Homeಮುಖಪುಟಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

ಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

- Advertisement -
- Advertisement -

ಜೀವನ ಕಲೆಗಳು: ಅಂಕಣ-16

ಪರಸ್ಪರ ವೈಯ್ಯುಕ್ತಿಕ ವ್ಯಾಜ್ಯಗಳ ಪರಿಹಾರ

ಜನರು ಒಟ್ಟಾಗಿ ಕೆಲಸ ಮಾಡುತ್ತಿರುವಾಗ ಪರಸ್ಪರ ವೈಯ್ಯುಕ್ತಿಕ ಮತಭೇದ ಮತ್ತು ವ್ಯಾಜ್ಯಗಳು ಸ್ವಾಭಾವಿಕ, ಹಾಗೂ ಸರ್ವೇ ಸಾಮಾನ್ಯ. ಎಲ್ಲಾ ಸಂಬಂಧಗಳು ಈ ದಾರಿಯಿಂದಲೇ ಸಾಗಿ ಪರಿಪಕ್ವವಾಗಬೇಕು. ವ್ಯಾಜ್ಯಗಳ ಸಮರ್ಪಕ ನಿರ್ವಹಣೆಯಿಂದ ಆತಂಕಗಳು ಕಡಿಮೆಯಾಗಿ, ಬೆಳವಣಿಗೆಗೂ ಸಹಕಾರಿಯಾಗುತ್ತದೆ.

ವ್ಯಾಜ್ಯ ಎಂದ ಕೂಡಲೇ ಇದನ್ನು ಭೀಕರ ಕಾಳಗ, ಹೊಡೆದಾಟ, ಬಡಿದಾಟ ಎಂದೇ ಭಾವಿಸಬೇಕಿಲ್ಲ. ಇದು ಸಣ್ಣ ಮತಬೇಧದಿಂದ ಪ್ರಾರಂಭವಾಗಿ ಕೊನೆಗೆ ಹೊಡೆದಾಟ-ಬಡಿದಾಟಕ್ಕೂ ತಲುಪಬಹುದು. ಆದ್ದರಿಂದ ಇದನ್ನು ಸಣ್ಣದಾಗಿರುವಾಗಲೇ ಪರಿಹಾರ ಮಾಡುವುದು ಜಾಣತನದ ಕಲೆ. ತಂಡದಲ್ಲಿ ಜನರು ಕೆಲಸ ಮಾಡುತ್ತಿರುವಾಗ ಒಂದು ವ್ಯಕ್ತಿ ಅಥವಾ ಗುಂಪು ಒಟ್ಟಾಗಿ ಸೇರಿ, ಓರ್ವ ವ್ಯಕ್ತಿ ಅಥವಾ ಇನ್ನೊಂದು ಗುಂಪನ್ನು ಅದರ ಗುರಿ ತಲುಪದಂತೆ ಮಾಡಿದಾಗ ಉಂಟಾಗುವ ಸನ್ನಿವೇಶವನ್ನು ಸಂಸ್ಥೆಗಳ ಒಳವ್ಯಾಜ್ಯ ಎನ್ನಬಹುದು. ಈ ರೀತಿಯ ವ್ಯಾಜ್ಯಗಳಲ್ಲಿ ಮುಖ್ಯವಾಗಿ ಕಾಣುವುದು

· ವೈಯುಕ್ತಿಕ ಅಥವಾ ಸಂಬಂಧದ ತಿಕ್ಕಾಟ: ಇದರಲ್ಲಿ ಸ್ವ-ಪ್ರತಿಷ್ಠೆ, ನಿಷ್ಠೆ, ಅವಿಶ್ವಾಸ, ಅಗೌರವ ಮುಂತಾದ ಸಮಸ್ಯೆ ಇರುತ್ತದೆ.

· ವ್ಯವಸ್ಥೆಯ ತಿಕ್ಕಾಟ: ಇದರಲ್ಲಿ ಅವ್ಯವಸ್ಥೆ ಅಂದರೆ ಏಕ-ಕಾಲಕ್ಕೆ ಇಬ್ಬರು ಒಂದೇ ವಸ್ತುವಿನ ಉಪಯೋಗಕ್ಕೆ ಮುಂದಾಗುವುದು ಅಂದರೆ ವ್ಯವಸ್ಥೆಯಲ್ಲಿನ ಲೋಪ-ದೋಷಗಳಿಂದಾದ ವ್ಯಾಜ್ಯ.

· ಆಸಕ್ತಿಗಳ ಗುದ್ದಾಟ: ಇಬ್ಬರ ಅಥವಾ ಎರಡು ಗುಂಪಿನ ಆಸಕ್ತಿ, ಆದ್ಯತೆ ಇವುಗಳಲ್ಲಿ ಒಂದು ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿಂದಾಗುವ ವ್ಯಾಜ್ಯ.

ಇಲ್ಲಿ “ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಇಷ್ಟ” ಎಂಬ ಗಾದೆಯಂತೆ ಬರುವ ಐದು ಸನ್ನಿವೇಶಗಳು:

ಗೆಲುವು-ಸೋಲು: (Win-Lose) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ನಮ್ಮ ಪ್ರತಿಪಾದನೆಯೂ ಜಾಸ್ತಿಯಾದಾಗ ಮತ್ತು ಸಂಬಂಧಗಳಿಗೆ ಮಹತ್ವ ಕಡಿಮೆಯಾಗಿ ಸಹಕಾರವೂ ಇಲ್ಲದಾದಾಗ ಉಂಟಾಗುವ ಸನ್ನಿವೇಶವೇ ಪ್ರತಿಸ್ಪರ್ಧೆ. ಇದರಲ್ಲಿ ಹೇಗಾದರೂ ಎದುರಾಳಿಯನ್ನು ಸೋಲಿಸಬೇಕು ಮತ್ತು ನಾವು ಜಯಶಾಲಿಯಾಗಬೇಕು ಎನ್ನುವ ಹಂಬಲ. ಇದರಲ್ಲಿ ಒಂದು ಪಕ್ಷಕ್ಕೆ ಮಾತ್ರ ಜಯಕ್ಕೆ ಆಸ್ಪದವಿರುತ್ತದೆ.

ಸೋಲು-ಸೋಲು ಅಥವಾ ಹಿಂದೇಟು: (Lose – Lose) ಪದಾರ್ಥದ ಮೇಲೆ ನಮಗೆ ಆಸಕ್ತಿ ಇಲ್ಲವಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಮತ್ತು ಸಂಬಂಧಗಳಿಗೆ ಹೆಚ್ಚಿನ ಮಹತ್ವ ಇಲ್ಲದೆ, ಸಹಕಾರದ ಕೊರತೆಯೂ ಇದ್ದಾಗ, ಸ್ಪರ್ಧೆಯಿಂದ ಹಿಂದೇಟು ಹಾಕಿ, ಉಮೇದುವಾರಿಕೆ ಹಿಂಪಡೆಯುವ ಸನ್ನಿವೇಶ. ಇದರಲ್ಲಿ ಇಬ್ಬರಿಗೂ ಸೋಲುವ ಸಾಧ್ಯತೆ/ಭೀತಿ, ಹಾಗಾಗಿ ಹಿಂದೇಟು. ಯಾರಿಗೂ ಜಯವಿಲ್ಲ. ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ನಡೆಯಲಿಲ್ಲ ಎಂಬ ವಿಷಾದ.

ರಾಜಿ: (Compromise) ಪದಾರ್ಥದ ಮೇಲೆ ನಮಗೆ ಆಸಕ್ತಿ ಮಧ್ಯಮವಾಗಿದ್ದು, ಪ್ರತಿಪಾದನೆಯೂ ಮಧ್ಯಮವಾದಾಗ ಹಾಗೂ ಸಂಬಂಧಗಳಿಗೆ ಮಹತ್ವ ಮಧ್ಯಮವಾಗಿದ್ದು, ಸಹಕಾರದ ಅಪೇಕ್ಷೆಯೂ ಮಧ್ಯಮವಾಗಿದ್ದಾಗ ಉಂಟಾಗುವ ಸನ್ನಿವೇಶವೇ ಪರಸ್ಪರ ರಾಜಿ/ಅಂಗೀಕಾರ. ಇಲ್ಲಿ ಮಾತು-ಕತೆಗೆ ಅವಕಾಶ. ಯಾರಿಗೂ ಸೋಲಿಲ್ಲ, ಯಾರಿಗೂ ಗೆಲುವು ಇಲ್ಲ. ಒಂದು ರೀತಿಯ ಶೂನ್ಯದ ಡ್ರಾ.

ಸೋತು ಗೆಲ್ಲುವುದು: (Accommodate) ಪದಾರ್ಥದ ಮೇಲೆ ನಮ್ಮ ಆಸಕ್ತಿ ಕಡಿಮೆಯಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಹಾಗೂ ಸಂಬಂಧಗಳಿಗೆ ಅಧಿಕ ಬೆಲೆ ಇದ್ದು, ಸಹಕಾರದ ಸಾಧ್ಯತೆ ಹೆಚ್ಚಾದಾಗ ನಾವು ಸ್ಪರ್ಧೆಗೆ ಇಳಿಯದೆ, ಎದುರಾಳಿಗೆ ಆಟ ಬಿಟ್ಟುಕೊಡುವ ಮನಃಸ್ಥಿತಿಗೆ ಬರುತ್ತೇವೆ. ಇಲ್ಲಿಯೂ ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ಬಿಟ್ಟುಕೊಟ್ಟವರು ತಮ್ಮ ಅವಕಾಶಕ್ಕೆ ಕಾಯುತ್ತಿರುತ್ತಾರೆ.

ಇಬ್ಬರಿಗೂ ಜಯ: (Win –Win) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರತಿಪಾದನೆಯೂ ಹೆಚ್ಚಾಗಿದ್ದರೂ ಸಹ, ಸಂಬಂಧಗಳಿಗೂ ಬೆಲೆ ಅಧಿಕವಾಗಿದ್ದು ಸಹಕಾರದ ಸಾಧ್ಯತೆಯೂ ಹೆಚ್ಚಾಗಿದ್ದಾಗ ಇಬ್ಬರೂ ಕೈ ಜೋಡಿಸಿ ಕೆಲಸ ಮಾಡುತ್ತೇವೆ. ಇದು ಅತ್ಯಂತ ಅಪೇಕ್ಷಣೀಯ ಪರಿಹಾರ. ಇದಕ್ಕೆ ಯಾವಾಗಲೂ ಪ್ರಯತ್ನಿಸಬೇಕು.

ವ್ಯಾಜ್ಯಗಳ ಪರಿಹಾರ ಹೇಗೆ
ವ್ಯಾಜ್ಯವನ್ನು ಪರಿಹಾರ ಮಾಡಲು ಬೇಕಾಗುವ ಕಲೆಗಳು:

·         ಸಂವಹನ ಕಲೆ

·         ಭಾವನೆಗಳ ಅಥವಾ ಆತಂಕ (ಸ್ಟ್ರೆಸ್ಸ್) ನಿರ್ವಹಣೆ ಮತ್ತು ಅನುಭೂತಿ

·         ಸಮಸ್ಯೆಗಳ ಪರಿಹಾರ / ನಿರ್ಧಾರ ತೆಗೆದುಕೊಳ್ಳುವ ಕಲೆ

·         ತಂಡದಲ್ಲಿ ಕೆಲಸ ಮಾಡುವ ಕಲೆ.

ಪರಿಹಾರದ ಹೆಜ್ಜೆಗಳು:

·         ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು.

·         ಎದುರಾಳಿಯ ಜೊತೆ ಮಾತು-ಕತೆ ನಡೆಸುವುದು.

·         ಮಧ್ಯಸ್ತಿಕೆಯೂ ಸೇರಿದಂತೆ, ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುವುದು.

·         ಸರಿಯಾದ ಪರ್ಯಾಯದ ಆಯ್ಕೆ.

·         ಭಾವನೆಗಳನ್ನು ನಿರ್ವಹಿಸುವುದು.

ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ವ್ಯಾಜ್ಯಕ್ಕೆ ಮೂಲ ಕಾರಣ ಏನು ಎಂದು ತಿಳಿದು ಅದಕ್ಕೆ ಪರಿಹಾರ ಹುಡುಕಬೇಕು. ಇದಕ್ಕಾಗಿ ನಿಮ್ಮ ಮತ್ತು ಎದುರಾಳಿಯ ಇಬ್ಬರ ವಾದವೂ ಏನು ಎಂಬುದನ್ನು ಸ್ಪಷ್ಟವಾಗಿ ಇಡಬೇಕು. ಇಬ್ಬರ ಆಸಕ್ತಿ-ಆಸೆ-ಅಕಾಂಕ್ಷೆ-ಭೀತಿ ಏನು ಎಂಬುದನ್ನು ಅರಿಯಬೇಕು. ಇದನ್ನು ಅರಿಯಲು ಕೆಳಕಂಡ ಪ್ರಶ್ನೆಗಳು ಸಹಕಾರಿಯಾಗಬಹುದು:

ನಮ್ಮ ಆಸಕ್ತಿ ಏನು? ನಮ್ಮ ಮುಖ್ಯ ಅನುಮಾನ ಏನು? ಬೇಡಿಕೆ ಏನು? ಅವಶ್ಯಕತೆ ಏನು? ಆಕಾಂಕ್ಷೆ  ಮತ್ತು ಭೀತಿ ಏನು? ಇದೇ ರೀತಿ ಎದುರಾಳಿಯ ಮಾಹಿತಿಯನ್ನೂ ಪಡೆದು ಅದನ್ನೂ ಕೂಲಂಕಷವಾಗಿ ಅವಲೋಕಿಸಬೇಕು.

ಯಾವ ರೀತಿಯ ಸಂಧಾನಕ್ಕೆ ಬರಬಹುದು?

ಮೂರನೆಯ (ನಿಶ್ಪಕ್ಷ) ಪಕ್ಷವನ್ನು ಮಧ್ಯಸ್ಥಿಕೆ ವಹಿಸಲು ನೇಮಿಸಿದಲ್ಲಿ ನಮಗೆ ಸಂಧಾನಕ್ಕೆ ಬರಲು ಸಾಧ್ಯವೇ? ಇಬ್ಬರಿಗೂ ನ್ಯಾಯ ಸಿಕ್ಕಂತೆ ಆಗುತ್ತದೋ ಅಥವಾ ಇಬ್ಬರ ಜಗಳ ಮೂರನೆಯವರ ಲಾಭ ಆಗುತ್ತದೋ? ಯಾರು ಈ ಮೂರನೆಯ ಪಕ್ಷ? ಅವರು ಸಮಾಜದಲ್ಲಿ ಪ್ರತಿಷ್ಠಿತರೇ? ಸಂಧಾನ ಕಾನೂನಿನ ಚೌಕಟ್ಟಿನಲ್ಲಿರುತ್ತದೆಯೇ? ಅದನ್ನು ಯಾರು ಜಾರಿ ಮಾಡುವುದು ಮತ್ತು ನೋಡಿಕೊಳ್ಳುವುದು? ಖರ್ಚು ವೆಚ್ಚ ಯಾರು ಭರಿಸುವುದು? ಇಂತಹ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಸಿಗಬೇಕು.

ಕೆಲವೊಮ್ಮೆ ಇಬ್ಬರೂ ತಮ್ಮ ಪ್ರತಿಷ್ಠೆಯನ್ನೇ ದೊಡ್ಡದು ಮಾಡಿಕೊಂಡು, ನಿಜವಾಗಿ ಆಗುತ್ತಿರುವ ತಮ್ಮ ಆಸಕ್ತಿಯ ಹಾನಿಯನ್ನು ನಿರ್ಲಕ್ಷಿಸಿ, ತಮ್ಮ ಮುಖವನ್ನು ಉಳಿಸಿಕೊಳ್ಳುವ (ಸೇವಿಂಗ್ ದಿ ಫೇಸ್) ನಿಟ್ಟಿನಲ್ಲಿ,ನನಗೆ ಕನಿಷ್ಠ ಇಷ್ಟಾದರೂ ಸಿಗಬೇಕು ಎಂದು ಚೌಕಾಸಿ ಮಾಡಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ನಿಜವಾದ ಆಸಕ್ತಿ ಹಾನಿಯನ್ನು ಸಹಿಸಿಕೊಳ್ಳುತ್ತಾರೆ. ಆದ್ದರಿಂದ ಇಬ್ಬರ ಆಸಕ್ತಿ ಏನು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ವ್ಯಾಜ್ಯ ಪರಿಹಾರ ಆಗುವ ತನಕ ಎರಡೂ ಪಕ್ಷಗಳು ತಮ್ಮ ಭಾವನಾತಿರೇಕಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತದೆ. ನೆನಪಿಡಿ, ಮಾತು ಬಲ್ಲವನಿಗೆ ಜಗಳವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...