Homeಮುಖಪುಟಕಾಲದೇಶಕ್ಕೆ ತಕ್ಕಂತೆ ಬಣ್ಣ ಬದಲಿಸಿಕೊಳ್ಳುತ್ತಿದೆ ರಾಷ್ಟ್ರವಾದ

ಕಾಲದೇಶಕ್ಕೆ ತಕ್ಕಂತೆ ಬಣ್ಣ ಬದಲಿಸಿಕೊಳ್ಳುತ್ತಿದೆ ರಾಷ್ಟ್ರವಾದ

- Advertisement -
- Advertisement -

ಪ್ರಕೃತಿಯಲ್ಲಿ ಸರಿಸೃಪಗಳ ಗುಂಪೊಂದು ಇದೆ. ಆ ಗುಂಪಿನಲ್ಲಿ ಹಲ್ಲಿ, ಹಾವು, ಓತಿ, ಉಡ ಊಸರವಳ್ಳಿಯಂಥ  ಪ್ರಾಣಿಗಳು ಬರುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳು ಪರಿಸರ, ಪ್ರದೇಶಕ್ಕೆ ತಕ್ಕ ಹಾಗೆ ಬಣ್ಣ ಬದಲಿಸುವ ಗುಣ ಹೊಂದಿವೆ. ಅದರಲ್ಲಿ ಪ್ರಮುಖವಾದುದು ಊಸರವಳ್ಳಿ. ಅದು ಕ್ಷಣಕ್ಷಣಕ್ಕೂ ಬಣ್ಣ ಬದಲಿಸುತ್ತಲೇ ಇರತ್ತದೆ. ಅದು ತನ್ನ ‘ತಾವನ್ನು’ ಬದಲಿಸದಂತೆಲ್ಲಾ ಬಣ್ಣವೂ ಬದಲಾಗುತ್ತಾ ಹೋಗುತ್ತದೆ. ಅದು ಪ್ರಕೃತಿಯಲ್ಲಿ ನಡೆಯುವ ವಿಸ್ಮಯ. ಆದರೆ ಪ್ರಕತಿಯ ಭಾಗವೇ ಆಗಿರುವ ಮನುಷ್ಯ ಪ್ರಾಣಿಗಳ ಗುಂಪೊಂದು ಇದೆ. ಅದೂ ಕೂಡ ಸನ್ನಿವೇಶ ಕಾಲಮಾನ ಬದಲಾದಂತೆ ತನ್ನ ಸಿದ್ದಾಂತವನ್ನು ಹೊಸ ಆಕಾರ ಮತ್ತು ರೂಪಕ್ಕೆ ಬದಲಿಸಿಕೊಳ್ಳುತ್ತದೆ. ಆಧುನಿಕ ಸಂದರ್ಭದಲ್ಲಿ ಸಾಫ್ಟವೇರ್ ನಲ್ಲಿ ಬದಲಾಗಬಹುದು. ಆದರೆ ಅದರ ಮೂಲರೂಪ ಬದಲಾಗುವುದಿಲ್ಲ. ಇದು ಬೈನರಿ ಮ್ಯಾಥಮೆಟಿಕ್ಸ್ ಇದ್ದಂತೆ.

ಊಸರವಳ್ಳಿಯ ಗುಣ ಬಣ್ಣ ಬದಲಿಸಿಕೊಳ್ಳುವುದು. ಅದರ ನಿಜವಾದ ಬಣ್ಣ ಯಾವುದು ಎಂದು ಕೇಳಿದರೆ ಹೇಳಲು ಸಾಧ್ಯವಿಲ್ಲ. ನಾನು ನೋಡಿದ ಊಸರವಳ್ಳಿಯ ಬಣ್ಣ ಬೇರೊಬ್ಬನಿಗೆ ಅದೇ ರೀತಿ ಕಾಣಬಹುದು ಅಥವಾ ಕಾಣದೇ ಇರಬಹುದು. ಇನ್ನೊಬ್ಬ ನೋಡುವ ಹೊತ್ತಿಗೆ ಊಸರವಳ್ಳಿ ಬಣ್ಣವನ್ನು ಬದಲಿಸಿಕೊಂಡು ಮೊದಲಿನವನಿಗೆ ದಿಕ್ಕು ತಪ್ಪುವಂತೆ ಮಾಡಬಹುದು. ಆ ಇಬ್ಬರೂ ಕೂಡ ಚರ್ಚೆಗೆ ಇಳಿದರೆ ‘ನಾನು’ ಬಣ್ಣವೇ ಸರಿ ಎಂದು ವಾದಿಸಬಹುದು ಇಬ್ಬರೂ ಮಂಡಿಸುವ ವಾದವೂ ಸರಿಯಾಗಿಯೇ ಇರುತ್ತದೆ. ಇಬ್ಬರ ಅನುಭವವೂ ಸಮರ್ಥನೆಗೆ ಕಾರಣಗಳನ್ನು ಒದಿಗಿಸುತ್ತದೆ. ಊಸರವಳ್ಳಿ ಮೊದಲ ಬಣ್ಣದಲ್ಲೇ ಇತ್ತು ಎನ್ನುವುದು, ನಂತರ ಬಣ್ಣ ಬದಲಿಸಿತು ಎನ್ನುವುದು ಎರಡೂ ಸತ್ಯದ ಸಂಗತಿಗಳೇ!! ಊಸರವಳ್ಳಿ ಇಬ್ಬರು ವ್ಯಕ್ತಿಗಳನ್ನು ಗೊಂದಲದಲ್ಲಿ ಮುಳುಗಿಸುತ್ತದೆ. ಗೊಂದಲ ಮೂಡಿಸದಿದ್ದರೆ ಅದು ಊಸರವಳ್ಳಿ ಆಗಲಾರದು.

ಊಸರವಳ್ಳಿ ಮತ್ತು ರಾಷ್ಟ್ರೀಯವಾದ ಒಂದೇ ಗುಣವುಳ್ಳವು. ‘ರಾಷ್ಟ್ರೀಯತೆ’ ಕಾಲಕಾಲಕ್ಕೆ ಬಣ್ಣ ಬದಲಿಸುತ್ತ ಬಂದಿರುವುದನ್ನು ಇತಿಹಾಸ ಪುಟಗಳು ದೃಢೀಕರಿಸುತ್ತವೆ. ಹಿಟ್ಲರ್ ಮತ್ತು ಮುಸಲೋನಿ ಪ್ರತಿಪಾದಿಸಿದ ರಾಷ್ಟ್ರೀಯತೆ ಪರಿಕಲ್ಪನೆ ಭಾರತದ ಸಂಪ್ರದಾಯವಾದಿ ಮನಸ್ಥಿತಿಯಲ್ಲೂ ಬೆಳೆದುಬಂತು ಅಥವಾ ಭಾರತದ ಸಂಪ್ರದಾಯವಾದಿ ಮನಸ್ಸು ಅದರಂತೆಯೇ ಇತ್ತು. ಅದೇ ಕಾರಣಕ್ಕೆ ಭಾರತದ ಸಂಪ್ರದಾಯವಾದಿ ಗುಂಪು ನಾಸಿಜಂ ಮತ್ತು ಫ್ಯಾಸಿಸಂ ಅನ್ನು ಅಪ್ಪಿಕೊಂಡಿತು. ಜರ್ಮನಿಯ ನಾಜಿಗಳ ‘ರಾಷ್ಟ್ರೀಯತೆ’ ಭಾರತದ ಸಂಪ್ರದಾಯವಾದಿ ಗುಂಪಿಗೆ ಮತ್ತಷ್ಟು ಬಲ ತಂದಿತು. ಹಾಗಾಗಿಯೇ ಇಲ್ಲಿನ ಹಿಂದೂ ಮಹಾಸಭಾ ಮತ್ತು ಆರ್.ಎಸ್.ಎಸ್. ಹಿಟ್ಲರ್ ಮತ್ತು ಮುಸಲೋನಿಯ ಚಿಹ್ನೆಗಳನ್ನು, ಸಿದ್ದಾಂತವನ್ನು ಅಪ್ಪಿಕೊಂಡು ಜನರ ಮೇಲೆ ಸವಾರಿ ಮಾಡುತ್ತಲೇ ಬಂತು.

ರಾಷ್ಟ್ರೀಯತೆ ಪರಿಕಲ್ಪನೆಗೆ ಬಹುತ್ವದಿಂದ ವ್ಯಾಪಕ ವಿರೋಧ ವ್ಯಕ್ತವಾದಂತೆ, ಅದು ನಾಸಿಸಂ ಮತ್ತು ಫ್ಯಾಸಿಸಂ ಪ್ರತಿರೂಪದಲ್ಲಿ ಬರುತ್ತಿದೆ. ಇದನ್ನೇ ಆರ್.ಎಸ್.ಎಸ್. ಮತ್ತು ಹಿಂದೂ ಮಹಾಸಭಾ ತನ್ನ ಬೈನರಿ ಮ್ಯಾಥ ಮೆಟಿಕ್ಸ್ ಮಾಡಿಕೊಂಡಿದೆ ಎಂಬುದನ್ನು ಜನರಿಗೆ ಸಾರಿಸಾರಿ ಹೇಳಿದಾಗಲೇ ಕ್ರಮೇಣ ಸಂಘದಲ್ಲಿ ಕೆಲ ದೈಹಿಕ ಬದಲಾವಣೆಗಳು ಕಳೆದ 94 ವರ್ಷಗಳಲ್ಲಿ ಕಂಡುಬಂದಿವೆ. ಜನರಲ್ಲಿ ಒಂದು ವಿಷಯದ ಬಗ್ಗೆ ಗೊಂದಲ ಮೂಡಿಸುವುದು ತನ್ನ ಹಿಡೆನ್ ಅಜೆಂಡಾವನ್ನು ತುರುಕುವುದು ನಡೆಯುತ್ತಲೇ ಇದೆ. ಗೊಂದಲದ ಪರಿಸ್ಥಿತಿ ಸೃಷ್ಟಿಸುವ ಕಾರ್ಯ ಮುಂದುವರಿಯುತ್ತಲೇ ಇದೆ. ಅಂದರೆ ಊಸರವಳ್ಳಿ ಬಣ್ಣದ ಕುರಿತು ಇಬ್ಬರು ವ್ಯಕ್ತಿಗಳು ವಾದಿಸುವ ರೀತಿಯಂತೆಯೆ ಇದು. ಅದು ಹಾಗಿತ್ತು ಎಂದು ಮೊದಲು ಹೇಳಿ ನಂತರ ಅದು ಹಾಗಿರಲಿಲ್ಲ ಎನ್ನುವುದು. ಇದು ಜನರಿಗೂ ಕೂಡ ಹೌದಲ್ಲವೇ? ಎನ್ನುವಂತೆ ನಂಬಿಸುವುದು ಕೂಡ ಇದರ ಹಿಂದಿನ ತಂತ್ರ

ಈಗ ‘ರಾಷ್ಟ್ರೀಯತೆ’ ಬಗ್ಗೆ ಆರ್.ಎಸ್.ಎಸ್ ಮತ್ತು ಹಿಂದೂ ಮಹಾಸಭಾದೊಳಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ ಅಥವಾ ನಡೆದಂತೆ ಬಿಂಬಿಸಲಾಗುತ್ತಿದೆ. ಆರ್.ಎಸ್.ಎಸ್. ಪ್ರತಿಪಾದಿಸುವ ರಾಷ್ಟ್ರೀಯತೆ’ ಮತ್ತು ಫ್ಯಾಸಿಸಂ ಮತ್ತು ನಾಸಿಸಂಗೂ ಸಂಬಂಧವಿದೆ ಎಂಬ ಸತ್ಯ ಜನರಿಗೆ ಅರಿವಾಗುತ್ತಿರುವಾಗಲೇ ನಮ್ಮದು ರಾಷ್ಟ್ರೀಯತೆ ಅಲ್ಲ. ನಮ್ಮದು ನ್ಯಾಷನಾಲಿಟಿ ಅರ್ತಾತ್ ರಾಷ್ಟ್ರೀಯತಾವಾದ ಎನ್ನುತ್ತ ತನ್ನ ಸಾಫ್ಟ್‌ವೇರ್ ಬದಲಿಸಿಕೊಳ್ಳುತ್ತಿದೆ. ಹೊಸ ಸನ್ನಿವೇಶ ಹೊಸ ಪೀಳಿಗೆಗೆ ರಾಷ್ಟ್ರೀಯತಾವಾದ ಹೊಸದಾಗಿ ಕಾಣುತ್ತಿದೆ ಅಥವಾ ಹಾಗೆ ಕಾಣುವಂತೆ ನೋಡಿಕೊಳ್ಳುವ ಪ್ರಯತ್ನಗಳು ಇಂದು ನಡೆಯುತ್ತಿವೆ. ಆದರೆ ಅದು ತನ್ನ ಮೂಲರೂಪವನ್ನು ಬಿಟ್ಟುಕೊಡುವುದಿಲ್ಲ. ಮೂಲರೂಪ ಯಾವುದೆಂದರೆ ಅದು ಮಾನಸಿಕ ಕ್ರೌರ್ಯದ ದುರ್ಗುಣ. ಆಧುನಿಕತೆ ಸಂದರ್ಭದಲ್ಲಿ ಕಂಪ್ಯೂಟರ್ ಗಳಲ್ಲಿನ ಸಾಫ್ಟ್ ವೇರ್ ಬದಲಾದಂತೆ ಆರ್.ಎಸ್.ಎಸ್ ತನ್ನ ಸಾಫ್ಟವೇರ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳತೊಡಗಿದೆ.

ಗೋಪಾಲಕೃಷ್ಣ ಅಡಿಗರಂಥ ಕವಿ ‘ನೆಹರು ನಿವೃತ್ತರಾಗುವುದಿಲ್ಲ” ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು’ ಎಂದು ಕವನ ಬರೆದರು. ಇದು ಈಗ ‘ನವಭಾರತ’ ಪರಿಕಲ್ಪನೆಯ ಹುಟ್ಟಿಗೆ ಕಾರಣ ವಾಗಿದೆ. ‘ಆಖಂಡ ಭಾರತ’ ಪರಿಕಲ್ಪನೆ ಮೂಲರೂಪದಲ್ಲೇ ಇದ್ದು ಅದನ್ನು ರಹಸ್ಯವಾಗಿಯೇ ಇಡಲಾಗಿದೆ. ಕತ್ತಲೆಯ ಮನೆಯೊಳಗೆ ಭೂಪಟವನ್ನು ಹರಡಿ ಪಾಕಿಸ್ತಾನ, ಆಫ್ಥಾನಿಸ್ತಾನ, ಬಾಂಗ್ಲಾ ಎಲ್ಲವೂ ಅಖಂಡ ಭಾರತದಡಿ ಬರಬೇಕು ಎನ್ನುವ ಸಾಂಸ್ಕೃತಿಕ ರಾಜಕಾರಣ ಮತ್ತು ಅದರ ಬಗೆಗಿನ ಪ್ರೀತಿ ಆರ್.ಎಸ್.ಎಸ್ ಸಂಘಟನೆಗೆ ಮತ್ತಷ್ಟು ಹೆಚ್ಚಾಗತೊಡಗಿದೆ. ಇಲ್ಲಿನ ಜನರನ್ನು ಅಲೆಯುವಂತೆ ಮಾಡಿದರೆ, ನಾವು ಹೇಳಿದಂತೆ ಕೇಳುತ್ತಾರೆ ಎಂಬ ಪ್ರಭುತ್ವದ ಹುನ್ನಾರವೂ ಇದರ ಹಿಂದೆ ಕೆಲಸ ಮಾಡುತ್ತಿದೆ.

ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗ ಮತ್ತು ಇಪ್ಪತ್ತೇ ಶತಮಾನದ ಆರಂಭದಲ್ಲಿದ್ದ ರಾಷ್ಟ್ರೀಯತೆ ಪರಿಕಲ್ಪನೆಯು ಈಗ ಸ್ಥಿತ್ಯಂತರಗೊಳ್ಳತೊಡಗಿದೆ. ‘ನ್ಯಾಷನಲಿಸಂ’ ತನ್ನನ್ನು ದುರ್ಬಲಗೊಳಿಸುತ್ತಿದೆ ಎಂಬುದು ಗೊತ್ತಾದ ಕೂಡಲೇ ಆರ್.ಎಸ್.ಎಸ್. ತನ್ನದು ರಾಷ್ಟ್ರೀಯತೆ ಅಲ್ಲ, ‘ರಾಷ್ಟ್ರೀಯತಾವಾದ’ ಎಂಬ ಹೊಸ ನುಡಿಗಟ್ಟನ್ನು ಹುಟ್ಟುಹಾಕಿದೆ. ಕಾಲ ಬದಲಾಗಿದೆ. ತಾವಿರುವ ಪರಿಸರ, ಜನರು ಬದಲಾಗಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ಬದಲಾವಣೆಯಾಗಿದೆ. ಹಾಗಾಗಿ ‘ನವಭಾರತ’ದ ಸನ್ನಿವೇಶದಲ್ಲಿ ತಾನೂ ಬದಲುಗೊಳ್ಳುತ್ತಿದೆ. ಜನರನ್ನು ಗೊಂದಲದಲ್ಲಿ ತಳ್ಳುತ್ತಲೇ ಇದೆ. ಹೊಸ ಚಳವಳಿಗಳು ಹುಟ್ಟಿದಾಗಲೆಲ್ಲಾ ಅದರಲ್ಲಿ ತಾನೂ ಸೇರಿಕೊಳ್ಳುತ್ತದೆ. ಇಡೀ ಚಳವಳಿಯ ಆಶಯವನ್ನೇ ನುಚ್ಚುನೂರು ಮಾಡುತ್ತದೆ. ಅದೇ ಭಾರತದ ಸಂಪ್ರದಾಯವಾದಿ ಗುಂಪಿನ ಸಿದ್ದಾಂತ.

(ಲೇಖಕರು ಪತ್ರಕರ್ತರು. ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...