Homeಕರ್ನಾಟಕಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ

ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ

"ಕಾರ್ಯಕ್ರಮದಲ್ಲಿ ನಾವು ಯಾವುದೆ ತಪ್ಪು ಮಾತುಗಳನ್ನು ಆಡಿಲ್ಲ. ಅದರಾಚೆಗೂ ಕೆಲವರು ಹಾಕುತ್ತಿರುವ ಅಶ್ಲೀಲ ಕಮೆಂಟುಗಳು ನಮಗೆ ತೀರಾ ಬೇಜಾರು ಮಾಡಿದೆ. ನಾವು ಏನೂ ತಪ್ಪಿ ಮಾತನಾಡಿಲ್ಲ ಆದರೂ ನಮ್ಮ ಮಾತಿನಿಂದ ನಿಮಗೆ ಬೇಜಾರು ಆಗಿದ್ದರೆ ಕ್ಷಮಿಸಿ"

- Advertisement -
- Advertisement -

ಖಾಸಗಿ ಚಾನೆಲ್ ಒಂದರ ಹಾಸ್ಯ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದ್ದಕ್ಕೆ ತುಳು ರಂಗಭೂಮಿ ಹಾಗೂ ಸಿನೆಮಾದ ಹಿರಿಯ ಕಲಾವಿದ ಅರವಿಂದ್ ಬೋಳಾರ್ ಹಾಗೂ ಚಾನೆಲ್ ವಿರುದ್ದ ಮಂಗಳೂರಿನ ಕಾವೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕರಾವಳಿಯ ಸ್ಥಳೀಯ ಚಾನೆಲ್ ಡೈಜಿವರ್ಲ್ಡ್ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ “ಪ್ರೈವೆಟ್ ಚಾಲೆಂಜ್” ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ಪುರೋಹಿತರು ಹಾಗೂ ಜ್ಯೋತಿಷಗಳ ಧಾರ್ಮಿಕ ಭಾವನೆಗೆ ದಕ್ಕೆ ತರಲಾಗಿದೆ ಎಂದು ಚಾನೆಲ್ ನಿರೂಪಕ ವಾಲ್ಟರ್‌ ನಂದಳಿಕೆ ಮತ್ತು ಕಲಾವಿದ ಅರವಿಂದ ಬೋಳಾರ್ ವಿರುದ್ದ ಶಿವರಾಜ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.

ಆಗಸ್ಟ್ 9 ರಂದು ಪ್ರಸಾರವಾದ ಈ ಹಾಸ್ಯ ಕಾರ್ಯಕ್ರಮದಲ್ಲಿ ಕಲಾವಿದ ಅರವಿಂದ್ ಬೋಳಾರ್‌ ”ಬರೆದಿಪಿ ಜ್ಯೋತಿಷಿ”(ಬರೆದಿಡುವ ಜ್ಯೋತಿಷಿ) ಎಂಬ ಪಾತ್ರದಲ್ಲಿ ನಟಿಸಿ, ಜ್ಯೋತಿಷ್ಯವನ್ನು ವಿಡಂಭನೆಗೆ ಒಳಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಜ್ಯೋತಿಷ್ಯರು ಸ್ತೀ ವಶೀಕರಣ, ಭವಿಷ್ಯ ನುಡಿಯುವುದರ ಬಗ್ಗೆ ಹಾಸ್ಯವಾಗಿ ಚಾಟಿ ಬೀಸಲಾಗಿತ್ತು. ಇದಕ್ಕೆ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂಬ ತಕರಾರು ಎದ್ದಿದ್ದು, ಇದೀಗ ಕೇಸು ದಾಖಲಾಗಿದೆ.

ಘಟನೆಯ ಬಗ್ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು, ಕಲಾವಿದನ ಮೇಲೆ ಕೇಸು ದಾಖಲಾಗಿರುವುದನ್ನು ವಿರೋಧಿಸಿದ್ದಾರೆ. ಈ ಕೇಸು ಕೇವಲ ಇವತ್ತಿನ ಆಕ್ರೋಶ ಮಾತ್ರವಲ್ಲ. ಅರವಿಂದ ಬೋಳಾರ್ ಈ ಹಿಂದೆ ರಾಜಕಾರಣಿಯೊಬ್ಬರನ್ನು ವಿಡಂಭನೆ ಮಾಡಿರುವುದರ ಅಸಮಾಧಾನವನ್ನು ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಕಾರ್ಯಕ್ರಮದಲ್ಲಿ ಯಾವುದೇ ಅವಹೇಳಕಾರಿ ಅಂಶಗಳಿಲ್ಲ. ಕಾರ್ಯಕ್ರಮದಲ್ಲಿ ಕಪಟ ಜ್ಯೋತಿಷಿಗಳು, ವಾಮಾಚಾರಿಗಳು ಮತ್ತು ಮಂತ್ರವಾದಿಗಳಿಂದ ಜನರು ಅತ್ಯಂತ ಹೆಚ್ಚು ಕಷ್ಟನಷ್ಟಗಳಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ. ಅಲ್ಲಿನ ವಿಡಂಭನೆ ಆರೋಗ್ಯಕರವಾಗಿದೆ. ಆದರೆ ಅದನ್ನೆ ಇಟ್ಟುಕೊಂಡು ತುಳುನಾಡಿನ ಖ್ಯಾತ ನಟನೊಬ್ಬನನ್ನು ಹಣಿಯಲು ಪ್ರಯತ್ನಿಸುವುದು ಖಂಡನಾರ್ಹ. ಇದು ಕೇವಲ ಮೇಲ್ನೋಟಕ್ಕೆ ಕಂಡ ರೀತಿ ಕೇವಲ ಜ್ಯೋತಿಷಿಗಳ ವಿಷಯ ಮಾತ್ರವಲ್ಲ, ಇದರ ಹಿಂದೆ ಸಮಾಜದ ಅಂಕುಡೊಂಕುಗಳನ್ನು ಎತ್ತಿತೋರಿಸುವ ಕಲಾವಿದನ ಬಾಯಿಮುಚ್ಚಿಸುವ ಪ್ರಯತ್ನ ಕೂಡಾ ಇದೆ. ನಾವು ಅವರ ಜೊತೆ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.

ರಂಗಕರ್ಮಿ ಐ. ಕೆ. ಬೊಳುವಾರು “ಅರವಿಂದ ಬೋಳಾರ್ ಅವರ ಹಾಸ್ಯ ವಿಡಂಬನೆಗೆ ಒಳಗಾಗಿರುವ ಎಲ್ಲ ಸಾಮಾಜಿಕ ಅಪಾಯಕಾರೀ ಶಕ್ತಿಗಳು ಒಂದಾಗುವ ಅಪಾಯ ಬರಬಹುದು. ಕಲಾವಿದ ಅರವಿಂದ ಬೋಳಾರ್ ಸರ್, ವಾಲ್ಟರ್ ನಂದಳಿಕೆಯವರ ಜೊತೆ ನಾನೂ ಇದ್ದೇನೆ” ಎಂದು ಹೇಳಿದ್ದಾರೆ.

 

ಸಿನೆಮಾ ಪತ್ರಕರ್ತ ಶಶಿಕರ ಪಾತೂರು “ಜನರ ನೋವು, ಸಂಕಟಗಳನ್ನು ಬಳಸಿ ದರ್ಬಾರ್ ನಡೆಸುವ ಮಂತ್ರವಾದಿ, ಜ್ಯೋತಿಷಿಗಳು, ದೆವ್ವ ಬಿಡಿಸುವವರ ಮನೆಹಾಳುತನದ ಮುಂದೆ ತನ್ನ ಹಾಸ್ಯ, ನಟನೆಯ ಮೂಲಕ ಜನರ ನೋವು ಮರೆಸಲು ಯತ್ನಿಸುವ ಅರವಿಂದ ಬೋಳಾರ್ ತುಳುನಾಡಿನ‌ ಆಸ್ತಿ. ನಾನು ಬೋಳಾರ್ ಜೊತೆಗೆ ಇದ್ದೇನೆ” ಎಂದು ಹೇಳಿದ್ದಾರೆ.

ತುಳುವರನ್ನು ನೋವು ನುಂಗಿ ನಗುವಂತೆ ಮಾಡಿದವರು ಅರವಿಂದ ಬೋಳಾರ್. ತುಳುವರ ನೋವುಗಳನ್ನೇ ಎನ್ ಕ್ಯಾಶ್ ಮಾಡಿ ಖಜಾನೆ ತುಂಬಿಸಿಕೊಂಡವರು…

Posted by ಶಶಿಕರ ಪಾತೂರು on Tuesday, August 11, 2020

ಯುವ ಸಂಶೋಧಕ ಬರಹಗಾರ ಚರಣ್ ಐವರ್ನಾಡ್, “ಕರಾವಳಿಯ ಸಂಸ್ಕೃತಿಯನ್ನು ಮಾರುಕಟ್ಟೆ ಮಾಡಿಕೊಂಡು ಕೋಟಿ ಕೋಟಿ ಕೊಳ್ಳೆ ಹೊಡೆದು ಚೀಲ ತುಂಬಿಸಿಕೊಂಡು ಮಹಡಿ ಮೇಲೆ ಮಹಡಿ ಕಟ್ಟುವ ಅಷ್ಟ ಮಂಗಳದವರು ತುಳುನಾಡಿನ ಸಂಸ್ಕೃತಿಗೆ ಮಾರಕ. ನಾನು ಅರವಿಂದ್ ಬೋಳಾರ್ ಜೊತೆ ಇದ್ದೇನೆ” ಎಂದು ವಿಸ್ತಾರವಾದ ಬರಹವನ್ನು ಬರೆದಿದ್ದಾರೆ.

#am_with_aravind_bolarAravind Bolarತುಳು ಚಿತ್ರರಂಗದ ಮತ್ತು ರಂಗಭೂಮಿಯ ಹಾಸ್ಯ ನಟ ಅರವಿಂದ ಬೋಳಾರ್ ಮೇಲೆ ಧಾರ್ಮಿಕ ಭಾವನೆಗೆ ದಕ್ಕೆ…

Posted by Charan Aivarnad on Monday, August 10, 2020

ಉದ್ಯಮಿ ಹರೀಶ್ ಪೂಜಾರಿ, “ನನ್ನ ಅತ್ಯಂತ ಇಷ್ಟದ ರಂಗನಟ, ಸಿನಿಮಾ ನಟ ಅರವಿಂದ ಬೋಳಾರ್ ಮೇಲೆ ’ಜ್ಯೋತಿಷಿ’ ಗಳು ಪ್ರಕರಣ ದಾಖಲಿಸಿದ್ದಾರೆಂಬ ಸುದ್ಧಿ ಹರಿದಾಡುತ್ತಿದೆ ಇದು ನಿಜವೇ ಆಗಿದ್ದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಬೋಳಾರ್ ಜೊತೆ ನಾನಿದ್ದೇನೆ” ಎಂದು ಹೇಳಿದ್ದಾರೆ.

ನನ್ನ ಅತ್ಯಂತ ಇಷ್ಟದ ರಂಗನಟ , ಸಿನಿಮಾ ನಟ ಅರವಿಂದ ಬೋಳಾರ್ ಮೇಲೆ "ಜ್ಯೋತಿಷಿ" ಗಳು ಪ್ರಕರಣ ದಾಖಲಿಸಿದ್ದಾರೆಂಬ ಸುದ್ಧಿ ಹರಿದಾಡುತ್ತಿದೆ ಇದು ನಿಜವೇ ಆಗಿದ್ದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆ ಬೋಳಾರ್ ಜೊತೆ ನಾನಿದ್ದೇನೆ ನೀವು..

Posted by Harisha D Poojary on Tuesday, August 11, 2020

ಇಂಜಿನಿಯರ್ ಆಗಿರುವ ಆಸ್ಕರ್ ಲೂಯಿಸ್ “ಒಬ್ಬ ವಿಚಾರವಾದಿಯಾಗಿ, ಪ್ರಜ್ಞಾವಂತನಾಗಿ ಈ ಕಾರ್ಯಕ್ರಮವನ್ನು ನೋಡಿದವರಿಗೆ, ಇದರಲ್ಲಿ ಜ್ಯೋತಿಷ್ಯದ ಸುತ್ತ ಹೆಣೆದುಕೊಂಡಿರುವ ಮೌಢ್ಯವನ್ನು ಇನ್ನಷ್ಟು ತೀಕ್ಷ್ಣವಾಗಿ, ಆಳವಾಗಿ ವಿಮರ್ಶೆಗೆ ಒಳಪಡಿಸಬಹುದಿತ್ತು. ಕೊರೋನಾದಂತಹ ಕಷ್ಟಕಾಲದಲ್ಲಿ ಬಿಲಸೇರಿ ಕೂತಿರುವ ಕಪಟಿಗಳನ್ನು ಬಾಲ ಹಿಡಿದು ಹೊರ ಎಳೆಯಬಹುದಿತ್ತು. ಆದರೆ ಕಾರ್ಯಕ್ರಮದ ಈ ಕಂತು ಅಷ್ಟೊಂದು ಆಳಕ್ಕೆ ಹೋಗದೇ, ಹಾಸ್ಯ ಕೇಂದ್ರಿತವಾಗಿ ಜ್ಯೋತಿಷ್ಯದ ಮೌಢ್ಯತೆಯನ್ನು ಮೇಲಿಂದ ಮೇಲೆ ವಿಮರ್ಶಿಸುತ್ತಾ ಹೋಗಿದೆ… ಧಾರ್ಮಿಕ ವಿಚಾರಗಳಂತೂ ಇಲ್ಲಿ ಪ್ರಸ್ತಾವನೆ ಆಗಿಯೇ ಇಲ್ಲ.. ಇಷ್ಟಕ್ಕೇ ಇಂತಹ ಅರಚಾಟ.. ಇನ್ನು ಜ್ಯೋತಿಷ್ಯದ ಸುತ್ತ ಅಡಕವಾಗಿರುವ ಪೂರ್ತಿ ಕಪಟತನವನ್ನು ಬಯಲು ಮಾಡಿದ್ದರೆ ಇನ್ನೇನಾಗುತ್ತಿತ್ತೋ.” ಎಂದು ಕೇಳಿದ್ದಾರೆ.

ಈ ನಡುವೆ ಚಾನೆಲ್ ನಿರೂಪಕ ವಾಲ್ಟರ್ ನಂದಳಿಕೆ ಹಾಗೂ ಕಲಾವಿದ ಅರವಿಂದ ಬೋಳಾರ್ ಚಾನೆಲ್‌ನಲ್ಲಿ ಬಂದು, “ಕಾರ್ಯಕ್ರಮದಲ್ಲಿ ನಾವು ಯಾವುದೆ ತಪ್ಪು ಮಾತುಗಳನ್ನು ಆಡಿಲ್ಲ. ಅದರಾಚೆಗೂ ಕೆಲವರು ಹಾಕುತ್ತಿರುವ ಅಶ್ಲೀಲ ಕಮೆಂಟುಗಳು ನಮಗೆ ತೀರಾ ಬೇಜಾರು ಮಾಡಿದೆ. ನಾವು ಏನೂ ತಪ್ಪಿ ಮಾತನಾಡಿಲ್ಲ ಆದರೂ ನಮ್ಮ ಮಾತಿನಿಂದ ನಿಮಗೆ ಬೇಜಾರು ಆಗಿದ್ದರೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ.


ಓದಿ: ಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...