Homeಅಂಕಣಗಳುಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ..
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...