Homeಕರ್ನಾಟಕಪಶ್ಚಿಮ ಘಟ್ಟದಲ್ಲಿ ಸಾವಿರಾರು ಕಿರು ಅಣೆಕಟ್ಟೆ ಯೋಜನೆ; ಗುಡ್ಡಗಳ ಸಾಲು ಕುಸಿವ ಆತಂಕ!

ಪಶ್ಚಿಮ ಘಟ್ಟದಲ್ಲಿ ಸಾವಿರಾರು ಕಿರು ಅಣೆಕಟ್ಟೆ ಯೋಜನೆ; ಗುಡ್ಡಗಳ ಸಾಲು ಕುಸಿವ ಆತಂಕ!

- Advertisement -
- Advertisement -

ಪಶ್ಚಿಮ ಘಟ್ಟದ ತಪ್ಪಲಲ್ಲಿ ಹರಿಯುವ ನದಿಗಳನ್ನು ಬಯಲು ಸೀಮೆಯತ್ತ ತಿರುಗಿಸುವ ಅನಾಹುತಕಾರಿ ಕಾರ್ಯಸಾಧ್ಯವಲ್ಲದ ಯೋಜನೆಗಳು ಪ್ರಸ್ತಾಪವಾಗುತ್ತಿರುವ ಹೊತ್ತಲ್ಲೇ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಇದೇ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರೋಬ್ಬರಿ ಒಂದು ಸಾವಿರದಾ ನಾಲ್ಕು ನೂರು ಕಿರು ಅಣೆಕಟ್ಟು ಕಟ್ಟಿ ನೀರಿನ ದಾಹ ಇಂಗಿಸಲಾಗುವುದೆಂದು ಹೇಳಿದ್ದಾರೆ! ಇಲ್ಲಿಯೇ ಸರಣಿ ಚೆಕ್ ಡ್ಯಾಮ್ ಕಟ್ಟಿದರೆ ಬಯಲು ಸೀಮೆ ನದಿಗಳಿಗೆ ಸೇರಿಸಲು ನೀರು ಸಿಗುತ್ತದಾ? ಇದೆಲ್ಲ ಒಂದಕ್ಕೊಂದು ವಿರೋಧಭಾಸದ ಹುಚ್ಚು ಲೆಕ್ಕಾಚಾರವೆಂಬ ಜಿಜ್ಞಾಸೆ ನಡೆದಿದೆ.

ಇಂಥ ಕೆಲಸಕ್ಕೆ ಬಾರದ ಯೋಜನೆಗಳ ಪ್ರಸ್ತಾಪವಾದಾಗೆಲ್ಲ ಪಶ್ಚಿಮವಾಹಿನಿ ನದಿಗಳು ವ್ಯರ್ಥವಾಗಿ ಸಮುದ್ರ ಸೇರುತ್ತದೆಂದು ಸರ್ಕಾರಿ ಪಂಡಿತರು ವ್ಯಾಖ್ಯಾನಿಸುತ್ತಾರೆ. ಆದರೆ ಪಶ್ಚಿಮವಾಹಿನಿ ನದಿಗಳು ಹರಿವಾಗ ಇಕ್ಕೆಲದ ದಂಡೆಯುದ್ದಕ್ಕೂ ಅಸಂಖ್ಯ ಜೀವ ರಾಶಿಯನ್ನು ಪೋರೆದು ಕೊನೆಗೆ ಕಡಲ ಜಲಚರಗಳಿಗೆ ಆಹಾರ-ಪೋಶಕಾಂಶ ಒದಗಿಸುತ್ತವೆ. ನದಿ ನೀರು ಸಮುದ್ರ ಸೇರದಿದ್ದರೆ ಅಳಿವೆ ಒಣಗಿ ಮೀನುಗಾರಿಕೆ, ಕೃಷಿ, ಕುಡಿಯುವ ನೀರಿನ ಬಾವಿಗಳಿಗೆ ಧಕ್ಕೆಯಾಗುತ್ತದೆ. ಹಾಗಾಗಿ ನದಿ ನೀರು ಸಮುದ್ರ ಸೇರುವುದು ವ್ಯರ್ಥವೆಂಬುದೇ ಅನರ್ಥಕಾರಿ ಮಾತೆಂದು ಪರಿಸರ ತಜ್ಞರು ಹೇಳುತ್ತಾರೆ. ಈಗ ಸಚಿವ ಮಾಧುಸ್ವಾಮಿಯೂ ಹಾಗೇ ಹೇಳಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿನ ನದಿಗಳು ವ್ಯರ್ಥವಾಗಿ ನದಿ ಸೇರುತ್ತಿದ್ದು ಆ ನೀರನ್ನು ಕುಡಿಯುವುದಕ್ಕೆ 1,400 ಸರಣಿ ಚೆಕ್ ಡ್ಯಾಮ್‌ಗಳಲ್ಲಿ ಸಂಗ್ರಹಿಸಲಾಗುತ್ತದಂತೆ!

ಈ ಯೋಜನೆಗೆ ಪರಿಸರವಾದಿಗಳಿಂದ ದೊಡ್ಡ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಭುಗಿಲೆಳುತ್ತಿದ್ದಂತೆ ಸದರಿ ಯೋಜನೆ ಪರಿಸರಕ್ಕೆ ಮಾರಕವಲ್ಲವೆಂಬ ಸಮಜಾಯಿಶಿ ಕೊಟ್ಟಿದ್ದಾರೆ. ಪಶ್ಚಿಮ ಘಟ್ಟವಿರುವ ಐದು ಜಿಲ್ಲೆಗಳನ್ನು ಬಿಟ್ಟು ಉಳಿದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಈ ಕಿರು ಆಣೆಕಟ್ಟೆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುತ್ತದಂತೆ. ಅಣೆಕಟ್ಟೆ ಎತ್ತರ ಆರು ಅಡಿಯಾದರೆ, ಅಚ್ಚುಕಟ್ಟು ಪ್ರದೇಶ 60-70 ಎಕರೆ. ದೊಡ್ಡ ಪ್ರಮಾಣದ ನೀರು ಸಂಗ್ರಹವಾಗುವುದಿಲ್ಲದ್ದರಿಂದ ಅರಣ್ಯ ನಾಶವಾಗುವುದಿಲ್ಲ, ಪರಿಸರ ಸಮಸ್ಯೆಯಿಲ್ಲ ಎಂದು ಮಂತ್ರಿ ಮಾಧುಸ್ವಾಮಿ ಹೇಳುತ್ತಾರೆ. ಇದನ್ನು ರಾಷ್ಟ್ರೀಯ ಜಲಮಿಷನ್ ಯೋಜನೆಯಲ್ಲಿ ಕಾರ್ಯಗತಗೊಳಿಸಲಾಗುತ್ತದಂತೆ. ಕೇಂದ್ರ ಸರ್ಕಾರ ನೆರವು ನೀಡುವ ಭರವಸೆಯಿದೆಯಂತೆ.

ಸಚಿವ ಮಾಧುಸ್ವಾಮಿ ಕೊಟ್ಟಿರುವ ಯೋಜನಾ ಮಾಹಿತಿ ಒಂಥರಾ ಮೋಗಮ್ ಆಗಿದೆ. ಯೋಜನೆಯ ಅಂದಾಜು ವೆಚ್ಚ, ಸಂಗ್ರಹವಾಗುವ ನೀರು ಎಲ್ಲಿ ಬಳಸಲಾಗುತ್ತದೆ, ಆ ನೀರನ್ನು ಯಾವ ವಿಧಾನದಲ್ಲಿ ಉದ್ದೇಶಿತ ಪ್ರದೇಶಕ್ಕೆ ಸಾಗಿಸಲಾಗುತ್ತದೆ ಎಂಬುದನ್ನು ಮಾಧುಸ್ವಾಮಿ ಹೇಳಿಲ್ಲ; ವಿಸ್ತ್ರತ ಯೋಜನಾ [ಡಿಪಿಆರ್] ಬಗ್ಗೆ ಕಾರ್ಯಸಾಧ್ಯತಾ ವರದಿ ಯೋಜನೆ ಅನುಷ್ಠಾನದಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಏನನ್ನು ಸ್ಪಷ್ಟಪಡಿಸಿಲ್ಲ. ಯೋಜನೆ ಜಾರಿಗೊಳಿಸಲು ಮಂತ್ರಿಗಳು ವಹಿಸಿರುವ ಆಸಕ್ತಿ ನೋಡಿದರೆ ಅವರಿಗೆ ಪಶ್ಚಿಮ ಘಟ್ಟಗಳು ಅದೆಷ್ಟು ನಾಜೂಕು ಮತ್ತಲ್ಲಿ ಅಭಿವೃದ್ಧಿ ಕಾಮಗಾರಿ ಕೈಗಳ್ಳುವಾಗ ಅದೆಂಥ ಎಚ್ಚರ ವಹಿಸಬೇಕೆಂದು ಬಾಹ್ಯಕಾಶ ವಿಜ್ಞಾನಿ ಕಸ್ತೂರಿರಂಗನ್, ಪರಿಸರ ವಿಜ್ಞಾನಿ ಮಾಧವ ಗಾಡ್ಗಿಳ್ ಮತ್ತಿತರ ಭೂ ವಿಜ್ಞಾನಿಗಳು ಅಧ್ಯಯನಪೂರ್ಣವಾಗಿ ಮಂಡಿಸಿರುವ ವರದಿಯ ಗಂಭೀರತೆಯ ಅರಿವಿರುವಂತಿಲ್ಲವೆಂದು ಪರಿಸರವಾದಿಗಳು ಹೇಳುತ್ತಾರೆ. ಅಣೆಕಟ್ಟು ಯಾವ ಗಾತ್ರದ್ದೇ ಇರಲಿ. ಘಟ್ಟದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿದರೆ ಘಟ್ಟದ ಬುಡ ಅಲ್ಲಾಡಿ ಗುಡ್ಡಗಳು ಕುಸಿದು ಅನಾಹುತವಾಗುತ್ತದೆ. ಘಟ್ಟದ ಮೇಲೆ ಯಾವ ಕಾಮಗಾರಿ ಕೈಗೊಂಡರೂ ಪರಿಸರದ ಲಯ ತಪ್ಪುತ್ತದೆ. ಪಶ್ಚಿಮ ಘಟ್ಟದಲ್ಲಿ ಕಿರು ಆಣೆಕಟ್ಟು ಕಟ್ಟಿದರೆ ಘಟ್ಟದ ಬುಡದಲ್ಲಿನ ಬದುಕಷ್ಟೇ ಅಲ್ಲ, ಇಡೀ ರಾಜ್ಯದ ಮೇಲೆ ಕೆಟ್ಟ ಪರಿಣಮವಾಗುತ್ತದೆ ಎಂದು ಭೂ ವಿಜ್ಞಾನಿಗಳು ಹೇಳುತ್ತಾರೆ.

ಕೊಡಗಿನದು ಮೆದು ಮಣ್ಣಾದ್ದರಿಂದ ತೇವಾಂಶ ಹೆಚ್ಚಾದರೆ ಗುಡ್ಡಗಳು ಕುಸಿಯುತ್ತವೆ. 2018ರಲ್ಲಿ ಹಾರಂಗಿ ಜಲಾಶಯದ ಹಿನ್ನಿರಿಂದ ಗುಡ್ಡಗಳು ಆಸ್ಪೋಟಿಸಿದ್ದವು. ಗುಡ್ಡದಲ್ಲಿ ಮಿನಿ ಜಲಾಶಯ ಕಟ್ಟುವುದು ಅಪಾಯಕಾರಿ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಕಾಫಿ ತೋಟಕ್ಕೆ ನೀರು ಹಾಯಿಸಲು ಕಾಫಿ ಬೆಳೆಗಾರರು ಹಲವು ಕೆರೆಗಳನ್ನು ನಿರ್ಮಿಸಿದ್ದರು. 2018ರಲ್ಲಿ ಮಳೆ ಜೋರಾಗಿ ಕೆರೆಗಳು ಒಡೆದು ಬೆಟ್ಟಗಳು ಕಸಿದುಬಿದ್ದು ದೊಡ್ಡ ದುರಂತ ಸಂಭವಿಸಿತ್ತು. ಬೆಟ್ಟದ ಮೇಲೆ ಕೆರೆ ನಿರ್ಮಿಸಿದ್ದೆ ಅನಾಹುತಕ್ಕೆ ಕಾರಣವೆಂದು ಭೂ ವಿಜ್ಞಾನಿಗಳು ವರದಿ ಕೊಟ್ಟಿದ್ದಾರೆ. ಇದೆಲ್ಲ ಸರಣಿ ಮಿನಿ ಜಲಾಶಯ ಕಟ್ಟಲು ಹೊರಟವರ ಕಣ್ಣು ತೆರೆಸದಿರುವುದು ದುರಂತವಾಗಿದೆ.

PC : Bantwal News

ಕಳೆದ ವರ್ಷ ತಲಕಾವೇರಿಯಲ್ಲಿ ಗುಡ್ಡ ಸ್ಪೋಟಗೊಂಡು ಗಂಡಾಂತರ ಎದುರಾಗಿತ್ತು; ಈ ಮಳೆಗಾಲದಲ್ಲಿ ಅಣಸಿ ಗುಡ್ಡ, ಅರೆಬೈಲ್ ಗುಡ್ಡ ಉರುಳಿಬಿದ್ದಿದೆ! ಯಲ್ಲಾಪುರದ ಕಳಚೆಯೆಂಬ ಹಳ್ಳಿ ಮಣ್ಣಡಿ ಹೂತು ಹೋಗಿದೆ. ಈಗ ಪಶ್ಚಿಮ ಘಟ್ಟ ಭಗದಲ್ಲಿಕರು ಜಲ ವಿದ್ಯುತ್ ಯೋಜನೆಗಳಿಂದ ಅನೇಕ ಸಮಸ್ಯೆಯಾಗುತ್ತಿದೆ. ಮಿನಿ ಡ್ಯಾಮ್ ನಿರ್ಮಾಣವಾಗುವ ಪ್ರದೇಶದ ಗುಡ್ಡಗಳಿಂದ ನೀರು ಒಸರುತ್ತದೆ. ಇದು ಭೂ ಕುಸಿತಕ್ಕೆ ಕಾರಣವಾಗಲಿದೆ. ಚೆಕ್ ಡ್ಯಾಮ್ ನಿರ್ಮಾಣಕ್ಕೆ ತಳಪಾಯ ಬಂಡೆಯಂತೆ ಗಟ್ಟಿಯಾಗಿರಬೇಕು. ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಂತಹ ಗಟ್ಟಿ ಜಾಗವಿಲ್ಲ. ಮಿನಿ ಅಣೆಕಟ್ಟು ಕಟ್ಟಿದರೂ ಅವು ದೀರ್ಘ ಕಾಲ ಬಾಳಿಕೆ ಬರಲಾರದು. ಮಳೆ ನೀರಿನೊಂದಿಗೆ ಹರಿದುಬರುವ ಕಸ-ಕಡ್ಡಿ ಮಿನಿ ಡ್ಯಾಮ್‌ನಲ್ಲಿ ತುಂಬಿ ಕೊಚ್ಚಿಹೋಗುವ ಸಾಧ್ಯತೆಯೆ ಹೆಚ್ಚೆಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದೆಲ್ಲ ಕಿರು ಡಾಮ್‌ನಿಂದ ಕುಡಿಯುವ ನೀರಿನ ದಾಹ ತಣಿಸುವ ತರಾತುರಿಯಲ್ಲಿರುವ ಪಂಡಿತರಿಗೆ ಅರ್ಥ ಮಾಡಿಸುವವರ್‍ಯಾರು?!


ಇದನ್ನೂ ಓದಿ: ನಮ್ಮ ಕೃಷಿಯಿಂದಾಗಿ ಕೋಟಿಗಟ್ಟಲೆ ಟನ್ ಮಣ್ಣು ಅರಬ್ಬೀ ಸಮುದ್ರ ಸೇರ್ತಾ ಇದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...