Homeಮುಖಪುಟದೆಹಲಿಯ ಗಾರ್ಗಿ ಕಾಲೇಜಿನ ಮೇಲೆ ದಾಳಿ: ಮನೆ ಬಾಗಿಲಿಗೆ ಬಂದ ಫ್ಯಾಸಿಸ್ಟ್ ಪಡೆ

ದೆಹಲಿಯ ಗಾರ್ಗಿ ಕಾಲೇಜಿನ ಮೇಲೆ ದಾಳಿ: ಮನೆ ಬಾಗಿಲಿಗೆ ಬಂದ ಫ್ಯಾಸಿಸ್ಟ್ ಪಡೆ

ಭವಿಷ್ಯದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಏನು ಕಾದಿದೆ ಎಂಬುದರ ಝಲಕ್ ದೆಹಲಿಯ ಕಾಲೇಜಿನಲ್ಲಿ ಕಂಡಿದೆ.

- Advertisement -
- Advertisement -

ಮೊದಲವರು ಜೆಎನ್‌ಯುಗೆ ಬಂದರು, ನೀವು ದನಿಯೆತ್ತಲಿಲ್ಲವೇಕೆಂದರೆ, ‘ಅವರು ಎಡಪಂಥೀಯರು, ಅರ್ಬನ್ ನಕ್ಸಲ್‌ಗಳು, ದೇಶದ್ರೋಹಿಗಳು, ಅವರಿಗೆ ಹಾಗೆಯೇ ಆಗಬೇಕಿತ್ತು’.

ನಂತರ ಅವರು ಜಾಮಿಯಾಕ್ಕೆ ಬಂದರು, ನೀವು ದನಿಯೆತ್ತಲಿಲ್ಲ. ಏಕೆಂದರೆ ‘ಅವರು ಮುಸ್ಲಿಮರು, ಭಯೋತ್ಪಾದಕರು, ಅವರಿಗೆ ಹಾಗೆಯೇ ಆಗಬೇಕಿತ್ತು’.

ನಂತರ ಅವರು ಶಾಹೀನ್ ಬಾಗ್‌ನತ್ತ ಗುಂಡೆಸೆದರು, ನೀವು ಆಗಲೂ ಮಾತನಾಡಲಿಲ್ಲ. ‘ಅವರು ಹಣಕ್ಕಾಗಿ ಪ್ರತಿಭಟಿಸುತ್ತಿದ್ದ, ದಾರಿತಪ್ಪಿದ ಮಹಿಳೆಯರಾಗಿದ್ದರು’.

ನಂತರ ಅವರು ಈ ದೇಶದ ರಾಜಕೀಯ ರಹಿತ ಹೆಣ್ಣುಮಕ್ಕಳಾದ ಗಾರ್ಗಿ ಹುಡುಗಿಯರತ್ತ ಬಂದರು. ಆಗ ನಿಮ್ಮ ಪರವಾಗಿ ದನಿಯೆತ್ತಲು ಏನೂ ಇರಲಿಲ್ಲ.

ಕಳೆದ ವಾರದಲ್ಲಿ ಗಾರ್ಗಿ ಕಾಲೇಜಿನಲ್ಲಿ ನಡೆದದ್ದನ್ನು ಕೇಳಿ ಬಹಳಷ್ಟು ಜನರು ಶಾಕ್‌ಗೊಳಗಾಗಿದ್ದಾರೆ. ಗುಂಪೊಂದು ಹೆಣ್ಣು ಮಕ್ಕಳ ಮೈಮುಟ್ಟಿ, ಲೈಂಗಿಕ ಕಿರುಕುಳ ಕೊಟ್ಟು, ಅವರ ಮುಂದೆಯೇ ಮುಷ್ಠಿಮೈಥುನ ನಡೆಸಿದ್ದಾರೆ. ಇದೆಲ್ಲವೂ ನಡೆದದ್ದು ದೇಶದ ರಾಜಧಾನಿಯಲ್ಲಿ, ದೆಹಲಿ ಪೊಲೀಸರು, ಶಿಕ್ಷಕರು ಮತ್ತು ಕಾಲೇಜು ಭದ್ರತಾ ಸಿಬ್ಬಂದಿಯ ಎದುರು ಎಂಬುದು ಇನ್ನೂ ಶಾಕಿಂಗ್ ಆದದ್ದಾಗಿದೆ. ಸಿಎಎ ಪರವಾದ ಪ್ರತಿಭಟನೆಯೊಂದನ್ನು ಮುಗಿಸಿಕೊಂಡು ಬಂದು ಜೈ ಶ್ರೀರಾಂ ಎಂಬ ಘೋಷಣೆ ಕೂಗುತ್ತಿದ್ದ ಬಿಜೆಪಿಯ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಈ ಲೈಂಗಿಕ ಹಲ್ಲೆ ನಡೆದಿದೆ ಎಂಬುದನ್ನು ಗಮನಿಸಬೇಕಿದೆ. ಅವರಲ್ಲಿ ಬಹುತೇಕ ಜನರಿಗೆ ದೆಹಲಿ ಹೈಕೋರ್ಟ್‌ ಜಾಮೀನು ಸಹ ನೀಡಿದೆ.

ಇದು ಏನನ್ನು ತೋರಿಸುತ್ತದೆ? ಗೋವಿನ ಹೆಸರಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ ಮತ್ತು ಮುಸ್ಲಿಮರು ಹೆಸರಿನಲ್ಲಿ ಕೊಲ್ಲಲು ತಯಾರು ಮಾಡಲಾಗಿದ್ದ ಗುಂಪು ನಿಮ್ಮ ನೆರೆಹೊರೆಗೆ, ಮನೆಗೆ, ಕಾಲೇಜು ಕ್ಯಾಂಪಸ್ಸುಗಳ ಬಳಿಗೆ ಬಂದಿದೆ ಎಂಬುದನ್ನು ತೋರುತ್ತಿದೆ. ಇಂತಹ ಕೊಳಕು ಕೃತ್ಯಗಳನ್ನೆಸಗಲು ಸದರಿ ಗುಂಪನ್ನು ರೂಪಿಸಿದ್ದು, ಬಲ ತುಂಬಿದ್ದು ಮತ್ತು ಸಾಯುಧರನ್ನಾಗಿಸಿದ್ದು ಪುರುಷಹಂಕಾರ ತುಂಬಿದ ಫ್ಯಾಸಿಸ್ಟ್ ಬಲಪಂಥೀಯ ತಾತ್ವಿಕತೆಯೇ ಆಗಿದೆ.

ಅವರ ಆದರ್ಶ ನಾರಿ ಚೌಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳದ ಮಹಿಳೆಯರನ್ನು ಸ್ತ್ರೀ ದ್ವೇಷ ಮತ್ತು ಅಸಹನೆಯ ಮತ್ತನ್ನು ಏರಿಸಿಕೊಂಡಿರುವ ಗುಂಪು ಇಷ್ಟಪಡುವುದಿಲ್ಲ. ಆ ಗುಂಪು ಶಹೀನ್‌ಬಾಗ್‌ನ ಮಹಿಳೆಯರನ್ನು ರೇಪ್ ಮಾಡುತ್ತೇವೆಂದು ಬಹಿರಂಗವಾಗಿ ಹೇಳುತ್ತದೆ. ಅದೇ ರೀತಿ ನರೇಂದ್ರ ಮೋದಿ ಸರ್ಕಾರವನ್ನು ವಿರೋಧಿಸುವ ಜೆಎನ್‌ಯು, ಜಾಮಿಯಾ ಅಥವಾ ಯಾವುದೇ ವಿದ್ಯಾರ್ಥಿಗಳನ್ನು ಕೊಲ್ಲುವುದಾಗಿ ಅಬ್ಬರಿಸುತ್ತದೆ. ಆಳುತ್ತಿರುವವರ ಶಾಮೀಲುದಾರಿಕೆ ಮತ್ತು ಸರ್ಕಾರೀ ಯಂತ್ರಾಂಗದ ಬೆಂಬಲದೊಂದಿಗೆ ದೇಶದ ಯಾವುದೇ ಭಾಗದಲ್ಲಿ ಅಪರಾಧೀ ಕೃತ್ಯಗಳನ್ನೆಸಗಲು ತಮಗೆ ಲೈಸೆನ್ಸ್ ಸಿಕ್ಕಿದೆ ಎಂದು ಅದು ಭಾವಿಸಿದೆ.

ಮಧ್ಯಮವರ್ಗ ಅಥವಾ ಮೇಲ್ವರ್ಗದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ವಾದಿಸುವ ಸಂಸ್ಕಾರಯುತ ಜನವರ್ಗಗಳು ಫ್ಯಾಸಿಸ್ಟ್ ಗುಂಪಿನ ಇಂತಹ ಕೃತ್ಯಗಳ ಕುರಿತು ಉಸಿರೆತ್ತುವುದಿಲ್ಲ.

ಮುಂದಿನ ದಿನಗಳ ಸೂಚನೆ

ಕ್ಯಾಂಪಸ್ಸುಗಳ ಮೇಲಿನ ದಾಳಿಯು ಬಿಜೆಪಿ ಸರ್ಕಾರದ ಪ್ರಮುಖ ಗುಣಲಕ್ಷಣಗಳಲ್ಲೊಂದಾಗಿದೆ. ಈ ಸರ್ಕಾರವು ಸುಶಿಕ್ಷಿತರನ್ನು ಮತ್ತು ಶಿಕ್ಷಣ ಪಡೆಯಬಯಸುವವರನ್ನು ದ್ವೇಷಿಸುತ್ತದೆ. ದೇಶದುದ್ದಗಲದ ಹಲವಾರು ಕ್ಯಾಂಪ್ಸಸುಗಳಲ್ಲಿ ಇದು ಪುನರಾವರ್ತನೆಯಗಿದೆ. ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳನ್ನು ವಿಲನ್‌ಗಳನ್ನಾಗಿಸುವ ಕೆಲಸ ಅವ್ಯಾಹತವಾಗಿ ನಡೆದದ್ದಲ್ಲದೇ ದಾಳಿ ಮಾಡಲಾಗಿದೆ.

ಮಹಿಳೆಯರ ಕುರಿತಾದ ಇವರ ದ್ವೇಷದ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಏನು ಕಾದಿದೆಯೋ ಅದನ್ನು ಗಾರ್ಗಿ ಕಾಲೇಜಿನ ಹುಡುಗಿಯರು ಈಗ ಅನುಭವಿಸಿದ್ದಾರೆ. ಗಾರ್ಗಿ ಕಾಲೇಜಿನ ಪ್ರಿನ್ಸಿಪಾಲೆರ ಹುಡುಗಿಯರು ಲಕ್ಷ್ಮಣರೇಖೆಯನ್ನು ದಾಟಿದ್ದರಿಂದ ಇದಾಗಿದೆಯೆಂದು ಹೇಳಿಬಿಟ್ಟಿದ್ದನ್ನೂ ಗಮನಿಸಬೇಕು. ಎಲ್ಲೆಡೆ ಮಹಿಳೆಯರು ಸಮಾನ ಅವಕಾಶಗಳು ಮತ್ತು ಸಮಾನವಾಗಿ ತಮ್ಮನ್ನು ನಡೆಸಿಕೊಳ್ಳಬೇಕೆಂಬ ಹಕ್ಕೊತ್ತಾಯವನ್ನು ಮುಂದಿಡುತ್ತಿದ್ದಾರಾದರೂ, ಇಂತಹ ಘಟನೆಗಳು ‘ರಕ್ಷಣೆ’ಯ ಹೆಸರಿನಲ್ಲಿ ಮಹಿಳೆಯರನ್ನು ಮತ್ತಷ್ಟು ಪಂಜರದ ಗೊಂಬೆಗಳನ್ನಾಗಿಸುವ ಸಾಧ್ಯತೆಯೇ ಹೆಚ್ಚು.

ಎಲ್ಲಾ ಕ್ಯಾಂಪಸ್ಸುಗಳಲ್ಲೂ ಹುಡುಗಿಯರು ತಮಗೂ 24 ಗಂಟೆಗಳ ಗ್ರಂಥಾಲಯ, ಅಲ್ಲಿಗೆ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಇತ್ಯಾದಿಗಳು ಬೇಕೆಂದು ಕೇಳುತ್ತಿದ್ದಾರೆ. ಆದರೆ, ಪುರುಷ ಕೇಂದ್ರಿತ ದೃಷ್ಟಿಕೋನವು ಇವೆಲ್ಲವನ್ನೂ ರಕ್ಷಣೆಯ ಹೆಸರಿನಲ್ಲಿ ಅಥವಾ ಹಸಿ ಹಸಿಯಾಗಿ ‘ನಿಮಗೆ ಇವುಗಳ ಅಗತ್ಯವಿಲ್ಲ’ ಎಂದು ಹೇಳುತ್ತಾ ಹಿಂದೆ ತಳ್ಳಲು ಇಂತಹ ಘಟನೆಗಳು ನೆಪವಾಗುತ್ತವೆ. ಗಾರ್ಗಿ ಕಾಲೇಜಿನ ಮೇಲೆ ದಾಳಿ ನಡೆಸಿದವರ ಮೇಲೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದಿರುವುದು ದೇಶದೆಲ್ಲೆಡೆಯ ವಿದ್ಯಾರ್ಥಿನಿಯರ ಭವಿಷ್ಯದ ಮೇಲೂ ಹಾಕಿದ ಕಲ್ಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...