Homeಮುಖಪುಟದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ...

ದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ…

’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ "ದೇಶಪ್ರೇಮದ ಆಯಾಮಗಳು"ಎಂಬುವಲ್ಲಿಗೆ ಬಂದು ನಿಂತಿದೆ.

- Advertisement -
- Advertisement -

ಯುವ ಬರಹಗಾರರು, ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಕಾಲೀನ ಸಮಾಜಕ್ಕೆ ಮುಖಾಮುಖಿಯಾಗುತ್ತ ತಮ್ಮ ಓದು-ಬರಹವನ್ನು ತಾವೇ ಓರೆಗೆ ಹಚ್ಚುವ ವಿಭಿನ್ನ ಕಾರ್ಯಕ್ರಮ-ಕಮ್ಮಟವೇ ನಾವು-ನಮ್ಮಲ್ಲಿ. 2002ರಿಂದ ಆರಂಭವಾಗಿ ಹಲವು ಪುಟ್ಟ ಹೆಜ್ಜೆಗಳ ದಿಟ್ಟ ಪಯಣ ನಡೆಸುತ್ತಿರುವ ನಾವು-ನಮ್ಮಲ್ಲಿ ಕಮ್ಮಟವು ಈ ಬಾರಿ ಗಂಗಾವತಿಯಲ್ಲಿ ಜರುಗಲಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಜರುಗುವ ನಾವು ನಮ್ಮಲ್ಲಿ ಬಳಗ ಪ್ರತಿವರ್ಷವೂ ಹಿಗ್ಗುತ್ತಲೇ ಇದೆ.  ಸಾಹಿತಿ-ಬರಹಗಾರರಿಗೆ ಮಾತ್ರ ಸೀಮಿತವಾಗದಿರುವುದು, ಸಮಕಾಲೀನತೆಗೆ ತೆರೆದುಕೊಂಡಿರುವುದು ಮತ್ತು ಎಲ್ಲಾ ಜೀವಪರರನ್ನು ಮುಕ್ತವಾಗಿ ಅಪ್ಪಿಕೊಳ್ಳುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ನಾವು ನಮ್ಮ ಬರಹಗಳ ಆಚೆಗೂ ’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ “ದೇಶಪ್ರೇಮದ ಆಯಾಮಗಳು”ಎಂಬುವಲ್ಲಿಗೆ ಬಂದು ನಿಂತಿದೆ.

ದೇವನೂರು ಮಹಾದೇವ, ಭಾನುಮುಷ್ತಾಕ್, ಯು.ಆರ್.ಅನಂತಮೂರ್ತಿ, ಜಿ.ರಾಜಶೇಖರ್, ಫಣಿರಾಜ್, ಕೆ.ಟಿ.ಶಿವಪ್ರಸಾದ್‌, ಎಚ್‌.ನಾಗವೇಣಿ, ಹೆಚ್.ಎಸ್.ರಾಘವೇಂದ್ರರಾವ್, ಆಶಾದೇವಿ, ಓ.ಎಲ್.ನಾಗಭೂಷಣಸ್ವಾಮಿ, ವಿನಯಾ, ರಹಮತ್ ತರೀಕೆರೆ, ದಿನೇಶ್ ಅಮಿನ್ ಮಟ್ಟು, ಸುಗತ ಶ್ರೀನಿವಾಸರಾಜು, ಜಿ.ಎನ್.ದೇವಿ, ಅಜಿತ್ ಪಿಳ್ಳೆ, ಜಿ.ರಾಜಶೇಖರ್, ಫಣಿರಾಜು, ಕೆ.ನೀಲಾ, ಕೆ.ರಾಮಯ್ಯ, ರಾಜೇಂದ್ರ ಚೆನ್ನಿ ಒಳಗೊಂಡಂತೆ ಕರ್ನಾಟಕದ ಬಹುಪಾಲು ಹಿರಿ ಕಿರಿ ಬರಹಗಾರ್ತಿ ಬರಹಗಾರರು ನಾವುನಮ್ಮಲ್ಲಿ ಬಳಗದ ಬೆನ್ನಿಗಿರುವುದು ಕಾಲದ ಎಚ್ಚರವನ್ನು ಕಾಯ್ದುಕೊಳ್ಳಲು ನೆರವಾಗಿದೆ.

ಸ್ವಾತಂತ್ರ್ಯ ಚಳವಳಿಯ ಕಾಲ ಮತ್ತು ನಂತರದಲ್ಲಿ ಭಾರತೀಯರೆಲ್ಲರೂ ಒಂದು ಎಂಬ ಬೆಸುಗೆಗೆ ಕೆಲಸ ಮಾಡಿದ ದೇಶಪ್ರೇಮ ಎಂಬ ಪದವೀಗ ಜಾತಿ, ಧರ್ಮ, ಬಣ್ಣ, ಪ್ರದೇಶ, ಲಿಂಗದ ಆಧಾರದಲ್ಲಿ ಜನರನ್ನು ವಿಭಜಿಸಲು ಬಳಕೆಯಾಗುತ್ತಿರುವುದು ದುರಂತದ ಸಂಗತಿ. ಹಾಗಾಗಿ ನಿಜವಾದ ದೇಶಪ್ರೇಮವೆಂದರೇನು, ಅದರ ವಿವಿಧ ಆಯಾಮಗಳೇನು, ದೇಶಪ್ರೇಮದ ಅಪವ್ಯಾಖ್ಯಾನವನ್ನು ತಡೆಯಲು ನಾವು ಮಾಡಬೇಕಾದುದ್ದೇನು ಎಂಬುದರ ಮುಕ್ತ ಆರೋಗ್ಯಕರ ಚರ್ಚೆಗೆ ಈ ಬಾರಿಯ ನಾವು ನಮ್ಮಲ್ಲಿ ವೇದಿಕೆ ಸಿದ್ದಗೊಂಡಿದೆ.

ಆಗಸ್ಟ್‌ ಆರಂಭದಲ್ಲಿ ನಡೆಯಬೇಕಿದ್ದ ಈ ಬಾರಿಯ ನಾವು ನಮ್ಮಲ್ಲಿ ಕಾರ್ಯಕ್ರಮ ಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹ ಕಾರಣಕ್ಕೆ ಮೂಂದೂಡಿ ಈಗ ನವೆಂಬರ್‌ 16-17ರ ಶನಿವಾರ-ಭಾನುವಾರಕ್ಕೆ ನಿಗಧಿಯಾಗಿದೆ. ಗಂಗಾವತಿಯ ಐಎಂಎ ಸಭಾಂಗಣದಲ್ಲಿ ನಡೆಯುವ ನಾವು-ನಮ್ಮಲ್ಲಿ ಕಮ್ಮಟವನ್ನು ನವೆಂಬರ್‌ 16ರ ಶನಿವಾರ ಬೆಳಿಗ್ಗೆ 10:30ಕ್ಕೆ ಹಿರಿಯ ಚಿಂತಕರು ಮತ್ತು ಹೋರಾಟಗಾರರಾದ ಜಿ.ರಾಮಕೃಷ್ಣರವರು ಉದ್ಘಾಟಿಸಲಿದ್ದಾರೆ. ಹೋರಾಟಗಾರ್ತಿ, ಚಿಂತಕಿ ಕೆ.ನೀಲಾರವರು ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಲಿದ್ದು, ಶೈಲಜಾ ಹಿರೇಮಠ, ಜೆ.ಭಾರದ್ವಾಜ್‌, ಸಿ.ಎಚ್‌ ನಾರಿನಾಳ್‌ ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ 2 ಗಂಟೆಗೆ “ಭಾರತೀಯತೆಯ ವ್ಯಾಖ್ಯಾನಗಳು” ಗೋಷ್ಠಿ ಜರುಗಲಿದ್ದು ಚಿಂತಕರಾದ ಶಿವಸುಂದರ್‌ ಮತ್ತು ಅಂಕಣಕಾರರಾದ ಎ.ನಾರಾಯಣರವರು ಮಾತನಾಡಲಿದ್ದಾರೆ. ಡಾ.ಪ್ರಕಾಶ್‌ ಬಡವನಹಳ್ಳಿ ಮತ್ತು ಡಾ.ನರಸಿಂಹಮೂರ್ತಿ ಹಳೇಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಂಜೆ 4ಗಂಟೆಗೆ ಅರ್ಹನಿಶಿ ಪ್ರಕಾಶನ ಹೊರತಂದಿರುವ ನಾಗರಾಜ ಕೋರಿಯವರ “ತನುಬಿಂದಿಗೆ” ಕಥಾಸಂಕಲನ ಬಿಡುಗಡೆಯಾಗಲಿದೆ. ಯುವ ಲೇಖಕರಾದ ಚಿದಾನಂದಸಾಲಿ ಪುಸ್ತಕ ಬಿಡುಗಡೆ ಮಾಡಲಿದ್ದು ಅಮರೇಶ ನುಗಡೋಣಿಯವರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.

ಸಂಜೆ 5:30ಕ್ಕೆ ಎಲ್ಲರ ಮೆಚ್ಚಿನ ಕವಿಗೋಷ್ಠಿ ನಡೆಯಲಿದ್ದು ಗಜಲ್‌ ಕವಿ ಆರಿಫ್‌ ರಾಜಾ ಆಶಯ ಮಾತುಗಳನ್ನಾಡಿದರೆ, ಹಿರಿಯ ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿಯವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಮತ್ತು ಮುಖ್ಯವಾಗಿ ಹೈದರಾಬಾದ್‌ ಕರ್ನಾಟಕದ ಯುವಕವಿಗಳು ಕವನ ವಾಚಿಸಲು ಸಿದ್ದರಿದ್ದಾರೆ. ಅಲ್ಲಿಗೆ ಮೊದಲ ದಿನ ಕಮ್ಮಟ ಕೊನೆಗೊಳ್ಳಲಿದೆ.

ನವೆಂಬರ್‌ 17ರ ಭಾನುವಾರ ಬೆಳಿಗ್ಗೆ 9:30ಕ್ಕೆ ಎರಡನೇ ದಿನ ಕಮ್ಮಟ ಆರಂಭವಾಗಲಿದ್ದು ಮೊದಲ ಗೋಷ್ಠಿ “ಈ ಹೊತ್ತಿನ ಚುನಾವಣಾ ಬಿಕ್ಕಟ್ಟುಗಳು” ಕುರಿತು ನಡೆಯಲಿದೆ. ಬಸವತತ್ವದ ಶಾಸಕ ಎಂದೇ ಖ್ಯಾತರಾದ ಬಸವಕಲ್ಯಾಣದ ಶಾಸಕರಾದ ಬಿ.ನಾರಾಯಣ್‌ರಾವ್‌ ಮತ್ತು ಹೋರಾಟಗಾರರಾದ ಸಿದ್ದನಗೌಡ ಪಾಟೀಲ್‌ರವರು ಮಾತನಾಡಲಿದ್ದು, ನಯನಾ ಮೋಟಮ್ಮ ಮತ್ತು ಲಿಂಗರಾಜ ಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಪ್ರಜಾಪ್ರಭುತ್ವ: ಆಶಯ ಮತ್ತು ಕನಸು ಗೋಷ್ಟಿ ನಡೆಯಲಿದ್ದು ಆರ್‌.ಪ್ರತಿಭಾ, ಅಶ್ವಿನಿ ಮದನಕರ, ಕೊಟ್ರಪ್ಪ ಹಿರೇಮಾಗಡಿಯವರು ಮಾತನಾಡಲಿದ್ದಾರೆ. ಹೈದರಾಬಾದ್‌ ಕರ್ನಾಟಕ ಹೋರಾಟಗಾರ ರಝಾಕ್‌ ಉಸ್ತಾದ್‌ರವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊನೆಯದಾಗಿ ಮಧ್ಯಾಹ್ನ 3;30ಕ್ಕೆ ಸಮಾರೋಪ ಗೋಷ್ಠಿ ಜರುಗಲಿದ್ದು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ಸಮಾರೋಪ ಮಾತುಗಳನ್ನಾಡಲಿದ್ದು, ವಿಜಯಪುರ ಅಕ್ಕಮಹಾದೇವಿ ವಿ.ವಿಯ ಉಪಕುಲಪತಿಗಳಾದ ಡಾ.ಸಬೀಹಾರವರು ಗೋಷ್ಠಿಯ ಅಧ್ಯಕ್ಷೀಯ ಮಾತಗಳನ್ನಾಡಲಿದ್ದಾರೆ. ಡಾ.ಶಿವಕುಮಾರ ಮಾಲಿಪಾಟೀಲ್‌, ಸಂಗಮೇಶ ಸುಗ್ರೀವ ಮತ್ತು ಮಹಾಲಕ್ಷ್ಮಿ ಕೇಸರಹಟ್ಟಿಯವರು ಉಪಸ್ಥಿತರಿರುತ್ತಾರೆ.

ಒಟ್ಟಿನಲ್ಲಿ ಎರಡು ದಿನಗಳ ಕಾಲ ಸಮಾನ ಆಶಯದ ಮನಸ್ಸುಗಳು ಸಮಾಜದ ಕರೆಗೆ ಕಿವಿಯಾಗುವ, ದನಿಯಾಗುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಲಿದ್ದು ಭಾಗವಹಿಸಲು ಆಸಕ್ತಿಯುಳ್ಳವರು ನಾವು ನಮ್ಮಲ್ಲಿ ಬಳಗದ ಜಾಜಿ ದೇವೆಂದ್ರಪ್ಪ 9481662735 ಮತ್ತು ಟಿ.ಎಂ ಉಷಾರಾಣಿ: 9036550365 ಇವರನ್ನು ಸಂಪರ್ಕಿಸಬಹುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...