Homeಮುಖಪುಟಪ್ರಚಂಡ ಕುಳ್ಳನಿಗೆ ಜಯಣ್ಣ ಜೀವಬೆದರಿಕೆ ಹಾಕಿದರಾ!?

ಪ್ರಚಂಡ ಕುಳ್ಳನಿಗೆ ಜಯಣ್ಣ ಜೀವಬೆದರಿಕೆ ಹಾಕಿದರಾ!?

ವಿಷ್ಣು ಜೊತೆ ದ್ವಾರಕೀ ಹಲವಾರು ಸಿನಿಮಾ ಮಾಡಿ ದುಡ್ಡು ಮಾಡಿಕೊಂಡದ್ದಂತೂ ಸತ್ಯ. ತದನಂತರ ಅದೇ ವಿಷ್ಣು ಜೊತೆಗೂ ಹಣಕಾಸಿನ ವಿಚಾರವಾಗಿ ಸ್ನೇಹ ಕೆಡಿಸಿಕೊಂಡದ್ದೂ ಅಷ್ಟೇ ಸತ್ಯ. ಆದರೆ, ದ್ವಾರ್ಕಿ ಆರ್ಥಿಕ ಮುಗ್ಗಟ್ಟಿಗೆ ಬಿದ್ದಾಗ ಕೊನೆಗೆ ಅದೇ ವಿಷ್ಣು `ಆಪ್ತಮಿತ್ರ’ನಾಗಿ ಬಂದು ನೆರವಾಗಬೇಕಾಯ್ತು.

- Advertisement -
- Advertisement -

ಸಿನಿಮಾರಂಗದಲ್ಲಿ ನಡೆಯುತ್ತಿದ್ದ ಸ್ಟಾರ್‍ವಾರ್ ಈಗ ಹೊಸ ರೂಪ ತಳೆದು ನಿರ್ಮಾಪಕರ ವಾರ್ ಆಗಿ ಬದಲಾಗುತ್ತಿದೆ. ಸ್ಯಾಂಡಲ್‍ವುಡ್ ಹಳೆಯ ಬೇರಿನಂತಿದ್ದ ದ್ವಾರಕೀಶ್ ಮತ್ತು ನಿರ್ಮಾಪಕ ಜಯಣ್ಣನ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದ್ದು ಬೆಳಗ್ಗೆ ಒಬ್ಬರು, ಸಂಜೆ ಒಬ್ಬರು ಪ್ರೆಸ್‍ಮೀಟ್ ಮಾಡುತ್ತಾ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿಹೋಗಿದ್ದಾರೆ.

ದ್ವಾರಕೀಶ್ ನಟ, ನಿರ್ದೇಶಕರಷ್ಟೇ ಅಲ್ಲ ನಿರ್ಮಾಪಕರೂ ಹೌದು. ಅಂತೆಯೇ ಜಯಣ್ಣನೂ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ಮಾಪಕ. ಸ್ಯಾಂಡಲ್‍ವುಡ್‍ನ ನಿರ್ಮಾಪಕರು ನೋಡೋಕೆ ತುಂಬಾ ಆತ್ಮೀಯ ಮಿತ್ರರಂತೆ ಇದ್ದರೂ ಒಳಗಿನ ಜಲಸ್‍ಗೇನೂ ಕಡಿಮೆಯಿಲ್ಲ. ಜಯಣ್ಣ ತಮ್ಮ ಮನೆಗೆ ನುಗ್ಗಿ ತನ್ನ ತಂದೆಗೆ ಜೀವಬೆದರಿಕೆ ಹಾಕಿದ್ದಾರೆ ದ್ವಾರ್ಕಿ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಯಣ್ಣನ ಗ್ಯಾಂಗು ನಿಜಕ್ಕೂ ದ್ವಾರಕೀಶ್‍ಗೆ ಜೀವ ತೆಗೆಯುವುದಾಗಿ ಥ್ರೆಟ್ ಮಾಡಿದರಾ? ಎಂದು ಯೋಚಿಸುವುದು ಎಷ್ಟು ಮುಖ್ಯವೋ ಹಣಕಾಸು, ಸ್ನೇಹಸಂಬಂಧಗಳ ವಿಚಾರದಲ್ಲಿ ಕುಳ್ಳನ ಟ್ರ್ಯಾಕ್ ರೆಕಾರ್ಡ್ ಪರಿಶುದ್ಧವಾಗಿದೆಯಾ? ಎಂಬ ಪ್ರಶ್ನೆಯನ್ನೂ ಇಲ್ಲಿ ಕೇಳಿಕೊಳ್ಳಲೇಬೇಕಿದೆ. ಒಂದು ಕಾಲಕ್ಕೆ ಮೇಯರ್ ಮುತ್ತಣ್ಣ ಅನ್ನೋ ಆ ಕಾಲದ ಸೂಪರ್ ಹಿಟ್ ಸಿನಿಮಾ ಮಾಡಿ ರಾಜ್ ಸ್ಟಾರ್‍ವ್ಯಾಲ್ಯೂ ಸೂರೆ ಹೊಡೆದಿದ್ದ ಕುಳ್ಳ, ಆಮೇಲೆ ರಾಜ್-ವಿಷ್ಣು ನಡುವಿನ ಸ್ಟಾರ್‍ವಾರ್ ಅನ್ನೇ ಬಂಡವಾಳ ಮಾಡಿಕೊಂಡು ರಾಜ್‍ಗೆ ಪ್ರತಿಯಾಗಿ ವಿಷ್ಣುವನ್ನು ಕಟೆದು ನಿಲ್ಲಿಸುತ್ತೇನೆ ಅಂತ ಹೊರಟದ್ದು ಹಳೆಯ ಇತಿಹಾಸ. ವಿಷ್ಣು ಜೊತೆ ದ್ವಾರಕೀ ಹಲವಾರು ಸಿನಿಮಾ ಮಾಡಿ ದುಡ್ಡು ಮಾಡಿಕೊಂಡದ್ದಂತೂ ಸತ್ಯ. ತದನಂತರ ಅದೇ ವಿಷ್ಣು ಜೊತೆಗೂ ಹಣಕಾಸಿನ ವಿಚಾರವಾಗಿ ಸ್ನೇಹ ಕೆಡಿಸಿಕೊಂಡ ಪ್ರಚಂಡ ಕುಳ್ಳ, ವಿಷ್ಣುಗೆ ಪ್ರತಿಯಾಗಿ ಹೊಸ ಹೀರೋ ಹುಟ್ಟುಹಾಕುತ್ತೇನೆ ಅಂತ ಶಶಿಕುಮಾರ್‍ರನ್ನು ಹೀರೋ ಆಗಿ ಹಾಕಿಕೊಂಡು `ಹಳೇ ಕುಳ್ಳ ಹೊಸ ಕಳ್ಳ’ ಸಿನಿಮಾ ಮಾಡಿ ಕೈಸುಟ್ಟುಕೊಂಡದ್ದೂ ಉಂಟು. ಒಂದು ಕಾಲಕ್ಕೆ ದುಬಾರಿ ಸಿನಿಮಾಗಳ ಸಾಹಸಿ ನಿರ್ಮಾಪಕ ಅಂತಲೇ ಹೆಸರು ಮಾಡಿದ್ದ ದ್ವಾರ್ಕಿ ಆರ್ಥಿಕ ಮುಗ್ಗಟ್ಟಿಗೆ ಬಿದ್ದಾಗ ಕೊನೆಗೆ ಅದೇ ವಿಷ್ಣು `ಆಪ್ತಮಿತ್ರ’ನಾಗಿ ಬಂದು ನೆರವಾಗಬೇಕಾಯ್ತು. ಆದರೆ ಆ ಸಿನಿಮಾದ ಮೂಲಕ ಕಾಸು ಕಂಡ ದ್ವಾರಕೀಶ್ ಮತ್ತೆ ಹಳೆ ಚಾಳಿಗೆ ಕಟ್ಟುಬಿದ್ದು ಲೇವಾದೇವಿ ವ್ಯವಹಾರದಲ್ಲಿ ವಿಷ್ಣುವಿನಿಂದ ಪುನಾಃ ದೂರಾದರು. ವಿಷ್ಣು ನಿರ್ಗಮಿಸಿದ ನಂತರ ಅದೇ ವಿಷ್ಣು ಹೆಸರಲ್ಲಿ ಸಿನಿಮಾ ಮಾಡಲು ಮುಂದಾಗಿ ಒಂದಷ್ಟು ರಾಡಿ ಮಾಡಿಕೊಂಡದ್ದೂ ಉಂಟು. ತಮ್ಮ ಬ್ಯಾನರ್‍ನಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಬಾಕಿ ಉಳಿಸಿಕೊಂಡು ಸತಾಯಿಸಿದ ಉದಾಹರಣೆಗಳೂ ಇವೆ.

ಆದರೆ ಈಗ ದ್ವಾರಕೀಶ್ ಮತ್ತು ಜಯಣ್ಣರ ನಡುವಿನ ಈ ಬೀದಿ ಕಾಳಗಕ್ಕೆ ಕಾರಣವಾಗಿರೋದು ದ್ವಾರಕೀಶ್ ಮಗ ಯೋಗೀಶ್ ಮಾಡಿಕೊಂಡಿರುವ ಸಾಲ. ಆತ `ಅಮ್ಮಾ ಐ ಲವ್ ಯೂ’ ಸಿನಿಮಾ ಮಾಡಿದಾಗ ಅದರ ಡಿಸ್ಟ್ರಿಬ್ಯೂಷನ್‍ಗಾಗಿ ಜಯಣ್ಣನ ಬಳಿ 80 ಲಕ್ಷ ಸಾಲ ಪಡೆದಿದ್ದರು. ಅಲ್ಲದೆ ಆಯುಶ್‍ಮಾನ್ ಭವ ಸಿನಿಮಾ ಸೆಟ್ಟೇರಿದಾಗಲೂ ಜಯಣ್ಣನ ಬಳಿ 3 ಕೋಟಿ ಹಣ ಪಡೆದಿದ್ದರಂತೆ. ಹೀಗೆ ಬೇರೆಬೇರೆ ಸಮಯದಲ್ಲಿ ಒಟ್ಟು ಆರು ಕೋಟಿ ಸಾಲ ತನ್ನಿಂದ ಯೋಗೀಶ್ ಪಡೆದಿದ್ದಾರೆ ಅನ್ನೋದು ಜಯಣ್ಣನ ಅಂಬೋಣ.

ಆದರೆ ಕೊಟ್ಟ ಸಾಲ ವಾಪಸ್ ಕೇಳಿದಾಗ ತಾನು ತುಂಬಾ ಸಮಸ್ಯೆಯಲ್ಲಿದ್ದು ಜನವರಿ 30ರೊಳಗೆ ಹಣ ಕೊಡುವುದಾಗಿ ಯೋಗೀಶ್ ವಾಯಿದೆ ಪಡೆದುಕೊಂಡಿದ್ದರಂತೆ. ಈ ಮಧ್ಯೆ ಹಲವು ಬಾರಿ ಇದೇ ವಿಚಾರ ತನ್ನ ಹಾಗೂ ಯೋಗೀಶ್ ಸ್ನೇಹಿತರ ನಡುವೆ ಹಲವು ಬಾರಿ ಮೀಟಿಂಗ್ ನಡೆದು ಒಂದಷ್ಟು ಹಣವನ್ನೂ ಕೈಬಿಟ್ಟಿದ್ದೇನೆ ಎಂದು ಜಯಣ್ಣ ಹೇಳುತ್ತಿದ್ದಾರೆ.

ಜನವರಿ 30ರೊಳಗೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ ಯೋಗೀಶ್ ಜನವರಿ 27ರಂದೇ ಜಯಣ್ಣ ಫೋನ್ ನಂಬರನ್ನು ಬ್ಲಾಕ್ ಮಾಡಿದ್ದರಂತೆ. ಫೋನ್ ಕರೆಗೆ ಯೋಗೀಶ್ ಸಿಗದಿದ್ದಾಗ ಮನೆಗೇ ಹೋಗಿ ಹಣ ಕೇಳೋ ಪ್ರಯತ್ನಕ್ಕೆ ಜಯಣ್ಣನ ಗ್ಯಾಂಗು ಮುಂದಾಗಿತ್ತು. ಅವಾಗಲೂ ದ್ವಾರಕೀಶ್ ಸಮಸ್ಯೆಯಲ್ಲಿದ್ದೇವೆ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ. ಆದರೆ, ಫೋನ್‍ಗೆ ಸಿಗದ ದ್ವಾರಕೀ ಮಗನ ಅವಾಂತರಕ್ಕೆ ಬೇಸತ್ತಿದ್ದ ಜಯಣ್ಣ ಇದಕ್ಕೆ ಒಪ್ಪಿಲ್ಲ. ಈ ಸಂದರ್ಭದಲ್ಲಿ ಫೈನಾನ್ಶಿಯರ್ ರಮೇಶ್ ಏರುಧ್ವನಿಯಲ್ಲಿ ಕೂಗಾಡಿದ್ದಾರೆ.

ಅಲ್ಲದೆ, ಐ ಲವ್ ಯೂ ಸಿನಿಮಾ ಮಾಡುವಾಗ ಯೋಗೀಶ್ ನಿರ್ಮಾಪಕ ಮನೋಹರ್ ಬಳಿ 50 ಲಕ್ಷ ಪಡೆದಿದ್ದು, ಅದನ್ನೂ ಇನ್ನೂ ತೀರಿಸಿಲ್ಲ. ಅದಷ್ಟೇ ಅಲ್ಲದೆ, ಆಯುಷ್‍ಮಾನ್ ಭವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾರಾಮ್ ಅವರಿಗೂ ಇನ್ನೂ 75% ಸಂಭಾವನೆ ಕೊಟ್ಟೇ ಇಲ್ಲ, ಶಿವರಾಜ್‍ಕುಮಾರ್‍ಗೂ ಕೂಡ ಪೂರ್ತಿ ಸಂಭಾವನೆ ನೀಡಿಲ್ಲ, ಅದೇ ಸಿನಿಮಾದ ಸ್ಟಂಟ್ ಮಾಡಿದ್ದ ರವಿವರ್ಮ ಹಾಗೂ ಕೊರಿಯೋಗ್ರಫಿ ಮಾಡಿದ್ದ ಹರ್ಷ ಅವರಿಗೂ ಇನ್ನೂ ಪೇಮೆಂಟ್ ಮಾಡಿಲ್ಲ. ಇದಲ್ಲದೆ 11 ಕೋಟಿ ಬಜೆಟ್‍ನ ಸಿನಿಮಾಕ್ಕೆ 20 ಕೋಟಿ ಖರ್ಚು ತೋರಿಸಿದ್ದೀರಿ ಅಂತ ಅವರೆಲ್ಲ ರೇಗಾಡಿದ್ದಾರೆ.

ಈ ರೇಗಾಟ ಕೂಗಾಟದಲ್ಲಿ ನಿಜಕ್ಕೂ ದ್ವಾರ್ಕಿಗೆ ಜಯಣ್ಣನ ಗ್ಯಾಂಗಿನಿಂದ ಜೀವಬೆದರಿಕೆ ಹೊರಬಂತಾ? ನಿಜಕ್ಕೂ ದ್ವಾರ್ಕಿಯನ್ನು ಕೊಲ್ಲುವ ಇರಾದೆ ಜಯಣ್ಣನ ಗ್ಯಾಂಗಿದೆಯಾ? ಕೊಂದರೆ ಅವರ ದುಡ್ಡು ವಾಪಾಸ್ಸು ಬರುತ್ತಾ? ಈ ಪ್ರಶ್ನೆಗೆ ಉತ್ತರ ಸುಲಭಕ್ಕೆ ಗೊತ್ತಾಗುವಂತದ್ದಲ್ಲ. ಆದರೆ ದ್ವಾರಕೀಶ್ ಸದ್ಯಕ್ಕೆ ಆರ್ಥಿಕ ಮುಗ್ಗಟ್ಟಿನಲ್ಲಿರುವುದಂತೂ ಸತ್ಯ. ವರ್ತನೆಗಳು ಎಂತದ್ದೇ ಇರಲಿ, ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿದ ನಟ ಕಂ ನಿರ್ದೇಶಕ ಕಂ ನಿರ್ಮಾಪಕನಾದ ಹಿರಿವಯಸ್ಸಿನ ದ್ವಾರಕೀಶ್‍ಗೆ ಒಂದೊಮ್ಮೆ ನಿಜಕ್ಕೂ ಜೀವಬೆದರಿಕೆ ಹಾಕಿದ್ದರೆ ಅದು ಖಂಡಿತ ತಪ್ಪು. ಆದರೆ ಕುಳ್ಳನ ಹಳೇ ವರಸೆಗಳು ಒಂದು ಕ್ಷಣ ಈ ಆರೋಪವನ್ನು ಅನುಮಾನಿಸುವಂತೆ ಮಾಡುತ್ತಿರುವುದೂ ಸುಳ್ಳಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...