Homeಪುಸ್ತಕ ವಿಮರ್ಶೆಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ.

- Advertisement -
- Advertisement -

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಆರಂಭವಾದ ತೊಂಭತ್ತರ ದಶಕ ಬೌದ್ಧಿಕ ಚಿಂತನೆಯ ದೃಷ್ಟಿಯಿಂದಲೂ ಮಹತ್ವದ ಕಾಲಘಟ್ಟ. ಹಾಗೆಯೇ ಎಂಭತ್ತರ ದಶಕದ ನಂತರ ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ವಸಾಹತೋತ್ತರ ಚಿಂತನೆಗಳು ಡಾಳಾಗಿ ಕಾಣಿಸಿಕೊಳ್ಳತೊಡಗಿದವು. ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಬೌದ್ಧಿಕ ನಿರ್ವಸಹತೀಕರಣದ ಪರಿಕಲ್ಪನೆ ಕಾಣಿಸಿಕೊಂಡದ್ದು ಈ ಹಂತದಲ್ಲಿಯೇ. ಹಾಗೆ ನೋಡಿದರೆ ಆಫ್ರಿಕಾದ ಚಿಂತಕ ಥಿಯಾಂಗೊ ಗೂಗಿಯ ನಿರ್ವಸಹತೀಕರಣ ಚಿಂತನೆಯನ್ನು ರಹಮತ್ ತರೀಕರೆಯವರು ಸಂಗ್ರಹರೂಪದಲ್ಲಿ ತಂದದ್ದು ಬಹುಶಃ ಮೊದಲ ಪ್ರಯತ್ನಗಳಲ್ಲೊಂದು.

ಇಂಥ ಬೌದ್ಧಿಕ ನಿರ್ವಸಹತೀಕರಣದ ಯತ್ನ ಭಾರತೀಯ ಭಾಷೆಗಳಲ್ಲಿ ಎರಡು ನೆಲೆಯಲ್ಲಿ ಆಗಬೇಕಿತ್ತು. ಭಾಷಿಕವಾಗಿ ಪ್ರಾದೇಶಿಕ ಭಾಷೆಗಳು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಚಿಂತನೆಯಿಂದ ಮುಕ್ತವಾಗಿ ತನ್ನದೆ ಆದ ಚಿಂತನಾ ಪರಂಪರೆಯನ್ನು ಕಂಡುಕೊಳ್ಳಬೇಕಾಗಿತ್ತು. ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆ ನಮ್ಮಲ್ಲಿ ಕಾಣಿಸಿಕೊಂಡದ್ದು ಈ ಹಿನ್ನೆಲೆಯಲ್ಲಿ. ಹಾಗೆಯೇ ಡಿ ಎನ್ ಶಂಕರಭಟ್ಟರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೃತಿ ಕೂಡ ಈ ಚಿಂತನೆಯ ಆದ್ಯ ಕೃತಿಗಳಲ್ಲೊಂದು ಎಂಬುದನ್ನು ಮರೆಯುವಂತಿಲ್ಲ.

ಕನ್ನಡದ ಸಾಹಿತ್ಯ ಮೀಮಾಂಸೆಯೆಂದರೆ ಅದೊಂದು ಅಸ್ಮಿತೆಯ ಹುಡುಕಾಟದ ಮಹಾಯಾನ. ಅಥವಾ ಬೇರೊಂದು ಮಾತಿನಲ್ಲಿ ಅದನ್ನು ಬಿಡುಗಡೆಯ ಕಥನವೆಂದು ಕರೆಯಬಹುದು. ರಹಮತ್ ತರೀಕೆರೆಯವರು ಕನ್ನಡ ಸಾಹಿತ್ಯ ಮೀಮಾಂಸೆಯನ್ನು ವ್ಯಾಖ್ಯಾನಿಸುವುದು ಗಮನಾರ್ಹವಾದದ್ದು. ಅವರ ದೃಷ್ಟಿಯಲ್ಲಿ ಸಾಹಿತ್ಯದ ಹುಟ್ಟಿನ ಪ್ರೇರಣೆಗಳು, ಅದು ಸೃಷ್ಟಿಯಾಗುವ ಕ್ರಮಗಳು, ಅಭಿವ್ಯಕ್ತಿಯಾಗುವ ಪ್ರಕಾರಗಳು, ಅದು ಭಾಷೆಯನ್ನು ಬಳಸುವ ವಿಧಾನ, ಅನುಸರಿಸುವ ಶೈಲಿ, ಅದನ್ನು ಅನುಸಂದಾನ ಮಾಡುವ ಜನ ಮತ್ತು ಸಂಸ್ಥೆಗಳು, ಸಮಾಜದ ಮೇಲಾಗುವ ಪರಿಣಾಮ ಇವೆಲ್ಲವನ್ನು ಕುರಿತ ತಾತ್ವಿಕ ಚಿಂತನೆಯ ಸಾಹಿತ್ಯ ಮೀಮಾಂಸೆಯಾಗಿದೆ. ಅದು ಒಂದು ಭಾಷಿಕ ಸಮುದಾಯವು ಕಾಲಕಾಲಕ್ಕೆ ಪಟ್ಟ ಪಾಡುಗಳ ಮೂಲಕ ಹಾದು ಬಂದ ಕಥನವಾಗಿದೆ.

ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸುವ ಪ್ರಯತ್ನಗಳು ಹಲವು ರೀತಿಯಲ್ಲಿ ಆಗಿವೆ. ಬೇಂದ್ರೇ ಕುರ್ತಕೋಟಿಯವರಲ್ಲಿ ಪಾಶ್ಚಾತ್ಯ ಸಾಹಿತ್ಯ ಚಿಂತನೆಯ ಕುರಿತು ಸಮರ್ಥನೀಯ ನಿರಾಕರಣೆಯಿದೆ. ಆದರೆ ಭಾರತೀಯ ಕಾವ್ಯ ಮೀಮಾಂಸೆಯ ಕುರಿತು ಇಂಥ ನಿರಾಕರಣೆ ಕಾಣುವುದಿಲ್ಲ. ಆದರೆ ಎಂಭತ್ತರ ದಶಕದ ನಂತರದ ಕನ್ನಡ ಸಾಹಿತ್ಯ ಚಿಂತನೆಯಲ್ಲಿ ಕೆ.ವಿ.ನಾರಾಯಣ, ಡಿ.ಆರ್. ನಾಗರಾಜ್, ನಟರಾಜ್ ಬೂದಾಳ್, ರಹಮತ್ ತರೀಕೆರೆಯವರು ಸಂಸ್ಕೃತ ಮತ್ತು ಪಾಶ್ಚಾತ್ಯ ಮೀಮಾಂಸೆಗಳೆರಡು ನಮ್ಮ ಚಿಂತನೆಗಳನ್ನು ಹೇಳಲಾರವು ಎಂಬ ನಿಲುವಿಗೆ ಬರುತ್ತಾರೆ. ಭಾರತೀಯ ಕಾವ್ಯ ಮೀಮಾಂಸೆಯ ಯಜಮಾನಿಕೆಯ ರಸದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾರೆ. ಆನಂದದ ಅನುಸಂಧಾನದ ವೈದಿಕ ಪರಿಕಲ್ಪನೆಯಾದ ರಸಕ್ಕೆ ವಿರುದ್ಧವಾಗಿ ದುಃಖಾನುಸಂಧಾನವನ್ನು ಹೇಳಿಕೊಟ್ಟ ಬೌದ್ಧ ಮೀಮಾಂಸೆಯನ್ನು ಮಂಡಿಸುತ್ತಾರೆ. ಹಾಗೆಯೇ ಏಕರಸದ ಸರಳ ಸ್ಥಿತಿಯ ಚಿಂತನೆಗೆ ರ‍್ಯಾಯವಾಗಿ ಜೈನ ಚಿಂತನೆಯಾದ ಅನೇಕಾಂತವಾದವನ್ನು ಹಾಗೂ ಅರಿವಿನ ಅನುಸಂಧಾನದ ವಚನ ಚಿಂತನೆಯನ್ನು ಮುನ್ನೆಲೆಗೆ ತರುತ್ತಾರೆ.

ಹೀಗೆ ಕನ್ನಡ ಸಾಹಿತ್ಯ ಮೀಮಾಂಸೆಯೆಂಬುದು ಬಹುಮುಖಿ ನೆಲೆಗಳಲ್ಲಿ ಕಟ್ಟಲ್ಪಡುತ್ತಿರುವ ಸಂದರ್ಭದಲ್ಲಿ ಡಾ.ರವಿಕುಮಾರ್ ನೀಹ ಅವರ ‘ದಲಿತ ಸಾಹಿತ್ಯ ಮೀಮಾಂಸೆ’ ಕೃತಿ ಪ್ರಕಟವಾಗಿದೆ. ಈ ಕೃತಿ ಕೆಲವು ಮುಖ್ಯ ಕಾರಣಗಳಿಂದ ಮುಖ್ಯವಾಗಿ ಕಾಣುತ್ತದೆ. ಈ ಕೃತಿಯಲ್ಲಿ ಇರುವ ಸೈದ್ಧಾಂತಿಕ ಸ್ಪಷ್ಟತೆಗಾಗಿ ಮಹತ್ವದ್ದಾಗಿ ಪರಿಗಣಿಸಬೇಕಾಗಿದೆ. ಕನ್ನಡ ಸಾಹಿತ್ಯ ಮೀಮಾಂಸೆಗೆ ಪರ್ಯಾಯವಾಗಿ ದಲಿತ ಸಾಹಿತ್ಯ ಮೀಮಾಂಸೆ ಹುಟ್ಟಿಕೊಂಡಿದೆ ಎಂಬ ನಿಲುವು ಈ ಅಧ್ಯಯನದಲ್ಲಿ ಇಲ್ಲ. ದಲಿತ ಸಾಹಿತ್ಯ ಮೀಮಾಂಸೆಯು ಕನ್ನಡ ಸಾಹಿತ್ಯ ಮೀಮಾಂಸೆಯ ಒಂದು ಭಾಗವೇ ಆಗಿದ್ದೂ, ಅದರ ಒಂದು ವಿಶಿಷ್ಟ ಭಾಗವಾಗಿ ರೂಪುಗೊಂಡಿದೆ ಎಂಬ ನಿಲುವು ಅವರಲ್ಲಿದೆ. ಹಾಗೆಯೆ ದಲಿತರ ಸಾಮಾಜಿಕ ಬದುಕು, ಸೌಲಭ್ಯ, ಕಸುಬು, ಅಭಿವ್ಯಕ್ತಿ, ಆಲೋಚನೆ, ಅನುಭವ, ಬಹುಮುಖತೆ, ಮೂಲಕವೇ ಮೀಮಾಂಸೆಯನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವರದು. ಜೊತೆಗೆ ದಲಿತ ಮೀಮಾಂಸೆಯೆನ್ನುವುದು ಒಂದು ಲೋಕದೃಷ್ಟಿಯಾದ್ದರಿಂದ ಬದುಕಿನ ವಿನ್ಯಾಸಗಳು ಬದಲಾದ ಹಾಗೆ ಲೋಕವನ್ನು ನೋಡುವ ನೋಟಕ್ರಮವು ಬದಲಾಗಬೇಕಾದದ್ದು ಸಹಜ ಹಾಗೂ ಅನಿವಾರ್ಯ ನಂಬಿಕೆ ಇಲ್ಲಿಯದು. ತಳವೂರಿದ ಕುರುಬ ಕಟುಕನಾದ ಎನ್ನುವ ನಿಸಾರರ ಕವನದ ಸಾಲು ಹೇಳುವುದು ಇದನ್ನೇ. ಯಾವುದೇ ಚಿಂತನೆ ಎಲ್ಲ ಕಾಲಕ್ಕೂ ಶಾಶ್ವತ ಮತ್ತು ಸಾರ್ವತ್ರಿಕ ಮತ್ತು ತ್ರಿಕಾಲಾ ಭಾದಿತ ಚಿಂತನೆಗಳನ್ನು ಮಾನ್ಯ ಮಾಡುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ್ದಾಗಿದೆ.

ಡಾ.ರವಿಕುಮಾರ್ ನೀಹ

ದಲಿತ ಸಾಹಿತ್ಯ ಮೀಮಾಂಸೆಯನ್ನು ನಿರೂಪಿಸುವ ಸಂದರ್ಭದಲ್ಲಿ ‘ದಲಿತ’ ಪದ ಪಡೆದ ಹಲವು ಅರ್ಥ ಸ್ವರೂಪವನ್ನು ಗುರುತಿಸುವ ಕೆಲಸವನ್ನು ಕೃತಿ ಮಾಡಿದೆ. ಆರಂಭದಲ್ಲಿದ್ದ ಹಸಿವಿನ ಪ್ರಶ್ನೆ, ಅವಮಾನದ ಪ್ರಶ್ನೆಯನ್ನು ಹಾದು ಈಗ ಅಸ್ಮಿತೆಯ ಸ್ವರೂಪವನ್ನು ಪಡೆದುಕೊಂಡ ಬಗೆಯನ್ನು ವಿಶ್ಲೇಷಿಸಿದೆ. ಹಾಗೆಯೆ ದಲಿತ ಸಾಹಿತ್ಯ ಮೀಮಾಂಸೆಯ ಪರಂಪರೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಆರಂಭವನ್ನು ಡಿ ಆರ್ ನಾಗರಾಜ್ ಅವರ ಪ್ಲೇಮಿಂಗ್ ಪೀಟ್ ಕೃತಿಯ ಮೂಲಕ ಗುರುತಿಸುತ್ತದೆ. ನಂತರದ ಕಾಲಘಟ್ಟದಲ್ಲಿ ದೇವಯ್ಯ ಹರವೆ, ಪ್ರೊ.ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ್, ಬಿ.ಎಂ. ಪುಟ್ಟಯ್ಯನವರು ವಿಸ್ತರಿಸಿದ ಪರಂಪರೆಯನ್ನು ವಿಸ್ತರಿಸಿದೆ. ಆದರೆ ಇಲ್ಲಿ ವಿಶ್ಲೇಷಿಸುವ ಕ್ರಮ ಎಂಭತ್ತರ ದಶಕದ ದಲಿತ ಸಾಹಿತ್ಯಕ್ಕೆ ಸೀಮಿತಗೊಂಡಿರುವುದು ಗಂಭೀರವಾದ ಮಿತಿಯೆನಿಸುತ್ತದೆ. ದಲಿತ ಸಾಹಿತ್ಯ ಆರಂಭವಾಗುವ ಮೊದಲಿನ ಲಿಖಿತ ಮತ್ತು ಮೌಖಿಕ ಪರಂಪರೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರೆ ಕೃತಿಯ ವ್ಯಾಪ್ತಿ ಹೆಚ್ಚುತ್ತಿತ್ತು. ಇಂದಿನ ದಲಿತ ಸಾಹಿತ್ಯ ಸಾಮಾಜಿಕ ಕ್ರೋಧದ ಮಾದರಿಯ ಜೊತೆಗೆ ಆಧ್ಯಾತ್ಮಿಕ ಹುಡುಕಾಟದ ಮಾದರಿಯನ್ನು ಸಹ ತೀವ್ರವಾಗಿ ಅಭಿವ್ಯಕ್ತಿಸುವುದರಿಂದ ಆಧ್ಯಾತ್ಮಿಕ ದಂಗೆಯ ನಾಯಕರಾದ ಮಂಟೇಸ್ವಾಮಿ, ಮಾದಪ್ಪನವರೆಗೆ ಈ ಪರಂಪರೆಯನ್ನು ವಿಸ್ತರಿಸುವ ಸಾಧ್ಯತೆಯಿತ್ತು.

ದಲಿತ ಸಾಹಿತ್ಯ ಮೀಮಾಂಸೆ ಇನ್ನೊಂದು ನೆಲೆಯಲ್ಲಿ ನನಗೆ ಮುಖ್ಯವೆನಿಸುತ್ತದೆ. ಈ ಮೀಮಾಂಸೆ ತನ್ನ ಸ್ವರೂಪದಲ್ಲಿಯೇ ಒಳಗೊಳ್ಳುವಿಕೆಯ ನೆಲೆಯನ್ನು(inclusive) ಒಳಗೊಂಡಿದೆ. ಹಾಗೆಯೇ ಪ್ರಖರ ರಾಜಕೀಯ ಚಿಂತನೆಯನ್ನು ತನ್ನ ಭಿತ್ತಿಯಾಗಿಸಿಕೊಂಡಿದೆ. ವೈಯಕ್ತಿಕವು ರಾಜಕೀಯವೇ ಆಗಿರುವ ಇಂದಿನ ಕಾಲಘಟ್ಟದಲ್ಲಿ ಸ್ಪಷ್ಟ ರಾಜಕೀಯ ಚಿಂತನೆಯನ್ನು ಹೊಂದಿರುವುದು ಅಗತ್ಯವಾಗಿದೆ. ಹಾಗೆಯೆ ದಲಿತ ಚಿಂತನೆಯೊಂದಿಗೆ ಬೆಸೆದುಕೊಂಡಿರುವ ಬೌದ್ಧದರ್ಶನವನ್ನು ಚರ್ಚಿಸುವುದರ ಮೂಲಕ, ಜೊತೆಗೆ ಅಲೆಮಾರಿಗಳು ಲೈಂಗಿಕ ಅಲ್ಪಸಂಖ್ಯಾತರು, ಬಿಕ್ಷುಕರ ಜಗತ್ತುಗಳ ಮೂಲಕ ಅನಾವರಣಗೊಳ್ಳುತ್ತಿರುವ ಕಲಾಲೋಕವನ್ನು ತನ್ನ ವ್ಯಾಪ್ತಿಗೆ ತಂದುಕೊಂಡಿದೆ.

ಡಾ.ಪ್ರಕಾಶ್ ಬಡವನಹಳ್ಳಿ

ಈ ಕೃತಿಯ ಕುಲಕಥನ ಮೀಮಾಂಸೆ ನವೀನ ರೀತಿಯದ್ದಾಗಿದೆ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಚಲಿತವಾಗಿರುವ ಖಂಡಕಾವ್ಯಗಳಿಗಿಂತ ಭಿನ್ನವಾಗಿ ಕುಲಕಥನಗಳನ್ನು ನೋಡಬೇಕೆಂದು ಗಟ್ಟಿಯಾಗಿ ವಾದಿಸುತ್ತದೆ. ಈ ಕಾವ್ಯಗಳು ಸಾಮಾಜಿಕ ಆಕ್ರೋಶದ ಮಾದರಿಗಿಂತ ಭಿನ್ನವಾಗಿ ಸ್ವಾಭಿಮಾನ ಸಮಾನತೆಗಳನ್ನು ತಮ್ಮ ಕುಲಪುರಾಣಗಳಲ್ಲಿ ಹೆಕ್ಕಿ ತೆಗೆಯುವ ಮಾದರಿಯನ್ನು ಪಠ್ಯಗಳ ಮೂಲಕವೇ ವಿಶ್ಲೇಷಿಸುವ ಕ್ರಮ ಮಹತ್ವದ್ದಾಗಿದೆ. ಇಷ್ಟಾಗಿ ನಮ್ಮ ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ ಎಂಬ ಸೂಕ್ಷ್ಮತೆ ಇರುವ ದಲಿತ ಸಾಹಿತ್ಯ ಮೀಮಾಂಸೆ ಮಹತ್ವದ ಕೃತಿಯಾಗಿದೆ.

  • ಡಾ.ಪ್ರಕಾಶ್ ಬಡವನಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...