HomeಮುಖಪುಟExplain: ಹೇಗೆ ನಡೆಯಲಿದೆ 2027ರ ಜನಗಣತಿ..ಹೊಸತೇನಿದೆ?

Explain: ಹೇಗೆ ನಡೆಯಲಿದೆ 2027ರ ಜನಗಣತಿ..ಹೊಸತೇನಿದೆ?

- Advertisement -
- Advertisement -

ಭಾರತದ 16ನೇ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಸರ್ಕಾರ ಔಪಚಾರಿಕವಾಗಿ ಘೋಷಿಸಿದೆ. ಲಡಾಖ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಹಿಮದಿಂದ ಆವೃತವಾದ ಮತ್ತು ದೂರದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಕ್ಟೋಬರ್ 1, 2026ರಂದು ಗಣತಿ ಪ್ರಾರಂಭಗೊಳ್ಳಲಿದೆ. ಉಳಿದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಚ್ 1, 2027 ದಿನಾಂಕವನ್ನು ನಿಗದಿಪಡಿಸಲಾಗಿದೆ. 1931ರ ಬಳಿಕ ಮೊದಲ ಬಾರಿಗೆ ಜನಗಣತಿಯ ಜೊತೆಗೆ ಜಾತಿಗಣತಿ ನಡೆಯಲಿರುವುದರಿಂದ ಈ ಗಣತಿ ಮಹತ್ವ ಪಡೆದುಕೊಂಡಿದೆ.

ಜನಗಣತಿಯ ಕುರಿತು 1948ರ ಜನಗಣತಿ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಸೋಮವಾರ (ಜೂನ್ 16) ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. 2027ರ ಆರಂಭದಲ್ಲಿ ಜನಸಂಖ್ಯಾ ಎಣಿಕೆ ಪ್ರಾರಂಭವಾಗುವ ಮೊದಲು ಹಲವಾರು ತಿಂಗಳುಗಳವರೆಗೆ ಮನೆ ಪಟ್ಟಿ ಮತ್ತು ವಸತಿ ಎಣಿಕೆ ನಡೆಯಲಿದೆ. ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡನೆ ಮತ್ತು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಇದು ಈಗಾಗಲೇ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ.

ಜನಗಣತಿ ಏಕೆ ಮುಖ್ಯ?

ಸುಲಭವಾಗಿ ಹೇಳುವುದಾದರೆ ದೇಶ ನಡೆಸಲು ಜನಗಣತಿಯು ಅತಿಮುಖ್ಯವಾಗಿದೆ. ಜನಗಣತಿಯ ದತ್ತಾಂಶಗಳ ಆಧಾರದ ಮೇಲೆಯೇ ಸರ್ಕಾರ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು. ಈ ದತ್ತಾಂಶಗಳ ಆಧಾರ ಮೇಲೆಯೇ ಅನುದಾನ ಹಂಚಿಕೆ, ಅಭಿವೃದ್ದಿ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದು. ಜನರಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗುವುದು. ಜನಗಣತಿಯು ದೇಶದ ಜನರ ಒಟ್ಟಾರೆ ಚಿತ್ರಣವನ್ನು ಸರ್ಕಾರಕ್ಕೆ ನೀಡುತ್ತದೆ. ಇದೊಂದು ರೀತಿ ನೀಲಿ ನಕ್ಷೆ ಇದ್ದಂತೆ. ಯಾವುದೇ ನಿರ್ಧಾರವು ಜನಸಂಖ್ಯೆಯ ಆಧಾರದಲ್ಲೇ ತೆಗೆದುಕೊಳ್ಳಬೇಕಾಗುತ್ತದೆ.

ಸಾಂವಿಧಾನಿಕ ನಿಬಂಧನೆಗಳ ಅನುಷ್ಠಾನಕ್ಕೂ ಜನಗಣತಿಯು ನಿರ್ಣಾಯಕವಾಗಿದೆ. ಸಂವಿಧಾನದ 82ನೇ ವಿಧಿಯು ಇತ್ತೀಚಿನ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಡಿಲಿಮಿಟೇಶನ್ ಅನ್ನು ಕಡ್ಡಾಯಗೊಳಿಸುತ್ತದೆ. 330 ಮತ್ತು 332ನೇ ವಿಧಿಗಳು ಶಾಸಕಾಂಗಗಳಲ್ಲಿ ಅವರ ಜನಸಂಖ್ಯಾ ಅನುಪಾತದ ಆಧಾರದ ಮೇಲೆ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಸ್ಥಾನಗಳನ್ನು ಮೀಸಲಿಡುತ್ತವೆ.

ಆಡಳಿತದ ಹೊರತಾಗಿಯೂ, ಜನಗಣತಿಯು ರಾಷ್ಟ್ರೀಯ ಕನ್ನಡಿಯಾಗಿದೆ. ಇದು ಗುರುತು, ಉದ್ಯೋಗ, ಜೀವನ ಪರಿಸ್ಥಿತಿಗಳು ಮತ್ತು ಕುಟುಂಬ ರಚನೆಯ ಬದಲಾಗುತ್ತಿರುವ ಮಾದರಿಗಳನ್ನು ಪ್ರತಿಬಿಂಬಿಸುತ್ತದೆ. ಆರ್ಥಿಕ ಸುಧಾರಣೆಗಳ ಪರಿಣಾಮವನ್ನು ಕಂಡುಕೊಳ್ಳುವುದರಿಂದ ಹಿಡಿದು ದುರ್ಬಲ ಅಥವಾ ವಂಚಿತ ಸಮುದಾಯಗಳನ್ನು ಗುರುತಿಸುವವರೆಗೆ ಇದು ಸರ್ಕಾರಕ್ಕೆ ಅಗತ್ಯವಾಗಿದೆ.

ಜನಗಣತಿಯನ್ನು ಹೇಗೆ ನಡೆಸಲಾಗುತ್ತದೆ?

ಜನಗಣತಿ ಪ್ರಕ್ರಿಯೆಯನ್ನು ಮನೆ-ಪಟ್ಟಿ ಹಾಗೂ ವಸತಿ ಗಣತಿ ಮತ್ತು ಜನಸಂಖ್ಯಾ ಗಣತಿ ಎಂಬಎರಡು ವಿಶಾಲ ಹಂತಗಳನ್ನು ಒಳಗೊಂಡಿದೆ. ಇದು ಹಲವು ತಿಂಗಳುಗಳ ಕಾಲ ನಡೆಯುವ ಪ್ರಕ್ರಿಯೆ. ಇದಕ್ಕೂ ಮೊದಲು ರಾಜ್ಯಗಳು ಆಡಳಿತಾತ್ಮಕ ಗಡಿಗಳನ್ನು (ಜಿಲ್ಲೆಗಳು) ಘನೀಕರಿಸುವುದು, ಪೂರ್ವಸಿದ್ಧತಾ ಮ್ಯಾಪಿಂಗ್ ತಯಾರಿಕೆ ಮತ್ತು ಗಣತಿದಾರರ ತರಬೇತಿ ಸೇರಿದಂತೆ ಅನೇಕ ಪ್ರಕ್ರಿಯೆಗಳು ಇವೆ.

ಮುಂದಿನ ಗಣತಿಗೆ ಒಟ್ಟು 30 ಲಕ್ಷ ಸಿಬ್ಬಂದಿಯನ್ನು, ಮುಖ್ಯವಾಗಿ ಶಾಲಾ ಶಿಕ್ಷಕರನ್ನು ನಿಯೋಜಿಸಲ್ಪಡುವ ನಿರೀಕ್ಷೆಯಿದೆ. ಇದಲ್ಲದೆ, ಜಿಲ್ಲಾ ಮತ್ತು ಉಪ-ಜಿಲ್ಲಾ ಮಟ್ಟದಲ್ಲಿ ಜನಗಣತಿ ಕಾರ್ಯವನ್ನು ನಿರ್ವಹಿಸುವ, ಮೇಲ್ವಿಚಾರಣೆ ಮಾಡುವ ಅಥವಾ ಬೆಂಬಲಿಸುವ ಸುಮಾರು 1,20,000 ಕಾರ್ಯಕಾರಿಣಿಗಳು ಮತ್ತು ತರಬೇತಿ ನೀಡಲು ಸುಮಾರು 46,000 ತರಬೇತುದಾರರ ಅಗತ್ಯವಿದೆ.

ಮನೆ ಪಟ್ಟಿ ಹಂತ: ಈ ಹಂತದಲ್ಲಿ ದೇಶದ ಪ್ರತಿಯೊಂದು ರಚನೆಗೆ (ನಿರ್ಮಾಣಗಳಿಗೆ) ಭೇಟಿ ನೀಡಿ ಕಟ್ಟಡಗಳು ಮತ್ತು ಮನೆಗಳ ಗುಣಲಕ್ಷಣಗಳನ್ನು ದಾಖಲಿಸಲಾಗುತ್ತದೆ. ಗಣತಿದಾರರು ಮನೆಯ ಮುಖ್ಯಸ್ಥ, ಸದಸ್ಯರ ಸಂಖ್ಯೆ, ಕಟ್ಟಡದ ಬಳಕೆ (ವಸತಿ, ವಾಣಿಜ್ಯ, ಇತ್ಯಾದಿ), ಅದರ ನಿರ್ಮಾಣದಲ್ಲಿ ಬಳಸಿದ ವಸ್ತುಗಳು, ಕೊಠಡಿಗಳ ಸಂಖ್ಯೆ, ಮಾಲೀಕತ್ವದ ಸ್ಥಿತಿ, ನೀರು ಮತ್ತು ವಿದ್ಯುತ್ ಮೂಲಗಳು, ಶೌಚಾಲಯದ ಪ್ರಕಾರ, ಅಡುಗೆಗೆ ಬಳಸುವ ಇಂಧನ ಮತ್ತು ಟಿವಿ, ಫೋನ್, ವಾಹನ ಇತ್ಯಾದಿ ಸ್ವತ್ತುಗಳ ಲಭ್ಯತೆಯ ಡೇಟಾವನ್ನು ಸಂಗ್ರಹಿಸುತ್ತಾರೆ. ಈ ಮಾಹಿತಿಯು ಭಾರತದಾದ್ಯಂತ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಈ ಪ್ರಕ್ರಿಯೆಯನ್ನು ಜನಸಂಖ್ಯಾ ಗಣತಿ ವರ್ಷದ ಹಿಂದಿನ ವರ್ಷದ ಮಾರ್ಚ್ 1ರಿಂದ ಸೆಪ್ಟೆಂಬರ್ 30ರ ನಡುವೆ ನಡೆಸಲಾಗುತ್ತದೆ. ವಿವಿಧ ರಾಜ್ಯಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ, ಮನೆ ಪಟ್ಟಿ ಮಾಡುವ ಪ್ರಕ್ರಿಯೆಯನ್ನು ಯಾವ ತಿಂಗಳುಗಳಲ್ಲಿ ನಡೆಸಬೇಕೆಂದು ನಿರ್ಧರಿಸುತ್ತವೆ. ಮುಂದಿನ ಜನಗಣತಿಯಲ್ಲಿ ಇದನ್ನು 2026ರಲ್ಲಿ ನಡೆಸುವ ನಿರೀಕ್ಷೆಯಿದೆ.

ಜನಸಂಖ್ಯಾ ಎಣಿಕೆ: ವಸತಿ ಗಣತಿಯ ನಡೆಯುವ ಜನಗಣತಿಯು ಜನರ ವೈಯಕ್ತಿಕ ದತ್ತಾಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ಉದಾ: ಹೆಸರು, ವಯಸ್ಸು, ಲಿಂಗ, ಹುಟ್ಟಿದ ದಿನಾಂಕ, ಮನೆಯ ಮುಖ್ಯಸ್ಥರೊಂದಿಗಿನ ಸಂಬಂಧ, ವೈವಾಹಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಧರ್ಮ, ಜಾತಿ/ಪಂಗಡ, ಅಂಗವೈಕಲ್ಯ ಸ್ಥಿತಿ ಮತ್ತು ವಲಸೆ ಇತಿಹಾಸವನ್ನು ದಾಖಲಿಸಲಾಗುತ್ತದೆ. ಗಣತಿದಾರರು ಪ್ರತಿಯೊಬ್ಬ ನಿರಾಶ್ರಿತರು ಸೇರಿದಂತೆ ಪ್ರತಿಯೊಬ್ಬರ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಈ ಮೂಲಕ ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಮಾಹಿತಿಯನ್ನೂ ಪಡೆಯಲಾಗುತ್ತದೆ.

ಹೀಗೆ ಸಂಗ್ರಹಿಸಿದ ದತ್ತಾಂಶಗಳನ್ನು ಕೇಂದ್ರೀಕರಿಸಿ ಹಂತ ಹಂತವಾಗಿ ವಿವಿಧ ರೀತಿಯಲ್ಲಿ ಸಾರ್ವಜನಿಕಗೊಳಿಸಲಾಗುತ್ತದೆ. ಕನಿಷ್ಠ ಎರಡು ಹಂತಗಳಲ್ಲಿ ಮಾಹಿತಿ ಬಿಡುಗಡೆಯಾಗಲಿದೆ. ಮೊದಲು ತಾತ್ಕಾಲಿಕ ಜನಸಂಖ್ಯೆಯ ಮಾಹಿತಿ ನೀಡಲಾಗುತ್ತದೆ. ನಂತರ ವಿವಿಧ ಸೂಚಕಗಳಿಂದ ವಿಂಗಡಿಸಲಾದ ಹೆಚ್ಚು ವಿವರವಾದ ಕೋಷ್ಟಕಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಧುನಿಕ ವಿಧಾನಗಳ ಮೂಲಕ ಜನಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ನಂತರ ಬಹಳ ದೃಢವಾದ ಮತ್ತು ಗುಣಮಟ್ಟದ ವಿಧಾನದಲ್ಲಿ ದೇಶದ ಜನಸಂಖ್ಯೆಯ ನಿಖರ ಮಾಹಿತಿ ನೀಡಲಾಗುತ್ತದೆ.

ಮುಂದಿನ ಜನಗಣತಿಯಲ್ಲಿ, ಗಣತಿ ಪ್ರಕ್ರಿಯೆಯು ಫೆಬ್ರವರಿ 2027ರ 20-21 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಗಣತಿ ಕಾರ್ಯ ಪೂರ್ಣಗೊಂಡ 10 ದಿನಗಳಲ್ಲಿ ತಾತ್ಕಾಲಿಕ ದತ್ತಾಂಶ ಮತ್ತು ಇನ್ನೊಂದು ಆರು ತಿಂಗಳಲ್ಲಿ ಅಂತಿಮ ದತ್ತಾಂಶ ಹೊರಬರುವ ನಿರೀಕ್ಷೆಯಿದೆ.

2027ರ ಜನಗಣತಿಯನ್ನು ಹೇಗೆ ನಡೆಯಲಿದೆ? 

2027ರ ಜನಗಣತಿಯು ಭಾರತದ ಇತಿಹಾಸದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಲಿದ್ದು, ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆ, ಆನ್‌ಲೈನ್ ಸ್ವಯಂ-ಗಣತಿ ಮತ್ತು ಬಹುತೇಕ ನೈಜ-ಸಮಯದ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ. 1931ರ ನಂತರ ಎಲ್ಲಾ ಸಮುದಾಯಗಳ ಜಾತಿ ಡೇಟಾವನ್ನು ಸಂಗ್ರಹಿಸುವ ಮೊದಲ ಗಣತಿ ಇದು.

2011ರಿಂದ ಗಮನಾರ್ಹ ಬದಲಾವಣೆಗಳು ಆಗಿರುವ ಕಾರಣ, 2027ರ ಜನಗಣತಿಯು ಮೊದಲ ಬಾರಿಗೆ ಸ್ವಯಂ-ಗಣತಿಗೆ ಅವಕಾಶ ನೀಡಲು ಸರ್ಕಾರದ ಯೋಜಿಸಿದೆ. ಜನರು ಸರ್ಕಾರಿ ಪೋರ್ಟಲ್‌ಗೆ ಲಾಗಿನ್ ಆಗಿ ತಮ್ಮ ವಿವರಗಳನ್ನು ತಾವೇ ಭರ್ತಿ ಮಾಡಬಹುದು ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಬಹುದು. ಜನರು ಸ್ವಯಂ-ಗಣತಿ ಮಾಡಿದ ಬಳಿಕ ಅಥವಾ ತಮ್ಮ ಮಾಹಿತಿಯನ್ನು ತಾವೇ ತುಂಬಿದ ನಂತರ, ಸಿಸ್ಟಮ್ ಒಂದು ವಿಶಿಷ್ಟ ಐಡಿಯನ್ನು  ಕ್ರಿಯೇಟ್ ಮಾಡುತ್ತದೆ. ಜನಗಣತಿ ಮಾಡುವವರು ಮನೆಗೆ ಬಂದಾಗ ಆ ಐಡಿಯನ್ನು ನೀಡಬೇಕಾಗುತ್ತದೆ.

ಗಣತಿದಾರರು ಜನಗಣತಿ ಅಪ್ಲಿಕೇಶನ್‌ನೊಂದಿಗೆ ಮೊದಲೇ ಲೋಡ್ ಮಾಡಲಾದ ಹ್ಯಾಂಡ್‌ಹೆಲ್ಡ್ ಸಾಧನಗಳು ಅಥವಾ ಸ್ಮಾರ್ಟ್‌ಫೋನ್‌ಗಳನ್ನು ಸಹ ಬಳಸಲಿದ್ದಾರೆ. ಕಾಗದದ ಎಣಿಕೆ ಸೇರಿದಂತೆ ದ್ವಿಮುಖ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದರೂ, ಸ್ಮಾರ್ಟ್‌ಫೋನ್‌ಗಳು ಈಗ ಎಲ್ಲೆಡೆ ಲಭ್ಯವಾಗಿರುವುದರಿಂದ ಮತ್ತು ಡಿಜಿಟಲ್ ಜನಗಣತಿಗೆ ಬೇಡಿಕೆ ಹೆಚ್ಚಿರುವುದರಿಂದ ಎಲ್ಲಾ ಗಣತಿದಾರರು ಡಿಜಿಟಲ್ ಮಾಧ್ಯಮವನ್ನು ಬಳಸುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ವರದಿಗಳು ಹೇಳಿವೆ. ಈ ಡಿಜಿಟಲೀಕರಣವು ದೋಷಗಳನ್ನು ಕಡಿಮೆ ಮಾಡುತ್ತದೆ, ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಗುಣಮಟ್ಟದ ಮಾಹಿತಿ ಪಡೆಯಲು ಅನುಕೂಲ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಬದಲಾವಣೆಗೆ ಡಿಜಿಟಲ್ ಮೂಲಸೌಕರ್ಯ ಕೀಲಿಯನ್ನು ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು (RGI) ಈಗಾಗಲೇ ಸ್ಥಾಪಿಸಿದ್ದಾರೆ. ಗಣತಿದಾರರಿಗೆ ಮೊಬೈಲ್ ಅಪ್ಲಿಕೇಶನ್‌ಗಳು, ಜಿಯೋಟ್ಯಾಗಿಂಗ್ ಪರಿಕರಗಳು ಮತ್ತು ಕ್ಲೌಡ್-ಆಧಾರಿತ ಡೇಟಾ ಅಪ್‌ಲೋಡ್ ವ್ಯವಸ್ಥೆಗಳನ್ನು ಬಳಸಲು ತರಬೇತಿ ನೀಡಲಾಗಿದೆ. ಪ್ರಗತಿಯನ್ನು ಟ್ರ್ಯಾಕ್ ಮಾಡಲು, ಸಮಸ್ಯೆಗಳನ್ನು ಗುರುತಿಸಲು ಮತ್ತು ಅಪ್ಡೇಡ್ ಮಾಡಿಕೊಳ್ಳಲು ರಿಯಲ್ ಟೈಮ್ ಡ್ಯಾಶ್‌ಬೋರ್ಡ್‌ಗಳನ್ನು ಯೋಜಿಸಲಾಗಿದೆ. ಜನಗಣತಿ ನಿರ್ವಹಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CMMS) ವಿಳಂಬವಿಲ್ಲದೆ ಫೀಲ್ಡ್  ಇಶ್ಯೂಗಳನ್ನು ಮೇಲ್ವಿಚಾರಣೆ ಮಾಡಿ ಪರಿಹಾರ ಸೂಚಿಸಲಿದೆ.

ಈ ಜನಗಣತಿಯು 2011 ರ ಜನಗಣತಿಗಿಂತ ಹೇಗೆ ಭಿನ್ನವಾಗಿರುತ್ತದೆ?

ವಿಧಾನ ಮತ್ತು ವಿಷಯದ ವಿಷಯದಲ್ಲಿ, 2027ರ ಜನಗಣತಿಯು 2011 ಕ್ಕಿಂತ ಭಿನ್ನವಾಗಿರುತ್ತದೆ.

ಪ್ರಕ್ರಿಯೆ ಮತ್ತು ತಂತ್ರಜ್ಞಾನ

ಡಿಜಿಟಲ್ ಪ್ರಕ್ರಿಯೆ ಮತ್ತು ಸ್ವಯಂ-ಗಣತಿಗೆ ಅವಕಾಶ ನೀಡುವುದರ ಹೊರತಾಗಿ, 2027ರ ಜನಗಣತಿಯು ಇವುಗಳನ್ನು ಒಳಗೊಂಡಿರುತ್ತದೆ:

ಜಿಪಿಎಸ್ ಏಕೀಕರಣ: 2011ರಲ್ಲಿ ಭೌತಿಕ ನಕ್ಷೆಗಳು ಮತ್ತು ಪ್ರದೇಶ ಪಟ್ಟಿಗಳನ್ನು ಬಳಸಲಾಗಿದ್ದರೆ, 2027 ರಲ್ಲಿ ವ್ಯಾಪ್ತಿಯ ಅಂತರವನ್ನು ತಪ್ಪಿಸಲು ಮನೆಗಳ ಜಿಪಿಎಸ್ ಟ್ಯಾಗಿಂಗ್ ಮತ್ತು ಜಿಯೋಫೆನ್ಸಿಂಗ್ ಅನ್ನು ಪರಿಚಯಿಸಲಾಗಿದೆ.

ಮೊಬೈಲ್ ಟ್ರ್ಯಾಕಿಂಗ್ ಮತ್ತು ದೃಢೀಕರಣ: 2027ರಲ್ಲಿ ಗಣತಿದಾರರು ಅಸಮಂಜಸ ವಯಸ್ಸು ಅಥವಾ ಅವಾಸ್ತವಿಕ ಮನೆಯ ಗಾತ್ರದಂತಹ ದೋಷಗಳಿಗೆ ಅಲರ್ಟ್‌ಗಳನ್ನು ಸ್ವೀಕರಿಸುತ್ತಾರೆ. ಇದು ರಿಯಲ್ ಟೈಮ್ ತಿದ್ದುಪಡಿಗಳಿಗೆ ಅವಕಾಶ ನೀಡುತ್ತದೆ. ಈ ವ್ಯವಸ್ಥೆ 2011ರಲ್ಲಿ ಇರಲಿಲ್ಲ.

ಕೋಡಿಂಗ್ ವ್ಯವಸ್ಥೆ: 2027ರ ಜನಗಣತಿಗಾಗಿ, ಭಾರತದ ರಿಜಿಸ್ಟ್ರಾರ್ ಜನರಲ್ ಅವರು ದತ್ತಾಂಶ ಸಂಗ್ರಹವನ್ನು ಹೆಚ್ಚು ನಿಖರ ಮತ್ತು ಪರಿಣಾಮಕಾರಿಯಾಗಿ ಮಾಡಲು ಹೊಸ ಕೋಡಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಇದಕ್ಕೂ ಮೊದಲು, 2011ರ ಜನಗಣತಿಯಲ್ಲಿ, ಜಾತಿ, ಉದ್ಯೋಗ ಅಥವಾ ಮಾತೃಭಾಷೆಯಂತಹ ಮಾಹಿತಿಯನ್ನು ಕೈಯಿಂದ ಬರೆಯಲಾಗುತ್ತಿತ್ತು. ಇದು ಸಾಮಾನ್ಯವಾಗಿ ದತ್ತಾಂಶ ಸಂಸ್ಕರಣೆಯ ಸಮಯದಲ್ಲಿ ಕಾಗುಣಿತ ತಪ್ಪುಗಳು ಮತ್ತು ಗೊಂದಲಗಳಿಗೆ ಕಾರಣವಾಗುತ್ತಿತ್ತು.

ಅಲ್ಲದೆ, ಕೆಲವು ಪ್ರಶ್ನೆಗಳಿಗೆ ಉತ್ತರಗಳು ವಿವರಣಾತ್ಮಕ ಸ್ವರೂಪದ್ದಾಗಿದ್ದವು. ಈ ವಿವರಣಾತ್ಮಕ ಪ್ರತಿಕ್ರಿಯೆಗಳ ದತ್ತಾಂಶ ಸಂಸ್ಕರಣೆಗೆ ಮಾನವ ಹಸ್ತಕ್ಷೇಪದ ಅಗತ್ಯವಿತ್ತು. ಕೆಲವೊಮ್ಮೆ ಕೆಲವು ಪ್ರಶ್ನೆಗಳಿಗೆ ವರ್ಷಗಳೇ ಬೇಕಾಗಿದ್ದವು. ಇದರಿಂದಾಗಿ ದತ್ತಾಂಶ ಪ್ರಸರಣ ವಿಳಂಬವಾಗುತ್ತಿತ್ತು. ಗಣತಿದಾರರ ವೈವಿಧ್ಯಮಯ ತೀರ್ಪಿನ ಕಾರಣದಿಂದಾಗಿ ಇದು ದತ್ತಾಂಶ ಪಕ್ಷಪಾತ ಮತ್ತು ದೋಷಗಳ ಅಪಾಯವನ್ನು ಸಹ ಒಳಗೊಂಡಿತ್ತು.

ಇದನ್ನು ಸರಿಪಡಿಸಲು, 2027ರ ಜನಗಣತಿಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇಲ್ಲಿ ಗಣತಿದಾರರು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪೂರ್ವ-ಲೋಡ್ ಮಾಡಲಾದ ಪಟ್ಟಿಗಳಿಂದ ಆಯ್ಕೆಗಳನ್ನು ಆಯ್ಕೆ ಮಾಡುತ್ತಾರೆ. ಸಂಭಾವ್ಯ ಪ್ರತಿಕ್ರಿಯೆಗಳಿಗಾಗಿ ಪ್ರತ್ಯೇಕ ಕೋಡ್‌ನೊಂದಿಗೆ ಕೋಡ್ ಡೈರೆಕ್ಟರಿಗಳು ಎಂದು ಕರೆಯಲಾಗುತ್ತದೆ. ಈ ಪಟ್ಟಿಗಳು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳು, ವಿವಿಧ ಭಾಷೆಗಳು, ಉದ್ಯೋಗಗಳು ಮತ್ತು ಜನ್ಮಸ್ಥಳಗಳಂತಹ ವಿಷಯಗಳಿಗೆ ಪ್ರಮಾಣೀಕೃತ ಕೋಡ್‌ಗಳನ್ನು ಒಳಗೊಂಡಿವೆ.

ಈ ವಿಧಾನದ ಮೂಲಕ ಗಣತಿದಾರರು ಪ್ರಮಾಣೀಕೃತ ಡ್ರಾಪ್-ಡೌನ್ ಮೆನುಗಳು ಅಥವಾ ಪಿಕ್‌ಲಿಸ್ಟ್‌ಗಳಿಂದ ನಮೂದುಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಇದು ದೇಶಾದ್ಯಂತ ನಮೂದುಗಳು ಏಕರೂಪವಾಗಿರುವುದನ್ನು ಮತ್ತು ಕಂಪ್ಯೂಟರ್‌ಗಳಿಂದ ತ್ವರಿತವಾಗಿ ಪ್ರಕ್ರಿಯೆಗೊಳಿಸಬಹುದೆಂದು ಖಚಿತಪಡಿಸುತ್ತದೆ. ಜನಗಣತಿಯನ್ನು ಹೆಚ್ಚು ಆಧುನಿಕಗೊಳಿಸುವ ಮತ್ತು ಹಸ್ತಚಾಲಿತ ನಮೂದುಗಳಿಂದ ಉಂಟಾಗುವ ದೋಷಗಳನ್ನು ಕಡಿಮೆ ಮಾಡುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.

2027 ರ ಜನಗಣತಿ ಪ್ರಶ್ನಾವಳಿಯಲ್ಲಿ ಹೊಸ ಪ್ರಶ್ನೆಗಳು

2018ರಲ್ಲಿಯೇ ಜನಗಣತಿಯ ಎರಡೂ ಹಂತಗಳಿಗೆ ಆರ್‌ಜಿಐ ವಿವರವಾದ ಪ್ರಶ್ನಾವಳಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಗಣತಿಯ ಪರೀಕ್ಷೆಯನ್ನು ನಡೆಸಲಾಗಿತ್ತು. ಜಾತಿ ಗಣತಿಯನ್ನು ಸೇರಿಸುವುದರೊಂದಿಗೆ 2027ರ ಪ್ರಶ್ನಾವಳಿ ಬಹುತೇಕ ಒಂದೇ ಆಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಮನೆ ಪಟ್ಟಿ ಪ್ರಕ್ರಿಯೆ ವೇಳೆ 34 ಕಾಲಮ್‌ಗಳ ಅಡಿಯಲ್ಲಿ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಆದರೆ ಜನಸಂಖ್ಯಾ ಎಣಿಕೆಯಲ್ಲಿ 28 ಕಾಲಮ್‌ಗಳು ಇರಲಿದ್ದು ಜನಸಂಖ್ಯಾ, ಸಾಮಾಜಿಕ ಮತ್ತು ಆರ್ಥಿಕ ಡೇಟಾವನ್ನು ಸಂಗ್ರಹಿಸಲಾಗುತ್ತದೆ.

ಮನೆ ಪಟ್ಟಿ ಹಂತ ಹೊಸ ಪ್ರಶ್ನೆಗಳು:

  • ಮನೆಯಲ್ಲಿ ಇಂಟರ್ನೆಟ್ ಸಂಪರ್ಕದ ಲಭ್ಯತೆ
  • ಮೊಬೈಲ್ ಫೋನ್ ಮತ್ತು ಸ್ಮಾರ್ಟ್‌ಫೋನ್‌ನ ಮಾಲೀಕತ್ವ
  • ವಾಸಸ್ಥಳದೊಳಗೆ ಕುಡಿಯುವ ನೀರಿನ ಮೂಲಕ್ಕೆ ಪ್ರವೇಶ.
  • ಅನಿಲ ಸಂಪರ್ಕದ ಪ್ರಕಾರ: ಪೈಪ್ ಮೂಲಕ ನೈಸರ್ಗಿಕ ಅನಿಲ ಮತ್ತು ಎಲ್‌ಪಿಜಿ
  • ವಾಹನ ಮಾಲೀಕತ್ವ: ದ್ವಿಚಕ್ರ ವಾಹನಗಳು, ನಾಲ್ಕು ಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನಗಳು
  • ಜನಗಣತಿ ಫಾಲೋಅಪ್ ಅಥವಾ ಮಾಹಿತಿ ನೀಡಲು ಬಳಸಬೇಕಾದ ಮೊಬೈಲ್ ಸಂಖ್ಯೆ
  • ಮನೆಯಲ್ಲಿ ಸೇವಿಸುವ ಧಾನ್ಯದ ಪ್ರಕಾರ

ಜನಸಂಖ್ಯಾ ಎಣಿಕೆ ಹಂತ

  • ಎಸ್‌/ಎಸ್‌ಟಿ ಮಾತ್ರವಲ್ಲದೆ ಎಲ್ಲಾ ಸಮುದಾಯಗಳ ಜನರ ಜಾತಿ ಗಣತಿಯನ್ನು 90 ವರ್ಷಗಳ ನಂತರ (ಕೊನೆಯದಾಗಿ 1931 ರಲ್ಲಿ ಮಾಡಲಾಯಿತು) ಮಾಡಲಾಗುತ್ತದೆ.
  • ಹವಾಮಾನ ಘಟನೆಗಳು ಅಥವಾ ನೈಸರ್ಗಿಕ ವಿಕೋಪಗಳಿಂದಾಗಿ ಸ್ಥಳಾಂತರದಂತಹ ವಲಸೆಯ ಕಾರಣಗಳ ಅಡಿಯಲ್ಲಿ ಹೊಸ ವರ್ಗಗಳು
  • ತಂತ್ರಜ್ಞಾನ ಬಳಕೆ – ವ್ಯಕ್ತಿಗಳು ಇಂಟರ್ನೆಟ್ ಅಥವಾ ಸ್ಮಾರ್ಟ್‌ಫೋನ್‌ಗಳನ್ನು ಬಳಸಿದ್ದಾರೆಯೇ ಎಂಬ ಪ್ರಶ್ನೆಗಳು.
  • ಲಿಂಗ ಸೇರ್ಪಡೆ – ಟ್ರಾನ್ಸ್‌ಜೆಂಡರ್ ಗುರುತನ್ನು ಗುರುತಿಸಲು ಸ್ಪಷ್ಟ ಆಯ್ಕೆಗಳು

ಸೌಜನ್ಯ : indianexpress.com

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...