Homeಪುಸ್ತಕ ವಿಮರ್ಶೆಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ.

- Advertisement -
- Advertisement -

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಆರಂಭವಾದ ತೊಂಭತ್ತರ ದಶಕ ಬೌದ್ಧಿಕ ಚಿಂತನೆಯ ದೃಷ್ಟಿಯಿಂದಲೂ ಮಹತ್ವದ ಕಾಲಘಟ್ಟ. ಹಾಗೆಯೇ ಎಂಭತ್ತರ ದಶಕದ ನಂತರ ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ವಸಾಹತೋತ್ತರ ಚಿಂತನೆಗಳು ಡಾಳಾಗಿ ಕಾಣಿಸಿಕೊಳ್ಳತೊಡಗಿದವು. ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಬೌದ್ಧಿಕ ನಿರ್ವಸಹತೀಕರಣದ ಪರಿಕಲ್ಪನೆ ಕಾಣಿಸಿಕೊಂಡದ್ದು ಈ ಹಂತದಲ್ಲಿಯೇ. ಹಾಗೆ ನೋಡಿದರೆ ಆಫ್ರಿಕಾದ ಚಿಂತಕ ಥಿಯಾಂಗೊ ಗೂಗಿಯ ನಿರ್ವಸಹತೀಕರಣ ಚಿಂತನೆಯನ್ನು ರಹಮತ್ ತರೀಕರೆಯವರು ಸಂಗ್ರಹರೂಪದಲ್ಲಿ ತಂದದ್ದು ಬಹುಶಃ ಮೊದಲ ಪ್ರಯತ್ನಗಳಲ್ಲೊಂದು.

ಇಂಥ ಬೌದ್ಧಿಕ ನಿರ್ವಸಹತೀಕರಣದ ಯತ್ನ ಭಾರತೀಯ ಭಾಷೆಗಳಲ್ಲಿ ಎರಡು ನೆಲೆಯಲ್ಲಿ ಆಗಬೇಕಿತ್ತು. ಭಾಷಿಕವಾಗಿ ಪ್ರಾದೇಶಿಕ ಭಾಷೆಗಳು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಚಿಂತನೆಯಿಂದ ಮುಕ್ತವಾಗಿ ತನ್ನದೆ ಆದ ಚಿಂತನಾ ಪರಂಪರೆಯನ್ನು ಕಂಡುಕೊಳ್ಳಬೇಕಾಗಿತ್ತು. ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆ ನಮ್ಮಲ್ಲಿ ಕಾಣಿಸಿಕೊಂಡದ್ದು ಈ ಹಿನ್ನೆಲೆಯಲ್ಲಿ. ಹಾಗೆಯೇ ಡಿ ಎನ್ ಶಂಕರಭಟ್ಟರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೃತಿ ಕೂಡ ಈ ಚಿಂತನೆಯ ಆದ್ಯ ಕೃತಿಗಳಲ್ಲೊಂದು ಎಂಬುದನ್ನು ಮರೆಯುವಂತಿಲ್ಲ.

ಕನ್ನಡದ ಸಾಹಿತ್ಯ ಮೀಮಾಂಸೆಯೆಂದರೆ ಅದೊಂದು ಅಸ್ಮಿತೆಯ ಹುಡುಕಾಟದ ಮಹಾಯಾನ. ಅಥವಾ ಬೇರೊಂದು ಮಾತಿನಲ್ಲಿ ಅದನ್ನು ಬಿಡುಗಡೆಯ ಕಥನವೆಂದು ಕರೆಯಬಹುದು. ರಹಮತ್ ತರೀಕೆರೆಯವರು ಕನ್ನಡ ಸಾಹಿತ್ಯ ಮೀಮಾಂಸೆಯನ್ನು ವ್ಯಾಖ್ಯಾನಿಸುವುದು ಗಮನಾರ್ಹವಾದದ್ದು. ಅವರ ದೃಷ್ಟಿಯಲ್ಲಿ ಸಾಹಿತ್ಯದ ಹುಟ್ಟಿನ ಪ್ರೇರಣೆಗಳು, ಅದು ಸೃಷ್ಟಿಯಾಗುವ ಕ್ರಮಗಳು, ಅಭಿವ್ಯಕ್ತಿಯಾಗುವ ಪ್ರಕಾರಗಳು, ಅದು ಭಾಷೆಯನ್ನು ಬಳಸುವ ವಿಧಾನ, ಅನುಸರಿಸುವ ಶೈಲಿ, ಅದನ್ನು ಅನುಸಂದಾನ ಮಾಡುವ ಜನ ಮತ್ತು ಸಂಸ್ಥೆಗಳು, ಸಮಾಜದ ಮೇಲಾಗುವ ಪರಿಣಾಮ ಇವೆಲ್ಲವನ್ನು ಕುರಿತ ತಾತ್ವಿಕ ಚಿಂತನೆಯ ಸಾಹಿತ್ಯ ಮೀಮಾಂಸೆಯಾಗಿದೆ. ಅದು ಒಂದು ಭಾಷಿಕ ಸಮುದಾಯವು ಕಾಲಕಾಲಕ್ಕೆ ಪಟ್ಟ ಪಾಡುಗಳ ಮೂಲಕ ಹಾದು ಬಂದ ಕಥನವಾಗಿದೆ.

ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸುವ ಪ್ರಯತ್ನಗಳು ಹಲವು ರೀತಿಯಲ್ಲಿ ಆಗಿವೆ. ಬೇಂದ್ರೇ ಕುರ್ತಕೋಟಿಯವರಲ್ಲಿ ಪಾಶ್ಚಾತ್ಯ ಸಾಹಿತ್ಯ ಚಿಂತನೆಯ ಕುರಿತು ಸಮರ್ಥನೀಯ ನಿರಾಕರಣೆಯಿದೆ. ಆದರೆ ಭಾರತೀಯ ಕಾವ್ಯ ಮೀಮಾಂಸೆಯ ಕುರಿತು ಇಂಥ ನಿರಾಕರಣೆ ಕಾಣುವುದಿಲ್ಲ. ಆದರೆ ಎಂಭತ್ತರ ದಶಕದ ನಂತರದ ಕನ್ನಡ ಸಾಹಿತ್ಯ ಚಿಂತನೆಯಲ್ಲಿ ಕೆ.ವಿ.ನಾರಾಯಣ, ಡಿ.ಆರ್. ನಾಗರಾಜ್, ನಟರಾಜ್ ಬೂದಾಳ್, ರಹಮತ್ ತರೀಕೆರೆಯವರು ಸಂಸ್ಕೃತ ಮತ್ತು ಪಾಶ್ಚಾತ್ಯ ಮೀಮಾಂಸೆಗಳೆರಡು ನಮ್ಮ ಚಿಂತನೆಗಳನ್ನು ಹೇಳಲಾರವು ಎಂಬ ನಿಲುವಿಗೆ ಬರುತ್ತಾರೆ. ಭಾರತೀಯ ಕಾವ್ಯ ಮೀಮಾಂಸೆಯ ಯಜಮಾನಿಕೆಯ ರಸದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾರೆ. ಆನಂದದ ಅನುಸಂಧಾನದ ವೈದಿಕ ಪರಿಕಲ್ಪನೆಯಾದ ರಸಕ್ಕೆ ವಿರುದ್ಧವಾಗಿ ದುಃಖಾನುಸಂಧಾನವನ್ನು ಹೇಳಿಕೊಟ್ಟ ಬೌದ್ಧ ಮೀಮಾಂಸೆಯನ್ನು ಮಂಡಿಸುತ್ತಾರೆ. ಹಾಗೆಯೇ ಏಕರಸದ ಸರಳ ಸ್ಥಿತಿಯ ಚಿಂತನೆಗೆ ರ‍್ಯಾಯವಾಗಿ ಜೈನ ಚಿಂತನೆಯಾದ ಅನೇಕಾಂತವಾದವನ್ನು ಹಾಗೂ ಅರಿವಿನ ಅನುಸಂಧಾನದ ವಚನ ಚಿಂತನೆಯನ್ನು ಮುನ್ನೆಲೆಗೆ ತರುತ್ತಾರೆ.

ಹೀಗೆ ಕನ್ನಡ ಸಾಹಿತ್ಯ ಮೀಮಾಂಸೆಯೆಂಬುದು ಬಹುಮುಖಿ ನೆಲೆಗಳಲ್ಲಿ ಕಟ್ಟಲ್ಪಡುತ್ತಿರುವ ಸಂದರ್ಭದಲ್ಲಿ ಡಾ.ರವಿಕುಮಾರ್ ನೀಹ ಅವರ ‘ದಲಿತ ಸಾಹಿತ್ಯ ಮೀಮಾಂಸೆ’ ಕೃತಿ ಪ್ರಕಟವಾಗಿದೆ. ಈ ಕೃತಿ ಕೆಲವು ಮುಖ್ಯ ಕಾರಣಗಳಿಂದ ಮುಖ್ಯವಾಗಿ ಕಾಣುತ್ತದೆ. ಈ ಕೃತಿಯಲ್ಲಿ ಇರುವ ಸೈದ್ಧಾಂತಿಕ ಸ್ಪಷ್ಟತೆಗಾಗಿ ಮಹತ್ವದ್ದಾಗಿ ಪರಿಗಣಿಸಬೇಕಾಗಿದೆ. ಕನ್ನಡ ಸಾಹಿತ್ಯ ಮೀಮಾಂಸೆಗೆ ಪರ್ಯಾಯವಾಗಿ ದಲಿತ ಸಾಹಿತ್ಯ ಮೀಮಾಂಸೆ ಹುಟ್ಟಿಕೊಂಡಿದೆ ಎಂಬ ನಿಲುವು ಈ ಅಧ್ಯಯನದಲ್ಲಿ ಇಲ್ಲ. ದಲಿತ ಸಾಹಿತ್ಯ ಮೀಮಾಂಸೆಯು ಕನ್ನಡ ಸಾಹಿತ್ಯ ಮೀಮಾಂಸೆಯ ಒಂದು ಭಾಗವೇ ಆಗಿದ್ದೂ, ಅದರ ಒಂದು ವಿಶಿಷ್ಟ ಭಾಗವಾಗಿ ರೂಪುಗೊಂಡಿದೆ ಎಂಬ ನಿಲುವು ಅವರಲ್ಲಿದೆ. ಹಾಗೆಯೆ ದಲಿತರ ಸಾಮಾಜಿಕ ಬದುಕು, ಸೌಲಭ್ಯ, ಕಸುಬು, ಅಭಿವ್ಯಕ್ತಿ, ಆಲೋಚನೆ, ಅನುಭವ, ಬಹುಮುಖತೆ, ಮೂಲಕವೇ ಮೀಮಾಂಸೆಯನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವರದು. ಜೊತೆಗೆ ದಲಿತ ಮೀಮಾಂಸೆಯೆನ್ನುವುದು ಒಂದು ಲೋಕದೃಷ್ಟಿಯಾದ್ದರಿಂದ ಬದುಕಿನ ವಿನ್ಯಾಸಗಳು ಬದಲಾದ ಹಾಗೆ ಲೋಕವನ್ನು ನೋಡುವ ನೋಟಕ್ರಮವು ಬದಲಾಗಬೇಕಾದದ್ದು ಸಹಜ ಹಾಗೂ ಅನಿವಾರ್ಯ ನಂಬಿಕೆ ಇಲ್ಲಿಯದು. ತಳವೂರಿದ ಕುರುಬ ಕಟುಕನಾದ ಎನ್ನುವ ನಿಸಾರರ ಕವನದ ಸಾಲು ಹೇಳುವುದು ಇದನ್ನೇ. ಯಾವುದೇ ಚಿಂತನೆ ಎಲ್ಲ ಕಾಲಕ್ಕೂ ಶಾಶ್ವತ ಮತ್ತು ಸಾರ್ವತ್ರಿಕ ಮತ್ತು ತ್ರಿಕಾಲಾ ಭಾದಿತ ಚಿಂತನೆಗಳನ್ನು ಮಾನ್ಯ ಮಾಡುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ್ದಾಗಿದೆ.

ಡಾ.ರವಿಕುಮಾರ್ ನೀಹ

ದಲಿತ ಸಾಹಿತ್ಯ ಮೀಮಾಂಸೆಯನ್ನು ನಿರೂಪಿಸುವ ಸಂದರ್ಭದಲ್ಲಿ ‘ದಲಿತ’ ಪದ ಪಡೆದ ಹಲವು ಅರ್ಥ ಸ್ವರೂಪವನ್ನು ಗುರುತಿಸುವ ಕೆಲಸವನ್ನು ಕೃತಿ ಮಾಡಿದೆ. ಆರಂಭದಲ್ಲಿದ್ದ ಹಸಿವಿನ ಪ್ರಶ್ನೆ, ಅವಮಾನದ ಪ್ರಶ್ನೆಯನ್ನು ಹಾದು ಈಗ ಅಸ್ಮಿತೆಯ ಸ್ವರೂಪವನ್ನು ಪಡೆದುಕೊಂಡ ಬಗೆಯನ್ನು ವಿಶ್ಲೇಷಿಸಿದೆ. ಹಾಗೆಯೆ ದಲಿತ ಸಾಹಿತ್ಯ ಮೀಮಾಂಸೆಯ ಪರಂಪರೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಆರಂಭವನ್ನು ಡಿ ಆರ್ ನಾಗರಾಜ್ ಅವರ ಪ್ಲೇಮಿಂಗ್ ಪೀಟ್ ಕೃತಿಯ ಮೂಲಕ ಗುರುತಿಸುತ್ತದೆ. ನಂತರದ ಕಾಲಘಟ್ಟದಲ್ಲಿ ದೇವಯ್ಯ ಹರವೆ, ಪ್ರೊ.ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ್, ಬಿ.ಎಂ. ಪುಟ್ಟಯ್ಯನವರು ವಿಸ್ತರಿಸಿದ ಪರಂಪರೆಯನ್ನು ವಿಸ್ತರಿಸಿದೆ. ಆದರೆ ಇಲ್ಲಿ ವಿಶ್ಲೇಷಿಸುವ ಕ್ರಮ ಎಂಭತ್ತರ ದಶಕದ ದಲಿತ ಸಾಹಿತ್ಯಕ್ಕೆ ಸೀಮಿತಗೊಂಡಿರುವುದು ಗಂಭೀರವಾದ ಮಿತಿಯೆನಿಸುತ್ತದೆ. ದಲಿತ ಸಾಹಿತ್ಯ ಆರಂಭವಾಗುವ ಮೊದಲಿನ ಲಿಖಿತ ಮತ್ತು ಮೌಖಿಕ ಪರಂಪರೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರೆ ಕೃತಿಯ ವ್ಯಾಪ್ತಿ ಹೆಚ್ಚುತ್ತಿತ್ತು. ಇಂದಿನ ದಲಿತ ಸಾಹಿತ್ಯ ಸಾಮಾಜಿಕ ಕ್ರೋಧದ ಮಾದರಿಯ ಜೊತೆಗೆ ಆಧ್ಯಾತ್ಮಿಕ ಹುಡುಕಾಟದ ಮಾದರಿಯನ್ನು ಸಹ ತೀವ್ರವಾಗಿ ಅಭಿವ್ಯಕ್ತಿಸುವುದರಿಂದ ಆಧ್ಯಾತ್ಮಿಕ ದಂಗೆಯ ನಾಯಕರಾದ ಮಂಟೇಸ್ವಾಮಿ, ಮಾದಪ್ಪನವರೆಗೆ ಈ ಪರಂಪರೆಯನ್ನು ವಿಸ್ತರಿಸುವ ಸಾಧ್ಯತೆಯಿತ್ತು.

ದಲಿತ ಸಾಹಿತ್ಯ ಮೀಮಾಂಸೆ ಇನ್ನೊಂದು ನೆಲೆಯಲ್ಲಿ ನನಗೆ ಮುಖ್ಯವೆನಿಸುತ್ತದೆ. ಈ ಮೀಮಾಂಸೆ ತನ್ನ ಸ್ವರೂಪದಲ್ಲಿಯೇ ಒಳಗೊಳ್ಳುವಿಕೆಯ ನೆಲೆಯನ್ನು(inclusive) ಒಳಗೊಂಡಿದೆ. ಹಾಗೆಯೇ ಪ್ರಖರ ರಾಜಕೀಯ ಚಿಂತನೆಯನ್ನು ತನ್ನ ಭಿತ್ತಿಯಾಗಿಸಿಕೊಂಡಿದೆ. ವೈಯಕ್ತಿಕವು ರಾಜಕೀಯವೇ ಆಗಿರುವ ಇಂದಿನ ಕಾಲಘಟ್ಟದಲ್ಲಿ ಸ್ಪಷ್ಟ ರಾಜಕೀಯ ಚಿಂತನೆಯನ್ನು ಹೊಂದಿರುವುದು ಅಗತ್ಯವಾಗಿದೆ. ಹಾಗೆಯೆ ದಲಿತ ಚಿಂತನೆಯೊಂದಿಗೆ ಬೆಸೆದುಕೊಂಡಿರುವ ಬೌದ್ಧದರ್ಶನವನ್ನು ಚರ್ಚಿಸುವುದರ ಮೂಲಕ, ಜೊತೆಗೆ ಅಲೆಮಾರಿಗಳು ಲೈಂಗಿಕ ಅಲ್ಪಸಂಖ್ಯಾತರು, ಬಿಕ್ಷುಕರ ಜಗತ್ತುಗಳ ಮೂಲಕ ಅನಾವರಣಗೊಳ್ಳುತ್ತಿರುವ ಕಲಾಲೋಕವನ್ನು ತನ್ನ ವ್ಯಾಪ್ತಿಗೆ ತಂದುಕೊಂಡಿದೆ.

ಡಾ.ಪ್ರಕಾಶ್ ಬಡವನಹಳ್ಳಿ

ಈ ಕೃತಿಯ ಕುಲಕಥನ ಮೀಮಾಂಸೆ ನವೀನ ರೀತಿಯದ್ದಾಗಿದೆ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಚಲಿತವಾಗಿರುವ ಖಂಡಕಾವ್ಯಗಳಿಗಿಂತ ಭಿನ್ನವಾಗಿ ಕುಲಕಥನಗಳನ್ನು ನೋಡಬೇಕೆಂದು ಗಟ್ಟಿಯಾಗಿ ವಾದಿಸುತ್ತದೆ. ಈ ಕಾವ್ಯಗಳು ಸಾಮಾಜಿಕ ಆಕ್ರೋಶದ ಮಾದರಿಗಿಂತ ಭಿನ್ನವಾಗಿ ಸ್ವಾಭಿಮಾನ ಸಮಾನತೆಗಳನ್ನು ತಮ್ಮ ಕುಲಪುರಾಣಗಳಲ್ಲಿ ಹೆಕ್ಕಿ ತೆಗೆಯುವ ಮಾದರಿಯನ್ನು ಪಠ್ಯಗಳ ಮೂಲಕವೇ ವಿಶ್ಲೇಷಿಸುವ ಕ್ರಮ ಮಹತ್ವದ್ದಾಗಿದೆ. ಇಷ್ಟಾಗಿ ನಮ್ಮ ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ ಎಂಬ ಸೂಕ್ಷ್ಮತೆ ಇರುವ ದಲಿತ ಸಾಹಿತ್ಯ ಮೀಮಾಂಸೆ ಮಹತ್ವದ ಕೃತಿಯಾಗಿದೆ.

  • ಡಾ.ಪ್ರಕಾಶ್ ಬಡವನಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...