ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ರಾಹುಲ್ ಗಾಂಧಿ ಅವರು ಇಂದು ಆರ್ಬಿಐನ ಮಾಜಿ ಗರ್ವನರ್ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್ ಅವರನ್ನು ಸಂದರ್ಶಿಸಿದ್ದಾರೆ.
“ಬಡವರಿಗೆ ಸಹಾಯ ಮಾಡಲು ಎಷ್ಟು ಹಣ ಬೇಕಾಗುತ್ತದೆ ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ “ನಮಗೆ 65,000 ಕೋಟಿ ರೂ. ಬೇಕು. ಇದು ಬಡವರ ಪ್ರಾಣ ಉಳಿಸಲು” ಎಂದು ವಿಡಿಯೋ ಸಂದರ್ಶನದಲ್ಲಿ ರಘುರಾಮ್ ರಾಜನ್ ಉತ್ತರಿಸಿದ್ದಾರೆ.
ಅಲ್ಲದೇ “ಶಾಶ್ವತವಾಗಿ ಲಾಕ್ಡೌನ್ ಮುಂದುವರಿಸುವುದು ತುಂಬಾ ಸುಲಭ, ಆದರೆ ಅದು ಆರ್ಥಿಕತೆಗೆ ಸುಸ್ಥಿರವಾಗುವುದಿಲ್ಲ” ಎಂದು ರಘುರಾಂ ರಾಜನ್ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಲಾಕ್ಡೌನ್ ನಂತರ ಆರ್ಥಿಕತೆ ಚೇತರಿಕೆಯ ಕುರಿತು ಕಾಂಗ್ರೆಸ್ ಪಕ್ಷವು ಹಲವು ಆರ್ಥಿಕ ತಜ್ಞರು ಮತ್ತು ಬುದ್ಧಿಜೀವಿಗಳೊಂದಿಗೆ ವಿಡಿಯೋ ಸಂವಾದ ನಡೆಸಲು ತೀರ್ಮಾನಿಸಿದೆ. ಅದರ ಮೊದಲ ಹಂತವಾಗಿ ಇಂದು ಸಹ ರಾಹುಲ್ ಗಾಂಧಿ ರಘುರಾಂ ರಾಜನ್ರವರನ್ನು ಸಂದರ್ಶಿಸಿದ್ದಾರೆ.
ನೇರ ಸಂದರ್ಶನ ವೀಕ್ಷಿಸಲು ಕೆಳಗಿನ ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ನೋಡಿ.
A conversation with Dr Raghuram Rajan, former RBI Governor, on dealing with the #Covid19 crisis. https://t.co/cdJtJ7ax0T
— Rahul Gandhi (@RahulGandhi) April 30, 2020
ಕಳೆದ ಎರಡು ದಿನಗಳಿಂದ 50 ಉದ್ದಿಮೆಪತಿಗಳ 68,000 ಕೋಟಿ ಸಾಲ Write Off ಮಾಡಿದ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಟೀಕೆ ನಡೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಡವರ ನೆರವಿಗೆ 65,000 ಕೋಟಿ ಅಗತ್ಯವಿದೆ ಎಂಬ ರಘುರಾಂ ರಾಜನ್ರವರ ಹೇಳಿಕೆ ಮತ್ತಷ್ಟು ಚರ್ಚೆಗೆ ದಾರಿಮಾಡಿಕೊಡಲಿದೆ. ಅದು ಒಂದು ರೀತಿಯಲ್ಲಿ ಬಡವರಿಗೆ ಕೊಡಬೇಕಾದ ಅಷ್ಟು ಪ್ರಮಾಣದ ಹಣವನ್ನು ಬ್ಯಾಂಕುಗಳಿಗೆ ವಂಚಿಸಿ ದೇಶಬಿಟ್ಟು ಹೋಗಿರುವ ಬಂಡವಾಳಿಗರಿಗೆ ಮೋದಿ ಸರ್ಕಾರ ದಾನ ಮಾಡುತ್ತಿದೆ ಎಂಬ ಅಂಶವನ್ನು ಮುನ್ನಲೆಗೆ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರಘುರಾಂ ರಾಜನ್ ಅವರನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ 2013 ರಲ್ಲಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿತ್ತು.
ಇದನ್ನು ಓದಿ: ಉದ್ದಿಮೆದಾರರ 68,607 ಕೋಟಿ ರೂ ಸಾಲ ಮನ್ನಾ: ಮೋದಿ ಸರ್ಕಾರ ಸಂಸತ್ತಿನಿಂದ ಸತ್ಯ ಮರೆಮಾಚಿದೆ – ರಾಹುಲ್
ಇದನ್ನೂ ಓದಿ: 50 ಬಂಡವಾಳಿಗರ ಸಾಲ Write Off: ರಾಹುಲ್ ದಾಳಿಗೆ ಉತ್ತರವಾಗಿ ನಿರ್ಮಲ ಸೀತಾರಾಮನ್ರವರ 13 ಟ್ವೀಟ್ಗಳು