Homeಕರ್ನಾಟಕಬಿಡದಿ ಉಪನಗರ ಯೋಜನೆ ‘ಭೂ ಬೆಲೆ ನಿಗದಿ ಸಭೆ’ ನ್ಯಾಯ ನಿರಾಕರಣೆಯ ಪಿತೂರಿ: ಕರ್ನಾಟಕ ಪ್ರಾಂತ...

ಬಿಡದಿ ಉಪನಗರ ಯೋಜನೆ ‘ಭೂ ಬೆಲೆ ನಿಗದಿ ಸಭೆ’ ನ್ಯಾಯ ನಿರಾಕರಣೆಯ ಪಿತೂರಿ: ಕರ್ನಾಟಕ ಪ್ರಾಂತ ರೈತ ಸಂಘ

- Advertisement -
- Advertisement -

ಬಿಡದಿ ಉಪನಗರ ಯೋಜನೆ ಭೂ ಬೆಲೆ ನಿಗದಿ ಸಭೆಯನ್ನು ರದ್ದುಪಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ. ಈ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ, ರಾಜ್ಯ ಸಮಿತಿ ಅಧ್ಯಕ್ಷರಾಗಿರುವ ಯು. ಬಸವರಾಜ ಅವರ ನೇತೃತ್ವದಲ್ಲಿ ಪತ್ರ ಪ್ರಕಟಿಸಲಾಗಿದೆ. 

ಬಿಡದಿ ಸಮಗ್ರ ಉಪ ನಗರ ಅಭಿವೃದ್ಧಿ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987 ರ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಪ್ರಾಥಮಿಕ ಅಧಿಸೂಚನೆಗೆ ಈಗಾಗಲೇ ಶೇಕಡಾ 80 ಕ್ಕಿಂತ ಹೆಚ್ಚು ರೈತರು ತಮ್ಮ ವಿರೋಧ ಹಾಗೂ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಿದ್ದರೂ ಪರಿಗಣಿಸದೇ ಕದ್ದುಮುಚ್ಚಿ ತರಾತರಿಯಲ್ಲಿ ದಿನಾಂಕ 06-11-25 ರಂದು  ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳು ಭೂ ಬೆಲೆ ದರ ನಿಗದಿ ಸಭೆ ಏರ್ಪಡಿಸಿರುವುದು ಪಾರ ದರ್ಶಕವಾಗಿಲ್ಲ, ಜೊತೆಗೆ ಇದು ನ್ಯಾಯ ನಿರಾಕರಣೆಯ ಪಿತೂರಿಯಾಗಿದೆ, ಈ ನಡೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಭೂ ಸ್ವಾಧೀನಕ್ಕೆ ಒಳಪಡಿಸುತ್ತಿರುವ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 9680 ಎಕರೆ ಭೂಮಿ ಬಹು ವಾರ್ಷಿಕ ಫಲವತ್ತಾದ ಸಮೃದ್ಧ ವರ್ಷ ಪೂರ್ತಿ ನೀರಾವರಿ ಸೌಲಭ್ಯ ಹೊಂದಿರುವ ಕೃಷಿ ಭೂಮಿಯಾಗಿದೆ. ಪ್ರತಿಯೊಬ್ಬ ರೈತರು ಬಹು ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ತಮ್ಮ ಸಣ್ಣ ಹಿಡುವಳಿಯಲ್ಲಿ ಸುಸ್ಥಿರವಾದ ಬದುಕನ್ನು ನಡೆಸುತ್ತಿದ್ದಾರೆ. ಹೈನುಗಾರಿಕೆ, ರೇಷ್ಮೆ, ಬಾಳೆ ,ವಿವಿಧ ತರಕಾರಿಗಳು, ಅಡಿಕೆ ,ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಾ ಹತ್ತಿರದ ಬೃಹತ್ ಬೆಂಗಳೂರು ಮಹಾನಗರದ ಆಹಾರದ ಕಣಜವಾಗಿದೆ. ಇಂತಹ ಫಲವತ್ತಾದ ಕೃಷಿ ಭೂಮಿ ರಕ್ಷಣೆಗಾಗಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ರೈತರ ಅಹವಾಲುಗಳನ್ನು ಒಮ್ಮೆಯೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಕೇಳಿಲ್ಲ. ಸ್ಥಳೀಯ  ಶಾಸಕರು ಕೂಡ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ.

ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆ ನೋಟೀಸ್ ಗೆ ಲಿಖಿತವಾಗಿ ಸಾವಿರಾರು ರೈತರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಿಲ್ಲ. ಕೇವಲ ಪ್ರಾಥಮಿಕ ಅಧಿಸೂಚನೆ ಆಧಾರದ ಮೇಲೆ ಭೂ ದರ ನಿಗದಿ ಸಭೆ ಏರ್ಪಡಿಸಿರುವುದು 2013 ರ ಭೂ ಸ್ವಾಧೀನ ಕಾಯ್ದೆಯ ಗಂಭೀರ ಉಲ್ಲಂಘನೆ ಯಾಗಿದ್ದು ಕೂಡಲೇ ದರ ನಿಗದಿ ಸಭೆ ರದ್ದುಪಡಿಸಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರು ದಕ್ಷಿಣ (ರಾಮನಗರ )ಜಿಲ್ಲಾಡಳಿತ ವನ್ನು ಆಗ್ರಹಿಸುತ್ತದೆ.  

ದರ ನಿಗದಿ ಭೂತವನ್ನು ಮುಂದು ಮಾಡಿ ರೈತರಲ್ಲಿ ಗೊಂದಲ ಸೃಷ್ಟಿಸಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ರೈತರಲ್ಲಿ ಒಡಕು ಸೃಷ್ಟಿಸುವ ರಿಯಲ್ ಎಸ್ಟೇಟ್ ಕಿಡಿಗೇಡಿತನವನ್ನು ಅರ್ಥ ಮಾಡಿಕೊಂಡು ಹಿಂದಿನ ಒಡಕು ಮೂಡಿಸುವ ಪ್ರಯತ್ನ ವನ್ನು ವಿಫಲಗೊಳಿಸಿದಂತೆ ಈ ಒಡಕು ಉಂಟು ಮಾಡುವ ಪಿತೂರಿಯನ್ನು ಕೂಡ ನಿರ್ಣಾಯಕವಾಗಿ ಸೋಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ರೈತರಲ್ಲಿ ವಿನಂತಿಸುತ್ತದೆ. ಈ ರೈತರ ನ್ಯಾಯಬದ್ದವಾದ ಹೋರಾಟವನ್ನು ರಾಜ್ಯದ ಎಲ್ಲಾ ರೈತರು ಹಾಗೂ ಕಾರ್ಮಿಕರು ಬೆಂಬಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ : ಆರು ಮಹಿಳೆಯರು ಸಾವು

ಹಳಿ ದಾಟುತ್ತಿದ್ದ ವೇಳೆ ರೈಲು ಹರಿದು ಆರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಝಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ 9.30 ರ ಸುಮಾರಿಗೆ ಚೋಪನ್-ಪ್ರಯಾಗರಾಜ್ ಪ್ಯಾಸೆಂಜರ್...

ಹೊನ್ನಾವರ ಬಂದರು ಯೋಜನೆ ಕೈ ಬಿಡಿ : ಸರ್ಕಾರಕ್ಕೆ ಮೇಧಾ ಪಾಟ್ಕರ್ ಒತ್ತಾಯ

ಪರಿಸರ ಹಾಗೂ ಮತ್ಸ್ಯ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಹೊನ್ನಾವರ ಬಂದರು ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಅಲ್ಲದೇ, ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ...

ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ : ಪ.ಬಂಗಾಳದಲ್ಲಿ ‘ನರೇಗಾ’ ಪುನರಾರಂಭಕ್ಕೆ ಮುಂದಾದ ಕೇಂದ್ರ

ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾದ ಕಾರಣ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಶ್ಚಿಮ ಬಂಗಾಳದಲ್ಲಿ ವಿಶೇಷ ಷರತ್ತುಗಳೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ಪುನರಾರಂಭಿಸಲು ಮುಂದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್...

ಹರಿಯಾಣ ಮತಗಳ್ಳತನ : ರಾಹುಲ್ ಗಾಂಧಿ ಮಾಡಿರುವ ಪ್ರಮುಖ ಆರೋಪಗಳೇನು?

ಕಾಂಗ್ರೆಸ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಚೇರಿಯಲ್ಲಿ ಬುಧವಾರ (ನವೆಂಬರ್ 5, 2025) ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ್ದು, 2024ರ ಅಕ್ಟೋಬರ್...

ಬಾಣಂತಿಯರ ಸಾವಿನಿಂದ ಎಚ್ಚೆತ್ತ ಸರ್ಕಾರ: ಜೀವರಕ್ಷಕ ಔಷಧಿ ಖರೀದಿಸಲು ಕಟ್ಟುನಿಟ್ಟಿನ ನಿಯಮ

ಬೆಂಗಳೂರು: ಕೆಲವು ತಿಂಗಳ ಹಿಂದೆ ಬಳ್ಳಾರಿಯಲ್ಲಿ ಕಳಪೆ ಗುಣಮಟ್ಟದ IV ದ್ರವಗಳ ಬಳಕೆಯಿಂದ ಐದು ಯುವ ತಾಯಂದಿರು ಸಾವನ್ನಪ್ಪಿದ ನಂತರ, ರಾಜ್ಯ ಸರ್ಕಾರವು ತನ್ನ ಆಸ್ಪತ್ರೆಗಳಿಗೆ ಗುಣಮಟ್ಟದ ಜೀವರಕ್ಷಕ ಔಷಧಿಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು...

ಬ್ರೆಝಿಲ್ ಮಾಡೆಲ್ ಹರಿಯಾಣದಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ : ರಾಹುಲ್ ಗಾಂಧಿ ಆರೋಪ

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ 25 ಲಕ್ಷ ಅಥವಾ ರಾಜ್ಯದ ಒಟ್ಟು ಮತದಾರರಲ್ಲಿ ಶೇಕಡ 12ರಷ್ಟು 'ನಕಲಿ ಮತಗಳು' ಚಲಾವಣೆಯಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಬುಧವಾರ (ನ.5)...

ಆಹಾರ-ಆರೋಗ್ಯ ಮತ್ತು ಸುರಕ್ಷತೆಗೆ ಮಾನದಂಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೀದಿ ಬದಿ ವ್ಯಾಪಾರಿಗಳು ಹಾಗೂ ದೊಡ್ಡ-ದೊಡ್ಡ ರೆಸ್ಟೋರೆಂಟ್‌ಗಳು ಆರೋಗ್ಯ ಮತ್ತು ಸುರಕ್ಷತಾ ಮಾನದಂಡ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಜೊತೆಗೆ, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆ ನಿಗಾ ಇರಿಸುವುದಕ್ಕೆ ಸೂಕ್ತ ಕಾರ್ಯ ವಿಧಾನವೊಂದನ್ನು...

ಹರಿಯಾಣ ಚುನಾವಣೆಯಲ್ಲಿ ದೊಡ್ಡ ಮಟ್ಟದ ‘ಮತಗಳ್ಳತನ’ : ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ಬಿಹಾರದಲ್ಲಿ ಮೊದಲ ಹಂತದ ಮತದಾನದ ಮುನ್ನಾ ದಿನವಾದ ಇಂದು (ನವೆಂಬರ್ 5, 2025) ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ 'ಮತಗಳ್ಳತನ' ನಡೆದಿದೆ ಎಂಬ 'ಹೈಡ್ರೋಜನ್ ಬಾಂಬ್'...

ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!

(ಇದು ಮೊದಲು ನ್ಯಾಯಪಥ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಿತ್ತು) ಉತ್ತರ ಕನ್ನಡವೆಂದರೆ ಸರಕಾರಿ ಯೋಜನೆಗಳ ಪ್ರಯೋಗಶಾಲೆ; ಇಲ್ಲಿಯ ಅಮಾಯಕ ಮಂದಿ ಸರಕಾರಿ ಯೋಜನೆಗಳ ಪ್ರಯೋಗಪಶುಗಳು. ಹಲವು ದಶಕಗಳಿಂದ ಉತ್ತರ ಕನ್ನಡದ ಜನರು ಒಂದಿಲ್ಲೊಂದು ಯೋಜನೆಗಾಗಿ ತಲೆತಲಾಂತರದಿಂದ...

ಮೊದಲ ಪತ್ನಿ ವಿರೋಧಿಸಿದರೆ ಮುಸ್ಲಿಂ ಪುರುಷರಿಗೆ ಎರಡನೇ ವಿವಾಹ ನೋಂದಣಿಗೆ ಅವಕಾಶವಿಲ್ಲ: ಕೇರಳ ಹೈಕೋರ್ಟ್

ಕೇರಳ ಹೈಕೋರ್ಟ್ ಇತ್ತೀಚೆಗೆ ಮುಸ್ಲಿಂ ಪುರುಷನ ಎರಡನೇ ವಿವಾಹವನ್ನು ಕೇರಳ ವಿವಾಹ ನೋಂದಣಿ (ಸಾಮಾನ್ಯ) ನಿಯಮಗಳು, 2008 ರ ಅಡಿಯಲ್ಲಿ, ಮೊದಲ ಪತ್ನಿಗೆ ತಿಳಿಸದೆ ಮತ್ತು ವಿಚಾರಣೆ ನಡೆಸದೆ ನೋಂದಾಯಿಸಲಾಗುವುದಿಲ್ಲ ಎಂದು ತೀರ್ಪು...