ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅತ್ಯಾಚಾರ ಆರೋಪಿ ಶಿವಮೂರ್ತಿ ಮುರುಘಾ ಮೇಲಿನ ಪ್ರಕರಣದಿಂದ ಹಿಂದೆ ಸರಿಯುವಂತೆ ಸಚಿವರೊಬ್ಬರು ಕೇಳಿಕೊಂಡಿದ್ದು, ಅದಕ್ಕಾಗಿ ಅವರು ಮೂರು ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕ ಎಂ.ಎಲ್ ಪರಶುರಾಮ್ ಗಂಭೀರ ಆರೋಪ ಮಾಡಿದ್ದಾರೆ.
ಎಂ.ಎಲ್. ಪರಶುರಾಮ್ ಅವರು ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ವಿದ್ಯಾರ್ಥಿ ಪದಾಧಿಕಾರಿಗಳ ಅಭಿವಿನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ನಿಲ್ಲಬೇಕಾದವರು ಆರೋಪಿ ಸ್ವಾಮಿ ಪರ ನಿಂತಿದ್ದಾರೆ. ಸಚಿವರೊಬ್ಬರು ‘ಸ್ವಾಮೀಜಿ ವಿಚಾರದಲ್ಲಿ ಸುಮ್ಮನಿದ್ದು ಬಿಡ್ರಪ್ಪ’ ಎನ್ನುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಸುಮಾರು 23 ಹೆಣ್ಣು ಮಕ್ಕಳ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 25 ವರ್ಷಗಳಿಂದ ಈ ಕೃತ್ಯ ನಡೆಯುತ್ತಿದ್ದು, ಈಗ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯೊಬ್ಬಳು ಸ್ವಾಮೀಜಿ ಕಚ್ಚಿದ ಎದೆಭಾಗವನ್ನು ತೋರಿದಾಗ ತಂದೆ ಸ್ಥಾನದಲ್ಲಿ ನಿಂತು ಮೌನ ವಹಿಸುದಾದರೂ ಹೇಗೆ? ಜೀವವಿರುವವರೆಗೂ ಆ ಹೆಣ್ಣು ಮಕ್ಕಳ ರಕ್ಷಣೆ ಮಾಡುತ್ತೇವೆ” ಎಂದು ಪರಶುರಾಮ್ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: ಮುರುಘಾ ಶಿವಮೂರ್ತಿಗೆ ತಕ್ಕ ಶಿಕ್ಷೆಯಾಗಲಿ: ಬಿ.ಎಸ್.ಯಡಿಯೂರಪ್ಪ ಆಗ್ರಹ
“ಲಜ್ಜೆಗೆಟ್ಟ ರಾಜಕೀಯ ನಾಯಕರ ಆಮಿಷಗಳಿಗೆ ಯಾವತ್ತು ಬಲಿಯಾಗುವುದಿಲ್ಲ. ನಾವು ಸತ್ಯದ ಪರ ನಿಂತಿದ್ದೇವೆ. ಸಂತ್ರಸ್ತ ಬಾಲಕಿಯರ ನೋವು ಕೇಳಿ ಆಘಾತವಾಯಿತು. ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.



It’s really a great honour to mankind. Keep it up V do appreciate u , to this great job. V do wish and support u in this great venture . May God bless you now and in the days to come. For the sake of poor and downtrodden children v should do atleast this wonderful work. Hat’s off to u.👌👌👌👍👍👍✌️✌️✌️🙏🏻🙏🏻🙏🏻💐💐💐