Homeಅಂಕಣಗಳುಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

ಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

- Advertisement -
- Advertisement -

ನಿಖಿಲ್ ಕೊಲ್ಫೆ |
ಪ್ರಪಂಚದ ಆಗಿಹೋದ ಮತ್ತು ಈಗಿರುವ ಬಹುತೇಕ ಎಲ್ಲಾ ಸರ್ವಾಧಿಕಾರಿಗಳ ವೈಯಕ್ತಿಕ ಸ್ವಭಾವ ಹಾಗೂ ಗುಣಲಕ್ಷಣಗಳಲ್ಲಿ ಅನೇಕ ಸಾಮ್ಯಗಳಿವೆ. ಅವುಗಳಲ್ಲಿ ಮುಖ್ಯವಾದದ್ದೆಂದರೆ ನಾರ್ಸಿಸಿಸಮ್ ಅಂದರೆ ತಮ್ಮನ್ನೇ ತಾವು ಮೋಹಿಸುವ ಪ್ರವೃತ್ತಿ. ಗ್ರೀಕ್ ಪುರಾಣದಲ್ಲಿ ಬರುವ ನಾರ್ಸಿಸಸ್ ಒಬ್ಬ ಬೇಟೆಗಾರ. ಸುಂದರನಾಗಿದ್ದ ಆತ ಒಂದು ತಿಳಿಯಾದ ಕೊಳದಲ್ಲಿ ತನ್ನ ಮುಖವನ್ನು ನೋಡಿ ಪ್ರತಿಬಿಂಬದಲ್ಲಿ ಮೋಹಗೊಳ್ಳುತ್ತಾನೆ. ಸರ್ವಾಧಿಕಾರಿಗಳು ಅದೇ ರೀತಿ ವರ್ತಿಸುತ್ತಾರೆ.
ತಮ್ಮನ್ನು ತಾವು ಧೀರರು, ಬಲಶಾಲಿಗಳು, ಬುದ್ಧಿವಂತರು ಎಂದು ಬಿಂಬಿಸಲು ಬಯಸುತ್ತಾರೆ. ಇಡೀ ಪ್ರಪಂಚದಲ್ಲಿ ತಾನೇ ಅತ್ಯಂತ ಮುಖ್ಯ ವ್ಯಕ್ತಿ; ಅದು ತಮ್ಮ ಸುತ್ತಲೇ ತಿರುಗುತ್ತದೆ ಎಂಬ ಭ್ರಮೆ ಅವರಲ್ಲಿರುತ್ತದೆ. ಅವರು ಮಿಲಿಟರಿ ಸಮವಸ್ತ್ರ, ಅತ್ಯುತ್ತಮ ಸೂಟುಬೂಟು ಧರಿಸುತ್ತಾರೆ. ಸರಳತೆ ಅವರಲ್ಲಿಲ್ಲ!
ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಅವರು ಯಾವತ್ತೂ ಎತ್ತರದ ವೇದಿಕೆಗಳಲ್ಲಿ ಇರುತ್ತಾರೆ. ಹಿಂದೆ ಅವರದ್ದೇ ಭಾರೀ ಚಿತ್ರಗಳಿರುತ್ತವೆ. ಮಾಧ್ಯಮಗಳಲ್ಲಿ ಅವರದ್ದೇ ವ್ಯಕ್ತಿಕೇಂದ್ರಿತ ಪ್ರಚಾರ ಇರುತ್ತದೆ. ಇರಾಕಿನಲ್ಲಿ ಸದ್ದಾಂ ಹುಸೇನ್ ಅಧಿಕಾರದಲ್ಲಿ ಇದ್ದಾಗ ಎಲ್ಲೆಲ್ಲೂ, ಸಾರ್ವಜನಿಕ ಸ್ಥಳಗಳಲ್ಲಿ ಅತನ ಪ್ರತಿಮೆಗಳು, ಭಾವಚಿತ್ರಗಳು, ಕಟೌಟುಗಳು ರಾರಾಜಿಸುತ್ತಿದ್ದವು. ದಿನಪತ್ರಿಕೆಗಳಲ್ಲಿ ಪ್ರತೀದಿನ ಮುಖಪುಟದಲ್ಲಿ ಆತನ ಫೋಟೋ ಕಡ್ಡಾಯ. ಟಿವಿ ರೇಡಿಯೋಗಳಲ್ಲಿ ಮೊದಲ ಸುದ್ದಿ ಅತನದ್ದೇ ಅಗಿರಬೇಕು. ಹಿಟ್ಲರ್ ಕೂಡಾ ಇದಕ್ಕೆ ಹೊರತಲ್ಲ!
ಕೆಲವು ಅಧ್ಯಯನಗಳ ಪ್ರಕಾರ ಸಾಮಾನ್ಯವಾಗಿ ಸರ್ವಾಧಿಕಾರಿಗಳು ವರ್ಚಸ್ವಿಗಳೂ, ಆತ್ಮವಿಶ್ವಾಸ ಹೊಂದಿರುವವರೂ ಆಗಿರುತ್ತಾರೆ. ಅವರು ಹಿಟ್ಲರ್‍ನಂತೆ ಉತ್ತಮ ಭಾಷಣಕಾರರಾಗಿರುತ್ತಾರೆ. ಅದರೆ, ಅವರ ಭಾಷಣಗಳಲ್ಲಿ ಹುರುಳಿರುವುದಿಲ್ಲ! ಅಡಿದ್ದನ್ನೇ ಭಾವನಾತ್ಮಕವಾಗಿ ಆಡಿ ಜನರನ್ನು ಉದ್ರೇಕಿಸುವಂತಿರುತ್ತವೆ. ಘೋಷಣೆಗಳೇ ಅವರ ಬಂಡವಾಳ. ಯಾವಾಗಲೂ ಭಾವನಾತ್ಮಕ ವಿಷಯಗಳನ್ನೇ ಕೆಣಕುತ್ತಾರೆ. ಸರ್ವಾಧಿಕಾರಿಗಳು ಸುಳ್ಳುಹೇಳುವುದರಲ್ಲಿ ನಿಷ್ಣಾತರಾಗಿರುತ್ತಾರೆ.
ಅವರು ಹೆಚ್ಚಾಗಿ ಉಗಾಂಡದ ಇದಿ ಅಮೀನನಂತೆ ಕ್ರೂರಿಗಳಾಗಿರುತ್ತಾರೆ. ಭಾವನಾತ್ಮಕ ಮಾತುಗಳನ್ನೇ ಆಡಿದರೂ ಅವರು ಮಾತ್ರ ಭಾವನಾತ್ಕಕವಾಗಿರುವುದಿಲ್ಲ. ಅವರು ಧೈರ್ಯಶಾಲಿಗಳ ಪೋಸು ಕೊಟ್ಟರೂ, ಕೆಲವರು ನಿಜವಾಗಿಯೂ ಧೈರ್ಯಶಾಲಿಗಳಾಗಿಯೇ ಇದ್ದರೂ, ಇನ್ನು ಕೆಲವರು ಸ್ವಭಾವತಃ ಪುಕ್ಕಲುಗಳಾಗಿರುತ್ತಾರೆ. ಯಾರಾದರೂ ತಮ್ಮನ್ನು ಕೊಲ್ಲಬಹುದು, ತಾನು ಅಧಿಕಾರ ಕಳೆದುಕೊಳ್ಳಬಹುದು ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಅದಕ್ಕಾಗಿ ಸ್ವಲ್ಪ ಸಂಶಯ ಬಂದರೂ ವಿರೋಧಿಗಳನ್ನು ದಮನಿಸುತ್ತಾರೆ. ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುಹಮ್ಮದ್ ಗಡ್ಡಾಫಿ ಹೆಚ್ಚಾಗಿ ರಾಜಧಾನಿ ಟ್ರಿಪೋಲಿಯಲ್ಲಿ ವಾಸವಿರದೆ, ಮರುಭೂಮಿಗಳ ಗುಪ್ತಸ್ಥಳಗಳ ಟೆಂಟ್ ಕ್ಯಾಂಪ್‍ಗಳಲ್ಲಿ ವಾಸವಿದ್ದುದನ್ನು ಗಮನಿಸಬಹುದು.
ಸರ್ವಾಧಿಕಾರಿಗಳು ಆರಂಭದಲ್ಲಿ ಜನಪ್ರಿಯರೇ ಆಗಿರುತ್ತಾರೆ. ಹಿಂದಿನ ಆಡಳಿತಗಳ ವೈಫಲ್ಯಗಳಿಂದ ಅಸಮಾಧಾನ ಹೊಂದಿದ ಜನರು ಭವಿಷ್ಯದ ಆಶಾವಾದದಿಂದ ಇಂತವರನ್ನು ಬೆಂಬಲಿಸುತ್ತಾರೆ. ಅವರಾದರೋ ಹಿಂದಿನವರನ್ನು ನಿರಂತರ ದೂರುತ್ತಾ, ಎಲ್ಲದಕ್ಕೂ ಹಿಂದಿನವರೇ ಕಾರಣ ಎಂದು ನಂಬಿಸುತ್ತಾರೆ. ಇರಾಕಿನ ಸದ್ದಾಂ ಹುಸೇನ್ ಕೇವಲ ಸೇನೆಯ ಜನರಲ್ ಅಗಿದ್ದಾತ. 1979ರಲ್ಲಿ ಅಧ್ಯಕ್ಷ ಮಹಮ್ಮದ್ ಹಸನ್ ಅಲ್ ಬಖ್ರ್ ನಿಧನ ಹೊಂದಿದಾಗ ಜನರಲ್ಲಿ ಅಸಮಾಧಾನವಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಸದ್ದಾಂ ಆದ್ಯಕ್ಷನಾದಾಗ, ಬಾತ್ ಪಕ್ಷ ಆತನನ್ನು ಬೆಂಬಲಿಸಿತ್ತು. ಜನರೂ ಖುಷಿಯನ್ನೇ ಪಟ್ಟಿದ್ದರು. ಅದಕ್ಕೆ ಅನುಗುಣವಾಗಿ ಸದ್ದಾಂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡದ್ದೂ ಹೌದು.
ಹಿಟ್ಲರ್ ಕೂಡಾ ನೇರವಾಗಿ ಅಧಿಕಾರ ಕಸಿದುಕೊಂಡು ಸರ್ವಾಧಿಕಾರಿಯಾದವನಲ್ಲ. ಚುನಾವಣೆಯಲ್ಲಿ ಅವನ ಪಕ್ಷ ಎರಡನೇ ಸ್ಥಾನ ಗಳಿಸಿತ್ತು. ಆತನನ್ನು ಅಧ್ಯಕ್ಷ ಪೌಲ್ ವೊನ್ ಲಿಂಡೆನ್‍ಬರ್ಗ್ ಅವರು ಚಾನ್ಸಲರ್ ಆಗಿ ನೇಮಿಸಿದ್ದರು. ನಂತರ ಆತ ಅಧ್ಯಕ್ಷ ಮತ್ತು ಚಾನ್ಸಲರ್ ಎರಡೂ ಅಧಿಕಾರ ಇರುವ ಫ್ಯುರರ್ ಎಂದು ಘೋಷಿಸಿಕೊಂಡಾಗ ಬಹುತೇಕ ಜರ್ಮನರು ಅತ ವಿಶ್ವಗುರು ಆಗುವನೆಂದೇ ನಂಬಿ ಬೆಂಬಲಿಸಿದ್ದರು. ಯಾಕೆಂದರೆ, ಮೊದಲ ಮಹಾಯುದ್ಧದ ಸೋಲಿನಿಂದ ತತ್ತರಿಸಿತ್ತು. ಅರ್ಥಿಕತೆ ಹದಗೆಟ್ಟಿತ್ತು. ನಿರುದ್ಯೋಗ ತಾಂಡವವಾಡುತ್ತಿತ್ತು.
ಎಲ್ಲಾ ಸರ್ವಾಧಿಕಾರಿಗಳು ತಮಗೆ ಯಾವುದೇ ವಿರೋಧ ಇರಬಾರದೆಂದು ಬಯಸುತ್ತಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಅವರಿಗೆ ನಂಬಿಕೆಯೇ ಇರುವುದಿಲ್ಲ. ಸಂಸತ್ತಿನಂತಹ ಯಾವುದೇ ಚುನಾಯಿತ ನಿಯಂತ್ರಕ ಸಂಸ್ಥೆಯನ್ನು ಅವರು ಕಡೆಗಣಿಸುತ್ತಾರೆ. ಅಂತಹ ಸಂಸ್ಥೆಗಳಲ್ಲಿ ತಮ್ಮ ಭಟ್ಟಂಗಿಗಳೇ ಆಯಕಟ್ಟಿನ ಸ್ಥಾನಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಹಿಟ್ಲರ್ ಕೂಡಾ ಜರ್ಮನ್ ಸಂಸತ್ತನ್ನು ವಿಸರ್ಜಿಸಿದ್ದ. ತನ್ನ ಸುತ್ತ ಗೊಬೆಲ್ಸ್, ಹಿಮ್ಲರ್ ಮುಂತಾದ ಭಟ್ಟಂಗಿಗಳನ್ನು ಇಟ್ಟುಕೊಂಡಿದ್ದ.
ಒಂದು ಸರಕಾರ ನಡೆಯಲು ಹಲವಾರು ಸಂಸ್ಥೆಗಳು ಇರಲೇಬೇಕಾಗುತ್ತದೆ. ಬ್ಯಾಂಕಿಂಗ್, ಕೈಗಾರಿಕೆ, ಕೃಷಿ, ಅರೋಗ್ಯ, ಗೃಹ, ರಕ್ಷಣೆ ಹೀಗೆ ಆಡಳಿತ ಯಂತ್ರವನ್ನು ಮುನ್ನಡೆಸಲು ಅಧಿಕಾರಶಾಹಿ ಇದ್ದೇ ಇರುತ್ತದೆ. ಹೆಸರಿಗಾದರೂ ಚುನಾವಣೆಗಳು ನಡೆಯಬೇಕು. ಕೆಲವು ದೇಶಗಳಲ್ಲಿ ನಕಲಿ ಚುನಾವಣೆಗಳೇ ನಡೆಯುತ್ತವೆ. ಈ ಹೊತ್ತಿನಲ್ಲಿ ಯುಎಸ್‍ಎಯಲ್ಲಿ ಭಾರತದ ರಾಯಭಾರಿಯಾಗಿದ್ದ ಹಿರಿಯ ರಾಜತಾಂತ್ರಿಕ ಅಬಿದ್ ಹುಸೇನ್ ಅವರು ಕೆಲವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಆಫ್ರಿಕಾದ ದೇಶವೊಂದರಲ್ಲಿ ನಡೆಯುವ ಚುನಾವಣೆಗಳ ಕುರಿತು ಉದಾಹರಣೆಯಾಗಿ ಹೇಳಿದ ಜೋಕೊಂದು ನೆನಪಿಗೆ ಬರುತ್ತದೆ.
ಒಬ್ಬ ವ್ಯಕ್ತಿ ಅಧ್ಯಕ್ಷರ ವಿರುದ್ಧವಾಗಿ ಮತ ಚಲಾಯಿಸಿ ಮನೆಗೆ ಬರುತ್ತಾನೆ. ಹೆಂಡತಿ ಕೇಳಿದಾಗ ತಾನು ವಿರುದ್ಧ ಮತ ಚಲಾಯಿಸಿದ ವಿಷಯ ಹೇಳುತ್ತಾನೆ. ಆಕೆ ಕಂಗಾಲಾಗುತ್ತಾಳೆ. “ನಿಮಗೆ ಬುದ್ದಿ ಇಲ್ಲವೆ?! ನೀವು ವಿರುದ್ಧ ಮತ ಚಲಾಯಿಸಿದ್ದು, ಸರಕಾರಕ್ಕೆ ಗೊತ್ತಾಗುತ್ತದೆ. ನಾಳೆ ನೀವು ಕೆಲಸ ಕಳಕೊಳ್ಳಬಹುದು. ಜೈಲಿಗೂ ಹೋಗಬಹುದು. ನಮ್ಮ ಮಗನಿಗೆ ಆಡಳಿತ ಪಕ್ಷದ ಗೂಂಡಾಗಳು ಹೊಡೆಯಬಹುದು. ಮಗಳನ್ನು ಅತ್ಯಾಚಾರ ಮಾಡಲೂಬಹುದು. ಈಗಲೇ ಹೋಗಿ ಮತ ಬದಲಿಸಿ ಬನ್ನಿ!” ಎಂದು ಅಂಗಲಾಚುತ್ತಾಳೆ. ಅತನಿಗೆ ಸರಿಯೆನಿಸಿ ಮತಗಟ್ಟೆಗೆ ದೌಡಾಯಿಸಿ ಅಧಿಕಾರಿಗಳಲ್ಲಿ ಹೇಳುತ್ತಾನೆ- “ಸ್ವಾಮಿ ನಾನು ತಪ್ಪಾಗಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದೇನೆ. ಅದನ್ನು ಅವರ ಪರವಾಗಿ ಸರಿಪಡಿಸಬೇಕು”. ಅಗ ಅಧಿಕಾರಿಗಳು ಹೇಳುತ್ತಾರೆ- “ ನಿನಗೇನೂ ಭಯ ಬೇಡ. ನಾವು ಈಗಾಗಲೇ ನಿನ್ನ ಮತವನ್ನು ಅಧ್ಯಕ್ಷರ ಪರ ತಿದ್ದಿ ಆಗಿದೆ!” ನಮ್ಮಲ್ಲೂ ಇಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಹಲವರಿಗೆ ಆತಂಕ ಇರುವುದು ಯಾಕೆ ಎಂದು ಅರ್ಥವಾಯಿತೆ!?
ಈ ಕಾರಣದಿಂದಾಗಿ ಸರ್ವಾಧಿಕಾರಿಗಳು ಯಾವತ್ತೂ ಅಯಕಟ್ಟಿನ ಸ್ಥಾನಗಳಲ್ಲಿ ತಮ್ಮವರನ್ನೇ ನೇಮಿಸಲು ಯತ್ನಿಸುತ್ತಾರೆ. ಅವರು ಭಟ್ಟಂಗಿಗಳು, ಎದುರಾಡದ ಕೈಗೊಂಬೆಗಳೇ ಅಗಿರುತ್ತಾರೆ. ಎದುರಾಡಿದರೆ ರಾಜೀನಾಮೆ ಕೊಡಬೇಕಾದೀತು! ಈ ಕಾರಣದಿಂದಲೇ ಸರ್ವಾಧಿಕಾರಿಯ ತಪ್ಪನ್ನು ಯಾರೂ ಬೆಟ್ಟುಮಾಡಲು ಹೋಗುವುದಿಲ್ಲ- ತನ್ನ ತಪ್ಪುಗಳನ್ನು ತಿಳಿದುಕೊಳ್ಳದ ಆತ ದೇಶವನ್ನೇ ವಿನಾಶಕ್ಕೆ ತಳ್ಳಿ ತಾನೂ ನಾಶವಾಗುವ ತನಕ!
ಸರ್ವಾಧಿಕಾರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಗಳನ್ನು ಮೊಟಕುಗೊಳಿಸಲಾಗುತ್ತದೆ. ನ್ಯಾಯಾಧೀಶ ಹುದ್ದೆಗಳಿಗೂ ಕೈಗೊಂಬೆಗಳನ್ನೇ ಹಿಂಬಾಗಿಲಿನಿಂದ ನುಸುಳಿಸುವ ಪ್ರಯತ್ನಗಳು ನಡೆಯುತ್ತವೆ. ತೀರ್ಪುಗಳು ವಿವಾದಾತ್ಮಕವಾಗಿ ಇದ್ದರೂ ಪ್ರಶ್ನಿಸುವಂತಿಲ್ಲ. ತೀರ್ಪುಗಳು ಪ್ರತಿಕೂಲವಾಗಿದ್ದಾಗ ನ್ಯಾಯಾಲಯಗಳನ್ನೇ ಧಿಕ್ಕರಿಸುವ, ಅಷ್ಟೇ ಏಕೆ ಸಂವಿಧಾನಗಳನ್ನೇ, ಧಿಕ್ಕರಿಸುವ ಪ್ರವೃತ್ತಿ ಅಧಿಕಾರಸ್ಥರ ಕೃಪಾಕಟಾಕ್ಷದಿಂದಲೇ ಬೆಳೆಯುತ್ತದೆ.
ಇನ್ನೊಂದು ಪ್ರವೃತ್ತಿ ಎಂದರೆ, ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ. ಯಾವುದೇ ಸರ್ವಾಧಿಕಾರ ಅವುಗಳನ್ನು ನಿಯಂತ್ರಿಸದೇ ಉಳಿಯುವುದು ಕಷ್ಟ. ಒಂದು ದೇಶಕ್ಕಾಗಿ ಹೋರಾಡಬೇಕಾದ ಸೇನೆಯು ಒಬ್ಬ ವ್ಯಕ್ತಿ ಅಥವಾ ಸರಕಾರಕ್ಕಾಗಿ ಹೋರಾಡುತ್ತಿದೆ ಎಂಬಂತೆ ಬಿಂಬಿಸುವುದು! ಸೈನ್ಯದ ಸಾಧನೆಗಳನ್ನು ತನ್ನ ಸಾಧನೆ ಎಂದು ಕೊಚ್ಚಿಕೊಳ್ಳುವುದು!
ಕಳೆದ ಸಂಚಿಕೆಗಳಲ್ಲಿ ಮತ್ತು ಇಲ್ಲಿ ಕೇವಲ ಪರಿಚಯಾತ್ಮಕವಾಗಿ ವಿವರಿಸಲಾದ ಗುಣಲಕ್ಷಣಗಳನ್ನು ಮುಂದೆ ಒಂದೊಂದಾಗಿ ಸೂಕ್ಷ್ಮವಾಗಿ ಮತ್ತು ಉದಾಹರಣೆ ಸಹಿತ ಪರಿಶೀಲಿಸುವ ಮೊದಲು ಮತ್ತಷ್ಟು ಗುಣ ಲಕ್ಷಣಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಅದೇ ಹೊತ್ತಿಗೆ ಈ ಗುಣಲಕ್ಷಣಗಳು ನಮ್ಮಲ್ಲಿಯೂ ಕಾಣುತ್ತಿವೆಯೇ ಎಂಬುದನ್ನು ಓದುಗರು ಪರಿಶೀಲಿಸಬೇಕು. ಒಂದುವೇಳೆ ಅದು ಹೌದಾದಲ್ಲಿ ನಾವು ತಕ್ಷಣ ಎಚ್ಚರಗೊಳ್ಳಬೇಕಾದ ಅಗತ್ಯವಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...