Homeಕರ್ನಾಟಕಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ - ದಲಿತ ಮುಖಂಡರ ಮೇಲೆ...

ಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ – ದಲಿತ ಮುಖಂಡರ ಮೇಲೆ ‘ಗೂಂಡಾ ಪಟ್ಟ’

- Advertisement -
- Advertisement -

ಹಲವು ಪ್ರಕರಣಗಳ ಆರೋಪದ ಮೇಲೆ ದಲಿತ ಮುಖಂಡ, ಚಿತ್ರದುರ್ಗದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಅವರನ್ನು ‘ಗೂಂಡಾ ಕಾಯ್ದೆ’ಯಡಿ ಜೈಲಿಗೆ ಕಳಿಸಲಾಗಿದೆ. ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಎಸ್‌ಡಿಪಿಐ ಪಕ್ಷವು, ಚಿತ್ರದುರ್ಗದಲ್ಲಿ ದಲಿತ ಮಹಾಗಣಪತಿ ಕೂರಿಸುವುದು, ಮಧುಗಿರಿ ಮೋದಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರನ್ನು ಟೀಕಿಸಿದ್ದು, ಟಿಪ್ಪು ಜಯಂತಿ ಪರ ಕರಪತ್ರ ಹಂಚಿಕೆ ಮಾಡಿದ್ದು ಅಪರಾಧವೇ? ಇದಕ್ಕೆ ಗೂಂಡಾ ಕಾಯ್ದೆ ಹಾಕುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ. ಇದು ಪಟ್ಟಭದ್ರರ ರಾಜಕೀಯ ಶಡ್ಯಂತ್ರಕ್ಕೆ ತಲೆಬಾಗಿ, ಪಿತೂರಿ ಮಾಡಿ, ಗೂಂಡಾ ಕಾಯ್ದೆ ಹಾಕಲಾಗಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾಯನ್ನು ಮುಸ್ಲಿಂ ಪಕ್ಷವೆಂದು ಉಲ್ಲೇಖಿಸಿರುವ ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು, ಶ್ರೀನಿವಾಸ್ ಅವರ ಮೇಲಿನ ಪ್ರಕರಣ ಪಟ್ಟಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸಲ್ಲಿಸಿ ಬಂಧಿಸಲು ಅನುಮತಿ ಕೋರಿದ್ದರು. ಜಿಲ್ಲಾಧಿಕಾರಿಗಳು ಬಂಧನಕ್ಕೆ ಅನುಮತಿ ನೀಡಿದ ನಂತರ ಶ್ರೀನಿವಾಸ್‌ ಅವರನ್ನು ಜೈಲಿಗೆ ಕಳಿಸಲಾಗಿದೆ.

ಪ್ರಕರಣಗಳು ಮತ್ತು ಸಂಕ್ಷಿಪ್ತ ವಿವರ

1. ದಸಂಸ (ಎಸ್‌.ಎಸ್.ಬಣ) ವತಿಯಿಂದ ದಲಿತ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ಸಮಾನತೆ ಯಾತ್ರೆ ಮಾಡಿದ್ದು, ಜಿಲ್ಲಾಡಳಿತ ಆದೇಶದ ವಿರುದ್ಧವಾಗಿ ಮೆರವಣಿಗೆ ವೇಳೆ ಡಿ.ಜೆ.ಸೌಂಡ್‌ ಬಳಸಿದ್ದು ಮೊದಲನೇ ಪ್ರಕರಣವಾಗಿದೆ.

2. ದಲಿತ ಗಣಪತಿ ಸಮಾನತಾ ಯಾತ್ರೆಯ ಸಂಬಂಧ ನಿಷೇಧಿತ ಪ್ರದೇಶಗಳಲ್ಲಿ ನೀಲಿ ಬಣ್ಣದ ಬಟ್ಟೆ ಮತ್ತು ಪ್ಲೆಕ್ಸ್‌ಗಳನ್ನು ಹಾಕಿಸಿ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ ಪ್ರಕರಣ.

3. ಟಿಪ್ಪು ಜಯಂತಿ ಸಂಬಂಧ ಪರ, ವಿರೋಧದ ಕರಪತ್ರಗಳ ಹಂಚುವ ವಿಚಾರವಾಗಿ ಚಿತ್ರದುರ್ಗ ನಗರದ ಗಾಂಧಿ ಸರ್ಕಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದು ಇದೇ ವಿಚಾರವಾಗಿ ಪರ ಮತ್ತು ವಿರೋಧ ವ್ಯಕ್ತಪಡಿಸುವ ಎರಡೂ ಗುಂಪುಗಳು ಸೇರಿಕೊಂಡು ಚಿತ್ರದುರ್ಗ ನಗರದಲ್ಲಿ ಇರುವ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದ ಪ್ರಕರಣ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿರುವ ಪ್ರಕರಣ ಇದಾಗಿದೆ.

4. ಚಿತ್ರದುರ್ಗ ನಗರದ ಚೇಳುಗಡ್ಡ ಏರಿಯಾದಲ್ಲಿ ಬಸವರಾಜ್‌ ಎಂಬವರೊಂದಿಗೆ ಆದ ಜಗಳದ ಪ್ರಕರಣ. ಚರಂಡಿ ಮೇಲೆ ಇರುವ ಗೋಡೆಯನ್ನು ತೆಗೆಯಲು ಶ್ರೀನಿವಾಸ್‌ ಹೇಳಿದಾಗ ಆಗಿರುವ ಗಲಾಟೆ ಇದಾಗಿದೆ.

5. ಮಧುಗಿರಿ ಮೋದಿ ಎಂಬವರು ಮಾಡಿದ್ದ ವಿಡಿಯೊಗೆ ವಿರುದ್ಧವಾಗಿ ಮಾತನಾಡಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ವಿಚಾರವನ್ನು ಪ್ರಸ್ತಾಪಿಸಿ ಮುಸ್ಲಿಂ ಧರ್ಮದ ಪರ ಮಾತನಾಡಿದ ಪ್ರಕರಣ. ಮುಸ್ಲಿಂ ಧರ್ಮದ ಪರ ಮಾತನಾಡಿದ್ದರಿಂದ ಜನರ ನಡುವೆ ಭೇದ ಹಾಗೂ ವೈಶಮ್ಯ ಹರಡಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.

6. ಚಿತ್ರದುರ್ಗ ನಗರದ ಚೇಳೂಗುಡ್ಡದ ಈಶ್ವರನ ಕಲ್ಲು ದೇವಸ್ಥಾನದ ಮುಂಭಾಗ ಗೋಡೆಯ ಮೇಲೆ ಬರೆಯಿಸಿದ್ದ ಶ್ರೀ ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಶಿವಕೇಸರಿ ಚೇಳುಗುಡ್ಡ ಚಿತ್ರದುರ್ಗ ಎಂಬ ಬೋರ್ಡ್‌‌ಗೆ ಕಪ್ಪುಬಣ್ಣ ಬಳಿದ ಪ್ರಕರಣ.

7. ಅಪಘಾತ ಪ್ರಕರಣದಲ್ಲಿ ಮೋಟಾರ್‌ ಸೈಕಲ್‌ ಬೋರ್ಡ್ ಬದಲಿಸಿದ ಪ್ರಕರಣ.

8. ಆರೋಪಿಯು ಸಾಕ್ಷಿದಾರರನ್ನು ಬೆದರಿಸುವ ಉದ್ದೇಶ ಹೊಂದಿರುವ ಆರೋಪ ಹೊರಿಸಲಾಗಿದೆ.  ಆ ಮೂಲಕ ನ್ಯಾಯಾಲಯದ ಶಿಕ್ಷೆಗಳಿಂದ ಪಾರಾಗುವ ತಂತ್ರಗಳನ್ನು ಅನುಸರಿಸುತ್ತಿರುವುದಾಗಿ ಶ್ರೀನಿವಾಸ್ ಮೇಲೆ ದೂರಲಾಗಿದೆ. ಶ್ರೀನಿವಾಸ್‌ ಮುಸ್ಲಿಂ ರಾಜಕೀಯ ಪಕ್ಷವಾದ ಎಸ್‌ಡಿಪಿಐಗೆ ಸೇರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

9. ಎಸ್‌ಡಿಪಿಐನಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಪ್ರಕರಣ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಅನುಮತಿ ಇಲ್ಲದೆ ರಸ್ತೆ ಮಧ್ಯೆಯಲ್ಲಿ ಶಾಮಿಯಾನ ಹಾಕಿ, ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ಎಸ್‌ಡಿಪಿಐನ 50-60 ಜನರನ್ನು ಒಂದೆಡೆ ಸೇರಿಸಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಆರೋಪ ಮಾಡಲಾಗಿದೆ.

10. ಎಸ್‌ಡಿಪಿಐ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಕರಣ. ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ ಆರೋಪ ಹೊರಿಸಲಾಗಿದೆ. 70-80 ಜನರನ್ನು ಒಂದೆಡೆ ಸೇರಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

New Doc 01-19-2022 21.21-compressed

ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ದಲಿತ ಮುಖಂಡ, ಎಸ್‌ಡಿಪಿಐ ನಾಯಕ ಬಿ.ಆರ್‌.ಭಾಸ್ಕರ್‌ ಪ್ರಸಾದ್ ಖಂಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಚಿತ್ರದುರ್ಗ ಕೋಟೆ ಪೋಲಿಸ್ ಠಾಣೆಯ ಪೊಲೀಸ್‌ ನಿರೀಕ್ಷಕರು ಒಟ್ಟು 10 ಕಾರಣಗಳನ್ನು ನೀಡಿ, ಬಾಳೆಕಾಯಿ ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಅವರು ಪೋಲಿಸ್ ನಿರೀಕ್ಷಕರು ಸಲಿಸಿದ ಅರ್ಜಿಯನ್ನು ಪರಿಶೀಲಿಸಿ ಶ್ರೀನಿವಾಸ್ ಅವರನ್ನು ಜೈಲಿಗೆ ಕಳಿಸಲು ಆದೇಶಿಸಿದ್ದಾರೆ. ಚಿತ್ರದುರ್ಗದ ಸೂಪರಿಂಟೆಂಡೆಂಟ್ ಪೋಲಿಸ್ ರಾಧಿಕಾ ಇದೆಲ್ಲವನ್ನು ನೋಡಿಯೂ, ಇಲ್ಲಿ ಅನ್ಯಾಯ ಆಗ್ತಾ ಇದೆ ಎಂದು ಗೊತ್ತಿದ್ದೂ, ತಮ್ಮ‌ಇಲಾಖೆಯ ಸಿಬ್ಬಂದಿ ರಾಜಕೀಯ ದಾಳಗಳಾಗಿ ಶ್ರೀನಿವಾಸ್ ಅವರನ್ನು ಬಲಿ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷವಾಗಿ ಗೋಚರಿಸುತ್ತಿದ್ದರೂ, ಅದ್ಯಾರ ಮರ್ಜಿಗೂ ಒಳಗಾದಂತೆ ತಮ್ಮ‌ ಇಲಾಖೆಯ ನಡೆಯನ್ನೇ ಸಮರ್ಥನೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ಒಬ್ಬ ದೊಡ್ಡ ಗ್ಯಾಂಗ್ಸ್ಟರ್ ಎಂದು ಬಿಂಬಿಸಲು ಪಣ ತೊಟ್ಟು ನಿಂತು ಬಿಟ್ಟಿದ್ದಾರೆ” ಎಂದು ದೂರಿದ್ದಾರೆ.

ಪೊಲೀಸರು ನೀಡಿರುವ ಕಾರಣಗಳು ನಿಜಕ್ಕೂ ಅಪರಾಧಗಳೋ ಅಥವಾ ಹೋರಾಟದ ಕೆಚ್ಚೆದೆಯ ಹೆಜ್ಜೆಗಳೋ. ನಿಜಕ್ಕೂ ಇವೆಲ್ಲಾ ಗೂಂಡಾ ಕಾಯ್ದೆ ಅಡಿ ಬಂದು, ಜೈಲು ಶಿಕ್ಷೆ ಆಗುವುದೇ ಆಗಿದ್ದರೆ ಇವತ್ತು ಯಾವೊಬ್ಬ ರಾಜಕಾರಣಿಯೂ ಜೈಲಿನಿಂದ ಹೊರಗೆ ಇರುತ್ತಲೇ ಇರಲಿಲ್ಲ. ಆದರೇ ಜನರ ಪರವಾಗಿ ಹೋರಾಟ ಮಾಡಿದ ಶ್ರೀನಿವಾಸ್ ಇವತ್ತು ಜೈಲಿನಲ್ಲಿದ್ದಾರೆ‌. ಇದೇನಾ ನ್ಯಾಯ? ಇದೇನಾ ನೀತಿ? ಇದೇನಾ ಸತ್ಯ, ಧರ್ಮ? ಇವತ್ತು ಶ್ರೀನಿವಾಸ್‌ ಅವರಿಗೆ ಆಗಿದ್ದು ನಾಳೆ ಯಾರಿಗೂ ಆಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗಕ್ಕೆ ಇವತ್ತು ಕಳಂಕ ಹತ್ತಿಕೊಳ್ತಾ ಇದೆ. ಯಾರೋ ಕೆಲವರ ರಾಜಕೀಯ ಸ್ವಾರ್ಥ ಮತ್ತು ದುರಾಸೆಗಳಿಗೆ ಚಿತ್ರದುರ್ಗದ ಹೋರಾಟಗಾರರು ಮತ್ತು ಸಾಮಾನ್ಯ ಜನ ಬೆಲೆ ತೆರಬೇಕಾಗುತ್ತಿದೆ. ಪೊಲೀಸರ ರಾಜಕೀಯ ಪಿತೂರಿ ಮತ್ತು ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇವತ್ತು ನಾವು, ನಾಳೆ ಯಾರು ಅನ್ನುವ ಹಾಗಾಗಿದೆ. ಈ ಅನ್ಯಾಯ ಅಕ್ರಮ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ದ ನಿಲ್ಲದೇ ಹೋದರೇ, ಇವನ್ನು ತಡೆಯದೆ ಹೋದರೆ, ಮುಂದಿನ‌ ನಮ್ಮ‌ ತಲೆಮಾರು ಖಂಡಿತಾ ನಮ್ಮನ್ನು ಕ್ಷಮಿಸುವುದಿಲ್ಲ. ಬನ್ನಿ ನ್ಯಾಯ ಕೇಳೋಣ ಎಂದು ಕೋರಿದ್ದಾರೆ.

ಈ ಕುರಿತು ‘ನಾನುಗೌರಿ.ಕಾಂ’ ಕೋಟೆ ಠಾಣೆಯ ಪಿಎಸ್‌‌ಐರವರನ್ನು ಸಂಪರ್ಕಿಸಿತು. “ಈ ಹಿಂದೆ ನಡೆದಿರುವ ಪ್ರಕರಣಗಳ ಆಧಾರದಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಗೂಂಡಾ ಕಾಯ್ದೆಯಡಿ ಇತ್ತೀಚಿನ ವರ್ಷಗಳಲ್ಲಿ ಬಂಧನಕ್ಕೊಳಗಾದವರು ಇವರೊಬ್ಬರೇ. ದಲಿತ ಮುಖಂಡ ಎಂಬ ಕಾರಣಕ್ಕೆ ಅವರನ್ನು ಬಂಧಿಸಿಲ್ಲ. ಈ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಆಧರಿಸಿ ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಎಸ್‌ಡಿಪಿಐ’ ಒಂದು ಮುಸ್ಲಿಂ ಪಕ್ಷವೆಂದು ಅರ್ಜಿಯಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಸರಿ? ಮಹಾಗಣಪತಿ ಕೂರಿಸಿದ್ದು ಅಪರಾಧವೇ ಎಂಬ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿ ಸ್ಪಷ್ಟ ಉತ್ತರ ನೀಡಿಲ್ಲ.

ಬಾಳೇಕಾಯಿ ಶ್ರೀನಿವಾಸ್‌ರವರನ್ನು ಅನ್ಯಾಯಯುತವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಎಸ್‌ಡಿಪಿಐ ಪಕ್ಷವು ಅವರ ಬಿಡುಗಡೆಗೆ ಒತ್ತಾಯಿಸಿ ಇಂದು ಸಂಜೆಗೆ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿದೆ.


ಇದನ್ನೂ ಓದಿರಿ: ಹಿಜಾಬ್‌ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಜನಪರ ಹೋರಾಟಗಾರ ಶ್ರೀನಿವಾಸ್ ಅವರನ್ನು ಗೂಂಡಾಕಾಯ್ದೆ ಅಡಿ ಬಂದಿಸಿರುವುದು ಕಂಡನಾರ್ಹ.

  2. rss rajakiya kutantra dc hagu police ilakege kappu chukke aagide, samanya praje ge arivu ide , janara rakshakara hesari nalli bhkshakaragi iddare, samaya inthavarige buddhi kalisuttade, Deena dalitaru shoshanege valapattavaru echchettakulla bekagi vinanti
    jai Hind, jai bheem

  3. ಜನರನ್ನು ಹತ್ಯೆ ಮಾಡುವಂತೆ ಕರೆ ನೀಡಿ ದ್ವೇಷವನ್ನು ಹರಡಿ, ಶಾಂತಿ ಕದಡುವ ಅನೇಕ ಜನರು ರಾಜಾರೋಷವಾಗಿ ಕರೆನೀಡುವವರನ್ನು ಬಂಧಿಸದೆ ಅವರ ಹೇಳಿಕೆ ಖಂಡಿಸುವವರನ್ನೇ ಗುರಿಯಾಗಿಸಿ ಬಂಧಿಸುತ್ತಿರುವುದನ್ನು ದೇಶವು ಪ್ರಜಾಪ್ರಭುತ್ವದಿಂದ ಸವಾ೯ಧಿಕಾರತ್ವಕ್ಕೆ ಸಾಗುತ್ತಿದೆಯೇನೋ….?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...