Homeಮುಖಪುಟಪ್ರಚಂಡ ಕುಳ್ಳನಿಗೆ ಜಯಣ್ಣ ಜೀವಬೆದರಿಕೆ ಹಾಕಿದರಾ!?

ಪ್ರಚಂಡ ಕುಳ್ಳನಿಗೆ ಜಯಣ್ಣ ಜೀವಬೆದರಿಕೆ ಹಾಕಿದರಾ!?

ವಿಷ್ಣು ಜೊತೆ ದ್ವಾರಕೀ ಹಲವಾರು ಸಿನಿಮಾ ಮಾಡಿ ದುಡ್ಡು ಮಾಡಿಕೊಂಡದ್ದಂತೂ ಸತ್ಯ. ತದನಂತರ ಅದೇ ವಿಷ್ಣು ಜೊತೆಗೂ ಹಣಕಾಸಿನ ವಿಚಾರವಾಗಿ ಸ್ನೇಹ ಕೆಡಿಸಿಕೊಂಡದ್ದೂ ಅಷ್ಟೇ ಸತ್ಯ. ಆದರೆ, ದ್ವಾರ್ಕಿ ಆರ್ಥಿಕ ಮುಗ್ಗಟ್ಟಿಗೆ ಬಿದ್ದಾಗ ಕೊನೆಗೆ ಅದೇ ವಿಷ್ಣು `ಆಪ್ತಮಿತ್ರ’ನಾಗಿ ಬಂದು ನೆರವಾಗಬೇಕಾಯ್ತು.

- Advertisement -
- Advertisement -

ಸಿನಿಮಾರಂಗದಲ್ಲಿ ನಡೆಯುತ್ತಿದ್ದ ಸ್ಟಾರ್‍ವಾರ್ ಈಗ ಹೊಸ ರೂಪ ತಳೆದು ನಿರ್ಮಾಪಕರ ವಾರ್ ಆಗಿ ಬದಲಾಗುತ್ತಿದೆ. ಸ್ಯಾಂಡಲ್‍ವುಡ್ ಹಳೆಯ ಬೇರಿನಂತಿದ್ದ ದ್ವಾರಕೀಶ್ ಮತ್ತು ನಿರ್ಮಾಪಕ ಜಯಣ್ಣನ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದ್ದು ಬೆಳಗ್ಗೆ ಒಬ್ಬರು, ಸಂಜೆ ಒಬ್ಬರು ಪ್ರೆಸ್‍ಮೀಟ್ ಮಾಡುತ್ತಾ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿಹೋಗಿದ್ದಾರೆ.

ದ್ವಾರಕೀಶ್ ನಟ, ನಿರ್ದೇಶಕರಷ್ಟೇ ಅಲ್ಲ ನಿರ್ಮಾಪಕರೂ ಹೌದು. ಅಂತೆಯೇ ಜಯಣ್ಣನೂ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ಮಾಪಕ. ಸ್ಯಾಂಡಲ್‍ವುಡ್‍ನ ನಿರ್ಮಾಪಕರು ನೋಡೋಕೆ ತುಂಬಾ ಆತ್ಮೀಯ ಮಿತ್ರರಂತೆ ಇದ್ದರೂ ಒಳಗಿನ ಜಲಸ್‍ಗೇನೂ ಕಡಿಮೆಯಿಲ್ಲ. ಜಯಣ್ಣ ತಮ್ಮ ಮನೆಗೆ ನುಗ್ಗಿ ತನ್ನ ತಂದೆಗೆ ಜೀವಬೆದರಿಕೆ ಹಾಕಿದ್ದಾರೆ ದ್ವಾರ್ಕಿ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಯಣ್ಣನ ಗ್ಯಾಂಗು ನಿಜಕ್ಕೂ ದ್ವಾರಕೀಶ್‍ಗೆ ಜೀವ ತೆಗೆಯುವುದಾಗಿ ಥ್ರೆಟ್ ಮಾಡಿದರಾ? ಎಂದು ಯೋಚಿಸುವುದು ಎಷ್ಟು ಮುಖ್ಯವೋ ಹಣಕಾಸು, ಸ್ನೇಹಸಂಬಂಧಗಳ ವಿಚಾರದಲ್ಲಿ ಕುಳ್ಳನ ಟ್ರ್ಯಾಕ್ ರೆಕಾರ್ಡ್ ಪರಿಶುದ್ಧವಾಗಿದೆಯಾ? ಎಂಬ ಪ್ರಶ್ನೆಯನ್ನೂ ಇಲ್ಲಿ ಕೇಳಿಕೊಳ್ಳಲೇಬೇಕಿದೆ. ಒಂದು ಕಾಲಕ್ಕೆ ಮೇಯರ್ ಮುತ್ತಣ್ಣ ಅನ್ನೋ ಆ ಕಾಲದ ಸೂಪರ್ ಹಿಟ್ ಸಿನಿಮಾ ಮಾಡಿ ರಾಜ್ ಸ್ಟಾರ್‍ವ್ಯಾಲ್ಯೂ ಸೂರೆ ಹೊಡೆದಿದ್ದ ಕುಳ್ಳ, ಆಮೇಲೆ ರಾಜ್-ವಿಷ್ಣು ನಡುವಿನ ಸ್ಟಾರ್‍ವಾರ್ ಅನ್ನೇ ಬಂಡವಾಳ ಮಾಡಿಕೊಂಡು ರಾಜ್‍ಗೆ ಪ್ರತಿಯಾಗಿ ವಿಷ್ಣುವನ್ನು ಕಟೆದು ನಿಲ್ಲಿಸುತ್ತೇನೆ ಅಂತ ಹೊರಟದ್ದು ಹಳೆಯ ಇತಿಹಾಸ. ವಿಷ್ಣು ಜೊತೆ ದ್ವಾರಕೀ ಹಲವಾರು ಸಿನಿಮಾ ಮಾಡಿ ದುಡ್ಡು ಮಾಡಿಕೊಂಡದ್ದಂತೂ ಸತ್ಯ. ತದನಂತರ ಅದೇ ವಿಷ್ಣು ಜೊತೆಗೂ ಹಣಕಾಸಿನ ವಿಚಾರವಾಗಿ ಸ್ನೇಹ ಕೆಡಿಸಿಕೊಂಡ ಪ್ರಚಂಡ ಕುಳ್ಳ, ವಿಷ್ಣುಗೆ ಪ್ರತಿಯಾಗಿ ಹೊಸ ಹೀರೋ ಹುಟ್ಟುಹಾಕುತ್ತೇನೆ ಅಂತ ಶಶಿಕುಮಾರ್‍ರನ್ನು ಹೀರೋ ಆಗಿ ಹಾಕಿಕೊಂಡು `ಹಳೇ ಕುಳ್ಳ ಹೊಸ ಕಳ್ಳ’ ಸಿನಿಮಾ ಮಾಡಿ ಕೈಸುಟ್ಟುಕೊಂಡದ್ದೂ ಉಂಟು. ಒಂದು ಕಾಲಕ್ಕೆ ದುಬಾರಿ ಸಿನಿಮಾಗಳ ಸಾಹಸಿ ನಿರ್ಮಾಪಕ ಅಂತಲೇ ಹೆಸರು ಮಾಡಿದ್ದ ದ್ವಾರ್ಕಿ ಆರ್ಥಿಕ ಮುಗ್ಗಟ್ಟಿಗೆ ಬಿದ್ದಾಗ ಕೊನೆಗೆ ಅದೇ ವಿಷ್ಣು `ಆಪ್ತಮಿತ್ರ’ನಾಗಿ ಬಂದು ನೆರವಾಗಬೇಕಾಯ್ತು. ಆದರೆ ಆ ಸಿನಿಮಾದ ಮೂಲಕ ಕಾಸು ಕಂಡ ದ್ವಾರಕೀಶ್ ಮತ್ತೆ ಹಳೆ ಚಾಳಿಗೆ ಕಟ್ಟುಬಿದ್ದು ಲೇವಾದೇವಿ ವ್ಯವಹಾರದಲ್ಲಿ ವಿಷ್ಣುವಿನಿಂದ ಪುನಾಃ ದೂರಾದರು. ವಿಷ್ಣು ನಿರ್ಗಮಿಸಿದ ನಂತರ ಅದೇ ವಿಷ್ಣು ಹೆಸರಲ್ಲಿ ಸಿನಿಮಾ ಮಾಡಲು ಮುಂದಾಗಿ ಒಂದಷ್ಟು ರಾಡಿ ಮಾಡಿಕೊಂಡದ್ದೂ ಉಂಟು. ತಮ್ಮ ಬ್ಯಾನರ್‍ನಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಬಾಕಿ ಉಳಿಸಿಕೊಂಡು ಸತಾಯಿಸಿದ ಉದಾಹರಣೆಗಳೂ ಇವೆ.

ಆದರೆ ಈಗ ದ್ವಾರಕೀಶ್ ಮತ್ತು ಜಯಣ್ಣರ ನಡುವಿನ ಈ ಬೀದಿ ಕಾಳಗಕ್ಕೆ ಕಾರಣವಾಗಿರೋದು ದ್ವಾರಕೀಶ್ ಮಗ ಯೋಗೀಶ್ ಮಾಡಿಕೊಂಡಿರುವ ಸಾಲ. ಆತ `ಅಮ್ಮಾ ಐ ಲವ್ ಯೂ’ ಸಿನಿಮಾ ಮಾಡಿದಾಗ ಅದರ ಡಿಸ್ಟ್ರಿಬ್ಯೂಷನ್‍ಗಾಗಿ ಜಯಣ್ಣನ ಬಳಿ 80 ಲಕ್ಷ ಸಾಲ ಪಡೆದಿದ್ದರು. ಅಲ್ಲದೆ ಆಯುಶ್‍ಮಾನ್ ಭವ ಸಿನಿಮಾ ಸೆಟ್ಟೇರಿದಾಗಲೂ ಜಯಣ್ಣನ ಬಳಿ 3 ಕೋಟಿ ಹಣ ಪಡೆದಿದ್ದರಂತೆ. ಹೀಗೆ ಬೇರೆಬೇರೆ ಸಮಯದಲ್ಲಿ ಒಟ್ಟು ಆರು ಕೋಟಿ ಸಾಲ ತನ್ನಿಂದ ಯೋಗೀಶ್ ಪಡೆದಿದ್ದಾರೆ ಅನ್ನೋದು ಜಯಣ್ಣನ ಅಂಬೋಣ.

ಆದರೆ ಕೊಟ್ಟ ಸಾಲ ವಾಪಸ್ ಕೇಳಿದಾಗ ತಾನು ತುಂಬಾ ಸಮಸ್ಯೆಯಲ್ಲಿದ್ದು ಜನವರಿ 30ರೊಳಗೆ ಹಣ ಕೊಡುವುದಾಗಿ ಯೋಗೀಶ್ ವಾಯಿದೆ ಪಡೆದುಕೊಂಡಿದ್ದರಂತೆ. ಈ ಮಧ್ಯೆ ಹಲವು ಬಾರಿ ಇದೇ ವಿಚಾರ ತನ್ನ ಹಾಗೂ ಯೋಗೀಶ್ ಸ್ನೇಹಿತರ ನಡುವೆ ಹಲವು ಬಾರಿ ಮೀಟಿಂಗ್ ನಡೆದು ಒಂದಷ್ಟು ಹಣವನ್ನೂ ಕೈಬಿಟ್ಟಿದ್ದೇನೆ ಎಂದು ಜಯಣ್ಣ ಹೇಳುತ್ತಿದ್ದಾರೆ.

ಜನವರಿ 30ರೊಳಗೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ ಯೋಗೀಶ್ ಜನವರಿ 27ರಂದೇ ಜಯಣ್ಣ ಫೋನ್ ನಂಬರನ್ನು ಬ್ಲಾಕ್ ಮಾಡಿದ್ದರಂತೆ. ಫೋನ್ ಕರೆಗೆ ಯೋಗೀಶ್ ಸಿಗದಿದ್ದಾಗ ಮನೆಗೇ ಹೋಗಿ ಹಣ ಕೇಳೋ ಪ್ರಯತ್ನಕ್ಕೆ ಜಯಣ್ಣನ ಗ್ಯಾಂಗು ಮುಂದಾಗಿತ್ತು. ಅವಾಗಲೂ ದ್ವಾರಕೀಶ್ ಸಮಸ್ಯೆಯಲ್ಲಿದ್ದೇವೆ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ. ಆದರೆ, ಫೋನ್‍ಗೆ ಸಿಗದ ದ್ವಾರಕೀ ಮಗನ ಅವಾಂತರಕ್ಕೆ ಬೇಸತ್ತಿದ್ದ ಜಯಣ್ಣ ಇದಕ್ಕೆ ಒಪ್ಪಿಲ್ಲ. ಈ ಸಂದರ್ಭದಲ್ಲಿ ಫೈನಾನ್ಶಿಯರ್ ರಮೇಶ್ ಏರುಧ್ವನಿಯಲ್ಲಿ ಕೂಗಾಡಿದ್ದಾರೆ.

ಅಲ್ಲದೆ, ಐ ಲವ್ ಯೂ ಸಿನಿಮಾ ಮಾಡುವಾಗ ಯೋಗೀಶ್ ನಿರ್ಮಾಪಕ ಮನೋಹರ್ ಬಳಿ 50 ಲಕ್ಷ ಪಡೆದಿದ್ದು, ಅದನ್ನೂ ಇನ್ನೂ ತೀರಿಸಿಲ್ಲ. ಅದಷ್ಟೇ ಅಲ್ಲದೆ, ಆಯುಷ್‍ಮಾನ್ ಭವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾರಾಮ್ ಅವರಿಗೂ ಇನ್ನೂ 75% ಸಂಭಾವನೆ ಕೊಟ್ಟೇ ಇಲ್ಲ, ಶಿವರಾಜ್‍ಕುಮಾರ್‍ಗೂ ಕೂಡ ಪೂರ್ತಿ ಸಂಭಾವನೆ ನೀಡಿಲ್ಲ, ಅದೇ ಸಿನಿಮಾದ ಸ್ಟಂಟ್ ಮಾಡಿದ್ದ ರವಿವರ್ಮ ಹಾಗೂ ಕೊರಿಯೋಗ್ರಫಿ ಮಾಡಿದ್ದ ಹರ್ಷ ಅವರಿಗೂ ಇನ್ನೂ ಪೇಮೆಂಟ್ ಮಾಡಿಲ್ಲ. ಇದಲ್ಲದೆ 11 ಕೋಟಿ ಬಜೆಟ್‍ನ ಸಿನಿಮಾಕ್ಕೆ 20 ಕೋಟಿ ಖರ್ಚು ತೋರಿಸಿದ್ದೀರಿ ಅಂತ ಅವರೆಲ್ಲ ರೇಗಾಡಿದ್ದಾರೆ.

ಈ ರೇಗಾಟ ಕೂಗಾಟದಲ್ಲಿ ನಿಜಕ್ಕೂ ದ್ವಾರ್ಕಿಗೆ ಜಯಣ್ಣನ ಗ್ಯಾಂಗಿನಿಂದ ಜೀವಬೆದರಿಕೆ ಹೊರಬಂತಾ? ನಿಜಕ್ಕೂ ದ್ವಾರ್ಕಿಯನ್ನು ಕೊಲ್ಲುವ ಇರಾದೆ ಜಯಣ್ಣನ ಗ್ಯಾಂಗಿದೆಯಾ? ಕೊಂದರೆ ಅವರ ದುಡ್ಡು ವಾಪಾಸ್ಸು ಬರುತ್ತಾ? ಈ ಪ್ರಶ್ನೆಗೆ ಉತ್ತರ ಸುಲಭಕ್ಕೆ ಗೊತ್ತಾಗುವಂತದ್ದಲ್ಲ. ಆದರೆ ದ್ವಾರಕೀಶ್ ಸದ್ಯಕ್ಕೆ ಆರ್ಥಿಕ ಮುಗ್ಗಟ್ಟಿನಲ್ಲಿರುವುದಂತೂ ಸತ್ಯ. ವರ್ತನೆಗಳು ಎಂತದ್ದೇ ಇರಲಿ, ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿದ ನಟ ಕಂ ನಿರ್ದೇಶಕ ಕಂ ನಿರ್ಮಾಪಕನಾದ ಹಿರಿವಯಸ್ಸಿನ ದ್ವಾರಕೀಶ್‍ಗೆ ಒಂದೊಮ್ಮೆ ನಿಜಕ್ಕೂ ಜೀವಬೆದರಿಕೆ ಹಾಕಿದ್ದರೆ ಅದು ಖಂಡಿತ ತಪ್ಪು. ಆದರೆ ಕುಳ್ಳನ ಹಳೇ ವರಸೆಗಳು ಒಂದು ಕ್ಷಣ ಈ ಆರೋಪವನ್ನು ಅನುಮಾನಿಸುವಂತೆ ಮಾಡುತ್ತಿರುವುದೂ ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...