ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಲಿದ್ದು, ಎಲ್ಲ ಅಂಗಡಿಗಳು ಮತ್ತು ಸಂಸ್ಥೆಗಳು ಅವುಗಳ ಹೆಸರನ್ನು ತಮಿಳಿನಲ್ಲಿ ಪ್ರದರ್ಶಿಸುವಂತೆ ನಿರ್ದೇಶಿಸಲಿದೆ ಎಂದು ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸಾಮಿ ಮಂಗಳವಾರ ಹೇಳಿದರು.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಎತ್ತಿದ್ದ ಸ್ವತಂತ್ರ ಸದಸ್ಯ ಜಿ ನೆಹರು (ಕುಪ್ಪುಸಾಮಿ) ಅವರ ಮನವಿಗೆ ಪ್ರತಿಕ್ರಿಯಿಸಿದ ರಂಗಸಾಮಿ, “ಸುತ್ತೋಲೆಯ ಮೂಲಕ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗುವುದು, ಅಂಗಡಿ ಮಾಲೀಕರು ತಮ್ಮ ಸಂಸ್ಥೆಗಳ ಹೆಸರುಗಳ ತಮಿಳು ಆವೃತ್ತಿಗಳನ್ನು ಸೈನ್ಬೋರ್ಡ್ಗಳಲ್ಲಿ ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ” ಎಂದು ಹೇಳಿದರು.
ಈ ವಿಷಯದಲ್ಲಿ ಯಾವುದೇ ಸಡಿಲತೆ ಇರಬಾರದು ಎಂದು ಸ್ವತಂತ್ರ ಸದಸ್ಯರು ಒತ್ತಿ ಹೇಳಿದರು. ತಮಿಳು ಭಾಷೆಯನ್ನು ಗೌರವಿಸಲು ಕಟ್ಟುನಿಟ್ಟಾದ ನಿರ್ದೇಶನಗಳೊಂದಿಗೆ ಸುತ್ತೋಲೆಗಳನ್ನು ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಇಲಾಖೆಯ ಕಾರ್ಯಗಳಿಗೆ ಎಲ್ಲ ಆಹ್ವಾನಗಳು ತಮಿಳು ಆವೃತ್ತಿಯನ್ನು ಒಳಗೊಂಡಿರಬೇಕು ಎಂದು ಸರ್ಕಾರ ನಿರ್ಧರಿಸಿದೆ. ತಮಿಳು ಭಾಷೆಯ ಮೇಲಿನ ಪ್ರೀತಿ ಮತ್ತು ಗೌರವದಿಂದ ಈ ನಿರ್ಧಾರ ಮಡಲಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಲೋಕೋಪಯೋಗಿ ಮತ್ತು ಮೀನುಗಾರಿಕೆ ಸಚಿವ ಕೆ. ಲಕ್ಷ್ಮಿನಾರಾಯಣನ್, ಸಮುದ್ರ ಸವೆತವನ್ನು ತಡೆಗಟ್ಟುವ ಕ್ರಮಗಳ ಭಾಗವಾಗಿ ಪುದುಚೇರಿ ಕರಾವಳಿಯ 24 ಕಿ.ಮೀ. ಉದ್ದಕ್ಕೂ ಬಂಡೆಗಳನ್ನು ನಿರ್ಮಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಈ ಯೋಜನೆಗೆ ಸುಮಾರು ರೂ.1,000 ಕೋಟಿ ರೂ.ಗಳ ಅಗತ್ಯವಿರುತ್ತದೆ; ಕೇಂದ್ರದಿಂದ ಇದರ ಅನುಷ್ಠಾನಕ್ಕೆ ಬೆಂಬಲ ನೀಡುವ ನಿರೀಕ್ಷೆಯಿದೆ ಎಂದು ಅವರು ಗಮನಿಸಿದರು.
ನವಭಾರತದಲ್ಲಿ ವಿಪಕ್ಷಗಳ ಧ್ವನಿಯನ್ನು ಮೌನಗೊಳಿಸಲಾಗಿದೆ: ರಾಹುಲ್ ಗಾಂಧಿ


