Homeಮುಖಪುಟಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ...!!

ಸಾವುಗಳು ಆಗುವುದು ಸಾಂಕ್ರಮಿಕ ವೈರಸಿನಿಂದ ಮಾತ್ರವಲ್ಲ…!!

- Advertisement -
- Advertisement -

ಆಧುನಿಕತೆ ಕೊಡುಗೆ ನೀಡಿದ ಮಾನವ ನಿರ್ಮಿತವಾದ ಸಕಲ ಸನ್ನಾಹಗಳನ್ನೂ ಪರಾಭವಗೊಳಿಸಿ, ಸೂಕ್ಷ್ಮ ವೈರಸೊಂದು ಮಾಡುತ್ತಿರುವ ಆಕ್ರಮಣವು, ನ್ಯೂಯಾರ್ಕ್, ಪ್ಯಾರಿಸ್, ರೋಮ್, ನವದೆಹಲಿ, ಬೀಜಿಂಗ್, ಮಾಸ್ಕೋ, ರಿಯಾದ್, ಟೆಲ್‌ಅವೀವ್, ಕೈರೋದಂತಹ ಮಹಾನಗರಗಳಲ್ಲಿನ ‘ಬೆರಳತುದಿಯಲ್ಲಿ ಜಗತ್ತು ನಿಯಂತ್ರಿಸಲ್ಪಡುತ್ತಿದೆ’ ಎಂದು ಬೀಗುತ್ತಿದ್ದ ಆಡಳಿತಾರೂಢರನ್ನು ಅಸ್ವಸ್ಥರನ್ನಾಗಿಸಿದೆ. ನಿರೀಕ್ಷಣಾ ಕ್ಯಾಮರಾಗಳು ಮತ್ತು ರಹಸ್ಯ ಆಪ್‌ಗಳು ಜೊತೆಗೆ ಬಹುಸಂಖ್ಯಾತ ರಹಸ್ಯ ಪಡೆಗಳು ಇದ್ದರೆ, ಯಾವ ರಾಷ್ಟ್ರ ಬೇಕಾದರೂ ಸುರಕ್ಷಿತ ಹಾಗೂ ಶಾಂತವಾಗಿರುತ್ತದೆ ಎಂಬ ಧೋರಣೆಯನ್ನು ತಿದ್ದಬೇಕಾಯಿತು. ಈ ತಪ್ಪು ಕಲ್ಪನೆಯನ್ನು ಬಲವಂತವಾಗಿ ಹೇರಿದ ಕಾರಣದಿಂದಾಗಿದೆ ಹೆಚ್ಚಿನ ರಾಷ್ಟ್ರಗಳು ಜನಾರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದುವುಗಳಿಗೆ ಖರ್ಚು ಮಾಡುವ ಹತ್ತು ಪಟ್ಟು ಹಣವನ್ನು ರಾಷ್ಟ್ರ ರಕ್ಷಣೆಗೆ ಮೀಸಲಿಡೋದು. ಆದರೆ, ಇದರಿಂದೇನೂ ಯಾವ ರಾಷ್ಟ್ರವೂ ಸುರಕ್ಷಿತವಾಗಿರಬೇಕೆಂದಿಲ್ಲ ಎಂಬುದನ್ನು ನೆನಪಿಸುವಂತಿದೆ ಈ ಸಣ್ಣ ವೈರಾಣು.

ಯುದ್ಧದ ದಿನಗಳಲ್ಲಿ ಜೀವಿಸುವ ಆಸೆಯಿಂದ ಅಟ್ಟಹಾಸಗೈದು ಪ್ರಾಣ ಕೈಯಲ್ಲಿ ಹಿಡಿದು ಓಡುತ್ತಿರುವಾಗ, ದೇಶ ರಾಷ್ಟ್ರಗಳ ಗಡಿಯಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಸಿರಿಯಾ ಹಾಗೂ ಇರಾಕ್‌ನ ಪುಟ್ಟ ಕಂದಮ್ಮಗಳು, ರಕ್ಷಣಾ ಬೋಟ್‌ನಲ್ಲಿ ದಡ ತಲುಪಲಾಗದೆ ಅತ್ತು ಗೋಗರೆಯುತ್ತಿದ್ದ ಮ್ಯಾನ್ಮಾರಿನ ರೋಹೀಂಗ್ಯಾ ಜನತೆ ಇದನ್ನು ಕಾಣುವಾಗ ಕಣ್ಣಗಲಿಸಿ ನೋಡುತ್ತಿರಬಹುದು. ಹಸಿದು ಬಳಲಿದ ಮುಖದೊಂದಿಗೆ ಗಡಿದಾಟಿ ತಲುಪಿದ ತಮ್ಮನ್ನು ತಳ್ಳಿ ದೂರ ಮಾಡುತ್ತಿದ್ದಾಗ, ಅದನ್ನು ಕಂಡು ನೋವು ಅರಗಿಸಿಕೊಳ್ಳಲಾಗದೆ, ಎದೆಯೊಡೆದು ಪ್ರಾಣ ಕಳಕೊಂಡವರಿದ್ದಾರೆ, ಕಡಲಗರ್ಭದ ಆಳದಲ್ಲಿ ಮುಳುಗಿ ಸಾವು ಕಂಡವರಿದ್ದಾರೆ, ಸಮುದ್ರ ತೀರದೆಡೆಗೆ ಎಸೆಯಲ್ಪಟ್ಟ ಅದೆಷ್ಟೋ ‘ಐಲನ್ ಕುರ್ದಿ’ಗಳಿದ್ದಾರೆ ಅವರಲ್ಲಿ.

ಪ್ರಪಂಚದಲ್ಲಿ ಅತಿ ಹೆಚ್ಚು ವಲಸಿಗರನ್ನು ಹೊಂದಿರುವ ರಾಷ್ಟ್ರಗಳ ಸಂಖ್ಯೆಗಳು ಅಚ್ಚರಿಗೊಳಿಸುವಂತದ್ದು. ಅತಿ ಹೆಚ್ಚು ವಲಸಿಗರನ್ನು ಬರಮಾಡಿಕೊಂಡ ದೇಶಗಳ ಪಟ್ಟಿಯಲ್ಲಿ ಟರ್ಕಿ, ಪಾಕಿಸ್ತಾನ, ಉಗಾಂಡ, ಸುಡಾನ್, ಜರ್ಮನಿ ಹೀಗಿದೆ. ವಲಸಿಗರಿಂದ ಉಂಟಾಗುವ ಸಾಮಾಜಿಕ, ಆರ್ಥಿಕ ಪ್ರತ್ಯಾಘಾತಗಳ ಕುರಿತು ಆಕ್ರೋಶಗಳು ಮತ್ತು ಅವರನ್ನು ಹೊರಗಟ್ಟಬೇಕೆನ್ನುವ ಕೂಗು ಅತ್ಯಂತ ಮನುಷ್ಯತ್ವ ವಿರುದ್ಧವಾಗಿ ಮೊಳಗುತ್ತಿದ್ದುದು ಶ್ರೀಮಂತ ಐರೋಪ್ಯ ರಾಷ್ಟ್ರಗಳಿಂದಲೂ, ಅಮೇರಿಕದಿಂದಲೂ ಆಗಿತ್ತು. ನಿರಾಶ್ರಿತರೊಂದಿಗೆ ತೋರುವ ಅದೇ ಸಾಮೀಪ್ಯವಾಗಿದೆ, ವಲಸಿಗರಾದ ಪೌರತ್ವ ಲಭಿಸಿದವರೊಂದಿಗೂ ಕೆಲವು ದೇಶಗಳು ತೋರುತ್ತಿರುವುದು. ವಲಸಿಗರ ಸಂಖ್ಯೆ 272 ದಶಲಕ್ಷಕ್ಕೇರಿದೆ ಎಂದಾಗಿತ್ತು 2019 ರಲ್ಲಿ ಯು.ಎನ್ ಡಿಪಾರ್ಟ್ಮೆಂಟ್ ಆಫ್ ಇಕನಾಮಿಕ್ಸ್ ಆಂಡ್ ಸೋಶಿಯಲ್ ಅಫೆರ‍್ಸ್ ಹೇಳಿರುವುದು. ಇದರಲ್ಲಿ 2010-19 ರ ಕಾಲಘಟ್ಟದಲ್ಲಿ 51 ದಶಲಕ್ಷ ಏರಿಕೆಯಾಗಿದೆ. ಒಂದು ಕಾಲದಲ್ಲಿ ಉದ್ಯೋಗ ಸಾಮರ್ಥ್ಯದ ಅಭಾವವನ್ನು ಎದುರಿಸಿದ ಹಲವು ಯುರೋಪ್ಯನ್ ಶ್ರೀಮಂತ ರಾಷ್ಟ್ರಗಳಿಗೂ ಅನುಗ್ರಹವೇ ಆಗಿತ್ತು ಈ ವಲಸೆ.

ಆದರೆ, ಇಂದು ಸ್ಥಿತಿ ಬದಲಾಗಿದೆ. ಸಂಕುಚಿತ ಮನಸ್ಥಿತಿಯ ರಾಷ್ಟ್ರೀಯವಾದಿಗಳು ವಲಸೆ ವಿರುದ್ಧ ಧ್ವನಿಯೆತ್ತಿ ಅಧಿಕಾರವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮೇರಿಕದ ಅಧ್ಯಕ್ಷ ಟ್ರಂಪ್‌ರ ವಿಜಯವೂ ಕೂಡಾ ವಲಸೆ ವಿರುದ್ಧ ಪ್ರಚಾರ ಮಾಡಿದ್ದರಿಂದಲೇ ಆಗಿತ್ತು. ಪೌರತ್ವ ಸಿಕ್ಕಿದ ನಂತರವೂ ಕೂಡಾ, ನಿರ್ಲಕ್ಷ್ಯ, ಅಕ್ರಮ, ಅಪಹಾಸ್ಯಕ್ಕೀಡಾಗುವುದೆಲ್ಲವೂ ನಡೆಯುತ್ತಲೇ ಇದೆ. ವಿಶೇಷವಾಗಿ, ಚರ್ಮದ ಬಣ್ಣ ಬದಲಾದಂತೆಯೇ ಅದು ನಡೆಯುತ್ತದೆ. ಆ ಅನುಭವವೇ ಆಗಿತ್ತು ಬೆಲ್ಜಿಯಂ ಕ್ರೀಡಾಪಟು ಲೂಕಾಕುವನ್ನು ‘ವಿಜೇತನಾದರೆ ರಾಷ್ಟ್ರಿಯ ತಾರೆಯಾಗಿ ಸಂಭ್ರಮಿಸುತ್ತಾರೆ, ಪರಾಭವಗೊಂಡರೆ ತಾನೋರ್ವ ವಲಸಿಗನೆಂಬ ಪಟ್ಟ ಕಟ್ಟಿ ಆಕ್ಷೇಪಿಸುತ್ತಾರೆ’ ಎಂಬ ರೀತಿಯನ್ನು 2018 ರ ವಿಶ್ವಕಪ್ ಫುಟ್ಬಾಲ್ ಪಂದ್ಯದ ನಡುವೆ ಹೇಳುವಂತೆ ಮಾಡಿರುವುದು.

ವೈರಸ್‌ಗಿಂತ ಮಾರಕ ರೂಪದಲ್ಲಿ ಮಾನವಕುಲವನ್ನು ಆಕ್ರಮಿಸುವವರಾಗಿದ್ದಾರೆ ಸಂಕುಚಿತ ರಾಷ್ಟ್ರಿಯತೆ ಹಾಗೂ ವಂಶೀಯತೆಯ ವಿಷಬೀಜಗಳನ್ನು ಬಿತ್ತುವ ಅಮೇರಿಕ ಮತ್ತು ಯುರೋಪಿನ ಬಲಪಂಥೀಯ ಆಡಳಿತ ಪಕ್ಷಗಳು. ಬಂಗಾಳದಿಂದ ವಲಸೆ ಬಂದ ‘ಅಕ್ರಮ ವಲಸಿಗರು’ ಎಂಬ ಮಹಾಸುಳ್ಳು ಪ್ರಚಾರ ಮಾಡುವ ಮೂಲಕ ಅಸ್ಸಾಂನಲ್ಲಿ ದಶಕಗಳಿಂದ ವಾಸ ಮಾಡುತ್ತಿದ್ದವರನ್ನು ಹೊರಗಟ್ಟಲು ಭಾರತ ಶ್ರಮಿಸುತ್ತಿರೋದು ನಮಗೆ ಗೊತ್ತಿರುವ ವಿಚಾರ. ದೇಶವ್ಯಾಪಿಯಾಗಿ ಈ ರೀತಿಯ ಅಕ್ರಮ ವಲಸಿಗರಿದ್ದಾರೆ ಎಂಬ ಸುಳ್ಳನ್ನು ಆಧಾರವಾಗಿ ಇಟ್ಟುಕೊಂಡು ಅವರನ್ನು ದೇಶದಿಂದ ಹೊರದಬ್ಬುವ ಉದ್ದೇಶದಿಂದಲೇ ಸಂಘಪರಿವಾರದ ಫ್ಯಾಸಿಸ್ಟರು ‘ರಾಷ್ಟ್ರೀಯ ಪೌರತ್ವ ನೋಂದಣಿ’ ಜಾರಿಗೊಳಿಸಲು ಮುಂದೆ ಬಂದಿರೋದು. ಭಾರತದಲ್ಲಿ ಕೆಲವು ದಿನಗಳ ಹಿಂದೆ ಪೌರತ್ವ ನಿಷೇಧ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಮಾತ್ರವಾಗಿ ಕೊಲ್ಲಲ್ಪಟ್ಟದ್ದು ನೂರಕ್ಕೂ ಹೆಚ್ಚು ಜನರು.

ಫೆಲೆಸ್ತೀನ್‌ನಲ್ಲಿ ಆ ಮಣ್ಣಿನ ನಿಜವಾದ ಹಕ್ಕುದಾರರನ್ನು ಗೋಡೆ ಹಾಗೂ ತಂತಿ ಬೇಲಿಯ ನಡುವೆ ಸಿಲುಕಿಸಿ ಗುಂಪು ಹತ್ಯೆ ನಡೆಸುತ್ತಿದೆ ಇಸ್ರೇಲ್. ಹೊರ ಜಗತ್ತಿನೊಂದಿಗೆ ಸಂಬಂಧಗಳನ್ನು ಕಳೆದುಕೊಂಡಿರುವ ಗಾಝಾ, ಈ ಶತಮಾನ ಕಂಡ ಭೀತಿ ಜನಕ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನರಮೇಧದ ಪ್ರತೀಕವಾಗಿದೆ. ಫೆಲೆಸ್ತೀನ್ ಅನ್ನು ಅನ್ಯಾಯವಾಗಿ ವಶಪಡಿಸಿದ ನಂತರ ಸಯನಿಸ್ಟ್ಗಳು ಕೊಂದು ಹಾಕಿದ ಅರಬಿಗಳ ಸಂಖ್ಯೆ 11 ದಶಲಕ್ಷಗಳಿಗಿಂತ ಹೆಚ್ಚು. ನಿರಾಶ್ರಿತರಾಗಿ ಪ್ರಪಂಚದ ವಿವಿಧೆಡೆಗಳಲ್ಲಿ ವಾಸಿಸುವವರು ಆರು ದಶಲಕ್ಷಗಳಿಗಿಂತ ಹೆಚ್ಚು. ಇದರಲ್ಲಿ ಒಂದುವರೆ ಲಕ್ಷ ಜನರು ದಶಕಗಳ ನಂತರ ಈಗಲೂ ನಿರಾಶ್ರಿತರ ಕ್ಯಾಂಪ್‌ಗಳಲ್ಲಿದ್ದಾರೆ. ರಾಖೈನ್ ಪ್ರಾಂತ್ಯಗಳಿಂದ 2015 ರ ನಂತರ ಮಾತ್ರ 9 ಲಕ್ಷ ಜನರನ್ನಾಗಿದೆ ಮ್ಯಾನ್ಮಾರಿನ ಆಡಳಿತ ಹೊರ ಹಾಕಿರೋದು. ಸಿಕ್ಯಂಗ್ ಪ್ರಾಂತ್ಯದ ಉಯಿಗುರ್ ವಂಶಜರ ಮೇಲೆ ಚೀನಾ ನಡೆಸುತ್ತಿರುವ ಅತಿ ಕ್ರೂರವಾದ ವಂಶ ಹತ್ಯೆ ಮತ್ತು ಸಾಂಸ್ಕೃತಿಕ ಉನ್ಮೂಲನಾ ವಿಧಾನಗಳು ಅತ್ಯಂತ ನೀಚವೂ, ಮೃಗೀಯತೆಯಿಂದ ಕೂಡಿದ್ದಾಗಿದೆ. ಪ್ರತಿ ವರ್ಷವೂ ಅಮೇರಿಕ ಪಶ್ಚಿಮ ಏಷ್ಯಾದಲ್ಲೂ, ಅಫ್ಗಾನಿಸ್ತಾನದಲ್ಲೂ ಮಾತ್ರ ನಡೆಸುವ ಬಾಂಬ್ ದಾಳಿಯಿಂದಾಗಿ, ವರ್ಷದಲ್ಲಿ ಕೊಲ್ಲಲ್ಪಡುತ್ತಿರುವ ನಾಗರೀಕರು ಸಾವಿರಾರು.

ಯುನಿಸೆಫ್ ನ ಅಂಕಿಅಂಶಗಳ ಪ್ರಕಾರ ಪೌಷ್ಟಿಕಾಹಾರ ಕೊರತೆಯಿಂದಾಗಿ ಪ್ರತಿ ದಿನವೂ ಸಾವಿಗೆ ತುತ್ತಾಗುತ್ತಿರುವವರು 22 ಸಾವಿರ ಮಕ್ಕಳಾಗಿದ್ದಾರೆ. ಶುದ್ಧ ನೀರು ಮತ್ತು ಸಮರ್ಥ ರೀತಿಯ ಶುಚಿತ್ವ ಸೌಕರ್ಯಗಳಿಲ್ಲದ ಕಾರಣ ಅತಿಸಾರದಂತಹ ರೋಗ ಬಾಧಿತರಾಗಿ 8,42000 ಜನರು ಪ್ರತಿವರ್ಷ ಅಸುನೀಗುತ್ತಿದ್ದಾರೆ. ಅಂದರೆ, ಪ್ರತಿ ದಿನಕ್ಕೆ 2300 ಜನರು. ಹಸಿವು ಕಾರಣ ಸಾಯುತ್ತಿರುವವರ ಸಂಖ್ಯೆ ಒಂದುವರೆ ಬಿಲಿಯನ್ ಎಂದು ಅಂದಾಜಿಸಲಾಗಿದೆ.

ಕೊವಿಡ್‌ 19 ರ ವಿರುದ್ಧ ಇಂದು ಗೋಳಿಡುತ್ತಿರುವ ಆಡಳಿತ ವರ್ಗದಲ್ಲಿರುವ ಹಲವರು, ಅಸಂತುಲಿತ ಆರ್ಥಿಕ ಕ್ರಮ ಹಾಗೂ ಶೋಷಣೆಯನ್ನು ಬಲವಂತವಾಗಿ ಹೇರಿ ಈ ಜನರ ಹಕ್ಕುಗಳನ್ನು ಕಸಿದುಕೊಂಡವರೇ ಆಗಿದ್ದಾರೆ. ಸಾಮೂಹಿಕ ಹತ್ಯೆಗೆ ಬೇಕಾಗುವ ಆಯುಧಗಳನ್ನು ತಯಾರಿಸಿ, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಲು ತತ್ವ ದೀಕ್ಷೆಯಿಲ್ಲದ ಕೋಟಿಗಟ್ಟಲೆ ಹಣವನ್ನು ಖರ್ಚುಮಾಡುವುದೂ ಕೂಡಾ ಇದೇ ರಾಷ್ಟ್ರಗಳೇ ಆಗಿವೆ.

ಏಕಪಕ್ಷೀಯವಾದ ಪ್ರತಿರೋಧದ ಕಾರಣದಿಂದಾಗಿ ಕುಸಿದು ಬಿದ್ದ ರಾಷ್ಟ್ರಗಳಲ್ಲಿ ಕಂದಮ್ಮಗಳು ಹಸಿವಿನಿಂದ ಸಾವಿನ ದವಡೆಗೆ ನೂಕಲ್ಪಡುತ್ತಿರುವಾಗ, ಪ್ರತಿರೋಧಗಳನ್ನು ಜಯಿಸಿದೆವು ಎಂದವರು ಅಹಂಕರಿಸುವುದುಂಟು. ಕೊವಿಡ್-19 ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲೂ, ಪ್ರತಿರೋಧದಿಂದಾಗಿ ಕುಸಿದು ಬಿದ್ದ ಇರಾನ್ ಜನತೆಯನ್ನು ರಕ್ಷಿಸುವುದಕ್ಕಾಗಿಯೋ, ಗಾಝಾದ ಜನತೆಗೆ ಆಶ್ವಾಸನೆಯನ್ನು ನೀಡಲೆಂದೋ ಯಾರೂ ಮುಂದೆ ಬಂದಿಲ್ಲ. ಚೀನಾದ ನಂತರ ಮರುಕ್ಷಣ ಅತಿಭಯಾನಕ ರೀತಿಯಲ್ಲಿ ಕೊವಿಡ್-19 ಇರಾನಿಗೆ ವ್ಯಾಪಿಸಿದಾಗ ಹೊಸ ಪ್ರತಿರೋಧ ವ್ಯವಸ್ಥೆಗಳನ್ನು ಬಲವಂತವಾಗಿ ಹೇರಿ, ಯಾತನೆ ಅನುಭವಿಸುತ್ತಿರುವ ಜನರನ್ನು ಮತ್ತೊಮ್ಮೆ ದೌರ್ಜನ್ಯವೆಸಗಲೆಂದೇ ಅಮೇರಿಕ ಮುಂದೆ ಬಂದಿದ್ದು. ನಿರಂತರ ನರಹತ್ಯೆಗೆ ನೇತೃತ್ವವನ್ನು ನೀಡುವ ವಂಶೀಯವಾದಿ ಆಡಳಿತಕಾರರೆಲ್ಲರೂ, ಮನುಷ್ಯ ಜೀವಗಳನ್ನು ನೆನೆಯುತ್ತಾ ಇದೀಗ ತುರ್ತಾಗಿ ಎದ್ದು ನಿಂತಿರೋದು ಕೊವಿಡ್-19 ಮರಣವು ಭೂಮಿಯಲ್ಲಿ ಅವಗಣಿಸಲ್ಪಟ್ಟವರನ್ನು ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಭೇದವಿಲ್ಲದೆ ಸಕಲರನ್ನೂ ನುಂಗಿ ಹಾಕುತ್ತಿರುವುದರಿಂದಲೇ ಆಗಿದೆ. ಆಗ ಮಾತ್ರ ಉಂಟಾಗುವ ಈ ಅನಿಯಂತ್ರಿತ ಎದೆಗುದಿ ಇದೆಯಲ್ಲಾ, ಅದಾಗಿದೆ ಮರಣಕ್ಕಿಂತಲೂ ಭೀಕರವಾದುದು.

ಅಂಕಿ-ಅಂಶಗಳಿಗೆ ಆಧಾರ: www.who.in, www.dw.com, www.un.org,www.dosomething.org

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...