Homeಅಂಕಣಗಳುಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ..
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...