Homeಮುಖಪುಟನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆ: ಪ್ರತಾಪ್ ಹುಣಸೂರು

ನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆ: ಪ್ರತಾಪ್ ಹುಣಸೂರು

- Advertisement -
- Advertisement -

ಯಾವುದೋ ಕಾಲದಲ್ಲಿ ಸೃಷ್ಟಿಸಿ ವ್ಯಾಪಕವಾಗಿದ್ದ ದುರ್ನೀತಿಯ ವರ್ಣವ್ಯವಸ್ಥೆ, ಜಾತಿಯ ಉಗಮಕ್ಕೆ ಕಾರಣವಾಗಿ ಮನುಷ್ಯ-ಮನುಷ್ಯ ನಡುವೆ ನಿರ್ಬಂಧಗಳನ್ನು ಸೃಷ್ಟಿಸಿತ್ತು. ಜಾತಿ ಅಂದಿನಿಂದಲೂ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಾ ಬೆಳೆಯುತ್ತಿದೆ. ಜಾತಿ, ಅಸ್ಪೃಶ್ಯತೆ ನಮಲ್ಲಿ ಎಷ್ಟು ಆಳಕ್ಕೆ ಬೇರೂರಿದೆಯೆಂದರೆ, ಅದನ್ನು ಎಷ್ಟು ಬಾರಿ ಕಡಿದರೂ ಮತ್ತೆ ಮತ್ತೆ ಮರವಾಗಿ ಬೇರೆ-ಬೇರೆ ಸ್ವರೂಪಗಳಲ್ಲಿ ಬೆಳೆಯುತ್ತಲೇ ಇದೆ. ಈ ಜಾತಿಯ ಭೂತ ನೀರಿಗೂ ಅಂಟಿಕೊಂಡಿತ್ತು.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸನ ದೇವಿ ಮಂದಿರ್ ದೇವಾಲಯದಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಬಾಲಕನೊಬ್ಬನ ಮೇಲೆ ಶೃಂಗಿ ನಂದನ್ ಯಾದವ್ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದ. ಅಲ್ಲದೇ ಹಿಂದು ಏಕ್ತಾ ಸಂಘ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಮುಸ್ಲಿಂ ಬಾಲಕನಿಗೆ ಥಳಿಸುವ ವಿಡಿಯೋವನ್ನು ಅಪ್‌ಲೋಡ್ ಮಾಡಿ, ಈ ರೀತಿಯ ಧರ್ಮರಕ್ಷಣೆಯ ಕೆಲಸಗಳಿಗಾಗಿ, ಕೇಸುಗಳ ವಿರುದ್ಧ ಹೋರಾಡುವುದಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾನೆ. ಜೊತೆಗೆ ನೀರು ಕುಡಿದಿದ್ದಕ್ಕಾಗಿ ಬಾಲಕನ ಪುರುಷತ್ವ ಹರಣ ಮಾಡಬೇಕು ಎಂದೂ ಬರೆದುಕೊಂಡಿದೆ.

ವೈರಲ್ ವಿಡಿಯೋದಲ್ಲಿ ಆರೋಪಿ ಶೃಂಗಿ ನಂದನ್ ಯಾದವ್, ಆ ಹುಡುಗನಿಗೆ ತನ್ನ ಹೆಸರನ್ನು ಕೇಳಿದ್ದಾನೆ. ಅದಕ್ಕೆ ಆ ಹುಡುಗ ತನ್ನ ಹೆಸರು ಆಸಿಫ್ ಎಂದು ಹೇಳಿದ್ದು, ನೀರು ಕುಡಿಯಲು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಉತ್ತರಿಸಿದ್ದಾನೆ. ಅದಕ್ಕೆ ಕೋಪಗೊಂಡ ಆರೋಪಿ ಅಮಾನುಷವಾಗಿ ಥಳಿಸಿದ್ದಲ್ಲದೆ, ಕಾಲಿನಲ್ಲಿ ಒದ್ದಿದ್ದಾನೆ ಮತ್ತು ಕೈಮುರಿಯಲು ಯತ್ನಿಸಿದ್ದಾನೆ. ಇದು ವಿಡಿಯೋದಲ್ಲಿ ದಾಖಲಾಗಿದೆ.

ಶತಮಾನಗಳಷ್ಟು ಹಿಂದೆಯೇ ಊರಿನಲ್ಲಿರುವ ಸಾರ್ವಜನಿಕ ಬಾವಿಯಲ್ಲಿನ ನೀರನ್ನು ಜಾತಿವ್ಯವಸ್ಥೆಯ ಪಿರಮಿಡ್‌ನಲ್ಲಿ ಕೆಳಗಿದ್ದ ಶೂದ್ರರು ಮತ್ತು ಅವರಿಗೂ ಹಿಂದುಳಿದವರು ಮುಟ್ಟುವಂತಿರಲಿಲ್ಲ. ಕುಡಿಯುವ ನೀರು ಒಂದುಕಡೆಯಾದರೆ, ಕೆಳಜಾತಿಯವರ ಮನೆಯಿಂದ ಬರುವ ಚರಂಡಿ ನೀರೂ ಕೂಡ ಮೇಲ್ಜಾತಿಯವರ ಚರಂಡಿ ನೀರಿನೊಂದಿಗೆ ಬೆರೆಯಬಾರದು ಎಂಬ ಕಾರಣಕ್ಕೆ ಎತ್ತರದ ಪ್ರದೇಶದಲ್ಲಿ ಮೇಲ್ಜಾತಿಯವರು ಮನೆ ನಿರ್ಮಿಸಿಕೊಳ್ಳುತ್ತಿದ್ದರು. ಕೆಳಜಾತಿಯವರಿಗೆ ತಗ್ಗು ಪ್ರದೇಶಗಳಲ್ಲಿಯೇ ಉಳಿಯುವಂತೆ ನೋಡಿಕೊಳ್ಳುತ್ತಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಳಜಾತಿಯವರ ನೆರಳೂ ಕೂಡ ಮೇಲ್ಜಾತಿಯವರ ಮೇಲೆ ಬೀಳಬಾರದು ಎಂಬ ಕಾರಣಕ್ಕೆ ಬೆಳಿಗ್ಗೆ ಸೂರ್ಯ ನೆತ್ತಿಗೇರುವ ಮುನ್ನ ಕೆಳಜಾತಿಯವರು ಬೀದಿಯಲ್ಲಿ ಓಡಾಡುವಂತಿರಲಿಲ್ಲ. ಇಳಿಸಂಜೆಯ ಹೊತ್ತಿಗೆ ಕೆಳಜಾತಿಯವರು ಹಟ್ಟಿ ಸೇರಿಕೊಳ್ಳಬೇಕಾಗಿತ್ತು. (ಯಾಕೆಂದರೆ ಈ ಸಮಯದಲ್ಲಿ ಯಾವುದೇ ವ್ಯಕ್ತಿಯ ನೆರಳು ಉದ್ದವಾಗಿರುತ್ತದೆ)

ಹೀಗೆ ನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆಯ ಸಂತತಿ ಹೆಚ್ಚುತ್ತಿದೆ. ಒಬ್ಬ ಮುಸ್ಲಿಂ ಹುಡುಗನಿಗೆ ಬಾಯಾರಿಕೆಯಾಗಿ ದೇವಸ್ಥಾನದೊಳಗೆ ಹೋಗಿ ನೀರು ಕುಡಿದ ಎನ್ನುವ ಕಾರಣಕ್ಕೆ ಇದನ್ನು ಸಹಿಸದೆ ಆ ಹುಡುಗನ ಮೇಲೆ ಹಲ್ಲೆ ಮಾಡಿರುವ ಮೇಲ್ಜಾತಿಯವನೇ ಈ ಸಂತತಿಯ ವಾರಸುದಾರ. ಇನ್ನೂ ಉಳಿದುಕೊಂಡಿರುವ ಈ ದೊಡ್ಡ ಸಂತತಿಯ ಪ್ರತಿನಿಧಿ.

ಇಂತಹ ದೌರ್ಜನ್ಯಗಳ ವಿರುದ್ಧ ಬಹುಶಃ ಇಡೀ ಭಾರತದಲ್ಲಿ ಮೊದಲು ನೇರಾ-ನೇರ ದನಿಯೆತ್ತಿದವರು ನಮ್ಮ ವಚನಕಾರರು. ಇದಕ್ಕೆ ಒಂದು ಸ್ಪಷ್ಟ ಮತ್ತು ಸಣ್ಣ ಉದಾಹರಣೆಗೆ ಅಲ್ಲಮನ ಈ ವಚನವನ್ನು ನೆನಪಿಸಿಕೊಳ್ಳಬಹುದು.

ನಾ ದೇವನಲ್ಲದೆ ನೀ ದೇವನೆ
ನೀ ದೇವನಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ

“ನಾನು ದೇವರು. ನೀನು ದೇವರಾಗಲು ಹೇಗೆ ಸಾಧ್ಯ? ನೀನು ದೇವರಾದರೆ ನನ್ನನ್ನು ಯಾಕೆ ಸಲಹುವುದಿಲ್ಲ? ಯಾರಾದರೂ ಬಂದು ಕುಳಿತರೆ ನೀರು ಕೊಡುವೆ. ಹಸಿದಾಗ ಒಂದು ತುತ್ತು ಅನ್ನ ಕೊಡುವೆ. ನಾನೇ ದೇವರು” ಎಂದು ಅಲ್ಲಮಪ್ರಭು ಹೇಳುತ್ತಾರೆ.

ಈ ವಚನ ದೇವರನ್ನು ಉದ್ದೇಶಿಸಿರುವುದಲ್ಲ, ಬದಲಿಗೆ ಆ ದೇವರನ್ನೂ ರಾಜಕೀಯಗೊಳಿಸಿ, ಅದಕ್ಕೂ ಅಸ್ಪೃಶ್ಯತೆ ಅಂಟಿಸಿದ ಕರ್ಮಟ ವೈದಿಕರಿಗೆ ಹೇಳುತ್ತಿರುವ ಮಾತಿದು.

ಯಾರೂ ಯಾರನ್ನೂ ಭೇದದಿಂದ ನಡೆಸಿಕೊಳ್ಳಬಾರದು ಮತ್ತು ಸಮಾನತೆ, ಭ್ರಾತೃತ್ವದಿಂದ ಕಾಣಬೇಕು ಎಂದು ಇದೇ ರೀತಿಯ ತತ್ವ ಸಿದ್ಧಾಂತವನ್ನು ಬುದ್ಧನೂ ಕೂಡ ಕ್ರಿಸ್ತಪೂರ್ವದಲ್ಲೆ ಹೇಳಿದ್ದ. ಆದರೆ ಬಸವಣ್ಣನ ನೇತೃತ್ವದಲ್ಲಿ ನಡೆದ ಈ ಕಲ್ಯಾಣದ ಕ್ರಾಂತಿಯನ್ನು ಆದಷ್ಟು ಬೇಗನೆ ಮುಗಿಸಿದವರು, ಬುದ್ಧನನ್ನು ವಿಷ್ಣುವಿನ ಅವತಾರ ಮಾಡಿದವರೂ ಈ ಭವ್ಯ ಪರಂಪರೆಯ ವಾರಸುದಾರರೇ.

ಕೆರೆಯಲ್ಲಿ ದಲಿತರು ನೀರು ಮುಟ್ಟಬಾರದು ಎಂಬುದರ ವಿರುದ್ಧ ಚೌಡಾರ್ ಕರೆ ನೀರನ್ನು ಮುಟ್ಟಿ ಅಂಬೇಡ್ಕರ್ ಪ್ರತಿಭಟಿಸಿದ್ದರು. ಇದು ಬಹಶ: ಸ್ವತಂತ್ರಪೂರ್ವದಲ್ಲಿ ಸಮಾನತೆಗೆ ನಡದ ಮೊದಲನೇ ಬಹುದೊಡ್ಡ ಆಂದೋಲನ. ಇದನ್ನು ಸಹಿಸದ ಇದೇ ವಾರಸುದಾರರು ಅಂದು ಅವರ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಪ್ರಶ್ನಿಸಿದರೆ, ಕೆಲವು ಸುಪ್ತ ಮನುವಾದಿಗಳು, “ಇದು ಯಾವುದೋ ಕಾಲದಲ್ಲಿ ಆಗಿದ್ದು. ಇದನ್ನೇ ಇಟ್ಟುಕೊಂಡು ಇನ್ನೂ ಎಷ್ಟು ಕಾಲ ಕಳೆಯುತ್ತೀರಾ? ಇಂತಹವುಗಳೆಲ್ಲಾ ಈಗ ನಡೆಯುತ್ತಿಲ್ಲ. ಎಲ್ಲರೂ ಬದಲಾಗಿದ್ದಾರೆ” ಎಂದು ಹೇಳುತ್ತಾರೆ.

ಅದರೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿರುವ ಘಟನೆಗೂ ಅಂಬೇಡ್ಕರ್ ಅವರ ಕಾಲದಲ್ಲಿ ನಡೆದಿರುವ ಈ ಘಟನೆಗೂ ವ್ಯತ್ಯಾಸವೇನಾದರೂ ಇದೆಯೇ? ವಾಸ್ತವದಲ್ಲಿ ಇವೆರಡಕ್ಕೂ ಸಂಬಂಧ ಇದೆ. ಆದರೆ ಇದನ್ನೂ ಸಮರ್ಥಿಸಿಕೊಳ್ಳುವವರು ಇದ್ದಾರೆ ಎಂದರೆ ಈ ದೇಶದ ಪರಿಸ್ಥಿತಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ, ನೀರು ಕುಡಿದಿದ್ದಕ್ಕೆ, ಪ್ರೀತಿ ಮಾಡಿದ್ದಕ್ಕೆ ಕೈಕಾಲು ಮುರಿಯುವ ಪುರುಷತ್ವ ಹರಣ ಮಾಡುವ ಮನಸ್ಥಿತಿ ಇಷ್ಟು ಅಗಾಧವಾಗಿ ಬೆಳೆಯಲು ಯಾವ ಕುಯುಕ್ತಿ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೋಚರವಾಗುತ್ತದೆ. ಮುಕ್ತ ಮನಸ್ಸಿನಿಂದ ಕಾಣುವ ಹೃದಯವಂತಿಕೆ ಬೆಳೆಸಿಕೊಳ್ಳಬೇಕಷ್ಟೇ!

ಭಾರತವನ್ನು ವಿಶ್ವಗುರು ಮಾಡಲು ನೀರೆರೆದು ಪೋಷಿಸುತ್ತಿರುವ ಹೊತ್ತಲ್ಲೇ ಇಲ್ಲೊಬ್ಬ ನೀರು ಕುಡಿದಿದ್ದಕ್ಕೆ ಹಲ್ಲೆಗೊಳಗಾಗಿದ್ದಾನೆ. ಹೀಗಿರುವಾಗ ನನ್ನ ದೇಶವನ್ನು ವಿಶ್ವಗುರು ಎಂದು ಹೇಗೆ ಒಪ್ಪಿಕೊಳ್ಳುವುದು? ನಮ್ಮ ಪರಂಪರೆ ವಿಶ್ವಕ್ಕೆ ಮಾದರಿ ಎಂದು ಹೇಳುತ್ತಿರುವವರು ಇಂತಹ ಅನಿಷ್ಟ ಪರಂಪರೆಯನ್ನು ಮರೆತರೇಕೆ?
ಇದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ #SorryAsif ಹ್ಯಾಷ್‌ಟ್ಯಾಗ್ ಮೂಲಕ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ ಎಷ್ಟು ದಿನ, ಹೀಗೆ ಖಂಡನೆಗಳಲ್ಲೆ ತಾತ್ಕಾಲಿಕವಾಗಿ ಮರೆಯಾಗಿ ಮತ್ತೊಂದು ದಿನ ಇನ್ನೆಲ್ಲೋ ಚಿಗುರಿ ಎದ್ದು, ನೀರು ಕುಡಿದಿದ್ದಕ್ಕೆ ಮತ್ತೊಬ್ಬ ಥಳಿತಗೊಂಡು ಅವಮಾನಕ್ಕೆ ಗುರಿಯಾಗಬೇಕು? ಸಂವಿಧಾನದಲ್ಲಿ ಹೇಳಿಕೊಟ್ಟಿರುವ ಸಮಾನತೆ, ಭ್ರಾತೃತ್ವವನ್ನು ಮೈಗೂಡಿಸಿಕೊಳ್ಳಲು ನನ್ನ ದೇಶವಾಸಿಗಳಿಗೆ ಏಕಿಷ್ಟು ಕಷ್ಟ?

ಪ್ರತಾಪ್ ಹುಣಸೂರು

ಪ್ರತಾಪ್ ಹುಣಸೂರು
ಸಂಶೋಧನಾ ವಿದ್ಯಾರ್ಥಿ. ಸದ್ಯ ನಾನುಗೌರಿ.ಕಾಂನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ: #SorryAsif ಎಂದ ನೆಟ್ಟಿಗರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...