Homeಕರ್ನಾಟಕಬಿಟ್‌ಕಾಯಿನ್ ಪ್ರಕರಣ; ಬೊಮ್ಮಾಯಿ ಹೆಸರು ಹೇಳಲು ಹಿಂಜರಿಕೆಯೇಕೆ?

ಬಿಟ್‌ಕಾಯಿನ್ ಪ್ರಕರಣ; ಬೊಮ್ಮಾಯಿ ಹೆಸರು ಹೇಳಲು ಹಿಂಜರಿಕೆಯೇಕೆ?

- Advertisement -
- Advertisement -

ಬಿಟ್‌ಕಾಯಿನ್ ವಿವಾದ ಶುರುವಾದಾಗಿನಿಂದ ಇಲ್ಲಿಯವರೆಗೆ ಬಂದಿರುವ ಪತ್ರಿಕಾ ವರದಿಗಳು, ಬಹಿರಂಗ ಆರೋಪಗಳು, ಅಂತರಂಗದ ಗುಪ್ತ ಗಾಸಿಪ್‌ಗಳು, ’ಆರೋಪಿ’ಯ ಸ್ವಯಂಪ್ರೇರಿತ ಹೇಳಿಕೆಗಳು ಎಲ್ಲವೂ ಒಬ್ಬ ವ್ಯಕ್ತಿಯತ್ತ (ಅಥವಾ ಇಬ್ಬರತ್ತ) ಬೆರಳು ಮಾಡಿ ತೋರಿಸುತ್ತಿವೆ. ಆದರೆ ಅವರ ಹೆಸರನ್ನು ನೇರವಾಗಿ ಹೇಳಲು ತಯಾರಿಲ್ಲ. ಅದು ಬಸವರಾಜ ಬೊಮ್ಮಾಯಿಯವರ ಹೆಸರು. ನೇರವಾಗಿ ಹೆಸರು ಹೇಳಲು ಸಾಧ್ಯವಿಲ್ಲವೇಕೆಂದರೆ ಈ ಸದ್ಯ ಅವರ್‍ಯಾರಿಗೂ ಆ ವ್ಯಕ್ತಿಯ ವಿರುದ್ಧದ ಆರೋಪವನ್ನು ಸಾಬೀತುಮಾಡಬಲ್ಲ ಪುರಾವೆ ಕೊಡುವುದು ಸಾಧ್ಯವಿಲ್ಲ. ಹೀಗಿದ್ದೂ ಯಾರಿಗೇ ಆದರೂ ಸ್ಪಷ್ಟವಾಗುವ ರೀತಿ ಅವರ ಹೆಸರನ್ನೇ ಎಲ್ಲರೂ ಹೇಳುತ್ತಿದ್ದಾರಾ?

ಸಂದೇಹವೇ ಇಲ್ಲ. ಬಿಜೆಪಿಯ ಪರವಾಗಿ ಪ್ರೊಪಗಾಂಡಾದಲ್ಲಿ ನಿರತವಾಗಿರುವ ಪತ್ರಿಕೆಗಳಲ್ಲಿ ಸಹ ಈ ಸೂಚನೆ ಸ್ಪಷ್ಟವಾಗಿ ಇದೆ. ಉದಾಹರಣೆಗೆ, ಈ ವಿಚಾರದಲ್ಲಿ ಬಂದ ಮೊಟ್ಟಮೊದಲ ವರದಿ ಸಂಯುಕ್ತ ಕರ್ನಾಟಕದ್ದು. ಅಕ್ಟೋಬರ್ 19, 2021ರ ಅದರ ಮುಖಪುಟದಲ್ಲೇ ಮಹತ್ವದ ವರದಿ ಬಂದಿತು. ಅದರ ಶೀರ್ಷಿಕೆಯೇ ’ಬಿಟ್‌ಕಾಯಿನ್ ಡ್ರಗ್ಸ್ ಹಗರಣ – ಜೋಡಿ ನಾಯಕರ ನೆರಳು’ ಎಂದು ಹೇಳುತ್ತದೆ. ಉಪಶೀರ್ಷಿಕೆಯು ’ತಲ್ಲಣ ಉಂಟು ಮಾಡಿದೆ ಕೇಂದ್ರ ತನಿಖಾ ಸಂಸ್ಥೆಗಳ ನಡೆ’ ಎನ್ನುತ್ತದೆ. ಮುಂದುವರೆದು ’ಈ ಹಂತದಲ್ಲಿ ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳು ಆರೋಪಿಗಳ ರಕ್ಷಣೆಗಾಗಿ ಭಾರಿ ಮೊತ್ತದ ಕಿಕ್‌ಬ್ಯಾಕ್ ಪಡೆದಿರುವ ಮಾಹಿತಿ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎನ್ನುವುದು ಹೊಸ ವಿಷಯ. ಇದು ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ’ ಎಂದು ಬರೆಯಲಾಗಿದೆ.

ಅದರ ನಂತರ ಕೂಡಲೇ ಬೊಮ್ಮಾಯಿಯವರನ್ನೇ ಗುರಿ ಮಾಡಿ ಹೇಳಿಕೆಗಳು ಬಂದಿದ್ದರೂ, ಅವುಗಳಲ್ಲಿ ನಿರ್ದಿಷ್ಟ ಸೂಚನೆ ಇರಲಿಲ್ಲ. ’ದೊಡ್ಡ ಹೆಸರುಗಳಿವೆ’, ’ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ’ ಥರದ ಹೇಳಿಕೆಗಳು ಮಾತ್ರ ಬಂದವು. ಅದಕ್ಕೆ ಪ್ರತಿಯಾಗಿ ’ದೊಡ್ಡ ಹೆಸರುಗಳಿದ್ದರೆ ಹೇಳಲಿ, ಯಾಕೆ ಸುಮ್ಮನಿದ್ದಾರೆ?’ ಎಂಬರ್ಥದ ಮಾತುಗಳನ್ನು ಸ್ವತಃ ಬಸವರಾಜ ಬೊಮ್ಮಾಯಿಯವರೂ ಆಡಿದರು. ಅಷ್ಟೇ ಆಗಿದ್ದರೆ ತೊಂದರೆಯಿರಲಿಲ್ಲ. ಮುಖ್ಯಮಂತ್ರಿಯಾದವರು ’ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ತನಿಖೆ ಹಾಗೂ ಶಿಕ್ಷೆ ಆಗಲಿದೆ’ ಎಂದು ಹೇಳಿ ಸುಮ್ಮನಾಗಬಹುದಿತ್ತು. ಆದರೆ, ಅದರ ಬದಲಿಗೆ ಮುಖ್ಯಮಂತ್ರಿ ಬೊಮ್ಮಾಯಿ ’ಇದರಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ, ನೋಡಿಕೊಂಡು ಮಾತನಾಡಿ’ ಎಂಬರ್ಥದ ಮಾತುಗಳನ್ನು ತೇಲಿಬಿಟ್ಟರು. ಇದು ಶಾಸನಬದ್ಧ ಅಧಿಕಾರ ಹೊಂದಿರುವ ವ್ಯಕ್ತಿಯೊಬ್ಬರು ಆಡಬಾರದ ಮಾತಾಗಿತ್ತು. ತನಿಖೆ ನಡೆಯುತ್ತಿರುವಾಗ ಗಾಸಿಪ್ ರೀತಿಯ ಮಾತುಗಳನ್ನು ಗೃಹಮಂತ್ರಿ, ಮುಖ್ಯಮಂತ್ರಿಗಳು ಆಡಬಾರದು. ಒಂದು ವೇಳೆ ಕಾಂಗ್ರೆಸ್‌ನವರು ಇರುವುದೇ ನಿಜವಾಗಿದ್ದರೆ, ಸರ್ಕಾರದ ಮುಖ್ಯಸ್ಥರ ಸ್ಥಾನದಲ್ಲಿರುವುದು ಮಾಡಬೇಕಾದ್ದೇನು? ನಿಷ್ಪಕ್ಷಪಾತ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮಕ್ಕೆ ಅನುವು ಮಾಡಿಕೊಡಬೇಕು ಅಷ್ಟೇ.

ಆದರೆ, ಒಂದು ರೀತಿಯ ಬ್ಲ್ಯಾಕ್‌ಮೇಲ್ ಮಾತುಗಳನ್ನು ಮುಖ್ಯಮಂತ್ರಿ ಆಡಿದರು. ಇದಕ್ಕೇ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ’ಸಿಎಂ ಅವರು ಸೆಟ್ಲ್‌ಮೆಂಟ್‌ಗೆ ಕರೆಯುತ್ತಿದ್ದಂತಿದೆ. ಆದರೆ ಅದರ ಅಗತ್ಯವಿಲ್ಲ; ಕಾಂಗ್ರೆಸ್‌ನವರು ಭಾಗಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲಿ’ ಎಂದು ಪ್ರತ್ಯುತ್ತರ ನೀಡಿದ್ದು. ಕಾಂಗ್ರೆಸ್‌ನ ಪ್ರತಿಯೊಬ್ಬ ದೊಡ್ಡ ನಾಯಕರೂ ಖಚಿತವಾಗಿ ಕಾಂಗ್ರೆಸ್‌ನವರು ಭಾಗಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಘಂಟಾಘೋಷವಾಗಿ ಹೇಳಿದರು.

ಇದಕ್ಕೂ ಮುಂಚೆಯೇ ಪ್ರಿಯಾಂಕ್ ಖರ್ಗೆ ಅವರು ಮೊಟ್ಟ ಮೊದಲ ಬಾರಿಗೆ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು. ’ಈ ಹಗರಣದಲ್ಲಿ ಸರಿಯಾದ ತನಿಖೆ ನಡೆಯುವುದೇ ಆದಲ್ಲಿ, ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ’ ಎಂಬ ಮಾತು ಅಂತಿಮವಾಗಿ ಯಾರಿಗೂ ಅನುಮಾನವಿರದಂತೆ, ಬೆರಳು ತೋರಿಸುತ್ತಿರುವುದು ಸ್ವತಃ ಬೊಮ್ಮಾಯಿಯವರ ಮೇಲೆ ಎಂಬುದನ್ನು ಖಚಿತಪಡಿಸಿತು. ಅವರು ಪತ್ರಿಕಾಗೋಷ್ಠಿ ಮಾಡಿದಾಗ ನೀವು ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಹೇಳಿದ್ದೇಕೆ ಎಂದು ಪತ್ರಕರ್ತರು ಕೇಳಿದರು. ’ಆ ಘಟನೆ ನಡೆದಾಗ ಯಾರು ಗೃಹಮಂತ್ರಿ ಆಗಿದ್ದರು? ಹಾಗಿದ್ದ ಮೇಲೆ ಅವರು ಜವಾಬ್ದಾರಿ ಹೊರಬೇಕಲ್ಲವೇ?’ ಎಂಬ ಮರುಪ್ರಶ್ನೆ ಹಾಕಿದರಾದರೂ, ನಿರ್ದಿಷ್ಟವಾಗಿ ಬೊಮ್ಮಾಯಿಯವರು ಇದರಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂತಲೋ ಅಥವಾ ಕೇಸು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂತಲೋ ಹೇಳಲಿಲ್ಲ.

ಹಾಗೆ ನೋಡಿದರೆ ಆ ಪತ್ರಿಕಾಗೋಷ್ಠಿಯಲ್ಲಿ ಮತ್ತು ಅದರ ಸುತ್ತಮುತ್ತ ಮುಂದಿಟ್ಟ ಬಹುತೇಕ ಪ್ರಶ್ನೆಗಳು ಕಾನೂನು ಪ್ರಕ್ರಿಯೆಯಲ್ಲಿ ಆದ ಲೋಪಗಳೇ (ಪ್ರೊಸೀಜರಲ್ ಲ್ಯಾಪ್ಸಸ್) ಹೊರತು ತಮ್ಮಂತೆ ತಾವೇ ಭ್ರಷ್ಟಾಚಾರವನ್ನು ಎತ್ತಿತೋರಿಸುವ ಪುರಾವೆಗಳಾಗಿರಲಿಲ್ಲ. ಹೆಚ್ಚೆಂದರೆ ಬಹಳ ಬೇಜವಾಬ್ದಾರಿ ನಡೆಗಳನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಆದರೆ, ಇದು ಇಷ್ಟಕ್ಕೇ ಸೀಮಿತವಾಗಿರುವ ಸಂಗತಿಯಾಗಿಲ್ಲ. ಈ ವಿಚಾರವು ಹೊರಬಂದಿದ್ದು ಬಿಜೆಪಿ ವಲಯಗಳಿಂದಲೇ ಹೊರತು ಕಾಂಗ್ರೆಸ್‌ನಿಂದ ಅಲ್ಲ. ಪತ್ರಿಕೆಗಳಲ್ಲಿ ಬಂದ ವರದಿಗಳಿಗೂ ’ಬಿಜೆಪಿ’ಯೊಳಗಿಂದಲೇ ಮಾಹಿತಿ ಕೊಡಲಾಗಿತ್ತು. ಈ ಕುರಿತ ಪ್ರಶ್ನೆಯನ್ನು 13ನೇ ನವೆಂಬರ್ ಪತ್ರಿಕಾಗೋಷ್ಠಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಕರ್ತರಿಗೇ ಪ್ರಶ್ನೆ ಕೇಳಿದರು. ನಿಮಗೆ ಸುದ್ದಿ ಕೊಡುತ್ತಿರುವವರೂ ಬಿಜೆಪಿಯವರೇ ಆಗಿದ್ದಾರಲ್ಲವೇ ಎಂಬ ಆ ಪ್ರಶ್ನೆಗೆ ಪತ್ರಕರ್ತರು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಾ ಹಿಂದಿನ ದಿನವೇ ನಮಗೆ ಸುದ್ದಿ ವಿವರ ಕೊಡುತ್ತಿರುವವರು ಬಿಜೆಪಿ ಮಂತ್ರಿಗಳೇ ಎಂದು ಹೇಳಿಯಾಗಿತ್ತು.

ತಮ್ಮ ಪತ್ರಿಕಾಗೋಷ್ಠಿಯಲ್ಲಿ ’ಪ್ರಧಾನಿ ಮೋದಿಯವರಿಗೆ ಅಮೆರಿಕದಲ್ಲಿ ಮುಜುಗರ, ಕೆಲ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಅವರಿಗೆ ವಿವರಗಳನ್ನು ನೀಡಿದ್ದಾರೆ’ ಎಂದು ಎಚ್‌ಡಿಕೆ ಹೇಳಿದ್ದರು. ಇದು ಅದಕ್ಕೆ ಮುಂಚೆಯೇ ’ದಿ ಹಿಂದೂ’ ಪತ್ರಿಕೆಯಲ್ಲಿ ವರದಿಯಾಗಿತ್ತು. ಅಮೆರಿಕದ ತನಿಖಾ ಸಂಸ್ಥೆಗಳು ಈ ಬಿಟ್‌ಕಾಯಿನ್ ಹಗರಣದ ಕುರಿತು ಮೋದಿಯವರಿಗೆ ಹೇಳಿದ್ದು, ಎಂಬುದು ಆ ವರದಿಯ ಸಾರಾಂಶ.

ರಾಜ್ಯವೊಂದರ ಆಡಳಿತದ ಮುಖ್ಯಸ್ಥರು, ತಮ್ಮದೇ ಪಕ್ಷದ ಆಡಳಿತವಿರುವ ಒಕ್ಕೂಟ ಸರ್ಕಾರದ ಮುಖ್ಯಸ್ಥರ ಬಳಿ ಈ ಬಿಟ್‌ಕಾಯಿನ್ ಹಗರಣದ ಕುರಿತು ಪ್ರಸ್ತಾಪಿಸಿದಾಗ, ಪ್ರಧಾನಿ ಏನು ಹೇಳಬಹುದು? ಏನೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದರೆಂದು ಬೊಮ್ಮಾಯಿ ಸಾರ್ವಜನಿಕವಾಗಿ ಪತ್ರಕರ್ತರಿಗೆ ಹೇಳಿದರು. ಇಂತಹ ದೊಡ್ಡ ಹಗರಣದ ವಿಚಾರದಲ್ಲಿ ಪ್ರಧಾನಿ ಅಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರಾ ಅಥವಾ ನಿಮ್ಮ ಕುರ್ಚಿಯ ಬಗ್ಗೆ ಯೋಚಿಸಬೇಡಿ ಎಂದು ಹೇಳಿದ್ದಾರಾ ಎಂಬುದನ್ನು ಬೊಮ್ಮಾಯಿಯವರು ಹೇಳದೇ ಇದ್ದರೂ, ಒಟ್ಟಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನಂತೂ ಖಾತರಿಪಡಿಸಿದರು.

ಸಾರಾಂಶದಲ್ಲಿ ಈ ಭಿನ್ನ ಹೇಳಿಕೆಗಳು, ಪತ್ರಿಕಾ ವರದಿಗಳು, ಇದುವರೆಗೆ ಲಭ್ಯವಾಗಿರುವ ಮಾಹಿತಿಗಳನ್ನು ನೋಡಿದರೆ ಕೆಲವು ಅಂಶಗಳು ಸ್ಪಷ್ಟವಾಗುತ್ತಿವೆ. ಈ ಕೇಸು ಕೇವಲ ಯಾರೋ ಒಬ್ಬ ಹ್ಯಾಕರ್ ಬಿಟ್‌ಕಾಯಿನ್ ಕದ್ದದ್ದಲ್ಲ; ಕೇವಲ ಡ್ರಗ್ಸ್‌ದಂತೂ ಮೊದಲೇ ಅಲ್ಲ. ಬದಲಿಗೆ ಬಿಟ್‌ಕಾಯಿನ್ ವ್ಯವಹಾರ, ಹ್ಯಾಕಿಂಗ್ ಇತ್ಯಾದಿಗಳಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಕೊಂಡಾಗ ಅದನ್ನು ಮುಚ್ಚಿ ಹಾಕಲು ವ್ಯವಸ್ಥೆಯೊಳಗಿನ ಹಲವರು ಕೈ ಜೋಡಿಸಿದ್ದಾರೆ. ಸಹಜವಾಗಿ ಇದರಲ್ಲಿ ಪೊಲೀಸರಿದ್ದಾರೆ; ಅಷ್ಟೇ ಅಲ್ಲದೇ ಪೊಲೀಸ್ ಇಲಾಖೆಯ ಮಂತ್ರಿಯೂ ಇದ್ದಾರೆ. ಆಗ ಗೃಹ ಮಂತ್ರಿಯಾಗಿದ್ದದ್ದು ಬಸವರಾಜ ಬೊಮ್ಮಾಯಿ. ಇದು ಕೇವಲ ಪ್ರೊಸೀಜರಲ್ ಲ್ಯಾಪ್ಸ್ ಅಲ್ಲ; ಉದ್ದೇಶಪೂರ್ವಕ ಶಾಮೀಲುದಾರಿಕೆ. ಇದನ್ನು ನೇರವಾಗಿ ಯಾರೂ ಏಕೆ ಹೇಳಲಾಗದು ಎಂದರೆ, ಸದರಿ ವ್ಯವಹಾರದಲ್ಲಿ ವರ್ಗಾವಣೆ ಆಗಿರುವುದು ಕ್ಯಾಷೂ ಅಲ್ಲ; ಯಡಿಯೂರಪ್ಪನವರ ವಿಚಾರದಲ್ಲಿ ಆದಂತೆ ಚೆಕ್‌ನಲ್ಲೂ ಅಲ್ಲ; ಕ್ರಿಪ್ಟೋಕರೆನ್ಸಿಯಲ್ಲಿ. ಅದನ್ನು ಪತ್ತೆ ಹಚ್ಚುವುದು ಕಷ್ಟ.

ಹಾಗಾದರೆ ನರೇಂದ್ರ ಮೋದಿ ಅಮೆರಿಕಕ್ಕೆ ಹೋದಾಗ ಅಲ್ಲಿನ ಎಫ್‌ಬಿಐ ನಿರ್ದಿಷ್ಟವಾಗಿ ಯಾರ ಖಾತೆಗಾದರೂ ಬಿಟ್‌ಕಾಯಿನ್ ವರ್ಗಾವಣೆ ಆಗಿದ್ದುದರ ಕುರಿತು ತಿಳಿಸಿದ್ದಾರೆಯೇ? ಹೌದೆಂಬುದು ’ಬಿಜೆಪಿ ಮೂಲ’ಗಳೇ ಹರಿಬಿಡುತ್ತಿರುವ ’ಸತ್ಯ’.

ಹಾಗೆಯೇ ಎಲ್ಲೆಡೆ ತೇಲಿಬರುತ್ತಿರುವ ಇನ್ನೊಂದು ’ಸತ್ಯ’ವಿದೆ. ಇದರಲ್ಲಿ ಇನ್ನೊಬ್ಬ ಪ್ರಭಾವೀ ನಾಯಕರು ಶಾಮೀಲಾಗಿದ್ದು ಹೇಗೆ? ಮೊಟ್ಟಮೊದಲು ಡ್ರಗ್ಸ್ ಕೇಸಿನಲ್ಲಿ ಶ್ರೀಕಿ ಸಿಕ್ಕಿಕೊಂಡಾಗ, ತಮ್ಮ ಮಗನೂ ಅದರಲ್ಲಿ ಪಾಲುದಾರನಾಗಿದ್ದುದರಿಂದ ಗಾಬರಿಯಾಗಿ ಗೃಹಮಂತ್ರಿಯವರನ್ನು ಭೇಟಿ ಮಾಡಿ ಉಳಿಸಿ ಎಂದು ಅವರು ಕೇಳಿಕೊಂಡರೆಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಡ್ರಗ್ಸ್‌ನಿಂದ ಆರಂಭವಾಗಿ ಅದು ಅಂತಾರಾಷ್ಟ್ರೀಯ ಹ್ಯಾಕಿಂಗ್ ಮತ್ತು ಅದನ್ನು ಮುಚ್ಚಿ ಹಾಕುವ ವಿಚಾರದಲ್ಲಿ ಹಣ ಪಡೆದು ಡೀಲ್ ಆಗುವವರೆಗೆ ಬೆಳೆದು ನಿಂತಿದೆ. ಅದು ನರೇಂದ್ರ ಮೋದಿ ಅಮೆರಿಕಾಕ್ಕೆ ಹೋದಾಗ ತಿಳಿದು ಬಂದಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಕು, ಮೂವರು ಮುಖ್ಯಮಂತ್ರಿಗಳು ಎಂಬಂತೆ ಆಗಬಾರದು ಎಂದು ಹೈಕಮ್ಯಾಂಡ್ ಸುಮ್ಮನೇ ಕುಳಿತಿದೆಯಂತೆ. ಒಂದು ವೇಳೆ ಸಿಎಂ ಸಿಕ್ಕಿಬೀಳುವ ಹಾಗಾದರೆ, ’ನರೇಂದ್ರ ಮೋದಿಯವರು ಎಂದಿಗೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ’ ಎಂಬ ಪೋಸ್ ಕೊಟ್ಟು ಸಿಎಂ ಬದಲಿಸಿಬಿಡಲೂ ಮುಂದಾಗಬಹುದು ಎಂಬುದು ಕೇವಲ ಗಾಸಿಪ್ ಅಲ್ಲ ಎನಿಸುತ್ತದೆ. ಅಂತಹ ಪುರಾವೆ ಯಾರಿಗಾದರೂ ಸಿಗಲು ಸಾಧ್ಯವಿದೆಯೇ? ಬಹುಶಃ ಇಲ್ಲ. ಅಲ್ಲಿಯವರೆಗೂ ಬೊಮ್ಮಾಯಿಯವರು ವದಂತಿಗಳೊಳಗೆ ಮಾತ್ರ ಆರೋಪಿಯಾಗಿರುತ್ತಾರೆ. ಉಳಿದಂತೆ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತೇ ಇದೆ.


ಇದನ್ನೂ ಓದಿ: ಶ್ರೀಕೃಷ್ಣ ತಂದ ಬಿಟ್‌ಕಾಯಿನ್ ಬಿರುಗಾಳಿ! ಬ್ಲಾಕ್ ಚೈನ್ ಮತ್ತು ಬಿಟ್‌ಕಾಯಿನ್ ಬಗ್ಗೆ ಒಂದಿಷ್ಟು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...