Homeಕರ್ನಾಟಕಹೆಣ್ಣು ಮಕ್ಕಳ ಕೈಕಾಲು ತೆಗೆಯಲು ಸೂಚಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಯನ್ನೆ ಮೊದಲು ಜೈಲಿಗೆ ಕಳಿಸಬೇಕು

ಹೆಣ್ಣು ಮಕ್ಕಳ ಕೈಕಾಲು ತೆಗೆಯಲು ಸೂಚಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಯನ್ನೆ ಮೊದಲು ಜೈಲಿಗೆ ಕಳಿಸಬೇಕು

- Advertisement -
- Advertisement -

‘ಸಂಗಾತಿಯನ್ನು ಆಯ್ಕೆ ಮಾಡುವಾಗ ಮಗಳು ನಿಮ್ಮ ಮಾತು ಕೇಳದಿದ್ದರೆ ಆಕೆಯ ಕೈಯೋ ಕಾಲನ್ನೋ ಮುರಿದು ಬಿಡಿ’ ಎಂಬ ಮಾತನ್ನು ಕೊರಟಗೆರೆ ತಾಲೂಕು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯವಾದ ಸಲಹೆಯನ್ನು ನೀಡಿದ್ದಾರೆ. ಎಂಥೆಂಥ ಮಹಾಪುರುಷರು ವೀರಶೈವರಲ್ಲಿದ್ದಾರೆ ಎಂಬುದಕ್ಕೆ ಈ ಪುಣ್ಯಾತ್ಮನ ಮಾತು ಸಾಕ್ಷಿಯಾಗಿದೆ. ಸಕಲ ಜೀವಪ್ರೇಮಿಯಾಗಿರಿ ಎಂದು ಬಸವಣ್ಣನವರು ಸಾರುತ್ತ ಬಂದಿದ್ದರೆ , ಹಾರುವರ ಪ್ರಭಾವಕ್ಕೆ ಒಳಗಾದ ವೀರಶೈವವಾದಿಗಳು ಮನುವಾದಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬಿಟ್ಟಿದ್ದಾರೆ. ‘ಬ್ರಾಹ್ಮಣರಿಗಿಂತಲೂ ಬ್ರಾಹ್ಮಣ್ಯ ಹೊಂದಿದ ವ್ಯಕ್ತಿ ತುಂಬಾ ಅಪಾಯಕಾರಿ’ ಎಂಬ ಮಾತು ಸತ್ಯ.

ವೈದಿಕರಿಗಿಂತಲೂ ವೈದಿಕತ್ವದ ಬಗೆಗೆ ಆಸಕ್ತಿ ಹೊಂದಿದ ನಾನು ಅವರಿಗಿಂತಲೂ ಒಂದು ಕೈ ಮಿಗಿಲು ಎಂಬ ಧೋರಣೆಗಳುಳ್ಳ ವೀರಶೈವ ಮಠಾಧೀಶರು ತಮ್ಮ ತಲೆಯಲ್ಲಿ ವೈದಿಕತ್ವದ ಕಸವನ್ನು ತುಂಬಿಕೊಂಡು ಬಗ್ಗಡಗೊಂಡಿದ್ದಾರೆ. ಹೀಗಾಗಿಯೆ ಈ ವೀರಶೈವವಾದಿ ಮಠಾಧಿಪತಿಗಳು ನಾವೂ ಹಿಂದುಗಳು ಎಂದು ಹೇಳುತ್ತ ನಡೆದಿದ್ದಾರೆ. ಬಹುತೇಕ ವೀರಶೈವ ಪೀಠದಲ್ಲಿ ಪೀಠಾಧಿಕಾರಿಯಾಗಿ ಅಮರಿಕೊಂಡಿರುವ ಮಠಾಧೀಶರಿಗೆ ಯಾವುದೆ ತಿಳುವಳಿಕೆ ಇಲ್ಲ. ಸಂಸ್ಕøತದ ಸುಳ್ಳು ಸೊಟ್ಟುಗಳ ನಾಲ್ಕಾರು ಮಂತ್ರಗಳು ಬಾಯಿಪಾಠ ಮಾಡಿಕೊಂಡು ಕಂಡ ಕಂಡದಲ್ಲಿ ತಮ್ಮ ದಡ್ಡ ಭಕ್ತರ ಮುಂದೆ ಅವನ್ನೇ ಹೇಳಿ ತಮ್ಮ ಪ್ರೌಢಿಮೆ ಮೆರೆಯುತ್ತಾರೆ. ಇಂಥವರಿಗೆ ಸಾಮಾನ್ಯ ಜ್ಞಾನವೂ ಗಗನ ಕುಸುಮ.

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವಾ

ಎಂದು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮಹಿಳೆಯನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ. ಪ್ರೀತಿಯನ್ನು ಬಿಟ್ಟು ಜೀವನ ಮಾಡಲು ಯಾರಿಗಾದರೂ ಸಾಧ್ಯವೆ ? ನಮ್ಮೆಲ್ಲರ ಜನನಕ್ಕೆ ಮೂಲ ಕಾರಣ ಮಾಯೆ (ಪ್ರೀತಿ), ನಮ್ಮ ಮಗಳಾಗಿ ಜನಿಸುವವಳು ಹೆಣ್ಣೆ, ನಮ್ಮೊಂದಿಗೆ ಜೀವ ಪಥದಲ್ಲಿ ಹೆಜ್ಜೆ ಹಾಕುವವಳು ಹೆಣ್ಣೆ. ಇವಳನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ ಎಂದು ಹೇಳಿ ಹೆಣ್ಣನ್ನು ಗೌರವಾರ್ಹ ವ್ಯಕ್ತಿಯಾಗಿ ಕಂಡಿದ್ದಾರೆ.

ಹೆಣ್ಣು ಕೇವಲ ಭೋಗದ ವಸ್ತುವಾಗಿ ಕಂಡ ಸನಾತನ ಪರಂಪರೆಯ ಜನ ಆಕೆಯನ್ನು ಸತಿ ಸಹಗಮನಕ್ಕೆ ಹಿಂದೆ ದೂಡಿದ್ದರು. ದೇವರ ಹೆಸರಿನ ಮೇಲೆ ಆಕೆಯನ್ನು ಬಸವಿಗೆ ಬಿಟ್ಟಿದ್ದರು. ಕೆರೆಗೆ ಆಹಾರವಾಗಿಯೂ ಹೆಣ್ಣನ್ನೆ ಬಲಿಕೊಟ್ಟರು. ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಚಿಂತನೆಯೆ ಪ್ರಜಾಪ್ರಭುತ್ವ ವಿರೋಧಿ. ಬ್ರಾಹ್ಮಣಶಾಹಿ ವ್ಯವಸ್ಥೆಯಲ್ಲಿ ಇಂದಿಗೂ ಮಹಿಳೆಗೆ ಪೂಜೆಯ ಹಕ್ಕನ್ನು ನಿರಾಕರಿಸಲಾಗಿದೆ. ಮಹಿಳೆ ಮುಟ್ಟಾಗುತ್ತಾಳಾದ್ದರಿಂದ ಆಕೆ ಕೀಳು ಎಂಬುದು ಪ್ರಚಲಿತದಲ್ಲಿದೆ. ಹಲವಾರು ದೇವಸ್ಥಾನದಲ್ಲೂ ಮಹಿಳೆಯರನ್ನು ನಿರಾಕರಿಸಲಾಗಿದೆ. ಆದ್ದರಿಂದಲೆ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣದ ಹತ್ಯೆ ನಿರಾಂತಕವಾಗಿ ನಡೆದೆ ಇದೆ.

ಕೊರಟಗೆರೆಯ ಈ ಮಠಾಧೀಶನ ತಲೆಯಲ್ಲಿರುವುದು ವೈದಿಕ ಮಿದುಳು. ವೈದಿಕ ಮಿದುಳು ಸಹಜವಾಗಿಯೆ ಅಸಮತೋಲನವಾಗಿರುತ್ತದೆ. ಅದಕ್ಕೆ ಯೋಚಿಸುವ ಶಕ್ತಿ ಇರೋದಿಲ್ಲ. ತಾನಷ್ಟೇ ಶ್ರೇಷ್ಠ ಉಳಿದವರು ಕನಿಷ್ಠ ಎಂಬ ಭ್ರಮೆ ಹೊತ್ತುಕೊಂಡಿರುತ್ತದೆ. ಮಹಿಳೆ ಅಂದರೆ ಅದೊಂದು ಉಪಯೋಗಿಸಿ ಬಿಸಾಡುವ ವಸ್ತು ಮಾತ್ರವಾಗಿರುತ್ತದೆ. ಆದ್ದರಿಂದಲೆ ಹೆಣ್ಣು ನಿಮ್ಮ ಮಾತು ಕೇಳದೆ ಹೋದರೆ ಅವಳ ಕೈಯನ್ನೋ- ಕಾಲನ್ನೋ ಕತ್ತರಿಸಿ ಎಂದು ಈ ಪುಣ್ಯಾತ್ಮ ಗುರು ತನ್ನ ಭಕ್ತರಿಗೆ ಅಪ್ಪಣೆ ಕೊಡಿಸಿದ್ದಾನೆ. ಮೊದಲೆ ತಿಳುವಳಿಕೆಯ ಕೊರತೆಯಿಂದ ಮೂರಾಬಟ್ಟೆಯಾದ ಭಕ್ತರೆಂಬ ತಲೆ ಹಿಡುಕರಿಗೆ ಗುರುವಿನ(?) ಈ ಮಾತುಗಳು ಅತ್ಯಂತ ಪ್ರೇರಕ ಅನಿಸುತ್ತವೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹಾಡುತ್ತ ಗುರುವಿನ ಮಾತಿನ ಮಾರ್ಗದಲ್ಲಿ ನಡೆಯುತ್ತ ಹೋದರೆ ಒಂದೊಂದು ಕುಟುಂಬವೂ ತಮ್ಮ ಮನೆಯಲ್ಲಿಯೆ ಸ್ಮಶಾನವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ.

ಅರಿವಿಲ್ಲದೆ ನಿಮ್ಮ ಮನೆಯ ಹೆಣ್ಣು ಮಗು ಜಾರುತ್ತಿದ್ದರೆ ಆಕೆಗೆ ವಿವೇಕ ನೀಡಿ, ಸಂಯಮದಿಂದ ವರ್ತಿಸುವಂತೆ ತಿಳಿ ಹೇಳಬೇಕು. ಸಾಂಸಾರಿಕ ಜೀವನವೆಂಬದು ಸಂತಸದ ಮಾರ್ಗವಾಗಬೇಕಾದರೆ ಸತಿಪತಿಗಳೊಂದಾಗಿ ನಡೆದಾಗಲೆ ಹಿತವಾಗಬಲ್ಲುದು ಎಂಬುದನ್ನು ಅವರಿಗೆ ಮನದಷ್ಟು ಮಾಡಿಸಬೇಕು. ತಮ್ಮ ಹಾಗೂ ಆ ಹುಡುಗನ ಕುಟುಂಬದ ರೀತಿ ರಿವಾಜುಗಳು ಹೊಂದಿಕೆಯಾಗಬಲ್ಲವೆ ? ಎಂಬುದನ್ನು ಇಣುಕಿ ನೋಡಲು ಹಚ್ಚಬೇಕು.

ಇಂಥ ಮನ ಬದಲಾವಣೆಯ ಚಿಂತನೆಯನ್ನು ಬಿಟ್ಟು, ಆ ಹೆಣ್ಣು ಮಗುವಿನ ಕಾಲೋ ಕೈಯೋ ತೆಗೆಯಿರಿ. ಅವಳನ್ನು ಶಾಶ್ವತ ಅಂಗವೈಕಲ್ಯಕ್ಕೆ ದೂಡಿ ಎಂಬ ವಿವೇಕರಹಿತ ವೀರಭದ್ರಶಿವಾಚಾರ್ಯನನ್ನು ಯಾವುದೆ ಮುಲಾಜು ಇಲ್ಲದೆ ಜೈಲಿಗೆ ಅಟ್ಟಬೇಕು. ಹಿಂಸೆಯನ್ನು ಪ್ರಚೋದಿಸುವ ಇಂಥ ಮಠಾಧೀಶ ಇದ್ದರೆಷ್ಟು? ಬಿಟ್ಟರೆಷ್ಟು! ಇನ್ನಾದರೂ ವೀರಶೈವ ವಾದಿಗಳು ಇಂಥ ಅಯೋಗ್ಯ ಮಠಾಧೀಶರ ಬೆನ್ನುಬಿದ್ದು ತಮ್ಮನ್ನು ತಾವು ಹಾಳು ಮಾಡಿಕೊಳ್ಳದೆ, ತಮ್ಮ ಬದುಕನ್ನು ಶರಣರ ವಚನಗಳ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...