- Advertisement -
- Advertisement -
ಚಿಂತಕ, ಹಿರಿಯ ಪತ್ರಕರ್ತ, ಹೋರಾಟಗಾರ ಸಿ.ಎಸ್. ದ್ವಾರಕಾನಾಥ್ನವರು ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ವೃತ್ತಿಯಲ್ಲಿ ವಕೀಲರಾದ ಸಿ.ಎಸ್. ದ್ವಾರಕಾನಾಥ್ರವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ ಅವರು ಒಂದಷ್ಟು ಕಾಲ ಬಿಎಸ್ಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ನಂತರ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಡಿ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ: ಪ್ರಬಲ ಜಾತಿಗಳನ್ನು 2 ಎ ವರ್ಗಕ್ಕೆ ಸೇರಿಸಬಾರದು: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಒತ್ತಾಯ
C. S. ದ್ವಾರಕನಾಥ್ ರಂತಹ ಚಿಂತಕ ಮತ್ತು ದಲಿತ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವದು ನಿಜಕ್ಕೂ ಅಚ್ಚರಿಭರಿತ ಸಂತೋಷದ ವಿಷಯ.
ದ್ವಾರಕನಾಥ್ ರಂತವರ ನಾಯಕತ್ವದ ಗುಣಗಳು ಹೊರಬರಲು ಕಾಂಗ್ರೆಸ್ ಪಕ್ಷದಂತಹ ವೇದಿಕೆ ಸಿಕ್ಕಿರುವದು ದೊಡ್ಡ ಬೆಳವಣಿಗೆಯೇ ಆಗಿದೆ ?