Homeಕರ್ನಾಟಕಹೆಣ್ಣು ಮಕ್ಕಳ ಕೈಕಾಲು ತೆಗೆಯಲು ಸೂಚಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಯನ್ನೆ ಮೊದಲು ಜೈಲಿಗೆ ಕಳಿಸಬೇಕು

ಹೆಣ್ಣು ಮಕ್ಕಳ ಕೈಕಾಲು ತೆಗೆಯಲು ಸೂಚಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಯನ್ನೆ ಮೊದಲು ಜೈಲಿಗೆ ಕಳಿಸಬೇಕು

- Advertisement -
- Advertisement -

‘ಸಂಗಾತಿಯನ್ನು ಆಯ್ಕೆ ಮಾಡುವಾಗ ಮಗಳು ನಿಮ್ಮ ಮಾತು ಕೇಳದಿದ್ದರೆ ಆಕೆಯ ಕೈಯೋ ಕಾಲನ್ನೋ ಮುರಿದು ಬಿಡಿ’ ಎಂಬ ಮಾತನ್ನು ಕೊರಟಗೆರೆ ತಾಲೂಕು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯವಾದ ಸಲಹೆಯನ್ನು ನೀಡಿದ್ದಾರೆ. ಎಂಥೆಂಥ ಮಹಾಪುರುಷರು ವೀರಶೈವರಲ್ಲಿದ್ದಾರೆ ಎಂಬುದಕ್ಕೆ ಈ ಪುಣ್ಯಾತ್ಮನ ಮಾತು ಸಾಕ್ಷಿಯಾಗಿದೆ. ಸಕಲ ಜೀವಪ್ರೇಮಿಯಾಗಿರಿ ಎಂದು ಬಸವಣ್ಣನವರು ಸಾರುತ್ತ ಬಂದಿದ್ದರೆ , ಹಾರುವರ ಪ್ರಭಾವಕ್ಕೆ ಒಳಗಾದ ವೀರಶೈವವಾದಿಗಳು ಮನುವಾದಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬಿಟ್ಟಿದ್ದಾರೆ. ‘ಬ್ರಾಹ್ಮಣರಿಗಿಂತಲೂ ಬ್ರಾಹ್ಮಣ್ಯ ಹೊಂದಿದ ವ್ಯಕ್ತಿ ತುಂಬಾ ಅಪಾಯಕಾರಿ’ ಎಂಬ ಮಾತು ಸತ್ಯ.

ವೈದಿಕರಿಗಿಂತಲೂ ವೈದಿಕತ್ವದ ಬಗೆಗೆ ಆಸಕ್ತಿ ಹೊಂದಿದ ನಾನು ಅವರಿಗಿಂತಲೂ ಒಂದು ಕೈ ಮಿಗಿಲು ಎಂಬ ಧೋರಣೆಗಳುಳ್ಳ ವೀರಶೈವ ಮಠಾಧೀಶರು ತಮ್ಮ ತಲೆಯಲ್ಲಿ ವೈದಿಕತ್ವದ ಕಸವನ್ನು ತುಂಬಿಕೊಂಡು ಬಗ್ಗಡಗೊಂಡಿದ್ದಾರೆ. ಹೀಗಾಗಿಯೆ ಈ ವೀರಶೈವವಾದಿ ಮಠಾಧಿಪತಿಗಳು ನಾವೂ ಹಿಂದುಗಳು ಎಂದು ಹೇಳುತ್ತ ನಡೆದಿದ್ದಾರೆ. ಬಹುತೇಕ ವೀರಶೈವ ಪೀಠದಲ್ಲಿ ಪೀಠಾಧಿಕಾರಿಯಾಗಿ ಅಮರಿಕೊಂಡಿರುವ ಮಠಾಧೀಶರಿಗೆ ಯಾವುದೆ ತಿಳುವಳಿಕೆ ಇಲ್ಲ. ಸಂಸ್ಕøತದ ಸುಳ್ಳು ಸೊಟ್ಟುಗಳ ನಾಲ್ಕಾರು ಮಂತ್ರಗಳು ಬಾಯಿಪಾಠ ಮಾಡಿಕೊಂಡು ಕಂಡ ಕಂಡದಲ್ಲಿ ತಮ್ಮ ದಡ್ಡ ಭಕ್ತರ ಮುಂದೆ ಅವನ್ನೇ ಹೇಳಿ ತಮ್ಮ ಪ್ರೌಢಿಮೆ ಮೆರೆಯುತ್ತಾರೆ. ಇಂಥವರಿಗೆ ಸಾಮಾನ್ಯ ಜ್ಞಾನವೂ ಗಗನ ಕುಸುಮ.

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವಾ

ಎಂದು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮಹಿಳೆಯನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ. ಪ್ರೀತಿಯನ್ನು ಬಿಟ್ಟು ಜೀವನ ಮಾಡಲು ಯಾರಿಗಾದರೂ ಸಾಧ್ಯವೆ ? ನಮ್ಮೆಲ್ಲರ ಜನನಕ್ಕೆ ಮೂಲ ಕಾರಣ ಮಾಯೆ (ಪ್ರೀತಿ), ನಮ್ಮ ಮಗಳಾಗಿ ಜನಿಸುವವಳು ಹೆಣ್ಣೆ, ನಮ್ಮೊಂದಿಗೆ ಜೀವ ಪಥದಲ್ಲಿ ಹೆಜ್ಜೆ ಹಾಕುವವಳು ಹೆಣ್ಣೆ. ಇವಳನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ ಎಂದು ಹೇಳಿ ಹೆಣ್ಣನ್ನು ಗೌರವಾರ್ಹ ವ್ಯಕ್ತಿಯಾಗಿ ಕಂಡಿದ್ದಾರೆ.

ಹೆಣ್ಣು ಕೇವಲ ಭೋಗದ ವಸ್ತುವಾಗಿ ಕಂಡ ಸನಾತನ ಪರಂಪರೆಯ ಜನ ಆಕೆಯನ್ನು ಸತಿ ಸಹಗಮನಕ್ಕೆ ಹಿಂದೆ ದೂಡಿದ್ದರು. ದೇವರ ಹೆಸರಿನ ಮೇಲೆ ಆಕೆಯನ್ನು ಬಸವಿಗೆ ಬಿಟ್ಟಿದ್ದರು. ಕೆರೆಗೆ ಆಹಾರವಾಗಿಯೂ ಹೆಣ್ಣನ್ನೆ ಬಲಿಕೊಟ್ಟರು. ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಚಿಂತನೆಯೆ ಪ್ರಜಾಪ್ರಭುತ್ವ ವಿರೋಧಿ. ಬ್ರಾಹ್ಮಣಶಾಹಿ ವ್ಯವಸ್ಥೆಯಲ್ಲಿ ಇಂದಿಗೂ ಮಹಿಳೆಗೆ ಪೂಜೆಯ ಹಕ್ಕನ್ನು ನಿರಾಕರಿಸಲಾಗಿದೆ. ಮಹಿಳೆ ಮುಟ್ಟಾಗುತ್ತಾಳಾದ್ದರಿಂದ ಆಕೆ ಕೀಳು ಎಂಬುದು ಪ್ರಚಲಿತದಲ್ಲಿದೆ. ಹಲವಾರು ದೇವಸ್ಥಾನದಲ್ಲೂ ಮಹಿಳೆಯರನ್ನು ನಿರಾಕರಿಸಲಾಗಿದೆ. ಆದ್ದರಿಂದಲೆ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣದ ಹತ್ಯೆ ನಿರಾಂತಕವಾಗಿ ನಡೆದೆ ಇದೆ.

ಕೊರಟಗೆರೆಯ ಈ ಮಠಾಧೀಶನ ತಲೆಯಲ್ಲಿರುವುದು ವೈದಿಕ ಮಿದುಳು. ವೈದಿಕ ಮಿದುಳು ಸಹಜವಾಗಿಯೆ ಅಸಮತೋಲನವಾಗಿರುತ್ತದೆ. ಅದಕ್ಕೆ ಯೋಚಿಸುವ ಶಕ್ತಿ ಇರೋದಿಲ್ಲ. ತಾನಷ್ಟೇ ಶ್ರೇಷ್ಠ ಉಳಿದವರು ಕನಿಷ್ಠ ಎಂಬ ಭ್ರಮೆ ಹೊತ್ತುಕೊಂಡಿರುತ್ತದೆ. ಮಹಿಳೆ ಅಂದರೆ ಅದೊಂದು ಉಪಯೋಗಿಸಿ ಬಿಸಾಡುವ ವಸ್ತು ಮಾತ್ರವಾಗಿರುತ್ತದೆ. ಆದ್ದರಿಂದಲೆ ಹೆಣ್ಣು ನಿಮ್ಮ ಮಾತು ಕೇಳದೆ ಹೋದರೆ ಅವಳ ಕೈಯನ್ನೋ- ಕಾಲನ್ನೋ ಕತ್ತರಿಸಿ ಎಂದು ಈ ಪುಣ್ಯಾತ್ಮ ಗುರು ತನ್ನ ಭಕ್ತರಿಗೆ ಅಪ್ಪಣೆ ಕೊಡಿಸಿದ್ದಾನೆ. ಮೊದಲೆ ತಿಳುವಳಿಕೆಯ ಕೊರತೆಯಿಂದ ಮೂರಾಬಟ್ಟೆಯಾದ ಭಕ್ತರೆಂಬ ತಲೆ ಹಿಡುಕರಿಗೆ ಗುರುವಿನ(?) ಈ ಮಾತುಗಳು ಅತ್ಯಂತ ಪ್ರೇರಕ ಅನಿಸುತ್ತವೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹಾಡುತ್ತ ಗುರುವಿನ ಮಾತಿನ ಮಾರ್ಗದಲ್ಲಿ ನಡೆಯುತ್ತ ಹೋದರೆ ಒಂದೊಂದು ಕುಟುಂಬವೂ ತಮ್ಮ ಮನೆಯಲ್ಲಿಯೆ ಸ್ಮಶಾನವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ.

ಅರಿವಿಲ್ಲದೆ ನಿಮ್ಮ ಮನೆಯ ಹೆಣ್ಣು ಮಗು ಜಾರುತ್ತಿದ್ದರೆ ಆಕೆಗೆ ವಿವೇಕ ನೀಡಿ, ಸಂಯಮದಿಂದ ವರ್ತಿಸುವಂತೆ ತಿಳಿ ಹೇಳಬೇಕು. ಸಾಂಸಾರಿಕ ಜೀವನವೆಂಬದು ಸಂತಸದ ಮಾರ್ಗವಾಗಬೇಕಾದರೆ ಸತಿಪತಿಗಳೊಂದಾಗಿ ನಡೆದಾಗಲೆ ಹಿತವಾಗಬಲ್ಲುದು ಎಂಬುದನ್ನು ಅವರಿಗೆ ಮನದಷ್ಟು ಮಾಡಿಸಬೇಕು. ತಮ್ಮ ಹಾಗೂ ಆ ಹುಡುಗನ ಕುಟುಂಬದ ರೀತಿ ರಿವಾಜುಗಳು ಹೊಂದಿಕೆಯಾಗಬಲ್ಲವೆ ? ಎಂಬುದನ್ನು ಇಣುಕಿ ನೋಡಲು ಹಚ್ಚಬೇಕು.

ಇಂಥ ಮನ ಬದಲಾವಣೆಯ ಚಿಂತನೆಯನ್ನು ಬಿಟ್ಟು, ಆ ಹೆಣ್ಣು ಮಗುವಿನ ಕಾಲೋ ಕೈಯೋ ತೆಗೆಯಿರಿ. ಅವಳನ್ನು ಶಾಶ್ವತ ಅಂಗವೈಕಲ್ಯಕ್ಕೆ ದೂಡಿ ಎಂಬ ವಿವೇಕರಹಿತ ವೀರಭದ್ರಶಿವಾಚಾರ್ಯನನ್ನು ಯಾವುದೆ ಮುಲಾಜು ಇಲ್ಲದೆ ಜೈಲಿಗೆ ಅಟ್ಟಬೇಕು. ಹಿಂಸೆಯನ್ನು ಪ್ರಚೋದಿಸುವ ಇಂಥ ಮಠಾಧೀಶ ಇದ್ದರೆಷ್ಟು? ಬಿಟ್ಟರೆಷ್ಟು! ಇನ್ನಾದರೂ ವೀರಶೈವ ವಾದಿಗಳು ಇಂಥ ಅಯೋಗ್ಯ ಮಠಾಧೀಶರ ಬೆನ್ನುಬಿದ್ದು ತಮ್ಮನ್ನು ತಾವು ಹಾಳು ಮಾಡಿಕೊಳ್ಳದೆ, ತಮ್ಮ ಬದುಕನ್ನು ಶರಣರ ವಚನಗಳ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...