Homeಕರ್ನಾಟಕರಂಗಾಯಣ ನಿರ್ದೇಶಕರ ನೇಮಕಾತಿಯನ್ನು ರದ್ದುಪಡಿಸಿದ ರಾಜ್ಯ ಸರ್ಕಾರ: ರಂಗಕರ್ಮಿಗಳ ಆಕ್ರೋಶ

ರಂಗಾಯಣ ನಿರ್ದೇಶಕರ ನೇಮಕಾತಿಯನ್ನು ರದ್ದುಪಡಿಸಿದ ರಾಜ್ಯ ಸರ್ಕಾರ: ರಂಗಕರ್ಮಿಗಳ ಆಕ್ರೋಶ

- Advertisement -
- Advertisement -

ಸರ್ಕಾರ ದಿಢೀರನೇ ರಂಗಾಯಣ ನಿರ್ದೇಶಕರ ನೇಮಕಾತಿಯನ್ನು ಮತ್ತು ರಂಗಸಮಾಜದ ಸಾರ್ವತ್ರಿಕ ಮಂಡಳಿ ಸದಸ್ಯರುಗಳ ನಾಮನಿರ್ದೇಶನವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಆ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡುವವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳೇ ನಿರ್ದೇಶಕರನ್ನಾಗಿ ನೇಮಕಗೊಂಡಿರುತ್ತಾರೆ. ಮೈಸೂರು ರಂಗಾಯಣದ ನಿರ್ದೇಶಕರರಾದ ಭಾಗಿರಥಿ ಬಾಯಿ ಕದಂ, ಶಿವಮೊಗ್ಗದ ನಿರ್ದೇಶಕರಾಗಿ ಎಂ.ಗಣೇಶ್, ಕಲ್ಬುರ್ಗಿ ರಂಗಾಯಣದ ಮಹೇಶ್ ವಿ.ಪಾಟೀಲ್, ಧಾರವಾಡದ ನಿರ್ಧೇಕರಾದ ಪ್ರಮೋದ್ ಶಿಗ್ಗಾಂವ್ ಹಾಗೂ ರಂಗಸಮಾಜದ ಸಾರ್ವತ್ರಿಕ ಮಂಡಳಿ ಸದಸ್ಯರಾದ ಶ್ರೀಪಾದ್ ಭಟ್, ಗೋಪಾಲಕೃಷ್ಣ ನಾಯರಿ, ಮಲ್ಲಿಕಾರ್ಜುನ ಕಡಕೋಳ, ವಿಶ್ವೇಶ್ವರಿ ಹಿರೇಮಠ, ಸಹನಾ ಪಿಂಜಾರ್, ಎಲ್.ಕೃಷ್ಣಪ್ಪ. ಎಂ.ಚಂದ್ರಾಕಾಂತರವರ ನೇಮಕಾತಿಯನ್ನು ರದ್ದುಗೊಳಿಸಿ, ಪದಮುಕ್ತಗೊಳಿಸಲಾಗಿದೆ.

“ಇದೀಗ ಬಂದಿರುವ ಸುದ್ದಿಯಂತೆ ರಾಜ್ಯ ಸರ್ಕಾರ ನಾಲ್ಕೂ ರಂಗಾಯಣದ ನಿರ್ದೇಶಕರ ಮತ್ತು ರಂಗ ಸಮಾಜದ ಸದಸ್ಯರ ಅಧಿಕಾರ ಆವಧಿಯನ್ನು ರದ್ದು ಪಡಿಸಿ, ಪದಮುಕ್ತಗೊಳಿಸಲು ಆದೇಶಿಸಿದೆ. ಇದು ಸರ್ಕಾರಕ್ಕೆ ಗೌರವ ತರುವ ಆದೇಶ ಅಲ್ಲ. ಆ ನಿರ್ದೇಶಕರು ಮತ್ತು ಸದಸ್ಯರು ಹಾಕಿಕೊಂಡ ಯೋಜನೆ ಹಾಗೂ ಕನಸುಗಳನ್ನು ಹೊಸಕಿ ಹಾಕುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಅವರ ಕಾಲಾವಧಿಯನ್ನು ಮುಂದುವರಿಸಿ. ನನಗೆ ಗೊತ್ತಿರುವಂತೆ ಶ್ರೀ ಡಾ. ಎಂ ಗಣೇಶ್, ಶ್ರೀ ಪ್ರಮೋದ್ ಶಿಗ್ಗಾಂವ್, ಶ್ರೀಮತಿ ಭಾಗೀರಥಿ ಬಾಯಿ ಕದಂ ಎಲ್ಲರೂ ಹೊಸ ತಲೆಮಾರಿನ ನಿರ್ದೇಶಕರು ಬಹಳ ಜತನದಿಂದ ಕೆಲಸ ಮಾಡುತ್ತಿದ್ದಾರೆ, ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಅದನ್ನು ಸಂಪೂರ್ಣವಾಗಿ ಮುಗಿಸಲು ಬಿಡಿ”. ಎಂದು ರಂಗ ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ಇದೊಂದು ಅನಿಷ್ಟ ಅನಾರೋಗ್ಯಕರ ಪದ್ಧತಿ. ಇವರು ಹೀಗೆ ಮಾಡುತ್ತಿದ್ದಾರೆಂದು ಅವರು, ಅವರು ಹಾಗೆ ಮಾಡುತ್ತಿದ್ದಾರೆಂದು ಇವರು ಈ ರೀತಿ ಮಾಡುವುದು ಸರಿಯಲ್ಲ. ರಂಗಾಯಣದ ನಿರ್ದೇಶಕನೆಂದರೆ ಆತ/ಆಕೆ ಓಬ್ಬ ಕ್ರಿಯಾಶೀಲ ವ್ಯಕ್ತಿ. ಅವರು ಹಲವಾರು ರಂಗಕನಸನ್ನ ಈಡೇರಿಸಲು ರಂಗಾಯಣದ ಜವಾಬ್ದಾರಿ ಹೊತ್ತಿರುತ್ತಾರೆ. ಶಿವಮೊಗ್ಗ, ಧಾರವಾಡ, ಮೈಸೂರಿನ ರಂಗಾಯಣದ ನಿರ್ದೇಶಕರು ಸಮರ್ಥವಾಗಿ ಕೆಲಸಮಾಡುತ್ತಿದ್ದಾರೆ. ಅವರನ್ನು ಅವರ ಅವಧಿಯವರೆಗೆ ಮುಂದುವರೆಯಲು ಬಿಟ್ಟು ಸರ್ಕಾರ ಉದಾತ್ತತೆ ತೋರಿಸಬಹುದಾಗಿತ್ತು. ಒಂದು ಅನಿಷ್ಟ ಪದ್ಧತಿಗೆ ಇತೀಶ್ರೀ ಹಾಡಬಹುದಾಗಿತ್ತು. ಈಗಲಾದರೂ ಸರಿ ಮತ್ತೂಮ್ಮೆ ಸರಕಾರ ತನ್ನ ಈ ವಿವೇಚನೆ ಇಲ್ಲದ ನಿರ್ಧಾರವನ್ನು ಮರುಪರಿಶೀಲನೆ ಮಾಡಿಕೊಳ್ಳಬೇಕು. ರಂಗಾಯಣ ಯಾವುದೋ ಒಂದು ನಿಗಮ ಮಂಡಳಿಯಂತಲ್ಲ” ಎಂದು ಈ ಹಿಂದೆ ಧಾರವಾಡ ರಂಗಾಯಣದ ರಂಗನಿರ್ದೇಶಕರಾಗಿದ್ದ ಪ್ರಕಾಶ್ ಗರುಡರವರು ಹೇಳಿದ್ದಾರೆ

ದೇಶದ ರಂಗಭೂಮಿಯ ಇತಿಹಾಸದಲ್ಲಿ ಕನ್ನಡ ರಂಗಭೂಮಿ ತನ್ನದೇ ಆದ ಸ್ಥಾನ ಪಡೆಯಲು ಕಾರಣ ಸಾಕಷ್ಟು ಸ್ವತಂತ್ರ ರಂಗ ಪ್ರಯೋಗಗಳು. ಮತ್ತು ವ್ಯವಸ್ಥೆಯ ಹುಳಕುಗಳನ್ನು ಕನ್ನಡಿಯಂತೆ ರಂಗದ ಮೇಲೆ ತೋರಿಸಿದ ಸಾಕಷ್ಟು ಹಿರಿಯ ರಂಗಕರ್ಮಿಗಳ ಶ್ರಮದಿಂದ. ಕನ್ನಡ ರಂಗಭೂಮಿಯ ಚರಿಯತ್ರೆಯಲ್ಲಿ ಹಲವು ರಂಗ ಸಂಸ್ಥೆಗಳು ಕಲೆಗಾಗಿ ದುಡಿದಿವೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿ ಸರ್ಕಾರಿ ಸಂಸ್ಥೆಯಾದ ಕನ್ನಡ ಸಂಸ್ಕೃತಿ ಇಲಾಖೆಯ ಮೇಲಿದೆ. ಆದರೆ ಇಲಾಖೆ ಇತ್ತೀಚಿಗೆ ಕಲೆಯ ಆಳ ಅಗಲ ತಿಳಿಯದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈಗೆ ಸಿಕ್ಕು ಕೇವಲ ಕಲೆಗಾಗಿ ಕಲೆ ಎನ್ನುವಂತೆ ಆಗಿ ಹೋಗಿದೆ.

ಇತ್ತಿಚಿಗೆ ಬಂದ ಬಿ.ಎಸ್.ಯಡಿಯೂರಪ್ಪನವರ ಹೊಸ ಸರ್ಕಾರ ಕಳೆದ ಸರ್ಕಾರ ನೇಮಕ ಮಾಡಿದ್ದ ರಂಗಾಯಣ ನಿರ್ದೇಶಕರು ಮತ್ತು ರಂಗ ಸಮಾಜದ ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸುವುದರಿಂದ ರಾಜಕೀಯ ಗಾಳಿ ಸೋಕಿದೆ. ರಂಗಾಯಣ ಮತ್ತು ರಂಗಭೂಮಿಯ ಚಟುವಟಿಕೆಗಳನ್ನು ಈ ರೀತಿಯಾಗಿ ರಾಜಕೀಯವಾಗಿ ನೋಡುವುದು ಶುದ್ಧ ತಪ್ಪು. ಏಕೆಂದರೆ ರಂಗಾಯಣದ ರಂಗನಿರ್ದೇಶಕರು ಮತ್ತು ರಂಗಸಮಾಜ ತಮಗೆ ನೀಡಿದ ಸಮಯದಲ್ಲಿ ಒಂದಷ್ಟು ರಂಗ ಚಟುವಟಿಕೆಗಳ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಈ ರೀತಿ ದಿಢೀರನೇ ಅವರನ್ನು ಮನೆಗೆ ಕಳುಹಿಸುವುದು ರಂಗಭೂಮಿಗೆ ಮಾಡಿದ ಅವಮಾನವಾಗಿದೆ. ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಎಲ್ಲಾ ರಾಜಕೀಯ ಸಂಸ್ಥೆಗಳಂತೆ ನೋಡದೆ, ವಿಶೇಷವಾದ ಸ್ವತಂತ್ರ ಸಂಸ್ಥೆಗಳಾಗಿಯೇ ನೋಡಬೇಕಿದೆ.

ನಮ್ಮ ಕರ್ನಾಟಕದಲ್ಲಿ ಒಂದಷ್ಟು ಸ್ಫಷ್ಟ ಸಾಂಸ್ಕೃತಿಕ ನೀತಿಗಳನ್ನು ರೂಪಿಸಿಕೊಳ್ಳುವ ಮೂಲಕ ಇಂತಹ ಅವಘಡಗಳನ್ನು ತಪ್ಪಿಸಬೇಕಿದೆ. ಈಗ ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ ಪಕ್ಷ ಸರ್ಕಾರವನ್ನು ರಚಿಸಿರುವುದರಿಂದ ಅದು ಮತ್ತೆ ನೇಮಕ ಮಾಡುವ ರಂಗನಿರ್ದೇಶಕರು ಅದೇ ರೀತಿಯ ಮನಸ್ಥಿತಿಯವರಾದರೆ ರಂಗಭೂಮಿಯ ವಾತಾವರಣವೇ ಕಲುಷಿತಗೊಳ್ಳವ ಅವಕಾಶ ಹೆಚ್ಚಾಗಿಯೇ ಇದೆ ಎಂದು ಯುವ ರಂಗಕರ್ಮಿ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...