Homeಅಂಕಣಗಳುಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

ಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದಲಿತರ ಮೇಲೆ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರವಾಗಿದ್ದು, ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಆ ದಲಿತರ ಮೇಲಿನ ದೌರ್ಜನ್ಯಗಳ 10 ಘಟನೆಯಲ್ಲಿ ಇದು ಮೂರನೆಯದ್ದಾಗಿದೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತನೆಯಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ರಾಜಸ್ತಾನದ ಬಟೋಡ ಎಂಬ ಹಳ್ಳಿಯ ದಲಿತೆ ಪಾರ್ವತಿಗೆ (ಹೆಸರು ಬದಲಿಸಿದೆ) ಒಬ್ಬನೇ ಮಗ. ಅವನನ್ನು ಓದಿಸಿ ಉತ್ತಮ ಹಂತಕ್ಕೆ ಕಳಿಸಬೇಕೆಂಬುದೇ ಆಕೆಯ ಏಕೈಕ ಆಸೆ. ಆ ಕಾರಣಕ್ಕಾಗಿಯೇ ಸುಮಾರು 100 ಕಿಮೀ ದೂರದಲ್ಲಿರುವ ಪಟ್ಟಣ ’ದೌಸಾ’ಗೆ ಕೆಲಸಕ್ಕೆಂದು ದಿನವೂ ಪ್ರಯಾಣಿಸಬೇಕಿತ್ತು. 17 ವರ್ಷದ ಮಗ ರಘು ಇದ್ದಕ್ಕಿದ್ದಂತೆ ಕುಡಿತದ ಚಟವನ್ನು ಮೈಗೂಡಿಸಿಕೊಂಡಾಗ ಇನ್ನಿಲ್ಲದಂತೆ ನೊಂದುಕೊಂಡಿದ್ದ ಪಾರ್ವತಿ ತನ್ನ ಕನಸನ್ನು ಅರ್ಧಕ್ಕೆ ಕೈಬಿಡದೇ ಅವನ ಮನವೊಲಿಸಲು ಪ್ರಾರಂಭಿಸಿದ್ದಳು. ಆದರೇನು ಮಾಡುವುದು; ರಘು ಗಲಭೆಯೊಂದರಲ್ಲಿ ಜೈಲಿಗೂ ಹೋಗಿಬಿಟ್ಟನು. ಆಗಲೂ ಆತನ ಮನಸ್ಸನ್ನು ಹೇಗಾದರೂ ಮಾಡಿ ಬದಲಾಯಿಸಬೇಕೆಂಬ ಹಠಕ್ಕೆ ಬಿದ್ದು ದಿನವೂ ಜೈಲಿಗೆ ಹೋಗುವುದನ್ನೂ ರೂಢಿಸಿಕೊಂಡಿದ್ದಳು. ಇದೇ ಸಮಯದಲ್ಲಿ ಕೋವಿಡ್-19ನಿಂದಾಗಿ ದೇಶವೇ ಲಾಕ್‌ಡೌನ್ ಆಯಿತು. ಆದರೆ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಏಪ್ರಿಲ್ 21, 2020ರಂದು ಮಗನನ್ನು ನೋಡಲು ಬರಿಗಾಲಲ್ಲಿ ನಡೆದು ದೌಸಾಗೆ ಹೋಗಲು ಅಣಿಯಾದಳು. ಮಧ್ಯ ಅವರಿವರ ಸಹಾಯ ಪಡೆದು ಸಂಜೆಯಷ್ಟೊತ್ತಿಗೆ ಜೈಲಿನ ಬಳಿ ತಲುಪಿದಳಾದರೂ ಅವಳಿಗೆ ಮಗನನ್ನು ಭೇಟಿಯಾಗಲು ಬೆಳಗ್ಗೆಯವರೆಗೆ ಕಾಯಬೇಕಾಯಿತು. ಅಲ್ಲೇ ಜೈಲಿನ ಆವರಣದಲ್ಲಿಯೇ ಮಲಗಿಕೊಂಡು ಬೆಳಗ್ಗೆ ಎದ್ದು ಮಗನನ್ನು ಭೇಟಿಯಾಗಿ ಮತ್ತೆ ಅದೇ ರೀತಿಯಲ್ಲಿ ತನ್ನ ಹಳ್ಳಿ ಬಟೋಡಾಗೆ ಮರಳಿದಾಗ ಹಳ್ಳಿಯವರೆಲ್ಲರೂ ಆಕೆಯನ್ನು ಕ್ವಾರಂಟೈನ್‌ನಲ್ಲಿರಲು ಸೂಚಿಸಿದರು. ಅದೇ ಹಳ್ಳಿಯ ಸರ್ಕಾರಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿಸಲಾಗಿತ್ತು. ಈ ತೀರ್ಮಾನ ನ್ಯಾಯಯುತವಾದುದೇ ಎಂದರಿತ ಪಾರ್ವತಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದಳು.

ಇದನ್ನೂ ಓದಿ: ಮಾತು ಮರೆತ ಭಾರತ-28; ಲಾಕ್‌ಡೌನ್ ಫೈಲ್ಸ್ : ದಲಿತರ ಪಾಲಿನ ಕಗ್ಗತ್ತಲ ದೀಪಾವಳಿ

200 ಕಿಮೀ ದೂರದ ಪ್ರಯಾಣ ಮಾಡಿದ್ದ ಪಾರ್ವತಿ ಬಳಲಿದ್ದಳು. ಸರಿಯಾದ ಆಹಾರ ನೀರಿಲ್ಲದೆ ನಿತ್ರಾಣಳಾಗಿದ್ದಳು. ಆ ಕ್ವಾರಂಟೈನ್ ಕೇಂದ್ರದಲ್ಲಿ ಆಕೆಯೊಬ್ಬಳೇ ತಂಗಬೇಕಾಯಿತು. ಪೊಲೀಸರು ಮತ್ತು ಶುಶ್ರೂಷಕ ಸಿಬ್ಬಂದಿ ಮುಂಜಾಗ್ರತೆಯ ಕಾರಣಕ್ಕಾಗಿ ಆಕೆಯೊಂದಿಗೆ ಯಾರನ್ನೂ ತಂಗಲು ಬಿಡಲಿಲ್ಲ. ಆದರೂ ಸುದೀರ್ಘ ಪ್ರಯಾಣದ ಕಾರಣ ಒಂದಷ್ಟು ಆಹಾರ ಹೊಟ್ಟೆಗೆ ಬಿದ್ದೊಡನೆ ಕಣ್ಣು ಎಳೆಯಲು ಆರಂಭಿಸಿದ್ದವು. ಗಾಢ ನಿದ್ರೆಗೆ ಜಾರಿದಳು.

ಇದೇ ಸಮಯದಲ್ಲಿ ಪಾರ್ವತಿ ಕೊಠಡಿಗೆ ಬಂದ ರಿಷಿಕೇಶ್ ಮೀನ, ಲಖನ್ ರಾಮ್ ಮತ್ತು ಕಮಲ್ ಖರ್ವಾಲ್ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಿದ್ದೆಯ ಮಂಪರಿನಲ್ಲಿದ್ದ ಪಾರ್ವತಿಗೆ ಅದೇನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಆಕೆಯ ಕಾಲುಗಳು ಹಗ್ಗದಿಂದ ಬಿಗಿಯಾಗಿ ಬಂಧಿಯಾಗಿದ್ದವು. ಹಿಂದೂ ಮೇಲ್ಜಾತಿಯ ಆ ಮೂರು ಪ್ರಾಣಿಗಳು ಆಕೆಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಮಾಡಿದರು. ಪಾರ್ವತಿಯನ್ನು ಕಾಪಾಡಲು ಅಲ್ಲಿ ಒಂದು ನರಪಿಳ್ಳೆಯೂ ಸಹ ಇರಲಿಲ್ಲ. ಪೊಲೀಸ್ ಮತ್ತು ದಾದಿಯರು ಗೌಗತ್ತಲಾಗುತ್ತಿದ್ದಂತೆ ಮನೆಗೆ ತೆರಳಿದ್ದರು. ಹಳ್ಳಿಯ ವ್ಯಕ್ತಿಯೊಬ್ಬನಿಗೆ ಸೆಕ್ಯುರಿಟಿ ಕೆಲಸ ಒಪ್ಪಿಸಿ ಮನೆಯಲ್ಲಿ ಹಾಯಾಗಿ ಮಲಗಲು ತೆರಳಿದ್ದರು.

ಬೆಳಗ್ಗೆ ಈ ವಿಷಯವನ್ನು ಪಾರ್ವತಿ ಪೊಲೀಸರಿಗೆ ತಿಳಿಸಿದಾಗ ಆಕೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಿಂದಾಗಿ ಪಾರ್ವತಿಗೆ ಕೋವಿಡ್ ಪಾಸಿಟಿವ್ ಬಂದಿತಲ್ಲದೆ ಅತ್ಯಾಚಾರವಾಗಿರುವುದೂ ಖಾತ್ರಿಯಾಯಿತು. ಕೋವಿಡ್ ಫೋಬಿಯಾವನ್ನು ಮಾಧ್ಯಮಗಳು ಕ್ಷಣಕ್ಷಣಕ್ಕೂ ಬಿತ್ತರಿಸುತ್ತಿದ್ದ ಸಮಯವದು; ಪಾರ್ವತಿ ಕೋವಿಡ್‌ನಿಂದ ಬದುಕುಳಿಯುವುದು ಹೇಗೆ ಎಂದು ಚಿಂತಿಸುತ್ತಿದ್ದಳೋ ಅಥವಾ ತನ್ನ ಮೇಲೆ ನಡೆದಿರುವ ಅತ್ಯಾಚಾರದ ಗಾಯಕ್ಕೆ ಮಾನಸಿಕವಾಗಿ ಮುಲಾಮು ಹಚ್ಚಿಕೊಳ್ಳುತ್ತಿದ್ದಳೋ ಕಾಣೆ.

ಇದನ್ನೂ ಓದಿ: ಮಾತು ಮರೆತ ಭಾರತ-27; ಲಾಕ್‌ಡೌನ್ ಫೈಲ್ಸ್: ನೀರು ಕೇಳಿದ ದಲಿತ ಯುವಕನ ಉಸಿರು ನಿಲ್ಲಿಸಿದರು

ಈ ಪ್ರಕರಣದಿಂದ ಅರಿಯಬೇಕಾದ ಮತ್ತೊಂದು ವಿಚಾರವೇನೆಂದರೆ ಪಾರ್ವತಿ ಎಂಬ ದಲಿತ ಮಹಿಳೆಯ ಜಾಗದಲ್ಲಿ ಹಿಂದೂ ಮೇಲ್ಜಾತಿ ಮಹಿಳೆ ಇದ್ದಿದ್ದರೆ ಅಲ್ಲಿ ಹಳ್ಳಿಗರು ಆಕೆಯನ್ನು ಒಬ್ಬಂಟಿಯಾಗಿ ಇರಲು ಬಿಡುತ್ತಿದ್ದರೆ? ಪೊಲೀಸರು ಕಿಂಚಿತ್ ಮುಂಜಾಗ್ರತೆಯನ್ನೂ ವಹಿಸದೆ ನಿದ್ದೆ ಮಾಡಲು ಮನೆಗೆ ತೆರಳುತ್ತಿದ್ದರೆ? ದಾದಿಯರು ತಮ್ಮ ಕರ್ತವ್ಯವನ್ನು ಮರೆತು ಸ್ವಲ್ಪವೂ ಆಲೋಚಿಸದೇ ಮಹಿಳೆಯೊಬ್ಬಳನ್ನು ಬಿಟ್ಟು ಹೊರಡುತ್ತಿದ್ದರೇ? ಆ ಮೂವರು ಪಾಪಿಗಳು ಅಷ್ಟು ಧೈರ್ಯದಿಂದ ಕೊಠಡಿಗೆ ನುಗ್ಗಿ ಅತ್ಯಾಚಾರಗೈಯ್ಯುತ್ತಿದ್ದರೆ?

ಈ ಮೇಲಿನ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಕಷ್ಟವಲ್ಲ. ಆದರೆ ಅದಕ್ಕೆ ಪರಿಹಾರ ಹುಡುಕುವುದು ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ದಲಿತರೆಂದರೆ ಈ ಸಮಾಜಕ್ಕೆ ಏನು ಬೇಕಾದರೂ ಮಾಡಿ ಬಿಸಾಕಬಹುದಾದ ವಸ್ತುಗಳಿದ್ದಂತೆ.

ಈಗ ಆ ಮೂವರು ಪಾಪಿಗಳು ಜೈಲಿನಲ್ಲಿದ್ದಾರೆ. ಪೊಲೀಸ್ ಒಬ್ಬ ಅಮಾನತುಗೊಂಡಿದ್ದಾನೆ. ಪಾರ್ವತಿಯೂ ಸಹ ಗುಣಮುಖಳಾಗಿ ತನ್ನ ಮಗನ ಭವಿಷ್ಯದ ಕನಸನ್ನು ಕಾಣುತ್ತಿದ್ದಾಳೆ. ಇದರ ನಡುವೆ ಆ ಮೂವರಿಗೆ ಶಿಕ್ಷೆ ಆಗುವುದೇ? ದಲಿತರ ಮೇಲಿನ ದೌರ್ಜನ್ಯಕ್ಕೆ ನ್ಯಾಯಾಲಯದ ನ್ಯಾಯದ ಇತಿಹಾಸ ಇಲ್ಲವೆಂದೇ ಉತ್ತರವನ್ನು ಪದೇಪದೇ ಹೇಳಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...