Homeಕರ್ನಾಟಕ'ಮಾನವತಾವಾದಿ' ಸಂವಿಧಾನವನ್ನು 'ಮನುವಾದಿ' ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

- Advertisement -
- Advertisement -

‘ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ’ ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್ ಹೇಳಿದರು.

ರಾಷ್ಟ್ರೀಯ ವಿಜ್ಞಾನ‌ ದಿನದ ಅಂಗವಾಗಿ ‘ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ನೇಗಿಲಯೋಗಿ ಟ್ರಸ್ಟ್, ಅಖಿಲ ಭಾರತ ವಿಚಾರವಾದಿಗಳ ಟ್ರಸ್ಟ್‌’ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ವಿಚಾರಕ್ರಾಂತಿ-ಒಂದು ದಿನದ ರಾಜ್ಯ ಮಟ್ಟದ ಸಮಾವೇಶ’ದಲ್ಲಿ ಪ್ರೊಫೆಸರ್ ನರೇಂದ್ರ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

‘ನಾವು ಯಾರಿಗೂ ಉಪದೇಶ ಮಾಡಬೇಕಾಗಿಲ್ಲ; ಎಲ್ಲರಿಗೂ ಎಲ್ಲ ಗೊತ್ತು. ನಮಗೆ ಯಾವುದೇ ಅಧಿಕಾರವಿಲ್ಲ, ಅತಿಮಾನುಷ ಶಕ್ತಿ ಇಲ್ಲ. ಏನು ಮಾಡಲು ಸಾಧ್ಯ? ನಾಸ್ತಿಕರಾಗಿರುವುದೆಂದರೆ ನಮಗೆ ಯಾವುದೇ ಅತಿಮಾನುಷ ಶಕ್ತಿಯಲ್ಲಿ ನಂಬಿಕೆಯಿಲ್ಲ ಎಂಬ ನಿಲುವಿಗೆ ಬಂದುಬಿಡುತ್ತೇವೆ. ಅಲ್ಲ, ನಾವು ನಾಸ್ತಿಕರು ಹೇಳುತ್ತೇವೆ; ಎಲ್ಲರೂ ಸಮಾನರು, ಯಾವುದೇ ತಾರತಮ್ಯವಿಲ್ಲ; ಮಾನವತಾವಾದ ಮಾತ್ರ’ ಎಂದು ಹೇಳಿದರು.

‘ಎಲ್ಲವನ್ನೂ ತರ್ಕಬದ್ಧವಾಗಿ ಆಲೋಚಿಸುವುದು, ಪ್ರತಿಯೊಂದನ್ನು ಪ್ರಶ್ನಿಸುವುದು. ಮಾನವತಾವಾದ ಇನ್ನೂ ಒಂದು ಹೆಜ್ಜೆ ಮುಂದೆ ಎಂದರೆ, ಎಲ್ಲ ಮಾನವರು ಸಮಾನ; ಭಾಷೆ, ಜನಾಂಗ, ರಾಷ್ಟ್ರೀಯತೆ, ಲೈಂಗಿಕತೆ, ಜೆಂಡರ್ ಈ ಎಲ್ಲ ವ್ಯತ್ಯಾಸಗಳನ್ನು ಹೊರತುಪಡಿಸಿ ನಾವು ಮಾನವರು; ಅದೇ ಮಾನವತಾವಾದ’ ಎಂದರು.

‘ನಮಗಿರುವುದು ಒಂದೇ ಪವಿತ್ರ ಗ್ರಂಥ, ಬೈಬಲ್ ಅಲ್ಲ, ಖುರಾನ್ ಅಲ್ಲ, ಯಾವುದೇ ಧರ್ಮಗ್ರಂಥಗಳಲ್ಲ. ಅಂತಾರಾಷ್ಟ್ರೀಯ ಮಾನವಹಕ್ಕುಗಳ ಘೋಷಣೆಯೇ ನಮಗೆ ಪವಿತ್ರಗ್ರಂಥ. ನಾವು ಭಾರತದ ಸಂವಿಧಾನದ ಪರವಾಗಿದ್ದೇವೆ, ಅಲ್ಲಿ ಒಂದುವಿಧಿ, ಆರ್ಟಿಕಲ್ 51 (ಎಎಚ್) ಇದೆ. ಇದು ಪ್ರತಿಯೊಬ್ಬರೂ ವೈಜ್ಞಾನಿಕ ಮನೋಬಾವ ಬೆಳೆಸಿಕೊಳ್ಳಬೇಕು ಎನ್ನುತ್ತದೆ. ಪ್ರಶ್ನಿಸುವ ಮನೋಭಾವ ಮತ್ತು ಮಾನವತೆಯನ್ನು ಬೆಳಸಿಕೊಳ್ಳಬೇಕು ಎನ್ನುತ್ತದೆ. ನಮ್ಮ ಸಂವಿಧಾನವೇ ನಮಗೆ ಅಂತಿಮ. ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ’ ಎಂದರು.

‘ವೈಜ್ಞಾನಿಕ ಮಾನವಕುಲಶಾಸ್ತ್ರ ಮತ್ತು ಅಂಬೇಡ್ಕರ್ ಅವರ ಚಿಂತನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಂತಕರಾದ ಬಿ. ಶ್ರೀಪಾದ್ ಭಟ್, ‘ಮಾನವಶಾಸ್ತ್ರಜ್ಞ ಎಂದು ಅಂಬೇಡ್ಕರ್ ಅವರನ್ನ ಗುರುತಿಸುವಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ; ನಾನ್ಯಾರು ಎಂದು ಬುದ್ಧಿಸ್ಟ್ ಕೇಳುವುದಿಲ್ಲ; ನಮ್ಮನ್ನು ಯಾವ ರೀತಿ ಟ್ರೀಟ್ ಮಾಡಲಾಗುತ್ತದೆ ಎಂದು ಕೇಳುತ್ತಾರೆ. ಅಂಬೇಡ್ಕರ್ ಮಾನವ ಕುಲಶಾಸ್ತ್ರೀಯರಾಗಿಗಿ ಈ ಪ್ರಶ್ನೆ ಕೇಳಿದ್ದರು. ತನ್ನ ವೈಯಕ್ತಿಕ ನೋವನ್ನು ಯೂನಿವರ್ಸಲ್ ಆಗಿ ನೋಡಿದ್ದು ಅಂಬೇಡ್ಕರ್ ಮಾತ್ರ’ ಎಂದರು.

‘ವೈಜ್ಞಾನಿಕ ಮಾನವಕುಲಶಾಸ್ತ್ರ ಮತ್ತು ಅಂಬೇಡ್ಕರ್ ಅವರ ಚಿಂತನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಂತಕರಾದ ಬಿ. ಶ್ರೀಪಾದ್ ಭಟ್

‘ಉದಾಹರಣೆಗೆ.. ಭಾರತದಲ್ಲಿ ಪಸಿದ್ಧರಾದ ಎಂ.ಎನ್‌. ಶ್ರೀನಿವಾಸ್, ಅವರನ್ನು ಸಮಾಜ ವಿಜ್ಞಾನಿ ಎಂದು ಕರೆಯುತ್ತಾರೆ. ಅವರು ಮೈಸೂರಿನ ರಾಂಪುರ ಕುರಿತು ಪುಸ್ತಕ ಬರೆದಿರುವದನ್ನೂ ನಮ್ಮಲ್ಲಿ ಹಲವರು ಓದಿದ್ದಾರೆ. ಅವರು ಹಲವು ವರ್ಷಗಳ ಕಾಲ ಅದೇ ಗ್ರಾಮದಲ್ಲಿ ಉಳಿದುಕೊಂಡಿದ್ದರು. ಹಳ್ಳಿಗಳು ಹೇಗೆ ಜಾತಿ ಆಧಾರವಾಗಿ ಕಟ್ಟಲ್ಪಟ್ಟಿವೆ ಎಂಬುದನ್ನು ಅಧ್ಯಯನ ಮಾಡುತ್ತಾರೆ. ಆದರೆ, ಅವರು ಹೋಗಿ ಉಳಿದುಕೊಳ್ಳುವುದು ಅಗ್ರಹಾರದ ಬ್ರಾಹ್ಮಣದ ಮನೆಯಲ್ಲಿ. ಅಗ್ರಹಾರದ ಮೂಲಕ ಹೋದಾಗ ಮಾಹಿತಿಗಳು ಖಚಿತವಾಗಿರುವುದಿಲ್ಲ. ಶ್ರೀನಿವಾಸ್ ದಲಿತ ಕೇರಿಗೆ ಹೋಗುತ್ತೇನೆ ಎಂದಾಗ, ‘ದಲಿತರ ಬಗ್ಗೆ ನಾವೇ ಹೇಳುತ್ತೇವೆ.. ಅವರಿಗೇನು ಗೊತ್ತು’ ಎಂದು ಬ್ರಾಹ್ಮಣರು ಹೇಳುತ್ತಾರೆ; ಇದು ಬ್ರಾಹ್ಣಣಿಸಮ್’ ಎಂದು ವಿವರಿಸಿದರು.

‘ಅಂಬೇಡ್ಕರ್ ಪ್ರಶ್ನಿಸಿದ್ದು ಇದನ್ನೇ, ‘ನಮ್ಮನ್ನೇಕೆ ಹೀಗೆ ನಡೆಸಿಕೊಳ್ಳುತ್ತಿದ್ದೀರಾ’ ಎನ್ನುತ್ತಾರೆ. ಆದ್ದರಿಂದ ಅಂಬೇಡ್ಕರ್ ಅವರ ಮಾನಶಾಸ್ತ್ರ ಅಧ್ಯಯನವನ್ನು ನಾವು ಓದಬೇಕಾಗಿದೆ. ಅವರು ಸಮಾನತೆ, ಸ್ವಾತಂತ್ರ ಮತ್ತು ಸಹೋದರತೆ ಎಂದು ಪ್ರತಿಪಾದಿಸುತ್ತಾರೆ.. ಅದು ಮೇಲ್ಮುಖ ಚಲನೆ. ಆದರೆ, ಮಾನವ ಶಾಸ್ತ್ರಜ್ಞರು ಎಂದು ಗುರುತಿಸಲ್ಪಟ್ಟ ಶ್ರೀನಿವಾಸ್, ಸಂಸ್ಕೃತೀಕರಣದ ಮೇಲ್ಮುಖ ಚಲನೆ ಎನ್ನುತ್ತಾರೆ. ಇವೆರಡರ ನಡುವಿನ ವ್ಯತ್ಯಾಸ ಎಂದರೆ ‘ನೀವು ಯಾಕೆ ಈ ರೀತಿ ವರ್ತಿಸುತ್ತಿದ್ದೀರಿ? ಮತ್ತು ನೀವು ಹೇಗೆ ನಡೆಸಿಕೊಳ್ಳುತ್ತಿದ್ದೀರಿ? ಎಂಬುದು. ಅದೇ ಅಂಬೇಡ್ಕರ್ ಅವರ ಮಾನವಶಾಸ್ತ್ರ ಅಧ್ಯಯನದ ಬಹಳ ದೊಡ್ಡ ವಿಚಾರ’ ಎಂದು ಹೇಳಿದರು.

‘ರಂಜಿತ್ ಗುಹಾ, ಪಾರ್ಥ ಚಟರ್ಜಿ ತರಹದವರು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ‘ಸಬಾಲ್ಟರ್ನ್’ ಅಧ್ಯಯನ ನಡೆಸಿದ್ದಾರೆ. ಅವರು ಎಲ್ಲಿಯೂ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ವಿದೇಶೀಯ ಅಧ್ಯಯನಕಾರರಾದ ಲೂಯಿಸ್ ಟಬೇಟೋ, ರಿಸ್ತೆ, ಡಿ.ಡಿ. ಕೋಸಂಬಿ, ನಿರ್ಮಲ್ ಕುಮಾರ್, ರಜನಿ ಕೊಠಾರಿ ಸೇರಿದಂತೆ ಅನೇಕರನ್ನು ಸಮಾಜ ಶಾಸ್ತ್ರಜ್ಞರು, ಮಾನವ ಕುಲ ಶಾಸ್ತ್ರಜ್ಞರು ಎಂದು ಗುರುತಿಸುತ್ತಾರೆ. ಆದರೆ, ಎಲ್ಲಿಯೂ ಅಂಬೇಡ್ಕರ್ ಅವರನ್ನು ಮಾನವ ಕುಲ ಶಾಸ್ತ್ರಜ್ಞ ಎಂದು ಗುರುತಿಸಿಲ್ಲ. ಏಕೆಂದರೆ, ಇವರಿಗೆ ಅಂಬೇಡ್ಕರ್ ಅವರನ್ನು ಯಾವ ರೀತಿ ಓದಬೇಕು ಎಂಬ ಗ್ರಹಿಕೆಯೇ ಇರಲಿಲ್ಲ. ಗ್ರಹಿಕೆ ಇಲ್ಲದ ಓದಿನಿಂದ ಮೊದಲ ದೃಷ್ಟಿಕೋನವೇ ಬದಲಾಗುತ್ತದೆ; ಆಗ ನಮ್ಮ ಸಂವೇದನೆ ಕೂಡ ಬದಲಾಗುತ್ತದೆ. ಸಂವೇದನೆ ಬದಲಾದಾಗ ನಮ್ಮ ವಿಚಾರ ಮಂಡನೆ ಕೂಡ ಬದಲಾಗುತ್ತದೆ’ ಎಂದರು.

‘ಅಂಬೇಡ್ಕರ್ ಅವರ ಮಾನವ ಶಾಸ್ತ್ರ ಅಧ್ಯಯನದ ಬಗ್ಗೆ ನಾವು ಮಾತನಾಡಬೇಕಾದರೆ, ಅವರು ಬರೆದ ಮೂರು ಮುಖ್ಯ ವಿಷಯಗಳ ಬಗ್ಗೆ ನಾವು ಓದಬೇಕು. 1916ರಲ್ಲಿ ಅವರು ಮಂಡಿಸಿ ಪ್ರಬಂಧ; ಅದರಲ್ಲಿ ಅವರು ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುತ್ತಲೇ ‘ಎಕ್ಸೋಗಾಮಿ ಮತ್ತು ಎಂಡೋಗಾಮಿ’ ಬಗ್ಗೆ ಚರ್ಚೆ ಮಾಡುತ್ತಾರೆ. ಇವೆಲ್ಲವೂ ನಮಗೆ ಅರ್ಥ ಮಾಡಿಕೊಳ್ಳಬೇಕಾದರೆ ನಾವು ಅವರ ಮಾನವ ಶಾಸ್ತ್ರ ಅಧ್ಯಯನವನ್ನು ಓದಬೇಕು’ ಎಂದು ಹೇಳಿದರು.

ಸಮಾವೇಶವನ್ನು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಬರಗೂರು ರಾಮಚಂದ್ರಪ್ಪ, ವಕೀಲರಾದ ಅನಂತ್ ನಾಯ್ಕ್ ಮತ್ತು ಹಿರಿಯ ಪತ್ರಕರ್ತರಾದ ಪ್ರದೀಪ್ ಮಾಲ್ಗುಡಿ ಇದ್ದರು.

ಇದನ್ನೂ ಓದಿ; ಪಾಕಿಸ್ತಾನ ಪರ ಘೋಷಣೆ ಆರೋಪ ಸಾಬೀತಾದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಬಿಎಸ್‌ಇ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಬೋರ್ಡ್ ಪರೀಕ್ಷೆ ಕಡ್ಡಾಯ, ಪರಿಣಾಮಗಳ ಬಗ್ಗೆ ಎಚ್ಚರಿಕೆ

ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಬೋರ್ಡ್ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪಷ್ಟಪಡಿಸಿದ್ದು, ಮೊದಲ ಆವೃತ್ತಿಯಲ್ಲಿ ಕನಿಷ್ಠ ಮೂರು ವಿಷಯಗಳನ್ನು ಪ್ರಯತ್ನಿಸದ ವಿದ್ಯಾರ್ಥಿಗಳು "ಅಗತ್ಯ...

ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್‌

ವಿಧಾನಸಭೆಯ 2023ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಎನ್‌.ಸುಬ್ಬಾರೆಡ್ಡಿ ಆಯ್ಕೆಯಾಗಿರುವುದನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ &ಬೆಂಚ್ ಸೋಮವಾರ (ಫೆ.16) ವರದಿ ಮಾಡಿದೆ. ಸುಬ್ಬಾರೆಡ್ಡಿ...

ಗಂಗಾವತಿ : ವಿದೇಶಿ ಮಹಿಳೆ ಸೇರಿ ಇಬ್ಬರ ಅತ್ಯಾಚಾರ, ಓರ್ವನ ಕೊಲೆ ಪ್ರಕರಣ ; ಮೂವರು ಅಪರಾಧಿಗಳಿಗೆ ಮರಣದಂಡನೆ

ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಸ್ಥಳೀಯ ಹೋಮ್‌ ಸ್ಟೇ ಮಾಲಕಿ ಮತ್ತು ಇಸ್ರೇಲಿ ಯುವತಿ ಮೇಲೆ ಅತ್ಯಾಚಾರವೆಸಗಿ, ಅವರ ಜೊತೆಗಿದ್ದ ಯುವಕನನ್ನು ಕೊಲೆಗೈದ ಪ್ರಕರಣದ ಮೂವರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ...

ಶಿವಮೊಗ್ಗ: 40 ಸಾವಿರ ಲಂಚ ಪಡೆಯುತ್ತಿದ್ದ ಕೆಎಎಸ್ ಅಧಿಕಾರಿ ಸೇರಿ ಇಬ್ಬರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು 

ಶಿವಮೊಗ್ಗ: 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ (KAS officer) ಸಿದ್ದಲಿಂಗ ರೆಡ್ಡಿ ಮತ್ತು ಗ್ರಾಮ ಸಹಾಯಕ ರಾಜೇಶ್‌ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ...

ದ್ವೇಷ ಭಾಷಣ | ಅಸ್ಸಾಂ ಸಿಎಂ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ; ಹೈಕೋರ್ಟ್‌ಗೆ ಹೋಗಲು ಸೂಚನೆ

ಸಂವಿಧಾನದ 32ನೇ ವಿಧಿಯಡಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಈ ವಿಷಯವಾಗಿ ಗುವಾಹಟಿ ಹೈಕೋರ್ಟ್...

ಕಲಬುರಗಿ| ಅನುಮತಿ ಇಲ್ಲದೆ ಪುರಾತತ್ವ ಇಲಾಖೆ ಕೋಟೆ ಪ್ರವೇಶಕ್ಕೆ ಯತ್ನಿಸಿದ ಪಿಎಸ್‌ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ತಂಡ

ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ನೇತೃತ್ವದ ಗುಂಪೊಂದು ಭಾನುವಾರ ಕಲಬುರಗಿ ಕೋಟೆಗೆ ಮಹಾಶಿವರಾತ್ರಿ ಪೂಜೆ ಮಾಡಲು ಅನುಮತಿಯಿಲ್ಲದೆ ಪ್ರವೇಶಿಸಲು ಯತ್ನಿಸಿದ...

‘ಆರೆಸ್ಸೆಸ್ ಭೂತ, ಬಿಜೆಪಿ ಅದರ ನೆರಳು’: ಆರ್‌ಎಸ್‌ಎಸ್ ನೋಂದಣಿ ಆಗೇ ಆಗುತ್ತೆ, ನಾವು ಮಾಡಿಸುತ್ತೇವೆ: ಪ್ರಿಯಾಂಕ್ ಖರ್ಗೆ 

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಆರ್‌ಎಸ್‌ಎಸ್ ಮತ್ತು ಅದರ ಸೈದ್ಧಾಂತಿಕ ಸಂತತಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ "ಜೆಡಿ (ಎಸ್) ಗಿಂತ ದುರ್ಬಲವಾಗಿದೆ"...

ರಾಜಸ್ಥಾನ| ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ಏಳು ಮಂದಿ ಸಾವು – ಹಲವರು ಸಿಲುಕಿರುವ ಶಂಕೆ

ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಭಿವಾಡಿ ಪಟ್ಟಣದಲ್ಲಿ ಸೋಮವಾರ ಅಕ್ರಮ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಮಭವಿಸಿದ ಬೆಂಕಿ ಅವಘಡದಲ್ಲಿ ಏಳು ಮಂದಿ ಸಜೀವ ದಹನಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಇದು...

ಶಬರಿಮಲೆಗೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಸಂವಿಧಾನ ಪೀಠ

ಏಪ್ರಿಲ್ 7 ರಿಂದ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು 9 ನ್ಯಾಯಾಧೀಶರ ಪೀಠವನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಫೆಬ್ರವರಿ 16, ಸೋಮವಾರದಂದು ಘೋಷಿಸಿರುವುದಾಗಿ ಲೈವ್ ಲಾ...

ಬಾಂಗ್ಲಾ ಪ್ರಧಾನಿ ಪದಗ್ರಹಣ : ಭಾರತವನ್ನು ಪ್ರತಿನಿಧಿಸಲಿರುವ ಸ್ಪೀಕರ್ ಓಂ ಬಿರ್ಲಾ

ಫೆಬ್ರವರಿ 17ರಂದು ನಡೆಯಲಿರುವ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಖ್ ರೆಹಮಾನ್ ಅವರ ಪದಗ್ರಹಣದ ಸಮಾರಂಭದಲ್ಲಿ ಭಾರತದಿಂದ ಅಧಿಕೃತ ಪ್ರತಿನಿಧಿಯಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು...