Homeಮುಖಪುಟಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಸಿಂಕ್‌ಸೌಂಡ್‌ ಮಾಡದಿದ್ದರೂ ‘ಸೌಂಡ್‌ಸಿಂಕ್‌’ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯನ್ನು ಕನ್ನಡದ ‘ಡೊಳ್ಳು’ ಸಿನಿಮಾ ಪಡೆದಿದೆ. ಈ ಕುರಿತು ಕನ್ನಡ ತಂತ್ರಜ್ಞರು, ನಿರ್ದೇಶಕರು ಹೇಳಿದ್ದೇನು?

- Advertisement -
- Advertisement -

“ಸಿನಿಮಾ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಭಾರತ ಸರ್ಕಾರ ನೀಡುವ ‘ರಾಷ್ಟ್ರಪ್ರಶಸ್ತಿ’ ತನ್ನ ಗೌರವವನ್ನು ಕಾಪಾಡಿಕೊಂಡಿದೆಯೇ?” ಎಂಬ ಪ್ರಶ್ನೆಯನ್ನು ಇಂದು ಕೇಳಿಕೊಳ್ಳಲೇಬೇಕಾದ ತುರ್ತು ಎದುರಾಗಿದೆ. ಕಾರಣ- ‘ಸಿಂಕ್‌ಸೌಂಡ್‌‌’ ಅಲ್ಲದ ಸಿನಿಮಾಕ್ಕೆ ‘ಸಿಂಕ್‌ಸೌಂಡ್‌’ ವಿಭಾಗದಲ್ಲಿ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿಬಿಟ್ಟಿದೆ!

ಶುಕ್ರವಾರ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಈ ಬಾರಿಯ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ‘ಡೊಳ್ಳು’ ಚಿತ್ರಕ್ಕೆ ಲಭಿಸಿದೆ. ಚಿತ್ರದಲ್ಲಿನ ಆಡಿಯೋಗ್ರಫಿಗಾಗಿ ಜೋಬಿನ್‌ ಜಯನ್‌ ಅವರಿಗೆ ಅತ್ಯುತ್ತಮ ಆಡಿಯೋಗ್ರಾಫರ್‌ ಪ್ರಶಸ್ತಿ ದೊರೆತಿದೆ. ಆದರೆ, ಜೋಬಿನ್‌ ಅವರಿಗೆ ನೀಡಲಾಗಿರುವ ಪ್ರಶಸ್ತಿಯ ವಿಭಾಗವೇ ತಪ್ಪಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡೊಳ್ಳು ಸಿನಿಮಾದ ‘ಸೌಂಡ್‌ ಡಿಸೈನರ್‌’ ನಿತಿನ್‌ ಲುಕೊಸೆ ಅವರೇ ರಾಷ್ಟ್ರಪ್ರಶಸ್ತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ವಿಶೇಷ. ಈ ಕುರಿತು ಟ್ವೀಟ್ ಮಾಡಿರುವ ನಿತಿನ್‌, “ರಾಷ್ಟ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ವಿಚಾರದಲ್ಲಿ ಪರದೆಯ ಹಿಂದೆ ಏನು ನಡೆದಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಡಬ್‌ ಮಾಡಲಾದ ಚಿತ್ರ ಯಾವುದು ಮತ್ತು ʼಸಿಂಕ್‌ ಸೌಂಡ್‌ʼ ಮಾಡಲಾದ ಚಿತ್ರ ಯಾವುದು ಎಂಬುದರ ವ್ಯತ್ಯಾಸ ತಿಳಿಯದವರೆಲ್ಲ ಪರಿಣಿತರು ಎಂದು ಹೇಳಿಕೊಂಡು ಡಬ್‌ ಮಾಡಿದ ಸಿನಿಮಾಗೆ ಅತ್ಯುತ್ತಮ ʼಸೌಂಡ್‌ ಸಿಂಕ್‌ʼ ಪ್ರಶಸ್ತಿ ನೀಡುತ್ತಿರುವುದನ್ನು ಕಂಡರೆ ನನಗೆ ಅಯ್ಯೋ ಪಾಪ ಎನ್ನಿಸುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

ಆಸ್ಕರ್‌ ವಿಜೇತ ಸೌಂಡ್‌ ಡಿಸೈನರ್‌ ರೆಸುಲ್‌ ಪೂಕುಟ್ಟಿ ಅವರೂ ಟ್ವೀಟ್ ಮಾಡಿ, “ಡೊಳ್ಳು ಚಿತ್ರ ಸಿಂಕ್‌ಸೌಂಡ್‌ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಡಬ್‌ ಮಾಡಲಾಗಿರುವ ಸಿನಿಮಾ. ಡಬ್‌ ಮಾಡಲಾದ ಚಿತ್ರಕ್ಕೆ ಅತ್ಯುತ್ತಮ ಸಿಂಕ್‌ಸೌಂಡ್‌ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಿಂಕ್‌ಸೌಂಡ್‌’ ಎಂದರೇನು?

ಚಿತ್ರೀಕರಣದ ಸ್ಥಳದಲ್ಲಿಯೇ ದೃಶ್ಯಗಳ ಜೊತೆಗೆ ಆ ಸನ್ನಿವೇಶಗಳ ಶಬ್ದವನ್ನು ನೈಜವಾಗಿ ಸೆರೆ ಹಿಡಿಯುವ ಪ್ರಕ್ರಿಯೆ. ಮುಖ್ಯವಾಗಿ ಸಂಭಾಷಣೆಯ ವಿಚಾರದಲ್ಲಿ ಸೌಂಡ್‌ಸಿಂಕ್‌ ಮಾಡುವುದಕ್ಕೆ ಸಿನಿಮಾ ತಜ್ಞರು ಆದ್ಯತೆ ನೀಡುತ್ತಾ ಬಂದಿದ್ದಾರೆ. ಚಿತ್ರೀಕರಿಸುತ್ತಿರುವ ಸಿನಿಮಾದ ಅಗತ್ಯತೆಯ ಆಧಾರದಲ್ಲಿ ಸಿಂಕ್‌ಸೌಂಡ್‌ಗೆ ಆದ್ಯತೆ ನೀಡಲಾಗುತ್ತದೆ. ಕೆಲವು ಸಿನಿಮಾಗಳಿಗೆ ಡಬ್‌ ಮಾಡುವುದು ಸೂಕ್ತವೆನಿಸಿದರೆ, ಮತ್ತೆ ಕೆಲವು ಸಿನಿಮಾಗಳಿಗೆ ಸಿಂಕ್‌ಸೌಂಡ್‌ ಅಗತ್ಯವಿರುತ್ತದೆ.

ಈಗ ಚರ್ಚೆಯಾಗುತ್ತಿರುವ ಸಂಗತಿ- ರಾಷ್ಟ್ರಪ್ರಶಸ್ತಿಗಳನ್ನು ಆಯ್ಕೆ ಮಾಡುವವರಿಗೆ ‘ಸಿಂಕ್‌ಸೌಂಡ್‌’ ಯಾವುದೆಂಬ ಅರಿವಿರಲಿಲ್ಲವೇ?

ಕರ್ನಾಟಕ ಸಿನಿಮಾತಜ್ಞರ ಆಕ್ಷೇಪ

‘ಡೊಳ್ಳು’ ಸಿನಿಮಾಕ್ಕೆ ‘ಸಿಂಕ್‌ಸೌಂಡ್‌’ ಪ್ರಶಸ್ತಿ ಬಂದಿರುವ ಕುರಿತು ಕರ್ನಾಟಕದಲ್ಲಿನ ಸಿನಿಮಾ ತಜ್ಞರು ವಿಷಾದ ವ್ಯಕ್ತಪಡಿಸಿದ್ದಾರೆ. ‘ನಾನುಗೌರಿ.ಕಾಂ’ ಜೊತೆ ಮಾತನಾಡಿರುವ ಸಿಂಕ್‌ಸೌಂಡ್‌ ತಜ್ಞರು, ಸಿನಿಮಾ ನಿರ್ದೇಶಕರು ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದು, ‘ರಾಷ್ಟ್ರಪ್ರಶಸ್ತಿ’ ಹಿಂದಿರುವ ರಾಜಕೀಯದ ಕುರಿತೂ ಬೆಳಕು ಚೆಲ್ಲಿದ್ದಾರೆ.

ತಾವು ಕೆಲಸ ಮಾಡಿದ ಹಲವು ಸಿನಿಮಾಗಳಲ್ಲಿ ‘ಸಿಂಕ್‌ಸೌಂಡ್‌‌’ ಅಳವಡಿಸಿರುವ ಛಾಯಾಗ್ರಾಹಕ, ನಿರ್ದೇಶಕ ಸಂದೀಪ್‌ ಕುಮಾರ್‌ ಪ್ರತಿಕ್ರಿಯೆ ನೀಡಿ, “ಇದು ದೊಡ್ಡ ಪ್ರಮಾದ. ಆದರೆ ಯಾರೂ ಗಂಭೀರವಾಗಿ ಚರ್ಚಿಸುತ್ತಿಲ್ಲ. ರಸೂಲ್‌ ಪೂಕುಟ್ಟಿ ಥರದ ಬಹುದೊಡ್ಡ ಸೌಂಡ್‌‌ ಇಂಜಿನಿಯರ್‌‌ ಬೇಸರ ವ್ಯಕ್ತಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಆಶಿಸಿದರು.

ಇದನ್ನೂ ಓದಿರಿ: ‘ಚಾರ್ಲಿ’ಗಷ್ಟೇ ಅಲ್ಲ, ಎಲ್ಲ ಸದಭಿರುಚಿಯ ಸಿನಿಮಾಗಳಿಗೂ ಸಿಗಲಿ ತೆರಿಗೆ ವಿನಾಯಿತಿ- ಚಿತ್ರಕರ್ಮಿಗಳ ಒಕ್ಕೊರಲ ಆಗ್ರಹ

“ಜ್ಯೂರಿಗಳು (ತೀರ್ಪುಗಾರರು) ಕೆಲವು ಸಲ ಸಿನಿಮಾಗಳನ್ನೇ ನೋಡುವುದಿಲ್ಲ. ಕರ್ನಾಟಕದಲ್ಲಿ ಎಷ್ಟು ಜನಕ್ಕೆ ಪ್ರಶಸ್ತಿ ನೀಡಬೇಕು, ಕೇರಳದಲ್ಲಿ ಎಷ್ಟು ಜನಕ್ಕೆ ಪ್ರಶಸ್ತಿ ಕೊಡಬೇಕು ಎಂಬ ರೀತಿಯ ಲೆಕ್ಕಾಚಾರದಲ್ಲಿರುತ್ತಾರೆ. ಸಿನಿಮಾ ತಜ್ಞರ ಸೃಜನಶೀಲತೆ ನಂತರದ ವಿಷಯವಾಗಿರುತ್ತದೆ. ಎಲ್ಲ ರಾಜ್ಯ, ಎಲ್ಲ ಭಾಷೆಗಳಿಗೂ ಪ್ರಶಸ್ತಿ ಕೊಡಬೇಕೆಂದು ಆಲೋಚನೆ ಮಾಡುವುದು ತಪ್ಪೇನಲ್ಲ. ಆದರೆ ಈ ರೀತಿಯ ಪ್ರಮಾದವನ್ನು ನೋಡಿದರೆ ಜ್ಯೂರಿಗಳ ಉಡಾಫೆ ಎದ್ದು ಕಾಣುತ್ತಿದೆ. ಈ ಹಿಂದೆಯೂ ಪ್ರಶಸ್ತಿ ನೀಡಿದಾಗಲೂ ಹಲವು ತಪ್ಪುಗಳಾಗಿವೆ. ಆದರೆ ಹೇಳಿದರೆ ತಿದ್ದಿಕೊಳ್ಳುವವರಿದ್ದರು. ಈ ಭಾರಿಯ ಪ್ರಮಾದದಲ್ಲಿ ಸಿಕ್ಕಾಪಟ್ಟೆ ಉಡಾಫೆ ಎದ್ದು ಕಾಣುತ್ತಿದೆ. ತಾನು ಮಾಡಿದ ಕೆಲಸಕ್ಕೆ ಪ್ರಶಸ್ತಿ ಬಂದರೆ ಯಾವುದೇ ತಂತ್ರಜ್ಞರಿಗೆ ಖುಷಿಯಾಗುತ್ತದೆ. ಆದರೆ ತಾನು ಮಾಡದೆ ಇರುವ ಕೆಲಸಕ್ಕೆ ಪ್ರಶಸ್ತಿ ಬಂದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಇದು ತಂತ್ರಜ್ಞರಿಗೆ ಮಾಡಿದ ಅವಮಾನ” ಎಂದು ಅಭಿಪ್ರಾಯಪಟ್ಟರು.

ಭಾಸ್ಕರ್‌ ಬಲಿಪಶುವಾದರೆ?: ಬಿ.ಎಸ್.ಲಿಂಗದೇವರು

‘ನಾನು ಅವನಲ್ಲ ಅವಳು’ ಸಿನಿಮಾ ನಿರ್ದೇಶಕರಾದ ಬಿ.ಎಸ್‌.ಲಿಂಗದೇವರು ಮಾತನಾಡಿ, “ಜ್ಯೂರಿಗಳ ಕುರಿತು ನಮ್ಮ ಆಕ್ಷೇಪ ವ್ಯಕ್ತವಾಗಲೇಬೇಕು. ಛಾಯಾಗ್ರಹಣ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದವರಾದ ಜಿ.ಎಸ್.ಭಾಸ್ಕರ್‌ ಅವರು ಜ್ಯೂರಿಯಾಗಿದ್ದರು. ಯಾವುದೇ ಪಕ್ಷ, ಸಿದ್ಧಾಂತದಿಂದ ದೂರ ಉಳಿದ ವ್ಯಕ್ತಿಯವರಾದ ಭಾಸ್ಕರ್‌ ತೀರ್ಪುಗಾರರಾಗಿಯೂ ಈ ರೀತಿಯ ಪ್ರಮಾದವಾಗಿರುವುದು ದುರಂತದ ಸಂಗತಿ. ಅವರು ಈ ವ್ಯವಸ್ಥೆಯ ಬಲಿಪಶುವಾದರಾ ಎಂಬ ಪ್ರಶ್ನೆ ಮೂಡುತ್ತದೆ” ಎಂದು ವಿಷಾದಿಸಿದರು.

ಮಾನವ ಸಹಜ ತಪ್ಪುಗಳಾಗುತ್ತವೆ: ಶೇಷಾದ್ರಿ

‘ಅತಿಥಿ’, ‘ಬೇರು’, ‘ಬೆಟ್ಟದ ಜೀವ’, ‘ಭಾರತ್‌ ಸ್ಟೋರ್‍ಸ್‌’ ಮೊದಲಾದ ಸಿನಿಮಾಗಳ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, “ತಪ್ಪುಗಳಾಗಿರುವ ಕುರಿತು ಡೈರೆಕ್ಟರೇಟ್‌ ಆಫ್‌ ಫಿಲ್ಮ್‌ ಫೆಸ್ಟಿವಲ್‌ನವರು ವಿಚಾರ ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆಯಾಗುತ್ತಿದೆ. ನಾನು ಕೂಡ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ” ಎಂದರು.

“ತಪ್ಪುಗಳು ಮನುಷ್ಯ ಸಹಜ ಗುಣ. ಉದ್ದೇಶಪೂರ್ವಕವಾಗಿ ಇಲ್ಲಿ ತಪ್ಪು ಮಾಡಲಾಗಿದೆ ಎಂದು ನಾನು ಹೇಳುವುದಿಲ್ಲ. ಕಣ್ತಪ್ಪಿನಿಂದ ಆಗಿರಬಹುದು. ಆದರೆ ತಪ್ಪು ತಪ್ಪೇ. ಅದನ್ನು ಸರಿಪಡಿಸಿಕೊಳ್ಳಬೇಕಾಗಿದೆ” ಎಂದು ತಿಳಿಸಿದರು.

ಜ್ಯೂರಿಯಾಗಿದ್ದ ಜಿ.ಎಸ್.ಭಾಸ್ಕರ್‌‌ ಹೇಳುವುದೇನು?

ಈ ಭಾರಿಯ ಪ್ರಶಸ್ತಿಗಳ ಆಯ್ಕೆಯಲ್ಲಿ ತೀರ್ಪುಗಾರರಾಗಿದ್ದವರಲ್ಲಿ ಕರ್ನಾಟಕದ ಜಿ.ಎಸ್.ಭಾಸ್ಕರ್‌ ಕೂಡ ಒಬ್ಬರು. ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, “ಜ್ಯೂರಿಗಳ ನಿರ್ಧಾರವದು. ಸರಿ ತಪ್ಪು ಎಂಬುದು ಬರುವುದಿಲ್ಲ. ಇದು ಚರ್ಚೆಯ ವಿಷಯವೇ ಅಲ್ಲ. ಜ್ಯೂರಿ ಒಮ್ಮೆ ತೀರ್ಮಾನ ಹೇಳಿದ ಮೇಲೆ ಅದರ ಬಗ್ಗೆ ಚರ್ಚಿಸುವ ಅವಶ್ಯಕತೆ ಇರುವುದಿಲ್ಲ. ಒಂದು ವಿಷಯದ ಕುರಿತು ನಿರ್ಧಾರ ತೆಗೆದುಕೊಳ್ಳಲು ಜ್ಯೂರಿಗಳನ್ನು ನೇಮಿಸಿದ ಮೇಲೆ ಅವರ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು” ಎಂದು ಹೇಳಿದರು.

ರಾಷ್ಟ್ರಪ್ರಶಸ್ತಿಯ ಹಿಂದೆ ಲಾಬಿ ನಡೆಯುತ್ತದೆಯೇ?

ಸಿನಿಮಾ ಕ್ಷೇತ್ರ ರಾಜಕೀಯವನ್ನು ಬಲ್ಲವರು ಹೇಳುವ ಪ್ರಕಾರ ರಾಷ್ಟ್ರಪ್ರಶಸ್ತಿ ಆಯ್ಕೆಯಲ್ಲಿ ದೊಡ್ಡ ಮಟ್ಟದ ಲಾಬಿ ನಡೆಯುತ್ತದೆ.

ಹೆಸರು ಹೇಳಲಿಚ್ಛಿಸದ ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ರಾಷ್ಟ್ರಪ್ರಶಸ್ತಿ ಆಯ್ಕೆಯ ಹಿಂದಿನ ರಾಜಕೀಯವನ್ನು ಬಿಚ್ಚಿಟ್ಟರು.

ಸುನಿಲ್‌ ಪುರಾಣಿಕ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಅನುರಾಗ್‌ ಠಾಕೂರ್‌ ಅವರ ಜೊತೆ ಬಹಳ ಆಪ್ತರಾಗಿದ್ದಾರೆ. ಗೋವಾ ಪನೋರಮಾ ಸಂದರ್ಭದಲ್ಲಂತೂ ಪುರಾಣಿಕ್ ಅವರು ಸಚಿವರೊಂದಿಗೆ ಅಂಟಿಕೊಂಡಿದ್ದರು. ಇದೆಲ್ಲವೂ ಪ್ರಶಸ್ತಿ ಆಯ್ಕೆಯ ಮೇಲೆ ಪ್ರಭಾವ ಬೀರಿರಬಹುದು ಎಂದು ಗುಮಾನಿಗಳು ಇವೆ.

ಇದನ್ನೂ ಓದಿರಿ: ಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ

ಜ್ಯೂರಿಗಳು ಸ್ವಜನಪಕ್ಷಪಾತಿಗಳಾಗಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ತಮಿಳಿನ ‘ಸೂರರೈ ಪೋಟ್ರು’ ಸಿನಿಮಾಕ್ಕೆ ಬಂದಿರುವ ಪ್ರಶಸ್ತಿಗಳನ್ನು ನೋಡಿದರೆ ಈ ಅನುಮಾನ ಮೂಡದಿರದು. ತಮಿಳು ನಟ ಸೂರಿಯಾ, ನಟಿ ಜ್ಯೋತಿಕಾ, ನಿರ್ದೇಶಕ ಶಂಕರ್‌ ಅವರಿಗೆಲ್ಲ ಸೆಲೆಬ್ರಟಿ ಮ್ಯಾನೇಜರ್‌ ಆಗಿರುವ ಎಸ್‌.ತಂಗಾದುರೈ ಅವರೂ ಜ್ಯೂರಿಯಾಗಿದ್ದರು. ಹೀಗಾಗಿ ಪ್ರಶಸ್ತಿ ಆಯ್ಕೆಯಲ್ಲಿ ಸೂರಿಯಾ ಅಭಿನಯದ ಸಿನಿಮಾಕ್ಕೆ ಪ್ರಶಸ್ತಿಗಳು ಬಂದಿವೆ ಎಂಬ ಆರೋಪಗಳಿವೆ.

ವರ್ಷದ ಅತ್ಯುತ್ತಮ ಸಿನಿಮಾ ‘ಸೂರರೈ ಪೋಟ್ರು’, ಇದೇ ಸಿನಿಮಾದಲ್ಲಿ ಅಭಿನಯಿಸಿದ್ದ ಸೂರಿಯಾ ಅವರಿಗೆ ‘ಅತ್ಯುತ್ತಮ ನಟ ಪ್ರಶಸ್ತಿ’, ಅಪರ್ಣಾ ಬಾಲಮುರಳಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ನೀಡಲಾಗಿದೆ. ಈ ಸಿನಿಮಾಕ್ಕೆ ಸೂರಿಯಾ ಹಾಗೂ ಜ್ಯೋತಿಕಾ ನಿರ್ಮಾಪಕರಾಗಿರುವುದು ಗಮನಾರ್ಹ.

“ಯಾವುದೇ ಪ್ರಭಾವವಿಲ್ಲದವರಿಗೆ ಪ್ರಶಸ್ತಿ ಬಂದಿರುವ ಉದಾಹರಣೆಗಳಿವೆ. ಅದನ್ನು ಬಡಪಾಯಿಗಳ ಅದೃಷ್ಟ ಅನ್ನಬಹುದು” ಎನ್ನುತ್ತಾರೆ ಹೆಸರು ಬಹಿರಂಗಪಡಿಸದ ಸಿನಿಮಾ ತಂತ್ರಜ್ಞರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...