Homeಕರ್ನಾಟಕಬಿಟ್‌ಕಾಯಿನ್ ಪ್ರಕರಣ; ಬೊಮ್ಮಾಯಿ ಹೆಸರು ಹೇಳಲು ಹಿಂಜರಿಕೆಯೇಕೆ?

ಬಿಟ್‌ಕಾಯಿನ್ ಪ್ರಕರಣ; ಬೊಮ್ಮಾಯಿ ಹೆಸರು ಹೇಳಲು ಹಿಂಜರಿಕೆಯೇಕೆ?

- Advertisement -
- Advertisement -

ಬಿಟ್‌ಕಾಯಿನ್ ವಿವಾದ ಶುರುವಾದಾಗಿನಿಂದ ಇಲ್ಲಿಯವರೆಗೆ ಬಂದಿರುವ ಪತ್ರಿಕಾ ವರದಿಗಳು, ಬಹಿರಂಗ ಆರೋಪಗಳು, ಅಂತರಂಗದ ಗುಪ್ತ ಗಾಸಿಪ್‌ಗಳು, ’ಆರೋಪಿ’ಯ ಸ್ವಯಂಪ್ರೇರಿತ ಹೇಳಿಕೆಗಳು ಎಲ್ಲವೂ ಒಬ್ಬ ವ್ಯಕ್ತಿಯತ್ತ (ಅಥವಾ ಇಬ್ಬರತ್ತ) ಬೆರಳು ಮಾಡಿ ತೋರಿಸುತ್ತಿವೆ. ಆದರೆ ಅವರ ಹೆಸರನ್ನು ನೇರವಾಗಿ ಹೇಳಲು ತಯಾರಿಲ್ಲ. ಅದು ಬಸವರಾಜ ಬೊಮ್ಮಾಯಿಯವರ ಹೆಸರು. ನೇರವಾಗಿ ಹೆಸರು ಹೇಳಲು ಸಾಧ್ಯವಿಲ್ಲವೇಕೆಂದರೆ ಈ ಸದ್ಯ ಅವರ್‍ಯಾರಿಗೂ ಆ ವ್ಯಕ್ತಿಯ ವಿರುದ್ಧದ ಆರೋಪವನ್ನು ಸಾಬೀತುಮಾಡಬಲ್ಲ ಪುರಾವೆ ಕೊಡುವುದು ಸಾಧ್ಯವಿಲ್ಲ. ಹೀಗಿದ್ದೂ ಯಾರಿಗೇ ಆದರೂ ಸ್ಪಷ್ಟವಾಗುವ ರೀತಿ ಅವರ ಹೆಸರನ್ನೇ ಎಲ್ಲರೂ ಹೇಳುತ್ತಿದ್ದಾರಾ?

ಸಂದೇಹವೇ ಇಲ್ಲ. ಬಿಜೆಪಿಯ ಪರವಾಗಿ ಪ್ರೊಪಗಾಂಡಾದಲ್ಲಿ ನಿರತವಾಗಿರುವ ಪತ್ರಿಕೆಗಳಲ್ಲಿ ಸಹ ಈ ಸೂಚನೆ ಸ್ಪಷ್ಟವಾಗಿ ಇದೆ. ಉದಾಹರಣೆಗೆ, ಈ ವಿಚಾರದಲ್ಲಿ ಬಂದ ಮೊಟ್ಟಮೊದಲ ವರದಿ ಸಂಯುಕ್ತ ಕರ್ನಾಟಕದ್ದು. ಅಕ್ಟೋಬರ್ 19, 2021ರ ಅದರ ಮುಖಪುಟದಲ್ಲೇ ಮಹತ್ವದ ವರದಿ ಬಂದಿತು. ಅದರ ಶೀರ್ಷಿಕೆಯೇ ’ಬಿಟ್‌ಕಾಯಿನ್ ಡ್ರಗ್ಸ್ ಹಗರಣ – ಜೋಡಿ ನಾಯಕರ ನೆರಳು’ ಎಂದು ಹೇಳುತ್ತದೆ. ಉಪಶೀರ್ಷಿಕೆಯು ’ತಲ್ಲಣ ಉಂಟು ಮಾಡಿದೆ ಕೇಂದ್ರ ತನಿಖಾ ಸಂಸ್ಥೆಗಳ ನಡೆ’ ಎನ್ನುತ್ತದೆ. ಮುಂದುವರೆದು ’ಈ ಹಂತದಲ್ಲಿ ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳು ಆರೋಪಿಗಳ ರಕ್ಷಣೆಗಾಗಿ ಭಾರಿ ಮೊತ್ತದ ಕಿಕ್‌ಬ್ಯಾಕ್ ಪಡೆದಿರುವ ಮಾಹಿತಿ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎನ್ನುವುದು ಹೊಸ ವಿಷಯ. ಇದು ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ’ ಎಂದು ಬರೆಯಲಾಗಿದೆ.

ಅದರ ನಂತರ ಕೂಡಲೇ ಬೊಮ್ಮಾಯಿಯವರನ್ನೇ ಗುರಿ ಮಾಡಿ ಹೇಳಿಕೆಗಳು ಬಂದಿದ್ದರೂ, ಅವುಗಳಲ್ಲಿ ನಿರ್ದಿಷ್ಟ ಸೂಚನೆ ಇರಲಿಲ್ಲ. ’ದೊಡ್ಡ ಹೆಸರುಗಳಿವೆ’, ’ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ’ ಥರದ ಹೇಳಿಕೆಗಳು ಮಾತ್ರ ಬಂದವು. ಅದಕ್ಕೆ ಪ್ರತಿಯಾಗಿ ’ದೊಡ್ಡ ಹೆಸರುಗಳಿದ್ದರೆ ಹೇಳಲಿ, ಯಾಕೆ ಸುಮ್ಮನಿದ್ದಾರೆ?’ ಎಂಬರ್ಥದ ಮಾತುಗಳನ್ನು ಸ್ವತಃ ಬಸವರಾಜ ಬೊಮ್ಮಾಯಿಯವರೂ ಆಡಿದರು. ಅಷ್ಟೇ ಆಗಿದ್ದರೆ ತೊಂದರೆಯಿರಲಿಲ್ಲ. ಮುಖ್ಯಮಂತ್ರಿಯಾದವರು ’ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ತನಿಖೆ ಹಾಗೂ ಶಿಕ್ಷೆ ಆಗಲಿದೆ’ ಎಂದು ಹೇಳಿ ಸುಮ್ಮನಾಗಬಹುದಿತ್ತು. ಆದರೆ, ಅದರ ಬದಲಿಗೆ ಮುಖ್ಯಮಂತ್ರಿ ಬೊಮ್ಮಾಯಿ ’ಇದರಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ, ನೋಡಿಕೊಂಡು ಮಾತನಾಡಿ’ ಎಂಬರ್ಥದ ಮಾತುಗಳನ್ನು ತೇಲಿಬಿಟ್ಟರು. ಇದು ಶಾಸನಬದ್ಧ ಅಧಿಕಾರ ಹೊಂದಿರುವ ವ್ಯಕ್ತಿಯೊಬ್ಬರು ಆಡಬಾರದ ಮಾತಾಗಿತ್ತು. ತನಿಖೆ ನಡೆಯುತ್ತಿರುವಾಗ ಗಾಸಿಪ್ ರೀತಿಯ ಮಾತುಗಳನ್ನು ಗೃಹಮಂತ್ರಿ, ಮುಖ್ಯಮಂತ್ರಿಗಳು ಆಡಬಾರದು. ಒಂದು ವೇಳೆ ಕಾಂಗ್ರೆಸ್‌ನವರು ಇರುವುದೇ ನಿಜವಾಗಿದ್ದರೆ, ಸರ್ಕಾರದ ಮುಖ್ಯಸ್ಥರ ಸ್ಥಾನದಲ್ಲಿರುವುದು ಮಾಡಬೇಕಾದ್ದೇನು? ನಿಷ್ಪಕ್ಷಪಾತ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮಕ್ಕೆ ಅನುವು ಮಾಡಿಕೊಡಬೇಕು ಅಷ್ಟೇ.

ಆದರೆ, ಒಂದು ರೀತಿಯ ಬ್ಲ್ಯಾಕ್‌ಮೇಲ್ ಮಾತುಗಳನ್ನು ಮುಖ್ಯಮಂತ್ರಿ ಆಡಿದರು. ಇದಕ್ಕೇ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ’ಸಿಎಂ ಅವರು ಸೆಟ್ಲ್‌ಮೆಂಟ್‌ಗೆ ಕರೆಯುತ್ತಿದ್ದಂತಿದೆ. ಆದರೆ ಅದರ ಅಗತ್ಯವಿಲ್ಲ; ಕಾಂಗ್ರೆಸ್‌ನವರು ಭಾಗಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲಿ’ ಎಂದು ಪ್ರತ್ಯುತ್ತರ ನೀಡಿದ್ದು. ಕಾಂಗ್ರೆಸ್‌ನ ಪ್ರತಿಯೊಬ್ಬ ದೊಡ್ಡ ನಾಯಕರೂ ಖಚಿತವಾಗಿ ಕಾಂಗ್ರೆಸ್‌ನವರು ಭಾಗಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಘಂಟಾಘೋಷವಾಗಿ ಹೇಳಿದರು.

ಇದಕ್ಕೂ ಮುಂಚೆಯೇ ಪ್ರಿಯಾಂಕ್ ಖರ್ಗೆ ಅವರು ಮೊಟ್ಟ ಮೊದಲ ಬಾರಿಗೆ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು. ’ಈ ಹಗರಣದಲ್ಲಿ ಸರಿಯಾದ ತನಿಖೆ ನಡೆಯುವುದೇ ಆದಲ್ಲಿ, ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ’ ಎಂಬ ಮಾತು ಅಂತಿಮವಾಗಿ ಯಾರಿಗೂ ಅನುಮಾನವಿರದಂತೆ, ಬೆರಳು ತೋರಿಸುತ್ತಿರುವುದು ಸ್ವತಃ ಬೊಮ್ಮಾಯಿಯವರ ಮೇಲೆ ಎಂಬುದನ್ನು ಖಚಿತಪಡಿಸಿತು. ಅವರು ಪತ್ರಿಕಾಗೋಷ್ಠಿ ಮಾಡಿದಾಗ ನೀವು ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಹೇಳಿದ್ದೇಕೆ ಎಂದು ಪತ್ರಕರ್ತರು ಕೇಳಿದರು. ’ಆ ಘಟನೆ ನಡೆದಾಗ ಯಾರು ಗೃಹಮಂತ್ರಿ ಆಗಿದ್ದರು? ಹಾಗಿದ್ದ ಮೇಲೆ ಅವರು ಜವಾಬ್ದಾರಿ ಹೊರಬೇಕಲ್ಲವೇ?’ ಎಂಬ ಮರುಪ್ರಶ್ನೆ ಹಾಕಿದರಾದರೂ, ನಿರ್ದಿಷ್ಟವಾಗಿ ಬೊಮ್ಮಾಯಿಯವರು ಇದರಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂತಲೋ ಅಥವಾ ಕೇಸು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂತಲೋ ಹೇಳಲಿಲ್ಲ.

ಹಾಗೆ ನೋಡಿದರೆ ಆ ಪತ್ರಿಕಾಗೋಷ್ಠಿಯಲ್ಲಿ ಮತ್ತು ಅದರ ಸುತ್ತಮುತ್ತ ಮುಂದಿಟ್ಟ ಬಹುತೇಕ ಪ್ರಶ್ನೆಗಳು ಕಾನೂನು ಪ್ರಕ್ರಿಯೆಯಲ್ಲಿ ಆದ ಲೋಪಗಳೇ (ಪ್ರೊಸೀಜರಲ್ ಲ್ಯಾಪ್ಸಸ್) ಹೊರತು ತಮ್ಮಂತೆ ತಾವೇ ಭ್ರಷ್ಟಾಚಾರವನ್ನು ಎತ್ತಿತೋರಿಸುವ ಪುರಾವೆಗಳಾಗಿರಲಿಲ್ಲ. ಹೆಚ್ಚೆಂದರೆ ಬಹಳ ಬೇಜವಾಬ್ದಾರಿ ನಡೆಗಳನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಆದರೆ, ಇದು ಇಷ್ಟಕ್ಕೇ ಸೀಮಿತವಾಗಿರುವ ಸಂಗತಿಯಾಗಿಲ್ಲ. ಈ ವಿಚಾರವು ಹೊರಬಂದಿದ್ದು ಬಿಜೆಪಿ ವಲಯಗಳಿಂದಲೇ ಹೊರತು ಕಾಂಗ್ರೆಸ್‌ನಿಂದ ಅಲ್ಲ. ಪತ್ರಿಕೆಗಳಲ್ಲಿ ಬಂದ ವರದಿಗಳಿಗೂ ’ಬಿಜೆಪಿ’ಯೊಳಗಿಂದಲೇ ಮಾಹಿತಿ ಕೊಡಲಾಗಿತ್ತು. ಈ ಕುರಿತ ಪ್ರಶ್ನೆಯನ್ನು 13ನೇ ನವೆಂಬರ್ ಪತ್ರಿಕಾಗೋಷ್ಠಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಕರ್ತರಿಗೇ ಪ್ರಶ್ನೆ ಕೇಳಿದರು. ನಿಮಗೆ ಸುದ್ದಿ ಕೊಡುತ್ತಿರುವವರೂ ಬಿಜೆಪಿಯವರೇ ಆಗಿದ್ದಾರಲ್ಲವೇ ಎಂಬ ಆ ಪ್ರಶ್ನೆಗೆ ಪತ್ರಕರ್ತರು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಾ ಹಿಂದಿನ ದಿನವೇ ನಮಗೆ ಸುದ್ದಿ ವಿವರ ಕೊಡುತ್ತಿರುವವರು ಬಿಜೆಪಿ ಮಂತ್ರಿಗಳೇ ಎಂದು ಹೇಳಿಯಾಗಿತ್ತು.

ತಮ್ಮ ಪತ್ರಿಕಾಗೋಷ್ಠಿಯಲ್ಲಿ ’ಪ್ರಧಾನಿ ಮೋದಿಯವರಿಗೆ ಅಮೆರಿಕದಲ್ಲಿ ಮುಜುಗರ, ಕೆಲ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಅವರಿಗೆ ವಿವರಗಳನ್ನು ನೀಡಿದ್ದಾರೆ’ ಎಂದು ಎಚ್‌ಡಿಕೆ ಹೇಳಿದ್ದರು. ಇದು ಅದಕ್ಕೆ ಮುಂಚೆಯೇ ’ದಿ ಹಿಂದೂ’ ಪತ್ರಿಕೆಯಲ್ಲಿ ವರದಿಯಾಗಿತ್ತು. ಅಮೆರಿಕದ ತನಿಖಾ ಸಂಸ್ಥೆಗಳು ಈ ಬಿಟ್‌ಕಾಯಿನ್ ಹಗರಣದ ಕುರಿತು ಮೋದಿಯವರಿಗೆ ಹೇಳಿದ್ದು, ಎಂಬುದು ಆ ವರದಿಯ ಸಾರಾಂಶ.

ರಾಜ್ಯವೊಂದರ ಆಡಳಿತದ ಮುಖ್ಯಸ್ಥರು, ತಮ್ಮದೇ ಪಕ್ಷದ ಆಡಳಿತವಿರುವ ಒಕ್ಕೂಟ ಸರ್ಕಾರದ ಮುಖ್ಯಸ್ಥರ ಬಳಿ ಈ ಬಿಟ್‌ಕಾಯಿನ್ ಹಗರಣದ ಕುರಿತು ಪ್ರಸ್ತಾಪಿಸಿದಾಗ, ಪ್ರಧಾನಿ ಏನು ಹೇಳಬಹುದು? ಏನೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದರೆಂದು ಬೊಮ್ಮಾಯಿ ಸಾರ್ವಜನಿಕವಾಗಿ ಪತ್ರಕರ್ತರಿಗೆ ಹೇಳಿದರು. ಇಂತಹ ದೊಡ್ಡ ಹಗರಣದ ವಿಚಾರದಲ್ಲಿ ಪ್ರಧಾನಿ ಅಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರಾ ಅಥವಾ ನಿಮ್ಮ ಕುರ್ಚಿಯ ಬಗ್ಗೆ ಯೋಚಿಸಬೇಡಿ ಎಂದು ಹೇಳಿದ್ದಾರಾ ಎಂಬುದನ್ನು ಬೊಮ್ಮಾಯಿಯವರು ಹೇಳದೇ ಇದ್ದರೂ, ಒಟ್ಟಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನಂತೂ ಖಾತರಿಪಡಿಸಿದರು.

ಸಾರಾಂಶದಲ್ಲಿ ಈ ಭಿನ್ನ ಹೇಳಿಕೆಗಳು, ಪತ್ರಿಕಾ ವರದಿಗಳು, ಇದುವರೆಗೆ ಲಭ್ಯವಾಗಿರುವ ಮಾಹಿತಿಗಳನ್ನು ನೋಡಿದರೆ ಕೆಲವು ಅಂಶಗಳು ಸ್ಪಷ್ಟವಾಗುತ್ತಿವೆ. ಈ ಕೇಸು ಕೇವಲ ಯಾರೋ ಒಬ್ಬ ಹ್ಯಾಕರ್ ಬಿಟ್‌ಕಾಯಿನ್ ಕದ್ದದ್ದಲ್ಲ; ಕೇವಲ ಡ್ರಗ್ಸ್‌ದಂತೂ ಮೊದಲೇ ಅಲ್ಲ. ಬದಲಿಗೆ ಬಿಟ್‌ಕಾಯಿನ್ ವ್ಯವಹಾರ, ಹ್ಯಾಕಿಂಗ್ ಇತ್ಯಾದಿಗಳಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಕೊಂಡಾಗ ಅದನ್ನು ಮುಚ್ಚಿ ಹಾಕಲು ವ್ಯವಸ್ಥೆಯೊಳಗಿನ ಹಲವರು ಕೈ ಜೋಡಿಸಿದ್ದಾರೆ. ಸಹಜವಾಗಿ ಇದರಲ್ಲಿ ಪೊಲೀಸರಿದ್ದಾರೆ; ಅಷ್ಟೇ ಅಲ್ಲದೇ ಪೊಲೀಸ್ ಇಲಾಖೆಯ ಮಂತ್ರಿಯೂ ಇದ್ದಾರೆ. ಆಗ ಗೃಹ ಮಂತ್ರಿಯಾಗಿದ್ದದ್ದು ಬಸವರಾಜ ಬೊಮ್ಮಾಯಿ. ಇದು ಕೇವಲ ಪ್ರೊಸೀಜರಲ್ ಲ್ಯಾಪ್ಸ್ ಅಲ್ಲ; ಉದ್ದೇಶಪೂರ್ವಕ ಶಾಮೀಲುದಾರಿಕೆ. ಇದನ್ನು ನೇರವಾಗಿ ಯಾರೂ ಏಕೆ ಹೇಳಲಾಗದು ಎಂದರೆ, ಸದರಿ ವ್ಯವಹಾರದಲ್ಲಿ ವರ್ಗಾವಣೆ ಆಗಿರುವುದು ಕ್ಯಾಷೂ ಅಲ್ಲ; ಯಡಿಯೂರಪ್ಪನವರ ವಿಚಾರದಲ್ಲಿ ಆದಂತೆ ಚೆಕ್‌ನಲ್ಲೂ ಅಲ್ಲ; ಕ್ರಿಪ್ಟೋಕರೆನ್ಸಿಯಲ್ಲಿ. ಅದನ್ನು ಪತ್ತೆ ಹಚ್ಚುವುದು ಕಷ್ಟ.

ಹಾಗಾದರೆ ನರೇಂದ್ರ ಮೋದಿ ಅಮೆರಿಕಕ್ಕೆ ಹೋದಾಗ ಅಲ್ಲಿನ ಎಫ್‌ಬಿಐ ನಿರ್ದಿಷ್ಟವಾಗಿ ಯಾರ ಖಾತೆಗಾದರೂ ಬಿಟ್‌ಕಾಯಿನ್ ವರ್ಗಾವಣೆ ಆಗಿದ್ದುದರ ಕುರಿತು ತಿಳಿಸಿದ್ದಾರೆಯೇ? ಹೌದೆಂಬುದು ’ಬಿಜೆಪಿ ಮೂಲ’ಗಳೇ ಹರಿಬಿಡುತ್ತಿರುವ ’ಸತ್ಯ’.

ಹಾಗೆಯೇ ಎಲ್ಲೆಡೆ ತೇಲಿಬರುತ್ತಿರುವ ಇನ್ನೊಂದು ’ಸತ್ಯ’ವಿದೆ. ಇದರಲ್ಲಿ ಇನ್ನೊಬ್ಬ ಪ್ರಭಾವೀ ನಾಯಕರು ಶಾಮೀಲಾಗಿದ್ದು ಹೇಗೆ? ಮೊಟ್ಟಮೊದಲು ಡ್ರಗ್ಸ್ ಕೇಸಿನಲ್ಲಿ ಶ್ರೀಕಿ ಸಿಕ್ಕಿಕೊಂಡಾಗ, ತಮ್ಮ ಮಗನೂ ಅದರಲ್ಲಿ ಪಾಲುದಾರನಾಗಿದ್ದುದರಿಂದ ಗಾಬರಿಯಾಗಿ ಗೃಹಮಂತ್ರಿಯವರನ್ನು ಭೇಟಿ ಮಾಡಿ ಉಳಿಸಿ ಎಂದು ಅವರು ಕೇಳಿಕೊಂಡರೆಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಡ್ರಗ್ಸ್‌ನಿಂದ ಆರಂಭವಾಗಿ ಅದು ಅಂತಾರಾಷ್ಟ್ರೀಯ ಹ್ಯಾಕಿಂಗ್ ಮತ್ತು ಅದನ್ನು ಮುಚ್ಚಿ ಹಾಕುವ ವಿಚಾರದಲ್ಲಿ ಹಣ ಪಡೆದು ಡೀಲ್ ಆಗುವವರೆಗೆ ಬೆಳೆದು ನಿಂತಿದೆ. ಅದು ನರೇಂದ್ರ ಮೋದಿ ಅಮೆರಿಕಾಕ್ಕೆ ಹೋದಾಗ ತಿಳಿದು ಬಂದಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಕು, ಮೂವರು ಮುಖ್ಯಮಂತ್ರಿಗಳು ಎಂಬಂತೆ ಆಗಬಾರದು ಎಂದು ಹೈಕಮ್ಯಾಂಡ್ ಸುಮ್ಮನೇ ಕುಳಿತಿದೆಯಂತೆ. ಒಂದು ವೇಳೆ ಸಿಎಂ ಸಿಕ್ಕಿಬೀಳುವ ಹಾಗಾದರೆ, ’ನರೇಂದ್ರ ಮೋದಿಯವರು ಎಂದಿಗೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ’ ಎಂಬ ಪೋಸ್ ಕೊಟ್ಟು ಸಿಎಂ ಬದಲಿಸಿಬಿಡಲೂ ಮುಂದಾಗಬಹುದು ಎಂಬುದು ಕೇವಲ ಗಾಸಿಪ್ ಅಲ್ಲ ಎನಿಸುತ್ತದೆ. ಅಂತಹ ಪುರಾವೆ ಯಾರಿಗಾದರೂ ಸಿಗಲು ಸಾಧ್ಯವಿದೆಯೇ? ಬಹುಶಃ ಇಲ್ಲ. ಅಲ್ಲಿಯವರೆಗೂ ಬೊಮ್ಮಾಯಿಯವರು ವದಂತಿಗಳೊಳಗೆ ಮಾತ್ರ ಆರೋಪಿಯಾಗಿರುತ್ತಾರೆ. ಉಳಿದಂತೆ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತೇ ಇದೆ.


ಇದನ್ನೂ ಓದಿ: ಶ್ರೀಕೃಷ್ಣ ತಂದ ಬಿಟ್‌ಕಾಯಿನ್ ಬಿರುಗಾಳಿ! ಬ್ಲಾಕ್ ಚೈನ್ ಮತ್ತು ಬಿಟ್‌ಕಾಯಿನ್ ಬಗ್ಗೆ ಒಂದಿಷ್ಟು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....