Homeಮುಖಪುಟಊರ್ಜಿತ್ ಪಟೇಲ್ ರಾಜೀನಾಮೆ ಕೊನೆಯಿಲ್ಲದ ಸರಮಾಲೆಯ ಮತ್ತೊಂದು ದುರಂತ

ಊರ್ಜಿತ್ ಪಟೇಲ್ ರಾಜೀನಾಮೆ ಕೊನೆಯಿಲ್ಲದ ಸರಮಾಲೆಯ ಮತ್ತೊಂದು ದುರಂತ

- Advertisement -
- Advertisement -

 ಬಿ. ಶ್ರೀಪಾದ ಭಟ್ |

ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜಿನಾಮೆ ಸಲ್ಲಿಸಿದ್ದಾರೆ. ಬಹುದಿನಗಳಿಂದ ಚರ್ಚೆಯಲ್ಲಿದ್ದ ಈ ಪ್ರಹಸನ ಕೊನೆಗೂ ಅಂತ್ಯ ಕಂಡಿದೆ. ಈ ರಾಜಿನಾಮೆ ಎನ್ನುವ ಕಣ್ಣಾಮುಚ್ಚಾಲೆ ಆಟಕ್ಕೆ ಕೇವಲ ಒಂದು ಆಡಳಿತಾತ್ಮಕ ಸಮಸ್ಯೆ, ಹಣಕಾಸಿನ ನಿರ್ವಹಣೆಯ ತೊಡಕು ಮಾತ್ರ ಕಾರಣವಲ್ಲ. ಅದನ್ನು ಮೀರಿದ ಅಥವ ಅದನ್ನು ಒಳಗೊಂಡಂತೆ ಒಂದು ನಿರಂಕುಶ ಪ್ರಬುತ್ವದ ದೌರ್ಜನ್ಯ, ಹಸ್ತಕ್ಷೇಪ ಮತ್ತು ದುರಾಡಳಿತದಂತಹ ಬಹುಮುಖ್ಯ ಕಾರಣಗಳಿವೆ. ಸೆಪ್ಟೆಂಬರ್ 2019ರಲ್ಲಿ ಊರ್ಜಿತ್ ಪಟೇಲ್ ನಿವೃತ್ತಿ ಹೊಂದುತ್ತಿದ್ದರು. ಆದರೆ ಒಂಬತ್ತು ತಿಂಗಳ ಮುಂಚೆ ನಿರ್ಗಮಿಸಿದ್ದಾರೆ. ಇವರ ಈ ರಾಜಿನಾಮೆಗೆ ಅನೇಕ ಹಿನ್ನೆಲೆಗಳಿವೆ. ಮೋದಿ ಸರಕಾರದ ಸರ್ವಾದಿಕಾರಿ ವರ್ತನೆ ಮತ್ತು ಒತ್ತಡ ತಂತ್ರಗಳು ಮುಖ್ಯ ಕಾರಣಗಳಲ್ಲೊಂದು. ಜೊತೆಗೆ ಪಟೇಲ್‍ರ ಸ್ವಯಂಕೃತ ಅಪರಾದಗಳು ಪರೋಕ್ಷವಾಗಿ ಕಾರಣಗಳಾದರೆ ಅವರ ಕೆಳಗಿನ ಶ್ರೇಣಿಯ ಅದಿಕಾರಿಯ ದಿಟ್ಟ ಮಾತುಗಳು ನೇರವಾದ ಕಾರಣವಾಗಿದೆ. ಜೊತೆಗೆ ಮೋದಿ-ಆರೆಸ್ಸಸ್ ಸರಕಾರ ಒಂದು ಮುಳುಗುತ್ತಿರುವ ಹಡುಗು ಎನ್ನುವ ವಾಸ್ತವವೂ ಈ ರೀತಿಯ ಜೀವರಕ್ಷಣೆಯ ನೆಗೆತಕ್ಕೆ ಕಾರಣ

ಹಿನ್ನೆಲೆಗಳು
ಮೊದಲನೆಯದಾಗಿ ಆಗಸ್ಟ್ 6, 2018ರಂದು ಮೋದಿ ಸರಕಾರವು ಬಲಪಂಥೀಯ ಚಿಂತಕ, ಆರೆಸ್ಸಸ್‍ನ ಸಮರ್ಥಕ ಮಾಜಿ ಸಿಎ ಎಸ್. ಗುರುಮೂರ್ತಿಯವರನ್ನು ಆರ್‍ಬಿಐನ ಕೇಂದ್ರ ಮಂಡಳಿಗೆ ಅರೆಕಾಲಿಕ, ಲಾಬರಹಿತ ನಿರ್ದೇಶಕನಾಗಿ ನೇವiಕಾತಿ ಮಾಡಿತು. ಇದು ಮುಂದಿನ ದಿನಗಳಲ್ಲಿ ಆರ್‍ಬಿಐನ ಸ್ವಾಯತ್ತತೆಯನ್ನ ಆರೆಸ್ಸಸ್‍ನ ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇಟ್ಟ ಆರಂಬದ ಹೆಜ್ಜೆಯಾಗಿತ್ತು. ನೇಮಕಗೊಂಡ ದಿನದಿಂದಲೆ ಪೂರ್ವನಿರ್ದಾರದಂತೆ ಈ ಗುರುಮೂರ್ತಿ ಆರ್‍ಬಿಐ ಆಡಳಿತ ಮಂಡಳಿ ವಿರುದ್ದ ಹೇಳಿಕೆ ಕೊಡತೊಡಗಿದರು.
ಎರಡನೆಯದಾಗಿ ಆರ್‍ಬಿಐ ತನ್ನ 11 ಸಾರ್ವಜನಿಕ ಬ್ಯಾಂಕುಗಳ ಮೇಲೆ ‘ಸಕಾಲಿಕ ತಿದ್ದುಪಡಿ ಕ್ರಮ’ (prompt corrective action (PCA)ಯ ಮೂಲಕ ಹೊಂದಿದ್ದ ಹಿಡಿತವನ್ನು ಸಡಿಲಿಸಬೇಕೆಂದು ಕೇಂದ್ರ ಸರಕಾರವು ಒತ್ತಾಯಿಸುತ್ತಿತ್ತು. ಇದು ಅಬಿವೃದ್ದಿಯನ್ನು ಕುಂಠಿತಗೊಳಿಸುತ್ತದೆ ಎಂದು ಅಸಮದಾನ ವ್ಯಕ್ತಪಡಿಸುತ್ತಿತ್ತು. ಸಾಲದ ಮೇಲಿನ ಬಡ್ಡಿ ದರವನ್ನು ಆರ್‍ಬಿಐ ಕಡಿತಗೊಳಿಸಲು ನಿರಾಕರಿಸಿದಾಗ ಕೇಂದ್ರ ಸರಕಾರವು ಇದನ್ನು ಹದ್ದು ಮೀರಿದ ವರ್ತನೆ ಎಂದು ಟೀಕಿಸಿತು. ಕಿರು ಸಾಲಗಳು, ಅತಿ ಸಣ್ಣ, ಸಣ್ಣ, ಮದ್ಯಮ ಉದ್ಯಮಗಳಿಗೆ ಸಾಲ ನೀಡುವ ವಿಶಯದಲ್ಲಿ ಆರ್‍ಬಿಐ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿತ್ತು. ಈ ಸಾಲಗಳ ಮೂಲಕ ರಾಜಕೀಯ ಲಾಬ ಪಡೆಯಲು ಉದ್ದೇಶಿಸಿದ್ದ ಮೋದಿ ಸರಕಾರಕ್ಕೆ ಇದು ದೊಡ್ಡ ತಡೆಗೋಡೆಯಾಗಿತ್ತು.
ಮೂರನೆಯದಾಗಿ ಕೆಲ ತಿಂಗಳುಗಳ ಹಿಂದೆ ಕೇಂದ್ರ ಸರಕಾರದ ಹಣಕಾಸು ಇಲಾಖೆಯು 1934ರ ಆರ್‍ಬಿಐನ ಸೆಕ್ಷನ್ 7ಕಾಯಿದೆಯ ಕತ್ತಿಯನ್ನು ಅದರ ವಿರುದ್ದವೆ ಜಳಪಿಸತೊಡಗಿತು. ಈ ಕಾನೂನನ್ನು ಬಳಸಿಕೊಂಡು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಆರ್‍ಬಿಐನ ಆಡಳಿತದಲ್ಲಿ ಕೇಂದ್ರ ಸರಕಾರವು ಮದ್ಯಪ್ರವೇಶ ಮಾಡಲು ಬಯಸುತ್ತದೆ ಮತ್ತು ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತೇವೆ ಹಾಗೂ ನಮ್ಮೊಂದಿಗೆ ಚರ್ಚಿಸಿ ಆರ್‍ಬಿಐ ನಿರ್ದಾರಗಳನ್ನು ತೆಗೆದುಕೊಳ್ಳಬೇಕು ಎನ್ನುವ ಪತ್ರವನ್ನು ಬರೆದಿತ್ತು. ಅಲ್ಲದೆ ಆರ್‍ಬಿಐ ಬಳಿ ಹೆಚ್ಚುವರಿಯಾಗಿ ಸಂಗ್ರಹಗೊಂಡಿದ್ದ ಅಪತ್ಕಾಲಿನ ಮೀಸಲು ನಿದಿಯಾದ 3.6 ಲಕ್ಷ ಕೋಟಿ ಮೊತ್ತವನ್ನು ಕೇಂದ್ರ ಸರಕಾರದ ಕಲ್ಯಾಣ ಯೋಜನೆಗಳಿಗೆ ಬಳಸಿಕೊಳ್ಳಲು ನೀಡಬೇಕೆಂದು ಒತ್ತಾಯಿಸಿತು. ಆದರೆ ಆರ್‍ಬಿಐ ಇದನ್ನು ವಿರೋದಿಸಿತ್ತು
ನಾಲ್ಕನೆಯದಾಗಿ ಮೋದಿ ಸರಕಾರದ ಈ ಸರ್ವಾದಿಕಾರ ದೋರಣೆಯನ್ನು ವಿರೋದಿಸಿ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಅವರು ಪ್ರಬುತ್ವವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ ತಿಂಗಳಲ್ಲಿ ಕೊಲ್ಕತ್ತದಲ್ಲಿ ಎಡಿ ಶ್ರಾಫ್ ಸ್ಮಾರಕ ಉಪನ್ಯಾಸ ನೀಡುವ ಸಂದರ್ಬದಲ್ಲಿ ಆಚಾರ್ಯ ಅವರು ‘ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೇಂದ್ರ ಸರಕಾರಗಳು ನಿಯಂತ್ರಿಸಲು ಸಾದ್ಯವಿಲ್ಲ. ಈ ಬ್ಯಾಂಕುಗಳ ಸ್ವಾತಂತ್ರ್ಯವನ್ನು ಪ್ರಬುತ್ವವು ಗೌರವಿಸದೆ ಹೋದರೆ ಶೇರು ಮಾರುಕಟ್ಟೆಯ, ಹೂಡಿಕೆದಾರರ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದ್ದರು. ಇದನ್ನು ಬೆಂಬಲಿಸಿದ ಅಖಿಲ ಭಾರತ ರಿಸರ್ವ ಬ್ಯಾಂಕ್ ನೌಕರರ ಒಕ್ಕೂಟವು ಈ ಕೇಂದ್ರ ಬ್ಯಾಂಕುಗಳ ಸ್ವಾಯತ್ತತೆಯನ್ನು ಅತ್ಯಂತ ಕ್ಷುಲ್ಲಕವಾಗಿ ಪರಿಗಣಿಸಿದರೆ ಅದು ಮುಂಬರುವ ಅನಾಹುತವನ್ನು ಸ್ವಾಗತಿಸಿದಂತಾಗುತ್ತದೆ, ಸರಕಾರವು ಇದನ್ನು ಗಂಬೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಸಿತ್ತು. ಎಲ್ಲಾ ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತತೆ, ಸ್ವಾತಂತ್ರವನ್ನು ಕಸಿದುಕೊಂಡು ಸಂಪೂರ್ಣ ನಿಷ್ಕ್ರಿಯೆಗೊಳಿಸಿದ್ದ ಮೋದಿ ಸರಕಾರಕ್ಕೆ ಆರ್‍ಬಿಐನ ಈ ಹಠಾತ್ ಬಂಡಾಯವನ್ನು ಅರಗಿಸಿಕೊಳ್ಳಲು ಸಾದ್ಯವಾಗಲಿಲ್ಲ.
ಆಚಾರ್ಯ ಅವರ ಈ ಹಠಾತ್ ಬಂಡಾಯಕ್ಕೆ ಅವರ ಮೇ¯ದಿಕಾರಿ ಗವರನ್ನರ್ ಊರ್ಜಿತ್ ಪಟೇಲ್ ಅವರು ಪರೋಕ್ಷವಾಗಿ ಬೆಂಬಲಿಸಿದರು ಮತ್ತು ಅನೇಕ ಸಂದರ್ಬಗಳಲ್ಲಿ ನೇರವಾಗಿಯೆ ಸಮರ್ಥಿಸಿ ಮಾತನಾಡಿದರು. ಇದರಿಂದ ಕೆರಳಿದ ಮೋದಿ ಸರಕಾರ ಗವರ್ನರ್ ಊರ್ಜಿತ್ ಪಟೇಲ್ ವಿರುದ್ದ ಚಾಟಿ ಬೀಸತೊಡಗಿತು. ಈ ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್ ಅವರನ್ನು ಹಣಿಯಲು ಎಲ್ಲಾ ಬಗೆಯ ತಂತ್ರಗಳನ್ನು ರೂಪಿಸತೊಡಗಿತು. ಇದರ ಮೊದಲ ಹಂತವಾಗಿ ಆರ್‍ಬಿಐನ ಆಡಳಿತ ಮತ್ತು ನಿರ್ವಹಣೆ ತಂತ್ರವನ್ನು ಕುರಿತು ಚರ್ಚಿಸಲು ನವೆಂಬರ್ 19ರಂದು ಒಂಬತ್ತು ತಾಸುಗಳ ಕಾಲ ದೀರ್ಘ ಸಭೆಯನ್ನು ನಡೆಸಲಾಯಿತು. ಮೊದಲಿನಿಂದಲೂ 3.6 ಲಕ್ಷ ಕೋಟಿ ಮೊತ್ತವನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸುವುದನ್ನು ವಿರೋದಿಸುತ್ತಲೆ ಬಂದಿದ್ದ ಊರ್ಜಿತ್ ಪಟೇಲ್ ಮೇಲಿನ ಸಭೆಯಲ್ಲಿ ತಮ್ಮ ನಿರ್ದಾರವನ್ನು ಸಡಿಲಿಸಿದರು ಮತ್ತು ಈ ಮೊತ್ತವನ್ನು ಯಾವ ರೀತಿ ಹಂಚಿಕೆ ಮಾಡಬೇಕೆಂದು ಯೋಜಿಸಲು ಸಮಿತಿಯನ್ನು ರಚಿಸಬೇಕೆಂಬ ಸಬೆಯ ನಿರ್ದಾರಕ್ಕೆ ಸಹಿ ಹಾಕಿದರು. ಈ ಮೂಲಕ ಮೋದಿ ಸರಕಾರ ತಾನೆ ಅಂತಿಮ ಎಂದು ಸಾಬೀತುಪಡಿಸಿತು. ಸಣ್ಣ ದನಿಯಲ್ಲಿ ತನ್ನ ಸ್ವಾತಂತ್ರವನ್ನು ಪ್ರತಿಪಾದಿಸಲು ಮುಂದಾಗಿದ್ದ ಗವರ್ನರ್ ಊರ್ಜಿತ್ ಪಟೇಲ್ ಅವರು ಕಡೆಗೂ ಈ ನಿರಂಕುಶ ಪ್ರಬುತ್ವದ ದಾಳಿಯನ್ನು ಎದುರಿಸಲಾಗದೆ ಸೋಲನ್ನೊಪ್ಪಿಕೊಂಡು ಶರಣಾಗತರಾದರು. ಮುಂದಿನ ಸಬೆಯನ್ನು ಡಿಸೆಂಬರ್ 14ರಂದು ನಿಗದಿಪಡಿಸಲಾಗಿತ್ತು. ಅದಕ್ಕೂ ಮುಂಚೆ ಊರ್ಜಿತ್ ಪಟೇಲ್ ರಾಜಿನಾಮೆ ಸಲ್ಲಿಸಿದರು.
ಸ್ವಯಂಕೃತ ಅಪರಾದ, ಗುರುತರ ತಪ್ಪುಗಳು
ಊರ್ಜಿತ್ ಪಟೇಲ್ ಸೆಪ್ಟೆಂಬರ್ 5, 2016ರಂದು ಅದಿಕಾರ ಸ್ವೀಕರಿಸಿದ ಎರಡು ತಿಂಗಳ ನಂತರ ನರೇಂದ್ರ ಮೋದಿಯವರು ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಸಮಾಲೋಚಿಸದೆ, ಯಾರನ್ನು ಮೈಟ್ ಮಾಡದೆ ನವೆಂಬರ್ 2016ರಂದು ಶೇಕಡ 86 ಪ್ರಮಾಣದಲ್ಲಿ ಚಲಾವಣೆಯಲ್ಲಿದ್ದ ರೂ 500, 1000 ಕರೆನ್ಸಿಯನ್ನು ಏಕಪಕ್ಷೀಯವಾಗಿ ಅಮಾನ್ಯೀಕರಣಗೊಳಿಸಿದಾಗ ಈ ಊರ್ಜಿತ್ ಪಟೇಲ್ ಕೋಲೆಬಸವನಂತೆ ಗೋಣು ಆಡಿಸಿದ್ದು ಅವರ ಇಂದಿನ ದುರಂತಕ್ಕೆ ಅವರೇ ಬರೆದುಕೊಂಡ ಮುನ್ನುಡಿಯಾಗಿತ್ತು. ತನ್ನ ಪೂರ್ವದಿಕಾರಿ ರಘುರಾಮ್ ರಾಜನ್ ಅವರಲ್ಲಿದ್ದ ದಿಟ್ಟತೆಯನ್ನು ಸಹ ಈ ಊರ್ಜಿತ್ ಪಟೇಲ್ ಮೈಗೂಡಿಸಿಕೊಂಡಿರಲ್ಲಿಲ್ಲ. ಏಕೆಂದರೆ ರಘುರಾಮ್ ರಾಜನ್ ನೋಟಿನ ಅಮಾನ್ಯೀಕರಣ ನಿರ್ದಾರವನ್ನು ವಿರೋದಿಸಿದ್ದರು. ಆದರೆ ಒಬ್ಬ ಜವಬ್ದಾರಿಯುತ ಅದಿಕಾರಿಯಾಗಿ ಊರ್ಜಿತ್ ಪಟೇಲ್ ಅವರು ನೋಟು ಅಮಾನ್ಯೀಕರಣದ ನಂತರದ ಎರಡು ವರ್ಶಗಳ ಆ ಯಾತನಾಮಯದ ದಿನಗಳಲ್ಲಿ ಸಂತ್ರಸ್ತರಾಗಿದ್ದ ದೇಶದ ಜನತೆಯ ದುಖವನ್ನು ಶಮನಗೊಳಿಸುವ ಯಾವ ಪ್ರಯತ್ನವನ್ನೂ ಮಾಡದೆ ಸಂಪೂರ್ಣ ಮೌನ ವಹಿಸಿದ್ದು ಅವರ ಶರಣಾಗತಿ ವ್ಯಕ್ತಿತ್ವವನ್ನು ಬಹಿರಂಗಗೊಳಿಸಿತು. ದೇಶದ ಬಹುಮುಖ್ಯ ಹಣಕಾಸು ಸಂಸ್ಥೆಯಾದ ಆರ್‍ಬಿಐನ ಮುಖ್ಯಸ್ಥರಾಗಿ ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶವಿದ್ದಾಗ ನಿಷ್ಕ್ರಿಯರಾಗಿ ಕೈಕಟ್ಟಿಕೊಂಡು ಮೋದಿಯ ಮುಂದೆ ವಿದೇಯರಾಗಿ ನಡುಬಗ್ಗಿಸಿದ್ದ ಸ್ವಯಂಕೃತ ಅಪರಾದಕ್ಕೆ ಇಂದು ಸ್ವತಃ ಅವರೇ ಬಲಿಯಾಗಿದ್ದಾರೆ ಮತ್ತು ದೇಶದ ಬಹುಮುಖ್ಯ ಹಣಕಾಸು ಸಂಸ್ಥೆ ಆರ್‍ಬಿಐ ವಿಶ್ವಸಾರ್ಹತೆ ಕಳೆದುಕೊಳ್ಳುವುದಕ್ಕೂ ಕಾರಣಕರ್ತರಾದರು.
ಊರು ಕೊಳ್ಳೆ ಹೊಡೆದ ನಂತರ ದಿಡ್ಡೆ ಬಾಗಿಲು ಹಾಕಿದಂತೆ ನೋಟು ಅಮಾನ್ಯೀಕರಣದಿಂದ ಇಂಡಿಯಾದ ಆರ್ಥಿಕ ವ್ಯವಸ್ಥೆಯು ಸಂಪೂರ್ಣ ಕುಸಿದು ಅದರ ಅಬಿವೃದ್ದಿ ಸೂಚ್ಯಂಕವು ಶೇಕಡ 5.7 ಪ್ರಮಾಣಕ್ಕೆ ಇಳಿದ ನಂತರ ಎಚ್ಚೆತ್ತುಕೊಂಡಂತೆ ವರ್ತಿಸತೊಡಗಿದರು. ಆದರೆ ಆಗಲೆ ಸಮಯ ಮೀರಿತ್ತು. ಇವರು ಅದಿಕಾರ ವಹಿಸಿಕೊಂಡ ಸಂದರ್ಬದಲ್ಲಿ ಶೇಕಡ 4.5 ಪ್ರಮಾಣದಲ್ಲಿದ್ದ ಹಣದುಬ್ಬರ ಎರಡು ವರ್ಶಗಳ ನಂತರ ಇವರು ರಾಜಿನಾಮೆ ನೀಡುವ ಸಂದರ್ಬದಲ್ಲಿ ಶೇಕಡ 3.5 ಪ್ರಮಾಣಕ್ಕೆ ಇಳಿದಿದೆ ಎನ್ನುವ ಅಂಶವೂ ಸಹ ಊರ್ಜಿತ್ ಪಟೇಲ್ ನೆರವಿಗೆ ಬರಲಾರದು. ಇವರ ಕಾಲಾವದಿಯಲ್ಲಿ ಎನ್‍ಪಿಎ ಮೊತ್ತ 10 ಲಕ್ಷ ಕೋಟಿಯನ್ನು ದಾಟಿದಾಗ ಕೊಳೆ ತುಂಬಿಕೊಂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ಹೊರಟರು. ಸಾಲ ನೀಡಿಕೆಯ ಮೇಲೆ ನಿಯಂತ್ರಣವನ್ನು ಸಾದಿಸುವ ಕ್ರಮಕ್ಕೆ ಮುಂದಾದರು. ಆದರೆ ಗೂಳಿಯಾಗಲೆ ಚೀನಿ ಅಂಗಡಿಯಲ್ಲಿ ನುಗ್ಗಿಯಾಗಿತ್ತು. ಊರ್ಜಿತ್ ಪಟೇಲ್‍ಗೆ ಇದು ಅರ್ಥವಾಗುವಶ್ಟರಲ್ಲಿ ಎಲ್ಲವೂ ಕೈಮೀರಿ ಹೋಗಿಯಾಗಿತ್ತು.
ಒಂದೆಡೆ ಎನ್ ಪಿಎ ಸುಸ್ತಿದಾರರ ಪಟ್ಟಿ ಬಹಿರಂಗಗೊಳಿಸಿ ಎಂದು ಸಿಐಸಿ ಒತ್ತಡ ಹೇರುತ್ತಿದ್ದರು, ಮತ್ತೊಂದೆಡೆ ಬಹಿರಂಗಗೊಳಿಸಬೇಡಿ ಎಂದು ಮೋದಿ ತಾಕೀತು ಮಾಡಿದಂತಿತ್ತು. ಈ ಇಕ್ಕಟ್ಟಿನಿಂದ ಪಾರಗಲು ರಾಜಿನಾಮೆ ಕೊಟ್ಟಿರುವ ಸಾದ್ಯತೆ ಇದೆ.
ಸೀಸರ್‍ನ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತವೆ ‘ಹೇಡಿಯು ತನ್ನ ಸಾವಿಗಿಂತ ಮೊದಲೆ ಅನೇಕ ಬಾರಿ ಸತ್ತಿರುತ್ತಾನೆ. ಆದರೆ ಪರಾಕ್ರಮಿ ಒಮ್ಮೆ ಮಾತ್ರ ಸಾವಿನ ರುಚಿ ನೋಡುತ್ತಾನೆ’. ಶ್ರೀಮಾನ್ ಊರ್ಜಿತ್ ಪಟೇಲ್ ಇಂದು ಸೀಸರ್‍ನನ್ನು ಮತ್ತೆ ಮತ್ತೆ ಓದಿಕೊಳ್ಳುವುದು ಒಳ್ಳೆಯದು.

ಮೋದಿ ಸರ್ಕಾರಕ್ಕೆ ಮುಖಭಂಗ
ಹೌದು, ಏಕೆಂದರೆ ಊರ್ಜಿತ್ ಪಟೇಲರ ನಿರ್ಗಮನವು ಸರ್ಕಾರದ ಆರ್ಥಿಕ ನೀತಿಯನ್ನು ದೇಶದ ಆರ್ಥಿಕತೆಯ ನಿರ್ವಹಣೆಯ ಹೊಣೆ ಹೊತ್ತಿರುವ ಸ್ವಾಯತ್ತ ಸಂಸ್ಥೆಗಳಲ್ಲೊಂದಾದ ಆರ್‍ಬಿಐ ಒಪ್ಪುತ್ತಿಲ್ಲ ಎಂಬುದನ್ನು ತೋರುತ್ತಿದೆ. ಜೊತೆಗೆ ಈ ಪಟೇಲ್ ಸ್ವತಃ ಮೋದಿ ಸರ್ಕಾರವು ಆಯ್ದುಕೊಂಡಿದ್ದ ಅಧಿಕಾರಿಯಾಗಿದ್ದರು. ಮೋದಿ ಸರ್ಕಾರದ ಅತ್ಯಂತ ವಿವಾದಾಸ್ಪದ ಆರ್ಥಿಕ ನಡೆ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಅದನ್ನು ನಿರ್ವಹಿಸಬೇಕಾದ ಸಂಸ್ಥೆಯ ಗವರ್ನರ್ ಅವರೇ ಆಗಿದ್ದರು.
ಜೊತೆಗೆ ಊರ್ಜಿತ್ ಪಟೇಲ್ ಕಾರ್ಪೋರೇಟ್ ಆರ್ಥಿಕತೆಯ ವ್ಯಕ್ತಿಯೇ ಹೊರತು (ವಿತ್ತೀಯ ಮೂಲಭೂತವಾದದ ಕುರಿತ ಬಾಕ್ಸ್ ನೋಡಿ), ಜನಪರ ಅರ್ಥಶಾಸ್ತ್ರಜ್ಞರೇನೂ ಆಗಿರಲಿಲ್ಲ. ಅಂದರೆ, ಸ್ವತಃ ಕಾರ್ಪೋರೇಟ್ ಜಗತ್ತೂ ಸಹಾ ಮೋದಿಯವರ ಆರ್ಥಿಕ ನೀತಿಯನ್ನು ಒಪ್ಪುತ್ತಿಲ್ಲ ಎಂಬ ಸಂದೇಶವನ್ನೂ ಇದು ರವಾನಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...