Homeಅಂಕಣಗಳುಬೆಂಗಳೂರು ಭೇಲ್ - 2:ಲಾಕ್ ಡೌನ್ ನಡುವೆ ಬೆಂಗಳೂರಿನ ಬೀದಿ ವ್ಯಾಪಾರಿಗಳು ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದು...

ಬೆಂಗಳೂರು ಭೇಲ್ – 2:ಲಾಕ್ ಡೌನ್ ನಡುವೆ ಬೆಂಗಳೂರಿನ ಬೀದಿ ವ್ಯಾಪಾರಿಗಳು ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದು ಏಕೆ?

- Advertisement -
- Advertisement -

ಶನಿವಾರ, ಜುಲೈ 18ನೇ ತಾರೀಖು , ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿ ಸಂಘಟನೆ ಸತ್ಯಾಗ್ರಹಕ್ಕೆ ಕರೆ ಕೊಟ್ಟರು. ಇದಕ್ಕೆ ಸ್ಪಂದಿಸಿ ರಾಜ್ಯದ ಇತರೆ ಬೀದಿ ವ್ಯಾಪಾರಿ ಸಂಘಟನೆಗಳು ಹಾಗು ಅನೇಕ ಜಿಲ್ಲೆಗಳ ಬೀದಿ ವ್ಯಾಪಾರಿಗಳು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅಂದು ಅವರ ಮಾರುಕಟ್ಟೆಗಳಲ್ಲಿ, ಮನೆಗಳಲ್ಲಿ ಫಲಕಗಳನ್ನು ಪ್ರದರ್ಶಿಸುವುದರ ಮೂಲಕ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ಈ ಸತ್ಯಾಗ್ರಹ ನಡೆದದ್ದು ಏತಕ್ಕೆ? ಬೀದಿ ವ್ಯಾಪಾರಿಗಳು ದಿನವೂ ವ್ಯಾಪಾರ ಮಾಡಿ, ಆ ದಿನದ ಆದಾಯದ ಫಲದಿಂದ ಜೀವನ ನಡೆಸುತ್ತಾರೆ.  ಲಾಕ್  ಡೌನ್ ಗು ಮುನ್ನವೇ ಬೀದಿ ವ್ಯಾಪಾರಿಗಳು ಕಷ್ಟದ ಜೀವನ ನಡೆಸುತಿದ್ದರು. ಈಗ ಮಾರ್ಚ್ 3 ನೇ ವಾರದಿಂದ, 4 ತಿಂಗಳ ಕಾಲ ವ್ಯಾಪಾರ ಇಲ್ಲದೆ ಅವರ ಜೀವನ ತತ್ತರಿಸಿ ಹೋಗಿದೆ.

ಬೀದಿಲಿ ವ್ಯಾಪಾರ ಮಾಡುವವರು ಬಹುಪಾಲು ಬಡವರೇ. ಅಂಗಡಿ ಬಾಡಿಗೆ ಕಟ್ಟಲು ಸಾಧ್ಯವಿರುವವರು, ಅಂಗಡಿ ಕೊಳ್ಳಲು  / ಅಂಗಡಿ ವಂಶಪಾರಂಪರ್ಯವಾಗಿ ಪಡೆದವರು ಯಾರು ಬೀದಿಲಿ ವ್ಯಾಪಾರ ಮಾಡೋಲ್ಲ. ನಗರಗಳ ಧೂಳು, ಮಳೆ, ಬಿಸಿಲುಗಳ ನಡುವೆ ವ್ಯಾಪಾರ ಮಾಡುವುದು ಸುಲಭವಲ್ಲ. ಇದರ ಜೊತೆಗೆ ಇರುವ ‘ಎತ್ತಂಗಡಿ’ಯ  ಭೀತಿ . ಇವತ್ತು ವ್ಯಾಪಾರ ಮಾಡುವ ಸ್ಥಳದಲ್ಲಿ ನಾಳೆ ವ್ಯಾಪಾರ ಮಾಡಬಹುದೋ ಇಲ್ಲವೋ ತಿಳಿಯದು. ಸಂಚಾರಿ ಪೊಲೀಸ್, ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ನಿವಾಸಿ ಸಂಘಟನೆಗಳು (ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್) ಅವರ ಕಿರುಕುಳ ಯಾವಾಗಲೂ ಇದ್ದೆ ಇರುತ್ತದೆ. ಬೀದಿ ವ್ಯಾಪಾರಿಗಳ  ಜೀವನೋಪಾಯ ರಕ್ಷಣೆಗೆ, ಕೇಂದ್ರ ಸರ್ಕಾರ 2014 ನಲ್ಲಿ ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ಕಾಯ್ದೆ 2014 ಅನ್ನು ತಂದಿತು. ಇದರ ಪ್ರಕಾರ ಯಾವುದೇ ಬೀದಿ ವ್ಯಾಪಾರಿಗಳನ್ನು ದಿಢೀರ್ ಎತ್ತಂಗಡಿ ಮಾಡುವಂತಿಲ್ಲ. ಆದರೆ ಬಹುಪಾಲು ಅಧಿಕಾರಿಗಳು  ಈ ಕಾನೂನು ಬಗ್ಗೆ ತಿಳಿದುಕೊಳ್ಳದೆ, ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಆಡಿ ಬೀದಿ ವ್ಯಾಪಾರಿಗಳನ್ನು ದಿಡೀರ್ ಓಡಿಸುವುದನ್ನು ಮಾಡುತ್ತಲೇ ಇದ್ದಾರೆ.

ಆಗೀಗ ಎತ್ತಂಗಡಿಗಳನ್ನು ಎದುರಿಸುತ್ತಿದ್ದ ಬೀದಿ ವ್ಯಾಪಾರಿಗಳಿಗೆ ಮೋದಿಯವರ  ಆಯೋಜಿತ , ದಿಢೀರ್ ಲಾಕ್ ಡೌನ್ ಒಂದು ದೇಶವ್ಯಾಪಿ ಎತ್ತಂಗಡಿ ಆಯಿತು. ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಬಿಬಿಎಂಪಿ ಕಾಲೇರಾ ಹರಡುತ್ತಿದೆ ಎಂದು ಹೇಳುತ್ತಾ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಟ್ಟಿರಲಿಲ್ಲ.  ಲಾಕ್  ಡೌನ್  ನಲ್ಲಿ ಅಲ್ಲಿ ಇಲ್ಲಿ,  ಮೂಲೆಗಳಲ್ಲಿ  ನಿಂತು ವ್ಯಾಪಾರ ಮಾಡುವ, ಕೆಲವು ತಳ್ಳೋ ಗಾಡಿ ಉಳ್ಳ ಕೇವಲ 10% ಹಣ್ಣು ತರಕಾರಿಯವರಿಗೆ ಸ್ವಲ್ಪ ವ್ಯಾಪಾರ ಆಯಿತು. ಮಿಕ್ಕ 90% ವ್ಯಾಪಾರಿಗಳಿಗೆ ಯಾವುದೇ ವ್ಯಾಪಾರ ಇರಲಿಲ್ಲ.  ಈಗ ಸುಮಾರು  4  ತಿಂಗಳಾಗಿದ್ದರೂ ಅವರ ಕಷ್ಟ ಮುಗಿದಿಲ್ಲ. ಜುಲೈ ತಿಂಗಳಲ್ಲೂ ಸಹ  ಕೆಲವು ಕಡೆ ಇನ್ನು ವ್ಯಾಪಾರ ಪ್ರಾರಂಭವಾಗಿಲ್ಲ. (ಉದಾಹರಣೆ: ಶಿವಾಜಿನಗರ), ಮಿಕ್ಕಿರುವ ಕಡೆ, ವ್ಯಾಪಾರ ನಡೀತಿದೆ ಆದರೆ ತೀರಾ ಕಡಿಮೆ.  ಶಿವಾಜಿನಗರದ ವ್ಯಾಪಾರಿಯಾದ ಬಾಬುರವರು ಜೊಮೆಟೋ ಡೆಲಿವರಿ ಕೆಲಸ ಕೈಗೊಂಡರು “ಅದರಲ್ಲೂ 2 ತಿಂಗಳ ಸ್ವಲ್ಪ ಆದಾಯ ಇತ್ತು , ಈಗ ದಿವಸಕ್ಕೆ  ಎರಡು  ಡೆಲಿವರಿ ಬಂದರೆ ಹೆಚ್ಚು, ಏನು ಮಾಡುವುದೋ ಗೊತ್ತಿಲ್ಲ” ಎನ್ನುತ್ತಾರೆ. ಶಿವಾಜಿನಗರ ಬಸ್ ನಿಲ್ದಾಣ ಸುತ್ತಲೂ 250ಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ಅವರಲ್ಲಿ ಮಾರ್ಚ್ 15 ರಿಂದ  ಒಬ್ಬರಿಗೂ  ವ್ಯಾಪಾರ ಮಾಡಲು ಬಿಟ್ಟಿಲ್ಲ.  ವಿಜಯನಗರದ ಮಾರುಕಟ್ಟೆಯಲ್ಲಿ ಜೂನ್ ನಲ್ಲಿ ವ್ಯಾಪಾರ ಪ್ರಾರಂಭ ಮಾಡಿದರು. ಆದರೆ ವ್ಯಾಪಾರ ಇಲ್ಲ. ಅಲ್ಲಿ ಬಟ್ಟೆ ವ್ಯಾಪಾರ ಮಾಡುವ ಬೀದಿ ವ್ಯಾಪಾರಿ ಹಾಗು ಸಂಘಟನೆಯ ನಾಯಕರಾದ ಸ್ವಾಮಿ ಅವರು ಹೇಳುವಂತೆ “ಕೆಲವು ದಿವಸ ಬೋಣಿ  ಸಹ ಆಗೋದಿಲ್ಲ. ಒಂದು ಕಡೆ ವ್ಯಾಪಾರ ಆಗೋಲ್ಲ, ಇನ್ನೊಂದು ಕಡೆ ಎಲ್ಲಿ ಕರೋನಾ ತಟ್ಟುತ್ತೇವೆಯೋ ಎಂದು ಭಯ” ಎನ್ನುತ್ತಾರೆ.

ಬಿಬಿಎಂಪಿ ಕಚೇರಿಯಾಚೆ ಜೂನ್ ತಿಂಗಳಲ್ಲಿ ಒಂದು ದಿವಸ  ಲಕ್ಷ್ಮಿಯವರು ಸಿಕ್ಕಿದ್ದರು. ಸುಮಾರು 50 ವಯಸ್ಸಿನ ಅವರು ಬುಟ್ಟಿಯಲ್ಲಿ ಕಡ್ಲೇಕಾಯಿ ವ್ಯಾಪಾರ ಮಾಡುತಿದ್ದರು .  ಅಲ್ಲಿಂದ ಸುಮಾರು 5 ಕಿಲೋಮೀಟರ್ ದೂರದ ಕಸ್ತೂರಿ ಬಾಯಿ ನಗರದಿಂದ ನಡೆದುಕೊಂಡು ಬಂದಿದ್ದರು . “ಬಿಬಿಎಂಪಿ ಕಚೇರಿಯೊಳಗೆ ಬಿಡಲು ಹೇಳಿ ಸರ್, ಅಲ್ಲಿ ಸ್ವಲ್ಪ ವ್ಯಾಪಾರ ಆಗುತ್ತದೆ, ಇಲ್ಲಿ ರಸ್ತೇಲಿ ಏನೂ ವ್ಯಾಪಾರ ಇಲ್ಲ” ಎಂದರು. ಅವರೊಬ್ಬರೇ ಇರುವುದಂತೆ, ಕುಟುಂಬದವರು ಯಾರು ಇಲ್ಲ, ವ್ಯಾಪಾರ  ಇಲ್ಲದೆ ಊಟಕ್ಕೂ ಕಷ್ಟ ಪಡುತ್ತಿದ್ದರು.  ನಗರಗಳಲ್ಲಿ ಸುಮಾರು ಜನ ವಯಸ್ಸಾಗಿರುವವರು, ಬೇರೆ ಕೆಲಸ ಸಿಗದೇ  ಬೀದಿ ವ್ಯಾಪಾರ ಮೇಲೆ ಅವಲಂಬಿತರಾಗಿದ್ದಾರೆ. ಅವರು ತೀವ್ರ ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಹೀಗೆ ವ್ಯಾಪಾರ ಇಲ್ಲದೆ, ಬೀದಿ ವ್ಯಾಪಾರಿಗಳಿಗೆ ಮನೆ ಬಾಡಿಗೆ ಸಹ ಕಟ್ಟಲು ಆಗುತ್ತಿಲ್ಲ. ಅವರ ಮಕ್ಕಳ ಶಿಕ್ಷಣ ಅಪಾಯದಲ್ಲಿದೆ.  ಜಯನಗರ 9ನೇ ಬ್ಲಾಕ್ ನ ಶಾಂತಿಯವರೊಡನೆ ಮಾತನಾಡುತ್ತಿದ್ದಾಗ “ಸಾರ್, ನನ್ನ ಮಗನ ಸ್ಕೂಲ್ ಫೀಸ್ ಗೆ ಸಾಲ ಮಾಡಿ ಕಟ್ಟಿದ್ದೀನಿ ಸಾರ್” ಎಂದರು.  ಎಷ್ಟೋ ಜನ ಇಲ್ಲಿ ಮನೆ ನಡೆಸಲು ಸಾಧ್ಯವಾಗದೆ ಊರಿಗೆ ಹೋಗಿದ್ದಾರೆ.

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಸರ್ಕಾರದಿಂದ ಪರಿಹಾರ ಕೊಡುವಂತೆ ಒತ್ತಾಯ ಮಾಡುವುದು ಸೂಕ್ತ ಎಂದು ಬೀದಿ ವ್ಯಾಪಾರಿ ಸಂಘಟನೆಗಳು ನಿರ್ಧರಿಸಿದವು. ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಎಸ್ ಬಾಬು ಅವರು  – “ನಮಗೆ  ಮಾರ್ಚ್  ಇಂದ ವ್ಯಾಪಾರ ಇಲ್ಲ. ಮುಂದೇನು – ಹೇಗಿರುತ್ತೋ ಗೊತ್ತಿಲ್ಲ.  ಜನರ ಬಳಿ ದುಡಿಲ್ಲ, ಜೊತೆಗೆ  ಈಗಾಗಲೇ  ಹರಡಿರುವ ಫೇಕ್ ನ್ಯೂಸ್ ಇಂದ, ಬೀದಿ ವ್ಯಾಪಾರಿಗಳು ಕೊರೊನಾ ಹಬ್ಬುತ್ತಾರೆ ಎಂದು ಬೇರೆ ಸಾಕಷ್ಟು ಜನ ಭಯ ಪಡುತ್ತಿದ್ದಾರೆ. ಯಾವಾಗ ವ್ಯಾಪಾರ ಮುಂಚೆಯಂತೆ ಆಗುತ್ತದೆಯೋ ಗೊತ್ತಿಲ್ಲ. ನಾವು ನಮ್ಮ ಕಷ್ಟಗಳ ಬಗ್ಗೆ ಮಾನ್ಯ ಮಹಾಪೌರರು ಹಾಗು ಆಯುಕ್ತರನ್ನು ಭೇಟಿ ಆಗಿ ಪರಿಹಾರ ನೀಡಿ ಎಂದು ಮನವಿ ಸಲ್ಲಿಸಿದೆವು. ಅದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಗಳಿಗೆ ನಮ್ಮ ಕಷ್ಟ ಹೇಳಿಕೊಳ್ಳೋಣ ಎಂದು ಸಮಯ ಕೋರಿದರೆ ನಮಗೆ ಅಪ್ಪಾಯಿಂಟ್ಮೆಂಟ್ ನೀಡಲಿಲ್ಲ, ಈ-ಮೇಲ್ ಮಾಡಲು ಹೇಳಿದರು, ಆಗ ನಾವು  ಮುಖ್ಯಮಂತ್ರಿಗಳಿಗೆ ಈ-ಮೇಲ್ ಮೂಲಕ ಮನವಿ ಸಲ್ಲಿಸಿದೆವು. ಅದಕ್ಕೆ ಉತ್ತರ ಸಿಕ್ಕಿಲ್ಲ.  ಪ್ರತಿಭಟನೆ ಮಾಡೋಣ ಎಂದರೆ ಸೆಕ್ಷನ್ 144 ಹಾಕಿದ್ದಾರೆ. ಬೇರೆ ದಾರಿ ಇಲ್ಲದೆ ಉಪವಾಸ ಸತ್ಯಾಗ್ರಹ ಮಾಡಿದೆವು” ಎನ್ನುತ್ತಾರೆ.

ಹಾಗಾಗಿ ಸತ್ಯಾಗ್ರಹ ಮಾಡಿದ ಬೀದಿ ವ್ಯಾಪಾರಿಗಳು “ಬೀದಿ ವ್ಯಾಪಾರ ಮಾಡಲು ಅನುಮತಿ ನೀಡಿ”, “ಮಾನ್ಯ ಮುಖ್ಯಮಂತ್ರಿಗಳೇ, ಬೀದಿ ವ್ಯಾಪಾರಿಗಳ ಕಷ್ಟ ನಿಮ್ಮ ಕಣ್ಣಿಗೆ ಏಕೆ ಕಾಣುತ್ತಿಲ್ಲ, ನಮಗೂ ಪರಿಹಾರ ನೀಡಿ”, ” ಮಾನ್ಯ ಪ್ರಧಾನ ಮಂತ್ರಿಗಳೇ, ನಮಗೆ ಸಾಲದ ಬದಲು ಪರಿಹಾರ ನೀಡಿ” ಎಂಬಂತಹ ಸಂದೇಶಗಳನ್ನು ಉಲ್ಲಾ ಭಿತ್ತಿ ಪತ್ರಗಳನ್ನು ಸತ್ಯಾಗ್ರಹದಲ್ಲಿ ಪ್ರದರ್ಶಿಸಿದರು.

ತಿಂಗಳಿಗೆ 15,000 ದಂತೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರದ ಮೇಲೆ  ಬೀದಿ ವ್ಯಾಪಾರಿಗಳ ಒತ್ತಾಯ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರ ಬೀದಿ  ವ್ಯಾಪಾರಿಗಳಿಗೆ ಪ್ರಧಾನ್ ಮಂತ್ರೀ ಆತ್ಮನಿರ್ಭರ್ ಯೋಜನೆ ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಬೀದಿ ವ್ಯಾಪಾರಿಗಳಿಗೆ 10,000 ರೂಪಾಯಿಗಳ ಸಾಲ ನೀಡುತ್ತಿದೆ. ನಮಗೆ ವ್ಯಾಪಾರ  ಇಲ್ಲದಿರುವಾಗ ಸಾಲ  ಹೇಗೆ ತೀರಿಸುವುದು, ಹಾಗಾಗಿ ನಮಗೆ ಸಾಲ ಬೇಡ ಪರಿಹಾರ ನೀಡಿ ಎಂದು ಈಗಾಗಲೇ ಸಾಲಗಳಲ್ಲಿ ಮುಳುಗಿರುವ ವ್ಯಾಪಾರಿಗಳ ಒತ್ತಾಯ.  ಇನ್ನು ಬಿಬಿಎಂಪಿಗೆ ಬಂದರೆ, ಮೂರೂ ವರ್ಷದಿಂದಲೂ ಸ್ಥಳೀಯ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಎಂದು 2 ಕೋಟಿ ಹಣ ಮೀಸಲಿಟ್ಟಿದೆ, ಆದರೆ ಇದುವರೆಗೂ ಒಂದು ರೂಪಾಯಿ ಸಹ ಬಳಸಿಲ್ಲ. ಈಗಲಾದರೂ ಅದನ್ನು ನಮ್ಮ ಕಲ್ಯಾಣಕ್ಕಾಗಿ ಉಪಯೋಗಿಸಿ ಎಂಬುದು ಅವರ ಒತ್ತಾಯ.  ಇಷ್ಟೆಲ್ಲಾ ಅಲ್ಲದೆ, ವ್ಯಾಪಾರಿಗಳದ್ದು ಒಂದು ಮುಖ್ಯ ಹಕ್ಕೊತ್ತಾಯವಿದೆ – ಈ ಮೇಲಿನ ಪರಿಹಾರ ಎಲ್ಲಾ ಬೀದಿ ವ್ಯಾಪಾರಿಗಳಿಗೂ ತಲುಪಬೇಕೆಂಬುದು. ಸರ್ಕಾರ ಸಾಲ ಕೊಡುತ್ತಿರುವುದು ಕೇವಲ ಸಮೀಕ್ಷೆಗೆ ಒಳಗೊಂಡಂತ ವ್ಯಾಪಾರಿಗಳಿಗೆ. ಆದೆರೆ ಒಂದು ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳುಳ್ಳ ಬೆಂಗಳೂರು ನಗರದಲ್ಲಿ ಕೇವಲ 25,000 ವ್ಯಾಪಾರಿಗಳು ಸಮೀಕ್ಷೆಗೆ ಒಳಪಟ್ಟಿದ್ದಾರೆ.

ಬೀದಿ ವ್ಯಾಪಾರಿಗಳ ನಮ್ಮ ನಗರಕ್ಕೆ ದೊಡ್ಡ ಸೇವೆ ಸಲ್ಲಿಸಿದವರು. ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಉತ್ತಮ ವಸ್ತುಗಳು ಸಿಗಬೇಕಾದರೆ, ಅದು ಬಿಡಿ ವ್ಯಾಪಾರಿಗಳಿಂದ ಮಾತ್ರ ಸಾಧ್ಯ. ಬೀದಿ ವ್ಯಾಪಾರ ನಮ್ಮ ನಗರಗಳ ಪರಂಪರೆಯ ಮುಖ್ಯ ಭಾಗ. ಅಧಿಕಾರಿಗಳ ಬೈಗುಳ, ಮಳೆ, ಬಿಸಿಲು, ಧೂಳು, ಹೊಗೆ ಮಧ್ಯೆ ನಮಗೆ ದಿನಾ ಸೇವೆ ಸಲ್ಲಿಸುವ ವ್ಯಾಪಾರಿಗಳ ನೆರವಿಗೆ ಸರ್ಕಾರ ಮುಂದೆ ಬರಲೇಬೇಕು.  ಈ ನಗರ ಸೃಷ್ಟಿ ಮಾಡಿದ ಕೆಂಪೇಗೌಡರು ಎಲ್ಲರೂ ಬದುಕುವಂತ ಊರಾಗಬೇಕೆಂದು ಬಯಸಿದವರು. ಅವರ ನೆನಪಿನಲ್ಲಿ ಅತಿ ದೊಡ್ಡ ಪ್ರತಿಮೆ ಕಟ್ಟುತ್ತಿರುವ ರಾಜ್ಯ ಸರ್ಕಾರ ಈಗ ಅವರ ಈ ಉದಾರ ಆದರ್ಶವನ್ನು ತನ್ನದಾಗಿಸಿಕೊಂಡು, ಬೀದಿ ವ್ಯಾಪಾರಿಗಳಿಗೆ ಸಾಥ್ ನೀಡಬೇಕಾಗಿದೆ.

ವಿನಯ್ ಕೂರಗಾಯಲ ಶ್ರೀನಿವಾಸ, ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...