಬಂಧಗಳು ಈ ದಾರಿಯಿಂದಲೇ ಸಾಗಿ ಪರಿಪಕ್ವವಾಗಬೇಕು. ವ್ಯಾಜ್ಯಗಳ ಸಮರ್ಪಕ ನಿರ್ವಹಣೆಯಿಂದ ಆತಂಕಗಳು ಕಡಿಮೆಯಾಗಿ, ಬೆಳವಣಿಗೆಗೂ ಸಹಕಾರಿಯಾಗುತ್ತದೆ.

ವ್ಯಾಜ್ಯ ಎಂದ ಕೂಡಲೇ ಇದನ್ನು ಭೀಕರ ಕಾಳಗ, ಹೊಡೆದಾಟ, ಬಡಿದಾಟ ಎಂದೇ ಭಾವಿಸಬೇಕಿಲ್ಲ. ಇದು ಸಣ್ಣ ಮತಬೇಧದಿಂದ ಪ್ರಾರಂಭವಾಗಿ ಕೊನೆಗೆ ಹೊಡೆದಾಟ-ಬಡಿದಾಟಕ್ಕೂ ತಲುಪಬಹುದು. ಆದ್ದರಿಂದ ಇದನ್ನು ಸಣ್ಣದಾಗಿರುವಾಗಲೇ ಪರಿಹಾರ ಮಾಡುವುದು ಜಾಣತನದ ಕಲೆ. ತಂಡದಲ್ಲಿ ಜನರು ಕೆಲಸ ಮಾಡುತ್ತಿರುವಾಗ ಒಂದು ವ್ಯಕ್ತಿ ಅಥವಾ ಗುಂಪು ಒಟ್ಟಾಗಿ ಸೇರಿ, ಓರ್ವ ವ್ಯಕ್ತಿ ಅಥವಾ ಇನ್ನೊಂದು ಗುಂಪನ್ನು ಅದರ ಗುರಿ ತಲುಪದಂತೆ ಮಾಡಿದಾಗ ಉಂಟಾಗುವ ಸನ್ನಿವೇಶವನ್ನು ಸಂಸ್ಥೆಗಳ ಒಳವ್ಯಾಜ್ಯ ಎನ್ನಬಹುದು. ಈ ರೀತಿಯ ವ್ಯಾಜ್ಯಗಳಲ್ಲಿ ಮುಖ್ಯವಾಗಿ ಕಾಣುವುದು

· ವೈಯುಕ್ತಿಕ ಅಥವಾ ಸಂಬಂಧದ ತಿಕ್ಕಾಟ: ಇದರಲ್ಲಿ ಸ್ವ-ಪ್ರತಿಷ್ಠೆ, ನಿಷ್ಠೆ, ಅವಿಶ್ವಾಸ, ಅಗೌರವ ಮುಂತಾದ ಸಮಸ್ಯೆ ಇರುತ್ತದೆ.

· ವ್ಯವಸ್ಥೆಯ ತಿಕ್ಕಾಟ: ಇದರಲ್ಲಿ ಅವ್ಯವಸ್ಥೆ ಅಂದರೆ ಏಕ-ಕಾಲಕ್ಕೆ ಇಬ್ಬರು ಒಂದೇ ವಸ್ತುವಿನ ಉಪಯೋಗಕ್ಕೆ ಮುಂದಾಗುವುದು ಅಂದರೆ ವ್ಯವಸ್ಥೆಯಲ್ಲಿನ ಲೋಪ-ದೋಷಗಳಿಂದಾದ ವ್ಯಾಜ್ಯ.

· ಆಸಕ್ತಿಗಳ ಗುದ್ದಾಟ: ಇಬ್ಬರ ಅಥವಾ ಎರಡು ಗುಂಪಿನ ಆಸಕ್ತಿ, ಆದ್ಯತೆ ಇವುಗಳಲ್ಲಿ ಒಂದು ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿಂದಾಗುವ ವ್ಯಾಜ್ಯ.

ಇಲ್ಲಿ “ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಇಷ್ಟ” ಎಂಬ ಗಾದೆಯಂತೆ ಬರುವ ಐದು ಸನ್ನಿವೇಶಗಳು:

ಗೆಲುವು-ಸೋಲು: (Win-Lose) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ನಮ್ಮ ಪ್ರತಿಪಾದನೆಯೂ ಜಾಸ್ತಿಯಾದಾಗ ಮತ್ತು ಸಂಬಂಧಗಳಿಗೆ ಮಹತ್ವ ಕಡಿಮೆಯಾಗಿ ಸಹಕಾರವೂ ಇಲ್ಲದಾದಾಗ ಉಂಟಾಗುವ ಸನ್ನಿವೇಶವೇ ಪ್ರತಿಸ್ಪರ್ಧೆ. ಇದರಲ್ಲಿ ಹೇಗಾದರೂ ಎದುರಾಳಿಯನ್ನು ಸೋಲಿಸಬೇಕು ಮತ್ತು ನಾವು ಜಯಶಾಲಿಯಾಗಬೇಕು ಎನ್ನುವ ಹಂಬಲ. ಇದರಲ್ಲಿ ಒಂದು ಪಕ್ಷಕ್ಕೆ ಮಾತ್ರ ಜಯಕ್ಕೆ ಆಸ್ಪದವಿರುತ್ತದೆ.

ಸೋಲು-ಸೋಲು ಅಥವಾ ಹಿಂದೇಟು: (Lose – Lose) ಪದಾರ್ಥದ ಮೇಲೆ ನಮಗೆ ಆಸಕ್ತಿ ಇಲ್ಲವಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಮತ್ತು ಸಂಬಂಧಗಳಿಗೆ ಹೆಚ್ಚಿನ ಮಹತ್ವ ಇಲ್ಲದೆ, ಸಹಕಾರದ ಕೊರತೆಯೂ ಇದ್ದಾಗ, ಸ್ಪರ್ಧೆಯಿಂದ ಹಿಂದೇಟು ಹಾಕಿ, ಉಮೇದುವಾರಿಕೆ ಹಿಂಪಡೆಯುವ ಸನ್ನಿವೇಶ. ಇದರಲ್ಲಿ ಇಬ್ಬರಿಗೂ ಸೋಲುವ ಸಾಧ್ಯತೆ/ಭೀತಿ, ಹಾಗಾಗಿ ಹಿಂದೇಟು. ಯಾರಿಗೂ ಜಯವಿಲ್ಲ. ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ನಡೆಯಲಿಲ್ಲ ಎಂಬ ವಿಷಾದ.

ರಾಜಿ: (Compromise) ಪದಾರ್ಥದ ಮೇಲೆ ನಮಗೆ ಆಸಕ್ತಿ ಮಧ್ಯಮವಾಗಿದ್ದು, ಪ್ರತಿಪಾದನೆಯೂ ಮಧ್ಯಮವಾದಾಗ ಹಾಗೂ ಸಂಬಂಧಗಳಿಗೆ ಮಹತ್ವ ಮಧ್ಯಮವಾಗಿದ್ದು, ಸಹಕಾರದ ಅಪೇಕ್ಷೆಯೂ ಮಧ್ಯಮವಾಗಿದ್ದಾಗ ಉಂಟಾಗುವ ಸನ್ನಿವೇಶವೇ ಪರಸ್ಪರ ರಾಜಿ/ಅಂಗೀಕಾರ. ಇಲ್ಲಿ ಮಾತು-ಕತೆಗೆ ಅವಕಾಶ. ಯಾರಿಗೂ ಸೋಲಿಲ್ಲ, ಯಾರಿಗೂ ಗೆಲುವು ಇಲ್ಲ. ಒಂದು ರೀತಿಯ ಶೂನ್ಯದ ಡ್ರಾ.

ಸೋತು ಗೆಲ್ಲುವುದು: (Accommodate) ಪದಾರ್ಥದ ಮೇಲೆ ನಮ್ಮ ಆಸಕ್ತಿ ಕಡಿಮೆಯಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಹಾಗೂ ಸಂಬಂಧಗಳಿಗೆ ಅಧಿಕ ಬೆಲೆ ಇದ್ದು, ಸಹಕಾರದ ಸಾಧ್ಯತೆ ಹೆಚ್ಚಾದಾಗ ನಾವು ಸ್ಪರ್ಧೆಗೆ ಇಳಿಯದೆ, ಎದುರಾಳಿಗೆ ಆಟ ಬಿಟ್ಟುಕೊಡುವ ಮನಃಸ್ಥಿತಿಗೆ ಬರುತ್ತೇವೆ. ಇಲ್ಲಿಯೂ ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ಬಿಟ್ಟುಕೊಟ್ಟವರು ತಮ್ಮ ಅವಕಾಶಕ್ಕೆ ಕಾಯುತ್ತಿರುತ್ತಾರೆ.

ಇಬ್ಬರಿಗೂ ಜಯ: (Win –Win) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರತಿಪಾದನೆಯೂ ಹೆಚ್ಚಾಗಿದ್ದರೂ ಸಹ, ಸಂಬಂಧಗಳಿಗೂ ಬೆಲೆ ಅಧಿಕವಾಗಿದ್ದು ಸಹಕಾರದ ಸಾಧ್ಯತೆಯೂ ಹೆಚ್ಚಾಗಿದ್ದಾಗ ಇಬ್ಬರೂ ಕೈ ಜೋಡಿಸಿ ಕೆಲಸ ಮಾಡುತ್ತೇವೆ. ಇದು ಅತ್ಯಂತ ಅಪೇಕ್ಷಣೀಯ ಪರಿಹಾರ. ಇದಕ್ಕೆ ಯಾವಾಗಲೂ ಪ್ರಯತ್ನಿಸಬೇಕು.

ವ್ಯಾಜ್ಯಗಳ ಪರಿಹಾರ ಹೇಗೆ
ವ್ಯಾಜ್ಯವನ್ನು ಪರಿಹಾರ ಮಾಡಲು ಬೇಕಾಗುವ ಕಲೆಗಳು:

·         ಸಂವಹನ ಕಲೆ

·         ಭಾವನೆಗಳ ಅಥವಾ ಆತಂಕ (ಸ್ಟ್ರೆಸ್ಸ್) ನಿರ್ವಹಣೆ ಮತ್ತು ಅನುಭೂತಿ

·         ಸಮಸ್ಯೆಗಳ ಪರಿಹಾರ / ನಿರ್ಧಾರ ತೆಗೆದುಕೊಳ್ಳುವ ಕಲೆ

·         ತಂಡದಲ್ಲಿ ಕೆಲಸ ಮಾಡುವ ಕಲೆ.

ಪರಿಹಾರದ ಹೆಜ್ಜೆಗಳು:

·         ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು.

·         ಎದುರಾಳಿಯ ಜೊತೆ ಮಾತು-ಕತೆ ನಡೆಸುವುದು.

·         ಮಧ್ಯಸ್ತಿಕೆಯೂ ಸೇರಿದಂತೆ, ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುವುದು.

·         ಸರಿಯಾದ ಪರ್ಯಾಯದ ಆಯ್ಕೆ.

·         ಭಾವನೆಗಳನ್ನು ನಿರ್ವಹಿಸುವುದು.

ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ವ್ಯಾಜ್ಯಕ್ಕೆ ಮೂಲ ಕಾರಣ ಏನು ಎಂದು ತಿಳಿದು ಅದಕ್ಕೆ ಪರಿಹಾರ ಹುಡುಕಬೇಕು. ಇದಕ್ಕಾಗಿ ನಿಮ್ಮ ಮತ್ತು ಎದುರಾಳಿಯ ಇಬ್ಬರ ವಾದವೂ ಏನು ಎಂಬುದನ್ನು ಸ್ಪಷ್ಟವಾಗಿ ಇಡಬೇಕು. ಇಬ್ಬರ ಆಸಕ್ತಿ-ಆಸೆ-ಅಕಾಂಕ್ಷೆ-ಭೀತಿ ಏನು ಎಂಬುದನ್ನು ಅರಿಯಬೇಕು. ಇದನ್ನು ಅರಿಯಲು ಕೆಳಕಂಡ ಪ್ರಶ್ನೆಗಳು ಸಹಕಾರಿಯಾಗಬಹುದು:

ನಮ್ಮ ಆಸಕ್ತಿ ಏನು? ನಮ್ಮ ಮುಖ್ಯ ಅನುಮಾನ ಏನು? ಬೇಡಿಕೆ ಏನು? ಅವಶ್ಯಕತೆ ಏನು? ಆಕಾಂಕ್ಷೆ  ಮತ್ತು ಭೀತಿ ಏನು? ಇದೇ ರೀತಿ ಎದುರಾಳಿಯ ಮಾಹಿತಿಯನ್ನೂ ಪಡೆದು ಅದನ್ನೂ ಕೂಲಂಕಷವಾಗಿ ಅವಲೋಕಿಸಬೇಕು.

ಯಾವ ರೀತಿಯ ಸಂಧಾನಕ್ಕೆ ಬರಬಹುದು?

ಮೂರನೆಯ (ನಿಶ್ಪಕ್ಷ) ಪಕ್ಷವನ್ನು ಮಧ್ಯಸ್ಥಿಕೆ ವಹಿಸಲು ನೇಮಿಸಿದಲ್ಲಿ ನಮಗೆ ಸಂಧಾನಕ್ಕೆ ಬರಲು ಸಾಧ್ಯವೇ? ಇಬ್ಬರಿಗೂ ನ್ಯಾಯ ಸಿಕ್ಕಂತೆ ಆಗುತ್ತದೋ ಅಥವಾ ಇಬ್ಬರ ಜಗಳ ಮೂರನೆಯವರ ಲಾಭ ಆಗುತ್ತದೋ? ಯಾರು ಈ ಮೂರನೆಯ ಪಕ್ಷ? ಅವರು ಸಮಾಜದಲ್ಲಿ ಪ್ರತಿಷ್ಠಿತರೇ? ಸಂಧಾನ ಕಾನೂನಿನ ಚೌಕಟ್ಟಿನಲ್ಲಿರುತ್ತದೆಯೇ? ಅದನ್ನು ಯಾರು ಜಾರಿ ಮಾಡುವುದು ಮತ್ತು ನೋಡಿಕೊಳ್ಳುವುದು? ಖರ್ಚು ವೆಚ್ಚ ಯಾರು ಭರಿಸುವುದು? ಇಂತಹ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಸಿಗಬೇಕು.

ಕೆಲವೊಮ್ಮೆ ಇಬ್ಬರೂ ತಮ್ಮ ಪ್ರತಿಷ್ಠೆಯನ್ನೇ ದೊಡ್ಡದು ಮಾಡಿಕೊಂಡು, ನಿಜವಾಗಿ ಆಗುತ್ತಿರುವ ತಮ್ಮ ಆಸಕ್ತಿಯ ಹಾನಿಯನ್ನು ನಿರ್ಲಕ್ಷಿಸಿ, ತಮ್ಮ ಮುಖವನ್ನು ಉಳಿಸಿಕೊಳ್ಳುವ (ಸೇವಿಂಗ್ ದಿ ಫೇಸ್) ನಿಟ್ಟಿನಲ್ಲಿ,ನನಗೆ ಕನಿಷ್ಠ ಇಷ್ಟಾದರೂ ಸಿಗಬೇಕು ಎಂದು ಚೌಕಾಸಿ ಮಾಡಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ನಿಜವಾದ ಆಸಕ್ತಿ ಹಾನಿಯನ್ನು ಸಹಿಸಿಕೊಳ್ಳುತ್ತಾರೆ. ಆದ್ದರಿಂದ ಇಬ್ಬರ ಆಸಕ್ತಿ ಏನು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ವ್ಯಾಜ್ಯ ಪರಿಹಾರ ಆಗುವ ತನಕ ಎರಡೂ ಪಕ್ಷಗಳು ತಮ್ಮ ಭಾವನಾತಿರೇಕಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತದೆ. ನೆನಪಿಡಿ, ಮಾತು ಬಲ್ಲವನಿಗೆ ಜಗಳವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...