Homeಮುಖಪುಟ'ನೀವು ಬಿಜೆಪಿ ಏಜೆಂಟಾ?'- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

‘ನೀವು ಬಿಜೆಪಿ ಏಜೆಂಟಾ?’- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

- Advertisement -
- Advertisement -

ಕಾಂಗ್ರೆಸ್ ನಾಯಕ ಕನ್ಹಯ್ಯಕುಮಾರ್‌ ಅವರಿಗೆ ಅಪ್ರಬುದ್ಧ ಪ್ರಶ್ನೆಗಳನ್ನು ಕೇಳಿ ಪತ್ರಕರ್ತರೊಬ್ಬರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಕನ್ಹಯ್ಯಕುಮಾರ್‌‌ ಕೇಳಿದ ಮರುಪ್ರಶ್ನೆಗಳಿಗೆ ಉತ್ತರಿಸಲಾಗದೆ ಪತ್ರಕರ್ತ ಕ್ಷಮೆಯಾಚಿಸಿರುವ ಕುರಿತು ‘Brut India’ ಮಾಧ್ಯಮ ವರದಿ ಮಾಡಿದೆ.

ಡಿಸೆಂಬರ್‌ 20ರಂದು ರಾಹುಲ್‌ ಗಾಂಧಿಯವರು ಪತ್ರಕರ್ತನಿಗೆ ಚಾಟಿ ಬೀಸಿದ್ದರು. “ಸದನಕ್ಕೆ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಚರ್ಚೆಗಳು ನಡೆಯುತ್ತಿಲ್ಲ” ಎಂದು ಪತ್ರಕರ್ತ ಆರೋಪಿಸಿದಾಗ, “ನೀವು ಸರ್ಕಾರದ ಪರವಾಗಿ ಕೆಲಸ ಮಾಡುತ್ತೀರಾ” ಎಂದು ಕೇಳಿದ್ದರು. ಮಾರನೇ ದಿನವೂ ಇದೇ ಉತ್ತರವನ್ನು ಪತ್ರಕರ್ತರಿಗೆ ಹೇಳಿದ್ದರು. ಇದರ ಜೊತೆಗೆ ಕನ್ಹಯ್ಯಕುಮಾರ್‌ ಅವರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಮಾಧ್ಯಮಗಳು ಪೂರ್ವಗ್ರಹ ಪೀಡಿತವಾಗಿದ್ದು, ಸರ್ಕಾರದ ಪರ ಕೆಲಸ ಮಾಡುತ್ತಿವೆ ಎಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ.

ಕನ್ಹಯ್ಯ ಕುಮಾರ್‌ ಹಾಗೂ ಪತ್ರಕರ್ತನ ನಡುವೆ ನಡೆದ ಮಾತುಕತೆ

ಪತ್ರಕರ್ತ: ನೀವು ಕಾಂಗ್ರೆಸ್ ಸೇರಿರುವುದರಿಂದ ಎಡದಿಂದ ಬಲಪಂಥಕ್ಕೆ ಬಂದಂತಾಗಿದೆ. ಜನರು ಏನೆಂದು ತಿಳಿಯಬೇಕಾಗಿದೆ?

ಕನ್ಹಯ್ಯ: ಕಾಂಗ್ರೆಸ್‌ ಬಲಪಂಥವೇ? ಹೇಗೆ ಕಾಂಗ್ರೆಸ್‌ ಬಲಪಂಥ ಎಂಬುದನ್ನು ನನಗೆ ಹೇಳಿ.

ಪತ್ರಕರ್ತ: ಈ ರೀತಿಯ ಮನಸ್ಥಿತಿ ಹೀಗಾಗಲೇ ಸೃಷ್ಟಿಯಾಗಿದೆ.

ಕನ್ಹಯ್ಯ: ಹೇಗೆ

ಪತ್ರಕರ್ತ: ಕಾಂಗ್ರೆಸ್‌, ಬಿಜೆಪಿ ಒಳಗೊಂಡಂತೆ ಮೂರು ರೀತಿಯ ರಾಜಕೀಯ ಪಕ್ಷಗಳು ದೇಶದಲ್ಲಿವೆ. ಎಡಪಂಥೀಯ ವಿಚಾರಧಾರೆಗಳಿವೆ….

ಕನ್ಹಯ್ಯ: ಯಾರೂ ಕೂಡ ಕಾಂಗ್ರೆಸ್ ಬಲಪಂಥೀಯ ಎಂದು ಹೇಳಿಲ್ಲ.

ಪತ್ರಕರ್ತ: ಹಾಗಾದರೆ ಏನೆಂದು ಕರೆಯುತ್ತಾರೆ?

ಕನ್ಹಯ್ಯ: ಯಾರೂ ಕೂಡ ಕಾಂಗ್ರೆಸ್ ಬಲಪಂಥೀಯ ಎಂದು ಹೇಳಲಾರರು. ನೀವು ಏನೆಂದು ಕರೆಯುತ್ತೀರಿ? ನೀವು ಪತ್ರಕರ್ತರಲ್ಲವೇ? ನೀವು ನಾಲ್ಕನೇ ಅಂಗ. ಸಮಾಜದಲ್ಲಿ ನಿಮ್ಮ ಜವಾಬ್ದಾರಿ ದೊಡ್ಡದಿದೆ. ನೀವು ಏನು ಬರೆಯುತ್ತೀರೋ, ಏನು ತೋರಿಸುತ್ತೀರೋ, ಅದು ಜನರ ಅಭಿಪ್ರಾಯವನ್ನು ರೂಪಿಸುತ್ತದೆ. ನಿಮ್ಮ ಯೋಚನೆ ಏನು? ಹೇಗೆ ನೀವು ಕಾಂಗ್ರೆಸ್ ಪಕ್ಷ ಬಲಪಂಥೀಯ ಎಂದು ಹೇಳುತ್ತೀರಿ?

ಪತ್ರಕರ್ತ: ಇದು ಎಡಪಂಥ ಮತ್ತು ಬಲ ಪಂಥದ ಕುರಿತಾಗಿದೆ. ಇದು ವಿಚಾರಧಾರೆಯ ಕುರಿತಾಗಿದೆ.

ಕನ್ಹಯ್ಯ: ಎಡ ಮತ್ತು ಬಲವಷ್ಟೇ ಸಿದ್ಧಾಂತವಲ್ಲ. ನೀವು ಅತ್ಯಂತ ಗಂಭೀರ ಉದ್ಯೋಗಕ್ಕೆ ಸಂಬಂಧಿಸಿದ್ದೀರಿ. ನೀವು ಹಾರ್ಡ್‌‌ವರ್ಕ್‌ ಕೂಡ ಮಾಡುತ್ತೀರಿ. ಯಾಕೆಂದರೆ ಗ್ರೌಂಡ್ ರಿಪೋರ್ಟಿಂಗ್‌ ನಿಂತು ಹೋಗಿದೆ. ಒಂದಿಷ್ಟು ಗಂಭೀರವಾದ, ಜನರ ಹಿತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನೀವು ಕೇಳಬೇಕೆಂದು ನಿಮ್ಮ ವೀಕ್ಷಕರು ಬಯಸುತ್ತಾರೆ. ನಾನು ಕೂಡ ಬಯಸುತ್ತೇನೆ. ನಾನು ಕಾಂಗ್ರೆಸ್ ಸೇರಿದೆ. ನಾನೇಕೆ ಕಾಂಗ್ರೆಸ್ ಸೇರಿದೆ? ಇದರ ಕುರಿತು ನೂರು ಸಲ ಹೇಳಿದ್ದೇನೆ. ಸರಿಯೇ? ಇದು ಮುಖ್ಯವಲ್ಲ. ‘ಇದು ಬಲಪಂಥ’ ಎಂದು ಇವರು ಹೇಳಿರುವುದು ಮುಖ್ಯವಿಷಯವಾಗುತ್ತದೆ. ಇದು ಹೇಗೆ ಬಲಪಂಥವಾಗುತ್ತದೆ? ಅದನ್ನು ವಿವರಿಸಿ ಹೇಳಿ. ಹೇಗೆ ಕಾಂಗ್ರೆಸ್ ಪಕ್ಷ ಬಲಪಂಥೀಯ ಎಂದು ಹೇಳುತ್ತೀರಿ?

ಪತ್ರಕರ್ತ: ವಿಚಾರಧಾರೆಗೆ ಸಂಬಂಧಿಸಿದ್ದು. ಎಡಪಂಥೀಯರು ವಿಭಿನ್ನ ವಿಚಾರಧಾರೆ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ.

ಕನ್ಹಯ್ಯ: ಏನು ಅವರ ವಿಚಾರಧಾರೆ?

ಪತ್ರಕರ್ತ: ಅವರು (ಎಡಪಂಥೀಯರು) ನಾಸ್ತಿಕರು, ದೇಶದ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎನ್ನುತ್ತಾರೆ.

ಕನ್ಹಯ್ಯ: ಅವರಿಗೆ ದೇಶದ ಬಗ್ಗ ಕಾಳಜಿ ಇಲ್ಲವೇ?

ಪತ್ರಕರ್ತ: ನಿಮ್ಮ ಮೇಲೆ ಆರೋಪಗಳಿವೆ….

ಕನ್ಹಯ್ಯ: ಆರೋಪಗಳು ಹೀಗಿವೆ… ನಾನು ನಿಮ್ಮನ್ನು ಮೂರ್ಖ ಎನ್ನುತ್ತೇನೆ. ನೀವು ಮೂರ್ಖರಾಗುತ್ತೀರಾ? ಎಲ್ಲರೂ ಈತ ಮೂರ್ಖ ಎಂದರೆ, ನೀವು ಮೂರ್ಖರಾಗುತ್ತೀರಾ? ಇಲ್ಲ ತಾನೇ? ಹಾಗಾದರೆ ನೀವು ಇದನ್ನು ಹೇಗೆ ಹೇಳುತ್ತೀರಿ? ಮೊದಲು, ನಾನು ಅವನನ್ನು ಕೇಳುತ್ತೇನೆ, ಇದನ್ನು ಹೇಗೆ ಹೇಳಿದಿರೆಂದು? ಎಡಪಂಥ ದೇಶಕ್ಕೆ ಸಂಬಂಧಿಸಿದ್ದಲ್ಲ ಎಂದು ನೀವು ಹೇಗೆ ಹೇಳಿದಿರಿ?

ಪತ್ರಕರ್ತ: ನಾನು ದೇಶದ ಬಗ್ಗೆ ಮಾತನಾಡುತ್ತಿಲ್ಲ.

ಕನ್ಹಯ್ಯ: ಓಕೆ, ಭಗತ್‌ಸಿಂಗ್‌ ಮೇಲೆ ಆರೋಪ ಮಾಡುತ್ತೀರಾ?

ಪತ್ರಕರ್ತ: ನಾನು ಭಗತ್‌ಸಿಂಗ್‌ ಬಗ್ಗೆ ಮಾತನಾಡುತ್ತಿಲ್ಲ.

ಕನ್ಹಯ್ಯ: ಯಾವ ಪುಸ್ತಕವನ್ನು ಭಗತ್ ಸಿಂಗ್‌ ಬರೆದಿದ್ದಾರೆ? ಭಗತ್‌ಸಿಂಗ್‌ ಬರೆದ ಪುಸ್ತಕದ ಹೆಸರೇನು?

ಪತ್ರಕರ್ತ: ಸರ್‌, ನಾನು ಭಗತ್‌ಸಿಂಗ್‌ ಅವರ ಕುರಿತು ಪ್ರಶ್ನೆ ಕೇಳಿಲ್ಲ. ನಾನು ನಿಮ್ಮ ಬಗ್ಗೆ ಕೇಳುತ್ತಿದ್ದೇನೆ.

ಕನ್ಹಯ್ಯ: ಯಾಕಿಲ್ಲ?

ಪತ್ರಕರ್ತ: ನಾನು ಜೆಎನ್‌ಯೂ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ಇನ್ನೂ ಜೆಎನ್‌ಯೂನಲ್ಲೇ ಇದ್ದೀರಿ.

ಕನ್ಹಯ್ಯ: ಜೆಎನ್‌ಯುವನ್ನು ನಾನು 2018ರಲ್ಲೇ ಬಿಟ್ಟಿದ್ದೇನೆ. ನೀವು ಮೊದಲು ಹೇಳಿ. ಎಡಪಂಥೀಯರು ನಾಸ್ತಿಕರು ಎಂದು ಹೇಳಿದಿರಿ. ಭಗತ್‌ಸಿಂಗ್‌ ಅವರ ಪುಸ್ತಕದ ಹೆಸರೇನು?

ಪತ್ರಕರ್ತ: ಇಲ್ಲ, ನಾನು ನಾಸ್ತಿಕತೆಯ ಬಗ್ಗೆ ಕೇಳಲಿಲ್ಲ ಸರ್‌. ಜನರ ಆಲೋಚನೆ ಮತ್ತು ಹೇಳಿಕೆಗಳನ್ನು…

ಕನ್ಹಯ್ಯ: ಯಾರು ಈ ಜನ ಹೇಳಿ ನನಗೆ? ಯಾರು ಈ ಜನ?

ಪತ್ರಕರ್ತ: ಸರ್‌, ಇದು ಜನರು ಹೇಳುತ್ತಿರುವುದು.

ಕನ್ಹಯ್ಯ: ನೀವು ಬಿಜೆಪಿಯಿಂದ ಹಣ ಪಡೆದಿದ್ದೀರಾ? ನೀವು ಬಿಜೆಪಿ ಏಜೆಂಟಾ? ಹಾಗಾದರೆ ನೀವು ಜನರು ಎಂದು ಏಕೆ ಹೇಳುತ್ತೀರಿ? ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ. ನಾನು ಕುರ್ತಾ ಪೈಜಾಮಾ ಧರಿಸಿ ನಾಯಕನಾಗಲಿಲ್ಲ. ನಾನು ಸಮಾಜದಲ್ಲಿನ ಸಾಧಾರಣಾ ಕುಟುಂಬದ ಸಾಮಾನ್ಯ ವ್ಯಕ್ತಿ. ನಿಮ್ಮ ಜೀವನ ಏನು ಎಂದು ನನಗೆ ತಿಳಿದಿದೆ. ಆದುದರಿಂದ ಸುಮ್ಮನೆ ವಿಚಾರಹೀನ ಪ್ರಶ್ನೆಗಳನ್ನು ಕೇಳಬೇಡಿ. ಒಳ್ಳೆಯ ಪ್ರಶ್ನೆಗಳನ್ನು ಕೇಳಿ. ಇದನ್ನು ಯಾರು ಹೇಳುತ್ತಾರೆ?

ಮತ್ತೊಬ್ಬ ಪತ್ರಕರ್ತ: ಕನ್ಹಯ್ಯಾ ಜೀ…

ಕನ್ಹಯ್ಯ: ಒಂದು ನಿಮಿಷ, ನಾನು ಇವರಿಗೆ ಉತ್ತರಿಸುತ್ತೇನೆ.

ಪತ್ರಕರ್ತ: ಜನ ಹೇಳ್ತಾರೆ…

ಕನ್ಹಯ್ಯ: ಈ ಜನರು ಯಾರು?

ಪತ್ರಕರ್ತ: ಅವರು ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ …

ಕನ್ಹಯ್ಯ: ಈ ಜನರು ಯಾರು?

ಪತ್ರಕರ್ತ: ನಾನು ನನ್ನ ಪ್ರಶ್ನೆಯನ್ನು ಹಿಂತೆಗೆದುಕೊಳ್ಳುತ್ತೇನೆ.

ಕನ್ಹಯ್ಯ: ಇಲ್ಲ ಇಲ್ಲ ಹೀಗೆ ಮಾಡಬೇಡಿ. ನಾನು ನಿಮ್ಮೊಂದಿಗೆ ಮಾತನಾಡಲು ಇಲ್ಲಿ ಕುಳಿತಿದ್ದೇನೆ. ನೀವು ಕ್ಷಮೆ ಕೇಳಬೇಕು.

ಪತ್ರಕರ್ತ: ನಾನು ಕ್ಷಮೆ ಕೇಳುವುದಿಲ್ಲ.

ಕನ್ಹಯ್ಯ: ಇಲ್ಲ, ಇಲ್ಲ ನೀವು ಕ್ಷಮೆ ಕೇಳಲೇಬೇಕು. ನೀವು ಏನಾದರೂ ತಪ್ಪು ಹೇಳಿದರೆ, ನೀವು ಕ್ಷಮೆಯಾಚಿಸಬೇಕು. ನಾನು ಏನಾದರೂ ತಪ್ಪು ಹೇಳಿದಾಗ ನಾನು ಕ್ಷಮೆಯಾಚಿಸುತ್ತೇನೆ.

ಪತ್ರಕರ್ತ: ಸರಿ, ನಾನು ಕ್ಷಮೆಯಾಚಿಸುತ್ತೇನೆ.

ಕನ್ಹಯ್ಯ: ನೀವು ಕ್ಷಮೆ ಕೇಳುತ್ತಿದ್ದೀರಿ. ಎಲ್ಲರೂ ನೋಡಿ… ಈಗ ಇನ್ನೊಂದು ಪ್ರಶ್ನೆ ಕೇಳಿ…


ಇದನ್ನೂ ಓದಿರಿ: ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಆಚರಿಸದಂತೆ ಬೆದರಿಸಿದ ಬಲಪಂಥೀಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪತ್ರಕರ್ತನನ್ನು ಕನ್ಹಯ್ಯ ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳಿಸಿದ್ದು ಸರಿಯಾಗಿದೆ. ಅಧಿಕಾರದಲ್ಲಿ ಇದ್ದವರನ್ನು ಈ ಪತ್ರಕರ್ತ ಇಂತಹ ಪ್ರಶ್ನೆ ಕೇಳಿ ಕೆಟ್ಟ ಪುಸ್ತಕಕ್ಕೆ ಹೋಗುವ ಧೈರ್ಯ ಮಾಡಲಾರ. ಬದಲಾಗಿ, ಸರ್ಕಾರದ ವಿರುದ್ಧ ವಿರುದ್ಧ ಮಾತಾಡುವುದನ್ನು ವಿರೋಧಿಸಿ, ಅಧಿಕಾರಸ್ಥರ ಕೃಪೆ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಸಮೃದ್ಧ ಓದಿನ ಮತ್ತು, ಗಹನವಾದ ತಿಳುವಳಿಯ ಅಭಾವ ಇಂತಹ ವಿತಂಡವಾದವನ್ನು ಸೃಷ್ಟಿಸುತ್ತದೆ. ಸಾಮಾಜದ ಬಗ್ಗೆ ಗೌರವ ಇಲ್ಲದೆ, ಸಾಮಾಜಿಕ ಜವಾಬ್ದಾರಿ ಇಲ್ಲದೆ, ಉರಿವ ಮನೆಯ ಗಳು (ಬಿದಿರು) ಎಳೆದು ಬೆಂಕಿ ಕಾಯಿಸಿಕೊಳ್ಳುವ ಮಂದಿ ಇವರು. ಸಾರ್ವಜನಿಕ ಹಿತ ಕಾಯುವ ಕೆಲಸ ಮಾಡಿದ ಅನುಭವ ಏನಾದರೂ ಇವಕ್ಕೆ ಇದೆಯೇ?

    ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಾರಿಯಾ ರೆಸ್ಸಾ ಬಗ್ಗೆ ಹೆಮ್ಮೆ ಬದಿಗಿರಲಿ, ಆಕೆ ಯಾರೆಂದು ಇವರಿಗೆ ತಿಳಿದಿದೆಯೇ?

    ಇಂತಹ ಪತ್ರಕರ್ತರಿರುವ ಸುದ್ದಿ ಸಂಸ್ಥೆಗಳನ್ನು ತಿರಸ್ಕರಿಸುವುದು ಮಾತ್ರ ನಮ್ಮ ಕರ್ತವ್ಯ.

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...