HomeUncategorizedನಕ್ಸಲರ ವಿರುದ್ಧ 'ಆಪರೇಷನ್ ಕಾಗರ್': ಮಾತುಕತೆಗೆ ನಾಗರೀಕ ಸಮಾಜ, ರಾಜಕೀಯ ಪಕ್ಷಗಳಿಂದ ಹೆಚ್ಚಿದ ಒತ್ತಡ

ನಕ್ಸಲರ ವಿರುದ್ಧ ‘ಆಪರೇಷನ್ ಕಾಗರ್’: ಮಾತುಕತೆಗೆ ನಾಗರೀಕ ಸಮಾಜ, ರಾಜಕೀಯ ಪಕ್ಷಗಳಿಂದ ಹೆಚ್ಚಿದ ಒತ್ತಡ

- Advertisement -
- Advertisement -

ನಡುರಸ್ತೆಯಲ್ಲಿ ಕಾರ್ಪೊರೇಟ್ ಯುದ್ಧ!

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ‘ಮಾವೋವಾದಿಗಳ ವಿರುದ್ಧ ಅಂತಿಮ ಯುದ್ಧ’ ಎಂದು ಹೇಳುವ ಮೂಲಕ ‘ಆಪರೇಷನ್ ಕಾಗರ್’ ಅನ್ನು ಕೈಗೆತ್ತಿಕೊಂಡಿದೆ. ದಂಡಕಾರಣ್ಯ ಪ್ರದೇಶವು ಪೊಲೀಸ್ ಶಿಬಿರಗಳಿಂದ ತುಂಬಿದೆ. ಸಾವಿರಾರು ಅರೆಸೈನಿಕ ಪಡೆಗಳು ಮತ್ತು ಗ್ರೇಹೌಂಡ್‌ಗಳು ಹಲವು ದಿನಗಳಿಂದ ಮಧ್ಯ ಭಾರತದ ದಂಡಕಾರಣ್ಯದಲ್ಲಿ ನಕ್ಸಲರ ವಿರುದ್ಧ ದಾಳಿ ಮಾಡುತ್ತಿವೆ. ಇವುಗಳು ಆಧುನಿಕ ತಂತ್ರಜ್ಞಾನ ಶಸ್ತ್ರಾಸ್ತ್ರಗಳೊಂದಿಗೆ ಅರಣ್ಯದಲ್ಲಿ ನಕ್ಸಲರನ್ನು ಶೋಧನೆ ಮಾಡುತ್ತಾ ಹತ್ಯಾಕಾಂಡವನ್ನು ಸೃಷ್ಟಿಸುತ್ತಿವೆ. ಬುಡಕಟ್ಟು ಜನರ ಜೋಪಾಡಿಗಳನ್ನು ಸುಟ್ಟುಹಾಕುತ್ತಿವೆ. ಎನ್‌ಕೌಂಟರ್ ಹೆಸರಿನಲ್ಲಿ ಹಸಿರು ಕಾಡಿನಲ್ಲಿ ನಿರ್ದಯವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಮಾವೋವಾದಿಗಳು ಮತ್ತು ಮುಗ್ಧ ಬುಡಕಟ್ಟು ಜನಾಂಗವನ್ನು ಹತ್ಯೆ ಮಾಡಲಾಗುತ್ತಿದೆ. ಹತ್ಯಾಕಾಂಡವನ್ನು ಸೃಷ್ಟಿಸಲಾಗುತ್ತಿದೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಭಾರತೀಯ ಸೇನೆ ಮತ್ತು ಪೊಲೀಸರ ಹಿಂಸಾಚಾರ ಮತ್ತು ದಬ್ಬಾಳಿಕೆಯು ಕಾಡಿನಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷ ಜನವರಿಯಿಂದ ಪ್ರಾರಂಭವಾದ ಆಪರೇಷನ್ ಕಾಗರ್‌ನಲ್ಲಿ 500ಕ್ಕೂ ಹೆಚ್ಚು ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದರೆಂದರೆ ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೇಗೆ ನಡೆಯುತ್ತಿದೆ ಎಂಬುದನ್ನು ಊಹಿಸಬಹುದು. ಮತ್ತೊಂದೆಡೆ ತೆಲಂಗಾಣ ನಾಗರಿಕ ಸಮಾಜವು ಶಾಂತಿಯುತ ವಾತಾವರಣವನ್ನು ಸ್ಥಾಪಿಸಲು, ಬುಡಕಟ್ಟು ಜನಾಂಗದವರ ಮೇಲಿನ ದಾಳಿಯನ್ನು ನಿಲ್ಲಿಸಲು ಮತ್ತು ಅದೇ ಮಟ್ಟದಲ್ಲಿ ಕೇಂದ್ರ ಸರಕಾರವು ಮಾವೋವಾದಿಗಳೊಂದಿಗೆ ಚರ್ಚೆಗಳನ್ನು ನಡೆಸಲು ಒತ್ತಾಯಿಸುತ್ತಿದೆ. ಬಿಆರ್‌ಎಸ್ ನಾಯಕ ಕೆಸಿ ಚಂದ್ರಶೇಖರ್ ಅವರ ಬೆಳ್ಳಿ ಮಹೋತ್ಸವ ಸಭೆಯನ್ನು ವೀಕ್ಷಿಸಲು ನೆರೆದಿದ್ದ ಲಕ್ಷಾಂತರ ಜನರು ಸೇರಿದ್ದ ವೇದಿಕೆಯಲ್ಲಿ ಕರೆದಂತೆ ರಾಜಕೀಯ ವಲಯದಲ್ಲಿ ಈ ಮಾತುಕತೆ ಕುರಿತು ಒಂದು ಚಳುವಳಿ ಪ್ರಾರಂಭವಾಗಿದೆ. ಆದರೆ, ಕೇಂದ್ರವು ಮಾವೋವಾದಿಗಳನ್ನು ನಿರ್ಮೂಲನೆ ಮಾಡುತ್ತಿರುವುದಲ್ಲದೆ, ಕಾಡಿನಲ್ಲಿ ಯಾವುದೇ ಮಾನವರ ಅಸ್ತಿತ್ವ ಇರಗೊಡದ ಗುರಿಯೊಂದಿಗೆ ಅದು ಮುಂದುವರಿಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ನಿಜವಾದ ಪ್ರಶ್ನೆ ಇಲ್ಲಿಂದ ಪ್ರಾರಂಭವಾಗುತ್ತದೆ. ಈ ಮಾವೋವಾದಿಗಳು ಇನ್ನೂ ಯಾರು? ಅವರು ಎಲ್ಲಿಂದ ಬಂದರು?

ನಕ್ಸಲರು ಕಾಡಿನಲ್ಲಿ ಏಕೆ ಇದ್ದಾರೆ? ನಕ್ಸಲರು ಶಸ್ತ್ರಾಸ್ತ್ರಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ? ಬುಡಕಟ್ಟು ಜನಾಂಗದವರೊಂದಿಗೆ ಅವರ ಸಂಬಂಧವೇನು? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅವರಿಗೆ ಏನು ದ್ವೇಷವಿದೆ? ಈ ಹಿಂಸಾಚಾರ ಯಾರಿಗಾಗಿ? ಯಾರ ಅಭಿವೃದ್ಧಿಗಾಗಿ ರಕ್ತಪಾತವಾಗುತ್ತಿದೆ? ನಕ್ಸಲರ ಕಾರ್ಯಾಚರಣೆಯ ಒಳಮರ್ಮ ಏನು? ಇದರಿಂದ ಯಾರಿಗೆ ಲಾಭ? ಬೇರೆ ಯಾರಿಗೆ ನಷ್ಟ? ಇಂತಹ ಹತ್ತು ಹಲವು  ಮೂಲಭೂತ ಪ್ರಶ್ನೆಗಳು ಉದ್ಬಭಿಸುತ್ತವೆ. ಅವುಗಳಿಗೆ ಉತ್ತರಗಳು ಸಹ ಸ್ಪಷ್ಟವಾಗಿವೆ. ಮಾವೋವಾದಿಗಳು ದಿಗಂತಗಳಿಂದ ದೂರ ಸರಿದಿಲ್ಲ. ಶತ್ರು ದೇಶಗಳ ಒಳನುಗ್ಗುವವರಲ್ಲ. ಇವರು ಭಾರತದ ಮಕ್ಕಳು. ನಮ್ಮ ಸಹೋದರ ಸಹೋದರಿಯರು. ಸರ್ಕಾರಗಳು, ಅವರ ಮತ್ತು ನಮ್ಮ ನಡುವೆ ಇರುವ ಏಕೈಕ ವಿಷಯವೆಂದರೆ ಸಿದ್ಧಾಂತದ ಸಂಘರ್ಷ. ಅದು ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ. ನಕ್ಸಲರದು ರಾಜಕೀಯ ಚಳುವಳಿ. ದಶಕಗಳಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ತಾರತಮ್ಯವೇ ಈ ನಕ್ಸಲರ ಚಳವಳಿಗೆ ಕಾರಣ. ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತೀಯ ಸಂವಿಧಾನದಲ್ಲಿನ ಸೂಚನೆಗಳ ಅನುಷ್ಠಾನಕ್ಕಾಗಿ, ಒಂದು ಸಂಘಟನೆ ತಲೆಮಾರುಗಳಿಂದ ನಡೆಸುತ್ತಿರುವ ಸಶಸ್ತ್ರ ಹೋರಾಟ. ನವ ಪ್ರಜಾಸತ್ತಾತ್ಮಕ ಕ್ರಾಂತಿಯು ಬಿರ್ಸಾ ಮುಂಡಾ, ಕುಮ್ರಂಭೀಮ್ ಅವರ ಆಕಾಂಕ್ಷೆಗಳ ಪ್ರತಿರೂಪವಾಗಿದೆ. ಈ ಸರ್ಕಾರಗಳು ಮಾವೋವಾದಿಗಳ ಮೇಲೆ ಏಕೆ ಯುದ್ಧ ಮಾಡುತ್ತಿವೆ? ಗರ್ಭದಲ್ಲಿ ಅಡಗಿರುವ ಲಕ್ಷ ಕೋಟಿ ಮೌಲ್ಯದ ಖನಿಜ ಸಂಪತ್ತಿಗಾಗಿ ಈ ದಾಳಿ ಮಾಡಲಾಗುತ್ತಿದೆ. ಇಲ್ಲಿರುವ ಸಂಪತ್ತನ್ನು ಅಂಬಾನಿ, ಅದಾನಿಗಳಿಗೆ ಧಾರೆ ಎರೆದುಕೊಡಲು ಸರಕಾರವು ನಕ್ಸಲರ ವಿರುದ್ಧ ಸೇನೆ, ಪೊಲೀಸರನ್ನು ನಕ್ಸಲರ ನಿರ್ಮೂಲನೆಗೆ ಛೂ ಬಿಟ್ಟಿದೆ.

ಇಲ್ಲಿ ಗಣಿಗಾರಿಕೆ ದಶಕಗಳ ಹಿಂದೆ ಪ್ರಾರಂಭವಾದರೂ, ಅದು ದೊಡ್ಡ ಮಟ್ಟದಲ್ಲಿ ಹರಡಲಿಲ್ಲ. ಅದಕ್ಕೆ ಮುಖ್ಯ ಕಾರಣ ಕಾಡಿನಲ್ಲಿರುವ ನಕ್ಸಲರು ಮತ್ತು ಬುಡಕಟ್ಟು ಜನರು. ಆ ಕಾಡು ಮಕ್ಕಳಿಗೆ ಮಾದರಿಯಾಗಿ ನಿಂತಿರುವ ಮಾವೋವಾದಿಗಳು. ಅದಕ್ಕಾಗಿಯೇ ಬುಡಕಟ್ಟು ಜನರು ಮತ್ತು ಮಾವೋವಾದಿಗಳು ತಮ್ಮ ಗಣಿಗಾರಿಕೆಗೆ ಅಡ್ಡಿಯಾಗಿರುವುದರಿಂದ ಅಡೆತಡೆಯಿಲ್ಲದೆ ಖನಿಜ ಸಂಪನ್ಮೂಲಗಳ ದೋಚಲು ಸರಕಾರವು ಈ ಹೆಜ್ಜೆಗಳನ್ನು ಅನುಸರಿಸುತ್ತಿದೆ. ಈ ಕುರಿತು ಕಾರ್ಪೊರೇಟ್ ಶಕ್ತಿಗಳು ಮತ್ತು ಕೇಂದ್ರ ಸರ್ಕಾರಿ ಆಡಳಿತಗಾರರು ದಶಕಗಳ ಹಿಂದೆಯೇ ಬಹಿರಂಗಗೊಂಡಿದ್ದಾರೆ.

ನಮ್ಮ ಭಾರತವು ವಿಶ್ವದ ಅತಿದೊಡ್ಡ ಮತ್ತು ಅಪರೂಪದ ಖನಿಜ ನಿಕ್ಷೇಪಗಳ ಖಣಜವಾಗಿದೆ. ಅದರಲ್ಲಿಯೂ, ಮುಖ್ಯವಾಗಿ ದಂಡಕಾರಣ್ಯ  ಪ್ರದೇಶ. ನಮ್ಮ ದೇಶದಲ್ಲಿ ಅರಣ್ಯ ಪ್ರದೇಶ 2.29 ಮಿಲಿಯನ್ ಚದರ ಕಿ.ಮೀ. ಇದೆ.  ಆ ಒಟ್ಟು ಪ್ರದೇಶದಲ್ಲಿ ಮಧ್ಯ ಭಾರತದಲ್ಲಿ  ಶೇಕಡಾ 9.60 ಇದೆ. ಈಗ ಈ ಸೇನಾ ದಾಳಿಯು ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಇತರ ದೊಡ್ಡ ರಾಜ್ಯಗಳಲ್ಲಿ ಲಕ್ಷ ಚದರ ಕಿಲೋಮೀಟರ್‌ಗಳಷ್ಟು ಹರಡಿದೆ. ತೆಲಂಗಾಣ ಪ್ರದೇಶದಲ್ಲಿ ಆದಿಲಾಬಾದ್, ನಿಜಾಮಾಬಾದ್, ಕರಿಮ್‌ನಗರ, ವಾರಂಗಲ್, ಖಮ್ಮಂ ಜಿಲ್ಲೆಗಳು, ಪೂರ್ವ ಗೋದಾವರಿ, ವಿಶಾಖಪಟ್ಟಣಂ, ವಿಜಯನಗರಂ, ಶ್ರೀಕಾಕುಳಂ ಆ ಮಿತಿಯೊಳಗೆ ಬರುತ್ತವೆ. ಈ ಅರಣ್ಯ ಪ್ರದೇಶವು ಲಕ್ಷ ಕೋಟಿ ಮೌಲ್ಯದ ಖನಿಜ ನಿಕ್ಷೇಪಗಳಿಗೆ ನೆಲೆಯಾಗಿದೆ. ಈ ಪ್ರದೇಶವು ರಾಷ್ಟ್ರೀಯ ನಿಧಿ. ಇದರ ಮೌಲ್ಯವು ಒಂದು ದಶಕದ ಹಿಂದೆ ರೂ. 9 ಸಾವಿರ ಲಕ್ಷ ಕೋಟಿಗಳು ಎಂದು ಪ್ರಾಥಮಿಕ ಅಂದಾಜು. ಈಗ ಅದು ಎರಡು ಪಟ್ಟು ಹೆಚ್ಚು. ದಶಕಗಳ ಹಿಂದೆಯೇ ಸಾಮ್ರಾಜ್ಯಶಾಹಿಗಳು ಆ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದರು. 1968ರಲ್ಲಿ ಜಪಾನ್‌ನ ಬೈಲಾಡಿಲ್ಲಾ ಕಂಪನಿಯು ಕಬ್ಬಿಣ, ಬೆಳ್ಳಿ ಗಣಿಗಾರಿಕೆಯನ್ನು ಪ್ರಾರಂಭಿಸಿತು.

ಟಾಟಾ ಪೋಸ್ಕೊ, ಎಸ್‌ಎಸ್‌ಆರ್ ಜಿಂದಾಲ್, ರಿಯೊ ಟಿಂಟೊ, ಬಿಎಚ್‌ಐ, ಮಿತ್ತಲ್, ವೇದಾಂತ ರಿಸೋರ್ಸಸ್‌ನಂತಹ ವಿದೇಶಿ ಕಾರ್ಪೊರೇಟ್ ಸಂಸ್ಥೆಗಳು ವಿಲೀನಗೊಂಡಿವೆ. ಈಗ ಅದಾನಿ, ಅಂಬಾನಿ ಮತ್ತು ಇತರ ದೇಶೀಯ ಕಾರ್ಪೊರೇಟ್ ಶಕ್ತಿಗಳು ಆ ಖನಿಜ ಸಂಪನ್ಮೂಲಗಳ ಲೂಟಿಗೆ ಕ್ಯೂನಲ್ಲಿವೆ. ದೆಹಲಿಯಲ್ಲಿ ಸರಕಾರದ ಗದ್ದುಗೆ ಹಿಡಿದಿರುವವರು ಆ ಕಂಪನಿಗಳಿಗೆ ರಾಷ್ಟ್ರೀಯ ಸಂಪತ್ತನ್ನು ಲೂಟಿ ಮಾಡಲು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ಮತ್ತು ಇನ್ನೂ ಹಾಗೆಯೇ ಮುಂದುವರಿಸಿದ್ದಾರೆ. ಮುಂದಿನ ಮೂರು ದಶಕಗಳಲ್ಲಿ ಅಲ್ಲಿನ ಖನಿಜ ಸಂಪನ್ಮೂಲ ಸಂಪೂರ್ಣವಾಗಿ ಕೊಳ್ಳೆ ಹೊಡೆಯುವ ಗುರಿಯನ್ನು ಈ ಕಂಪೆನಿಗಳು ಹೊಂದಿವೆ. ಈಗ ಅದು ಹೆಚ್ಚು ಸಾರ್ವತ್ರಿಕವಾಗಿದೆ. 90ರ ದಶಕದಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಸರಕಾರದ ಅರೆ ಪೊಲೀಸ್ ಪಡೆಯಾದ ಜನ ಜಾಗರಣ ಹೆಸರಿನಲ್ಲಿ ಹತ್ಯಾಕಾಂಡ ಪ್ರಾರಂಭವಾಯಿತು ಮತ್ತು 2005ರಲ್ಲಿ ಸಾಲ್ವಜುಡಂ ಆಗಿ ಅದು ರೂಪಾಂತರಗೊಂಡಿತು ಮತ್ತು ನಂತರ ಅದು ಗ್ರೀನ್ ಹಂಟ್ ಆಗಿ ಕಾರ್ಯಾಚರಣೆ ಮಾಡುತ್ತಿತ್ತು. ಈಗ ಕೇಂದ್ರವು ಆಪರೇಷನ್ ಕಾಗರ್ ಹೆಸರಿನಲ್ಲಿ ಅಂತಿಮ ಯುದ್ಧವನ್ನು ಘೋಷಿಸಿದೆ. ಯುದ್ಧದ ಮಾರ್ಗಗಳು ಬದಲಾಗಬಹುದು. ಆದರೆ ದಬ್ಬಾಳಿಕೆಯ ನೀತಿಶಾಸ್ತ್ರ ಬದಲಾಗಿಲ್ಲ. ರೂಪ ಏನೇ ಇರಲಿ, ಸರಕಾರ ರಚಿಸುವ ಈ ಪಡೆಗಳ ಗುರಿ ಒಂದೇ ಆಗಿದೆ. ಅದು ಕಾರ್ಪೋರೇಟ್ ಧಣಿಗಳಿಗೆ ಗಣಿಗಾರಿಕೆ ವಿಸ್ತರಿಸಲು ಅವಕಾಶ ನೀಡುವುದು. ಅದಕ್ಕಾಗಿಯೇ ಬುಡಕಟ್ಟು ಜನರನ್ನು ಅರಣ್ಯದ ಜೋಪಡಿಗಳಿಂದ ಹೊರಹಾಕಲಾಗುತ್ತಿದೆ.  ಮಾವೋವಾದಿಗಳು ಈ ಕಾಗರ್ ಪಡೆಗಳು ಸಾರಿರುವ ಅಂತಿಮ ಯುದ್ಧವನ್ನು ಎದುರಿಸಲು ಹರಸಾಹಸ ಪಡುತ್ತಿದ್ದಾರೆ.

ಕಾರ್ಪೊರೇಟ್ ಶಕ್ತಿಗಳಿಗಾಗಿ ನಡೆಸಲಾಗುತ್ತಿರುವ ಆಪರೇಷನ್ ಕಾಗರ್ ಅನ್ನು ನಿಲ್ಲಿಸಲು ಶಾಂತಿ ಮಾತುಕತೆಗೆ ಸಿದ್ಧ ಎಂದು ಮಾವೋವಾದಿಗಳು ಈಗಾಗಲೇ ಘೋಷಿಸಿದ್ದಾರೆ. ಆ ಶಾಂತಿಗಾಗಿ, ದೇಶದ ಬುದ್ಧಿಜೀವಿಗಳು ಸಹ ತಮ್ಮ ಧ್ವನಿಯನ್ನು ತೆರೆಯುತ್ತಿದ್ದಾರೆ. ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಅವರ ಇತ್ತೀಚಿನ ಘೋಷಣೆಯೊಂದಿಗೆ, ರಾಜಕೀಯ ವಲಯಗಳಲ್ಲಿ ಚಲನೆ ಕಂಡುಬಂದಿದೆ. ಈಗಲೂ ಕೇಂದ್ರವು ಶಾಂತಿ ಮಾತುಕತೆಯ ಅಲೆಯನ್ನು ಎತ್ತುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಗರಿಕ ಸಮಾಜವು ಈ ಸಂದರ್ಭದಲ್ಲಿ ಶಾಂತಿಗಾಗಿ ಒತ್ತಾಯಿಸಬೇಕು. ಏಕೆಂದರೆ ಇಲ್ಲಿ ಮಾವೋವಾದಿಗಳನ್ನು ಸರ್ವನಾಶ ಮಾಡಿದ ನಂತರ ಬುಡಕಟ್ಟು ಜನಾಂಗದ ಪರಿಸ್ಥಿತಿ ಏನಾಗಲಿದೆ? ಇಲ್ಲಿ ಕಾರ್ಪೋರೇಟ್ ಶಕ್ತಿಗಳ ನಿರಂತಕವಾದ ದಾಳಿಯಿಂದ ಇಲ್ಲಿನ ನೈಸರ್ಗಿಕ ಸಂಪತ್ತು ವಿನಾಶವಾಗಲಿದೆ. ಕೇಂದ್ರದ ಈ ರೀತಿಯ ಆಕ್ರಮಣ ನ್ಯಾಯಾಯುತವೇ? ಅದು ಕಾಡನ್ನು ನಾಶ ಮಾಡಲು ಹೊರಟಿರುವುದು ಸರಿಯೇ? ಕಾಡು ಮಕ್ಕಳ ಜೀವನವನ್ನು ಮೂರಾಬಟ್ಟೆ ಮಾಡುವುದು ಸರಿಯೇ? ನಾವೆಲ್ಲಾ ಹಾಗೆ ಭಾವಿಸಿದರೆ, ಇದಕ್ಕಿಂತ ಹೆಚ್ಚಿನ ತಪ್ಪೇನೂ ಇಲ್ಲ. ಭಾರತದಲ್ಲಿ ಎಲ್ಲಿಯೂ ಇಲ್ಲದ ಜೀವವೈವಿಧ್ಯಕ್ಕೆ ಅಲವಲಂ ಪ್ರಮುಖ ಕಾರಣವಾಗಿದೆ. ಇದು ಅನೇಕ ನದಿಗಳ ಜನ್ಮಸ್ಥಳಕ್ಕೆ, ವ್ಯಾಪಕ ಮಳೆಯ ಮೂಲಕ್ಕೆ ಕಾರಣವಾಗಿದೆ.

ಈ ಪರ್ವತ ಶ್ರೇಣಿಗಳು ಅಂತರ್ಜಲ ಹೆಚ್ಚಳದಲ್ಲಿ ನಿರ್ಣಾಯಕವಾಗಿವೆ. ಲಕ್ಷಾಂತರ ವರ್ಷಗಳ ಪರಿಸರ ಸಮತೋಲನದ ಕೇಂದ್ರವಾಗಿವೆ ಮತ್ತು ಅರಣ್ಯವನ್ನು ಕಡಿದು ಖನಿಜ ಸಂಪನ್ಮೂಲಗಳಿಗಾಗಿ ಪರ್ವತಗಳನ್ನು ಗಣಿಗಾರಿಕೆಗಾಗಿ ಬಗೆದ ನಂತರ ಅಲ್ಲಿ ಉಳಿಯುವುದೇನಿರುತ್ತದೆ. ಗಣಿಗಾರಿಕೆ ತ್ಯಾಜ್ಯದೊಂದಿಗೆ ನೀರು ಮತ್ತು ವಾಯು ಮಾಲಿನ್ಯ ಮಾತ್ರವಾಗಿರುತ್ತದೆ. ವೆರಾಸಿ ಅರಣ್ಯದ ಹಳ್ಳಿಗಳಲ್ಲಿ ಮಾನವ ಉಳಿವು ಪ್ರಶ್ನಾರ್ಹವಾಗಿದೆ. ಇದು ಕಾಲ್ಪನಿಕವಲ್ಲ. ಅಮೆಜಾನ್ ಅರಣ್ಯವನ್ನು ನಾಶಪಡಿಸಿದ ನಂತರ ಬ್ರೆಜಿಲ್ ಮೂರು ಪಟ್ಟು ಬರ ಮತ್ತು ಮಳೆಯ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದಕ್ಕೆ ಬ್ರೆಜಿಲ್ ಜೀವಂತ ಸಾಕ್ಷಿಯಾಗಿದೆ. ಬರಗಾಲದಿಂದ ಹೋರಾಡುತ್ತಿರುವ ಆಫ್ರಿಕನ್ ಖಂಡದಲ್ಲಿ ಏನಾಗುತ್ತಿದೆ? ಪ್ರತಿಯೊಂದು ದೇಶಗಳು ತಮ್ಮ ಇಂದಿನ ದುರಾವಸ್ಥೆಗೆ ಇತಿಹಾಸವನ್ನು ಹೇಳುತ್ತಿವೆ. ನಮ್ಮ ದೇಶದ ಹೃದಯಭಾಗದಲ್ಲಿ ಆ ವಿನಾಶ ಈಗಾಗಲೇ ಪ್ರಾರಂಭವಾಗಿದೆ.  ಅದಕ್ಕಾಗಿಯೇ ಈಗ ಕೇಂದ್ರ ಸರಕಾರ ಮತ್ತು ಮಾವೋವಾದಿಗಳು ಮಾತುಕತೆ ನಡೆಸಬೇಕೆಂದು ಒತ್ತಾಯಿಸಬೇಕಿದೆ. ಈ ಶಾಂತಿಗಾಗಿ ಮಾತುಕತೆ ಮಾತ್ರವಲ್ಲದೆ, ಭವಿಷ್ಯದ ಪೀಳಿಗೆಯ ಸುರಕ್ಷತೆಗಾಗಿಯೂ ಸಹ ಧ್ವನಿ ಎತ್ತಬೇಕು. ಇದಕ್ಕಾಗಿ ಈ ನಿಟ್ಟಿನಲ್ಲಿ ನಾಗರೀಕ ಸಮಾಜ ಸಕ್ರಿಯವಾಗಬೇಕಿದೆ. ಅರಣ್ಯ ಮತ್ತು ಆ ಅರಣ್ಯವನ್ನು ರಕ್ಷಿಸುತ್ತಿರುವ ಕಾಡು ಮಕ್ಕಳ ಹೋರಾಟಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು. ಅದು ಅಗತ್ಯ. ಇದರಲ್ಲಿ ತೆಲಂಗಾಣದ ಕರ್ತವ್ಯ ಬಹಳ ಮುಖ್ಯ. ಏಕೆಂದರೆ ರಾಜ್ಯದ ಪ್ರವಾಹವಾಗಿರುವ ಗೋದಾವರಿ ನೀರು ಜೀವ ಮೂಲ. ಇದು ನಮ್ಮೆಲ್ಲರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈಗಾಗಲೇ ನಾಗರೀಕ ಸಮಾಜದಿಂದ ಮತ್ತು ಸಿಪಿಐ, ಸಿಪಿಎಂ ಸೇರಿದಂತೆ ಹಲವರು ರಾಜಕೀಯ ಪಕ್ಷಗಳಿಂದ ಕೇಂದ್ರ ಮತ್ತು ನಕ್ಸಲರ ನಡುವೆ ಮಾತುಕತೆಗೆ ಒತ್ತಡ ಹೇರಲಾಗುತ್ತಿದೆ. ಇದನ್ನು ಮತ್ತುಷ್ಟು ಹೆಚ್ಚಿಸುವ ಅಗತ್ಯವಿದೆ.

 

ಪಹಲ್ಗಾಮ್ ದಾಳಿ:  ಪ್ರಾಣದ ಹಂಗು ತೊರೆದು ಪ್ರವಾಸಿಗರನ್ನು ರಕ್ಷಿಸಿದ ಅಪ್ರಾಪ್ತ ರುಬೀನಾ, ಮುಮ್ತಾಜಾ  ಸಹೋದರಿಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...