Homeಅಂಕಣಗಳುಗೋರಖ್‍ಪುರ ಮತ್ತು ಮುಜಾಫರ್‍ಪುರಗಳು ಏಕೆ ಮರುಕಳಿಸುತ್ತಲೇ ಇರಲಿವೆ?

ಗೋರಖ್‍ಪುರ ಮತ್ತು ಮುಜಾಫರ್‍ಪುರಗಳು ಏಕೆ ಮರುಕಳಿಸುತ್ತಲೇ ಇರಲಿವೆ?

- Advertisement -
- Advertisement -

| ಇಂಗ್ಲಿಷ್ ಮೂಲ : ಡಾ. ಸ್ವಾತಿ ಶುಕ್ಲಾ
ಅನುವಾದ: ನಿಖಿಲ್ ಕೋಲ್ಪೆ |

ಬಿಹಾರದಲ್ಲಿ ಎನ್ಸೆಸೆಫಲೈಟಿಸ್‍ನಿಂದ ಸಾವಿಗೀಡಾದ ಮಕ್ಕಳ ಸಂಖ್ಯೆ 150ಕ್ಕೆ ಹತ್ತಿರವಾಗಿದೆ. ಈ ದೇಶದ ಒಳನಾಡುಗಳ ಪರಿಚಯ ಇರುವವರಿಗೆ ಮುಜಾಫರ್‍ಪುರದ ದುರಂತ ಸಂಭವಿಸಲೆಂದೇ ಕಾಯುತ್ತಿತ್ತು ಎಂದು ಸುಲಭದಲ್ಲಿ ಅರಿವಾಗುತ್ತದೆ. ಗ್ರಾಮೀಣ ಸಮುದಾಯವು ಇಲ್ಲಿ ಜಾತಿ, ಬಡತನ, ಅಪೌಷ್ಠಿಕತೆ ಮತ್ತು ಕಳಪೆ ಆರೋಗ್ಯ ಆಡಳಿತಗಳ ಜಾಲದಲ್ಲಿ ಸಿಕ್ಕಿಬಿದ್ದಿದೆ.

ಮೊದಲ ವರದಿಗಳು ಲಿಚಿ ಕಾಯಿಗಳಲ್ಲಿ ಇರುವ, ದೇಹದಲ್ಲಿ ಗ್ಲೂಕೋಸ್ ಅಂಶವನ್ನು ತೀರಾ ಕೆಳಕ್ಕಿಳಿಸುವ ವಿಷಕಾರಕ ಪದಾರ್ಥಗಳನ್ನು ದೂರಿದ್ದವು. ಆದರೆ, ನಂತರದ ಕೆಲವೇ ದಿನಗಳಲ್ಲಿ ಹೊಟ್ಟೆಗಿಲ್ಲದೆ ಹಸಿವಿನಿಂದ ಕಾಯಿ ಲಿಚಿಯನ್ನು ತಿನ್ನುತ್ತಿದ್ದ ಮಕ್ಕಳು ಈ ರೋಗದಿಂದ ಬಾಧಿತರಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹೆಚ್ಚಿನವು ಒಂದೇ ಆಸ್ಪತ್ರೆ- ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೇಲೆ ಗಮನ ಕೇಂದ್ರೀಕರಿಸಿವೆ. ಮೂರನೇ ಹಂತದ ಘಟಕವಾಗಿರುವ ಅದು ಕೇಸುಗಳ ಸಂಖ್ಯೆಯನ್ನು ನಿಭಾಯಿಸಲು ಒದ್ದಾಡುತ್ತಿದೆ. ಮುಖ್ಯ ಗಮನವು ಆಸ್ಪತ್ರೆಯ ಸ್ವಚ್ಛತೆ, ಸಾಕಷ್ಟು ಸಂಖ್ಯೆಯ ಹಾಸಿಗೆಗಳು ಇಲ್ಲದೇ ಇರುವುದು, ರೋಗಿಗಳು ಮತ್ತು ಹೆತ್ತವರು ನೆಲದ ಮೇಲೆಯೇ ಮಲಗುತ್ತಿರುವುದು, ವೈದ್ಯರ ಕೊರತೆ ಇತ್ಯಾದಿಗಳ ಕುರಿತೇ ಇತ್ತು. ಇವೆಲ್ಲವೂ ನಿಜ.

ಆದರೆ, ಈ ತಪ್ಪಿಸಬಹುದಾಗಿದ್ದ ದುರಂತಕ್ಕೆ ಇತರ ಕಾರಣಗಳೂ ಇವೆ. ಈ ದುರಂತದ ಉತ್ತುಂಗದಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಳಿ, ಅದರಲ್ಲೂ ಮುಖ್ಯವಾಗಿ ನಮ್ಮಲ್ಲಿಯೇ ಕೇಳಬೇಕಾದ ಕೆಲವು ಪ್ರಶ್ನೆಗಳಿವೆ. ಅವುಗಳಲ್ಲಿ ಮುಖ್ಯವಾಗಿರುವುದು ಎಂದರೆ ಎಷ್ಟರತನಕ ನಾವು ಈ ದುರಂತ ಪರಿಸ್ಥಿತಿಯನ್ನು ಮುಂದುವರಿಯಲು ಬಿಡಲಿದ್ದೇವೆ ಎಂಬುದು. ಆದರೆ, ಈ ಕೆಳಗಿನ ಪ್ರಶ್ನೆಗಳನ್ನು ಬಹುಶಃ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಎಂದಿಗೂ ಕೇಳಲಾರವು.

1. ಹಲವು ಮಕ್ಕಳು ಹಳ್ಳಿಗಳಿಂದ ಆಸ್ಪತ್ರೆಗೆ ಬರುವ ದೂರದ ಪ್ರಯಾಣದ ವೇಳೆ ಸಾವಿಗೀಡಾದವು. ಮಕ್ಕಳನ್ನು ಸಾಗಿಸಲು ನೆರವಾದ ಹಲವು ಸ್ಥಳೀಯ ವರದಿಗಾರರು ಮತ್ತು ಸ್ವಯಂಸೇವಕರು, ಮುಚ್ಚಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎತ್ತಿಹೇಳಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ಲೂಕೋಸ್ ಅಥವಾ ಕನಿಷ್ಟ ಓಆರ್‍ಎಸ್ ನೀಡುವುದರಿಂದ ಪ್ರಾಥಮಿಕ ರೋಗಲಕ್ಷಣಗಳನ್ನು ಗುಣಪಡಿಸಬಹುದಾಗಿದ್ದರೂ, ತೃತೀಯ ಹಂತದ ಆಸ್ಪತ್ರೆಗೆ ಮಕ್ಕಳನ್ನು ಸಾಗಿಸಬೇಕಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಏಕೆ ಮುಚ್ಚಿದ್ದವು ಮತ್ತು ಆಶಾ ಕಾರ್ಯಕರ್ತೆಯರು ಏನು ಮಾಡುತ್ತಿದ್ದರು? ಈಗಿರುವ ಆರೋಗ್ಯ ಕೇಂದ್ರಗಳ ದಯನೀಯ ಸ್ಥಿತಿಗೆ ಯಾರು ಕಾರಣರು?

2. ಬಿಹಾರದಲ್ಲಿ ಹೆಚ್ಚುಕಡಿಮೆ 44 ಶೇಕಡಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದು ರೋಗವನ್ನು ಎದುರಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ದುರ್ಬಲ ಪ್ರಕೃತಿಯ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಎಇಎಸ್ ಗುಣಲಕ್ಷಣಗಳು ಹೆಚ್ಚಾಗಿ ಉಲ್ಭಣಿಸಿವೆ ಎಂದು ಅಮೆರಿಕದ ಸಂಸ್ಥೆ- ಇನ್‍ಸ್ಟಿಟ್ಯೂಟ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಅದರ ಭಾರತೀಯ ಸಹಯೋಗಿಗಳು ನಡೆಸಿದ ವೈಜ್ಞಾನಿಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಬಿಹಾರದಲ್ಲಿ ಎಇಎಸ್ ಪತ್ತೆಯಾದ ಎಲ್ಲಾ ಮಕ್ಕಳು ಬಡ ಕೆಳಜಾತಿ ಕುಟುಂಬಗಳ ಮಕ್ಕಳಾಗಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಯಾವುದೇ ಎಇಎಸ್ ಪ್ರಕರಣ ಪತ್ತೆಯಾಗಿಲ್ಲ. ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ ಎಂದು ತಳಮಟ್ಟದ ವರದಿಗಳು ಹೇಳುತ್ತವೆ. ಅರ್ಧದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿರುವಾಗ ಸರಕಾರ ಅವರ. ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡುತ್ತಿದೆ?

3. ರಾಜ್ಯವು ಈ ಪ್ರದೇಶದಲ್ಲಿ 1995ರಿಂದಲೂ ಎಇಎಸ್ ಪ್ರಕರಣಗಳನ್ನು ಕಾಣುತ್ತಿದೆ. ಈ ರೋಗವನ್ನು ನಿಯಂತ್ರಿಸಲು ಒಂದು ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆ (ಎಸ್‍ಓಪಿ)ಯನ್ನು ರೂಪಿಸಲು ಆರೋಗ್ಯ ಇಲಾಖೆಗೆ 17 ವರ್ಷಗಳು ಬೇಕಾದವು. ಆ ಬಳಿಕ ಈ ರೋಗ ನಿಯಂತ್ರಣದಲ್ಲಿ ಸರಕಾರವು ಸಮಾಧಾನಕರ ಯಶಸ್ಸು ಕಂಡಿದ್ದು, ಸಾವಿನ ಸಂಖ್ಯೆಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಸಾವಿನ ಸಂಖ್ಯೆ ನೂರು ದಾಟಿದ ಬಳಿಕವಷ್ಟೇ ರಾಜ್ಯ ಮತ್ತು ಕೇಂದ್ರ ಮಂತ್ರಿಗಳು ಈ ಪ್ರದೇಶಗಳಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಆಡಳಿತ, ಆರೋಗ್ಯ ಅಧಿಕಾರಿಗಳು ಮತ್ತು ಮಂತ್ರಿಗಳ ಅಸಡ್ಡೆಯ ಮನೋಭಾವವನ್ನು ಕ್ಯಾಮೆರಾಗಳು ಸೆರೆಹಿಡಿದಿವೆ. ಆದರೂ, “ಈ ತಿಂಗಳಲ್ಲಿ ಮಕ್ಕಳು ಸಾಯುವುದು ಸಾಮಾನ್ಯ” ಎಂದು ತಿಪ್ಪೆಸಾರಿಸಿದರೂ ಏನೂ ಆಗದೆ ಬಚಾವಾಗುವಂತಹ ಉಡಾಫೆಗೆ ಕಾರಣವಾಗುವುದು ಏನು ಎಂದು ಕೇಳಲು ನಾವು ವಿಫಲರಾಗಿದ್ದೇವೆ.

4. ಚುನಾವಣೆಯ ಕಾರಣದಿಂದ ಈ ಬಾರಿ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆದಿಲ್ಲ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಜಾಗೃತಿ ಕಾರ್ಯಕ್ರಮಗಳು ಮೇಲೆ ಹೇಳಿರುವ ಎಸ್‍ಓಪಿಯ ಪ್ರಮುಖ ಭಾಗ. ಜನರಿಗಾಗಿ ಬಳಸಬೇಕಾಗಿದ್ದ ಸಂಪನ್ಮೂಲ ಮತ್ತು ಜನಶಕ್ತಿಯನ್ನು ಚುನಾವಣೆಗೆ ತಿರುಗಿಸಲಾಯಿತು. ಹೌದು, ಚುನಾವಣೆಗಳು ಮುಖ್ಯ. ಆದರೆ, ಮುಂದಿನ ಐದು ವರ್ಷಗಳ ಕಾಲ ನಮ್ಮನ್ನು ಯಾರು ಆಳಲಿದ್ದಾರೆ ಎಂದು ನಿರ್ಧರಿಸುವುದು ಬೇರೆಲ್ಲದ್ದಕ್ಕಿಂತಲೂ ಮುಖ್ಯವಾಗಬೇಕೆ?

5. ಸರಕಾರವು 21 ಜೂನ್ 2013ರಲ್ಲಿ ಆಚರಿಸಿದ ಮೊದಲ ಯೋಗ ದಿನಾಚರಣೆಗೆ ಹತ್ತಿರಹತ್ತಿರ 32 ಕೋಟಿ ರೂ.ಗಳನ್ನು ಖರ್ಚು ಮಾಡಿತು. ಹೆಚ್ಚಿನ ಹಣ ಪ್ರಚಾರ, ಯೋಗ ದಿನ ಆಚರಿಸಲು ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಿಗೆ ನೀಡಿದ ನಿಧಿಗೆ ಖರ್ಚಾಯಿತು. ಸುಮಾರು 300-400 ಕೋಟಿ ರೂ.ಗಳನ್ನು ಯೋಗ ದಿನದ ಕಾರ್ಯಕ್ರಮಕ್ಕೆ ಪ್ರತೀವರ್ಷ ಬೇರೆಬೇರೆ ರಾಜ್ಯಗಳಲ್ಲಿ ಜಲನಿರೋಧಕ ಗೋಪುರ ನಿರ್ಮಿಸಲು ಖರ್ಚು ಮಾಡಲಾಯಿತು.
ಉತ್ತರ ಪ್ರದೇಶದಲ್ಲಿ ಸರಕಾರವು ಕುಂಭಮೇಳ ಆಚರಿಸುವುದಕ್ಕೆ ಸಾವಿರಾರು ರೂ.ಗಳನ್ನು ಖರ್ಚು ಮಾಡುತ್ತದೆ. ಯಾತ್ರಿಕರಿಗಾಗಿ ಕಳೆದ ವರ್ಷ ನೂರು ಹಾಸಿಗೆಗಳ ಒಂದು ತಾತ್ಕಾಲಿಕ ಹೈಟೆಕ್ ಆಸ್ಪತ್ರೆಯನ್ನು ಕಟ್ಟಲಾಯಿತು. ಕಳೆದ ಆಗಸ್ಟ್‍ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದ ಮೇರೆಗೆ ಕನ್ವರಿಯಾಗಳ ಮೇಲೆ ಹೂವಿನ ದಳಗಳನ್ನು ಸುರಿಸಲು 14 ಲಕ್ಷ ರೂ.ಗಳನ್ನು ಸುರಿಯಲಾಯಿತು. ಆದರೆ ಎಇಎಸ್‍ನಿಂದ ಸಾಯುತ್ತಿರುವ ಮಕ್ಕಳಿಗಾಗಿ ಒಂದು ತಾತ್ಕಾಲಿಕ ಆಸ್ಪತ್ರೆ ಕಟ್ಟಲು ಸರಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ?

ಮಾಧ್ಯಮಗಳು ಈ ಪ್ರಶ್ನೆಗಳನ್ನು ಸರಕಾರಗಳಿಗೆ ಯಾಕೆ ಕೇಳುತ್ತಿಲ್ಲ?
ಸರಕಾರದ ಚಾಕರಿಯವರಂತೆ ಮಾಧ್ಯಮದವರು, ವೈದ್ಯರು, ದಾದಿಯರು, ಕಂಗೆಟ್ಟ ಹೆತ್ತವರ ಬೆನ್ನುಹತ್ತುತ್ತಾ, ಬೈಯ್ಯುತ್ತಾ ಅವರ ಗಂಟಲೊಳಗೇ ಮೈಕುಗಳನ್ನು ತುರುಕುತ್ತಿದ್ದಾರೆ. ‘ಬ್ರೇಕಿಂಗ್ ನ್ಯೂಸ್’’ ಮತ್ತು “ಎಲ್ಲರಿಗಿಂತಲೂ ಮೊದಲು” ಹುಚ್ಚಿನಲ್ಲಿ ಅವರು ಹೆಚ್ಚು ಟಿಆರ್‍ಪಿಗಾಗಿ ಜನರ ಸಂಕಷ್ಟವನ್ನು ‘ತಮಾಷಾ’ದಂತೆ ಮಾರುವ ಮಾನಗೇಡಿಗಳಾಗಿದ್ದಾರೆ. ಇವೆಲ್ಲವೂ ಪ್ರತಿಪಕ್ಷಗಳು ಏನು ಮಾಡುತ್ತಿವೆ ಎಂದು ಕೇಳುವುದರ ಜೊತೆಗೆ ನಡೆಯುತ್ತಿವೆ. ಬಿಹಾರದಲ್ಲಿ ಪ್ರತಿಪಕ್ಷಗಳು ಕಳೆದ ಹತ್ತು ವರ್ಷಗಳಿಂದ ಮತ್ತು ಕೇಂದ್ರದಲ್ಲಿ ಐದು ವರ್ಷಗಳಿಂದ ಅಧಿಕಾರದಲ್ಲಿಲ್ಲ ಎಂಬುದನ್ನು ಅವರು ಮರೆತಂತಿದೆ.

ಗೋರಖ್‍ಪುರದಲ್ಲೂ ಮಾಧ್ಯಮಗಳು ಇದೇ ರೀತಿಯ ವರಸೆ ತೋರಿದ್ದವು. ಅಲ್ಲಿ ಜಪಾನೀಸ್ ಎನ್ಸೆಫಲೈಟಿಸ್‍ನಿಂದ ನರಳುತ್ತಿದ್ದ ಸಾವಿರಕ್ಕೂ ಹೆಚ್ಚು ಮಕ್ಕಳು ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿದ್ದರು. ಸರಕಾರವನ್ನು ರಕ್ಷಿಸುವ ಯತ್ನದಲ್ಲಿ ಒಂದು ಆಸ್ಪತ್ರೆ ಮತ್ತದರ ವೈದ್ಯರ ಮೇಲೆ ಗೂಬೆಕೂರಿಸಲಾಯತು. ಮಕ್ಕಳ ಸಾವಿಗೆ ಹೊಣೆಗಾರರೆಂದು ಅನ್ಯಾಯವಾಗಿ ಆರೋಪಕ್ಕೆ ಗುರಿಯಾಗಿ ಅಮಾನತುಗೊಂಡಿದ್ದ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರು ಇದೀಗ ಎಇಎಸ್ ಕುರಿತು ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ, ಆರೋಗ್ಯ ಶಿಬಿರಗಳನ್ನು ಸ್ಥಾಪಿಸುತ್ತಾ ಮುಜಾಫರ್‍ಪುರದಲ್ಲಿ ಎಡೆಬಿಡದೆ ದುಡಿಯುತ್ತಿದ್ದಾರೆ. ಯಾವುದೇ ಮಾಧ್ಯಮಗಳು ಇದನ್ನು ವರದಿಯೇ ಮಾಡಿಲ್ಲ.

ಕೆಲವು ಸುದ್ದಿ ಚಾನೆಲ್‍ಗಳಂತೂ, ಸಾಯುತ್ತಿರುವ ಹೆಚ್ಚಿನ ಮಕ್ಕಳು ಬಡ ದಲಿತ ಮತ್ತು ಓಬಿಸಿ ಸಮುದಾಯವರೆಂಬ ಸತ್ಯದತ್ತ ಗಮನಸೆಳೆದ ಲಾಲೂ ಪ್ರಸಾದ್ ಯಾದವ್ ಅವರ ಆರ್‍ಜೆಡಿ ಪಕ್ಷವು ಜಾತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದವು.
ಯಾಕೆ ಬಹುತೇಕ ಎಲ್ಲಾ ಸಾವುಗಳು ದಲಿತ ಮತ್ತು ಓಬಿಸಿ ಸಮುದಾಯಗಳಲ್ಲಿ ಸಂಭವಿಸಿವೆ ಎಂಬುದು ಅತ್ಯಂತ ಪ್ರಸ್ತುತವಾದ ಪ್ರಶ್ನೆಯಾಗಿದ್ದು, ಅದನ್ನು ಚಾಪೆಯ ಕೆಳಗೆ ತಳ್ಳಲಾಗುತ್ತಿದೆ. ವಾಸ್ತವ ಎಂದರೆ ಅದು ಜಾತಿ, ಬಡತನ, ಅಪೌಷ್ಠಿಕತೆ ಮತ್ತು ಸರಕಾರಿ ಅಸಡ್ಡೆಗಳ ನಡುವಣ ಸಂಬಂಧವನ್ನು ತೋರಿಸುವುದರಿಂದ ಮಾಧ್ಯಮಗಳು ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ.

ಅಪೌಷ್ಠಿಕತೆ ಮತ್ತು ಮೋದಿ ಅಂಟೋಯ್ನೆಟ್!

ಕಳೆದ ವರ್ಷ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 119 ದೇಶಗಳ ಪೈಕಿ 103ನೇ ಸ್ಥಾನದಲ್ಲಿತ್ತು. ಅಂಕಿಅಂಶಗಳ ಪ್ರಕಾರ ಪ್ರತೀ ಐವರು ಮಕ್ಕಳಲ್ಲಿ ನಾಲ್ಲರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಮೊನ್ನೆ ಪ್ರಧಾನಿ ಮೋದಿ ಮುಜಾಫರ್‍ಪುರದಿಂದ 400 ಕಿ.ಮೀ. ದೂರವಿರುವ ರಾಂಚಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿ, “ನಾವು ಯೋಗವನ್ನು ಹಳ್ಳಿಗಳಿಗೆ ಕೊಂಡೊಯ್ಯಬೇಕು”ಎಂದರು. 2012ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಇದೇ ಮೋದಿ, ತನ್ನ ರಾಜ್ಯದಲ್ಲಿ ಅಪೌಷ್ಠಿಕತೆಯ ಪ್ರಮಾಣ ದೊಡ್ಡದಾಗಿರುವುದಕ್ಕೆ ಸಸ್ಯಾಹಾರ ಪದ್ಧತಿ ಮತ್ತು ‘ಪಿಗರ್ ಕಾನ್ಷಿಯಸ್’ ಹೆಣ್ಣುಮಕ್ಕಳು ಕಡಿಮೆ ತಿನ್ನುವುದು ಕಾರಣ ಎಂದು ಸಬೂಬು ನೀಡಿದ್ದರು.
150ರಷ್ಟು ಮಕ್ಕಳ ಸಾವಿನಿಂದ ಇಡೀ ದೇಶವೇ ಮರುಗುತ್ತಿರುವಾಗ, ಈ ವಿಷಯದ ಕುರಿತು ಪ್ರಧಾನಿಯ ಮೌನ ಕಿವಿಗಡಚಿಕ್ಕುವಂತಿದೆ. ಇದೇ ಹೊತ್ತಿಗೆಗೆ ಅವರು ಕ್ರಿಕೆಟಿಗ ಶಿಖರ್ ಧವನ್ ಹೆಬ್ಬೆರಳಿಗಾದ ಗಾಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದೇ ಹೊತ್ತಿಗೆ ಅವರು ರಾಜಸ್ಥಾನದಲ್ಲಿ ಕಟ್ಟಡ ಕುಸಿದು 14 ಮಂದಿ ಸಾವಿಗೀಡಾದ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಅವರೆಲ್ಲರೂ ರಾಮಕಥಾ ಕೇಳುತ್ತಿದ್ದರು. ಇಲ್ಲಿ ಅದಕ್ಕೆ ಆದ್ಯತೆ! ಸರಿತಾನೆ?

ಮಕ್ಕಳು ಬಡತನ ಮತ್ತು ಅಪೌಷ್ಠಿಕತೆಯಿಂದ ಸಾಯುತ್ತಿರುವುದು ಆಕಸ್ಮಿಕವೇನಲ್ಲ. ಅದು ಕ್ರಿಮಿನಲ್ ನಿರ್ಲಕ್ಷ್ಯ. ಇದು ಚೆನ್ನಾಗಿ ಯೋಜಿಸಲಾಗಿರುವ ಕಾರ್ಯತಂತ್ರವೊಂದರ ಭಾಗ. ಇಲ್ಲಿ ಆಹಾರ, ಆರೋಗ್ಯ ಮತ್ತು ಶಿಕ್ಷಣ ಪಡೆಯಲು ತಾಕತ್ತಿಲ್ಲದ ಬಡವರು ತೊಲಗಬೇಕು. ಯಾಕೆಂದರೆ ಅವರು, ನಾವು ಬದುಕುತ್ತಿರುವ ‘ಹೊಳೆಯುತ್ತಿರುವ ಭಾರತ’ದ ಭ್ರಮೆಗೆ ಸರಿಹೊಂದುವುದಿಲ್ಲ.
ಸರಕಾರವು ಸಾರ್ವಜನಿಕ ಮೂಲಸೌಕರ್ಯಕ್ಕಿಂತ ಖಾಸಗಿ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ ಎಂದರೆ, ನಾವು ಒಂದು ದೇಶವಾಗಿ ವಿಫಲರಾಗಿದ್ದೇವೆ. ಭಾರತವು ಒಂದು ತೃತೀಯ ಜಗತ್ತಿನ ದೇಶ. ಇಂತಹ ದೇಶದಲ್ಲಿ ‘ನೆರವು’ ಎಂದು ಕರೆಯಲಾಗುವಂತದ್ದು ಒಂದು ರಾಜಕೀಯ ಅಗತ್ಯವಲ್ಲ; ಅದೊಂದು ಮಾನವೀಯ ಅಗತ್ಯ. ಸಂವಿಧಾನವು ನಿರ್ದೇಶಿಸಿರುವ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಮೂಲಭೂತ ಸೇವೆಗಳನ್ನು ಒದಗಿಸಲು ಸರಕಾರಗಳು ವಿಫಲವಾಗುತ್ತಿರುವ ತನಕ ಗೋರಖ್‍ಪುರ ಮತ್ತು ಮುಜಾಫರ್‍ಪುರಗಳಂತವು ನಿಲ್ಲಲಾರವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...