Homeಎಕಾನಮಿಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

ಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

- Advertisement -
- Advertisement -

ಭಾರತದ ಆರ್ಥಿಕತೆ ಬೀಳುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ, ಆರ್.ಬಿ.ಐ. ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು “ಈ ದೇಶ ನಿರುದ್ಯೋಗದ ಟೈಂ ಬಾಂಬ್ ಮೇಲೆ ಕೂತಿದೆ” ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಈ ಟೈಂ ಬಾಂಬ್ ಸಿಡಿಯದೇ ದೇಶ ರಕ್ಷಣೆ ಹೇಗೆ ಮಾಡಬೇಕು ಎಂದು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ “ಕೆಲಸ ಮಾಡದ ಸೋಮಾರಿಗಳ ಕಂಪನಿಗಳು ಮಾತ್ರ ಮುಚ್ಚುತ್ತಿವೆ, ಅವುಗಳು ಇದ್ದೂ ಏನೂ ಪ್ರಯೋಜನವಿಲ್ಲ ಹೋಗ್ಲಿ ಬಿಡಿ, ದೇಶಕ್ಕೆ ಯಾವುದೇ ಅಪಾಯವಿಲ್ಲ” ಎಂದು ಮೋದಿಯ ಅಭಿಮಾನಿಗಳು ವಾದಿಸುತ್ತಿದ್ದಾರೆ. ಹಾಗಾದರೆ ನಷ್ಟದಲ್ಲಿರುವ ಕಂಪನಿಗಳು/ಕಾರ್ಖಾನೆಗಳೆಲ್ಲಾ ಸೋಮಾರಿಗಳಾ? ನಷ್ಟದಲ್ಲಿರುವ ಕಂಪನಿಗಳು ಈಗ ಮೂರಂಕೆಯ ಸಂಖ್ಯೆ ದಾಟಿವೆಯಾದರೂ ಇಲ್ಲಿ ಕೆಲವನ್ನು ಮಾತ್ರ ನೋಡೋಣ.

ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರ ಕೃಷಿ. ಇದೀಗ ಕೃಷಿ ಲಾಭದಾಯಕದ ಮಾತು ಹಾಗಿರಲಿ ಕೃಷಿಯಲ್ಲಿ ತೊಡಗಿರುವ ಮುಂದೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಹಾಗೂ ರೈತ ಕಾರ್ಮಿಕರ ಬದುಕನ್ನು ಉಳಿಸಿಕೊಳ್ಳಲು ನಾವೆಲ್ಲಾ ಪರದಾಡುತ್ತಿರುವ ಸಂದರ್ಭದಲ್ಲಿದ್ದೇವೆ. ರೈತರನ್ನು ಸೋಮಾರಿಗಳು ಕಷ್ಟಪಟ್ಟು ದುಡಿಯದವರು ಎಂದು ವಾದ ಮಾಡುವುದಾದರೆ ಇದು ಆತ್ಮವಂಚನೆ ಅಲ್ಲವೇ? ‘ಕೃಷಿ ಆತ್ಮಹತ್ಯೆ ಕ್ಷೇತ್ರ’ವಾಗಿದ್ದು ಮೋದಿಯ ಕಾಲದಲ್ಲೇ ಅಲ್ಲ. ಇದಕ್ಕೆ ಕಾಂಗ್ರೆಸ್ ಆಡಳಿತವೂ ಸೇರಿ ಕಾರಣವಾಗಿದೆ. ಆದರೆ ದುರಾದೃಷ್ಟವಶಾತ್ ಹೋಲಿಸಿ ನೋಡಲು ರೈತರ ಆತ್ಮಹತ್ಯೆಯ ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಲೇ ಇಲ್ಲ! ಇಂದಿಗೂ ಸಾಪೇಕ್ಷವಾಗಿ ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಹಿಂದಿನ ಸರ್ಕಾರಗಳು ಕಾರಣವಾಗಿರುವುದು ನಿಜವೇ ಆದರೂ ಮೋದಿ ‘ಆಳ್ವಿಕೆಯಲ್ಲಿ’ ನಷ್ಟ ಕಂಡ/ಕಾಣುತ್ತಿರುವ ಸಂಸ್ಥೆಯ ಬಗ್ಗೆ ಗಮನಹರಿಸೋಣ.

ಎಚ್.ಎ.ಎಲ್: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು 1940 ರಿಂದಲೂ ಬಾಹ್ಯಾಕಾಶಕ್ಕೆ ಕೊಡುಗೆ ನೀಡುತ್ತಾ ಬಂದಿದೆ. 1964 ರಿಂದ ಹಿಂದುಸ್ತಾನ್ ಏರ್ ಕ್ರಾಫ್ಟ್ ನಿಂದ ಎಚ್.ಎ.ಎಲ್ ಎಂದು ಮರುನಾಮಕರಣಗೊಂಡು ಬಾಹ್ಯಾಕಾಶ ಹಾಗೂ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸೇನೆಗೆ ಧೃವ್, ಚೇತಕ್, ಲ್ಯಾನ್ಸರ್ ಇನ್ನೂ ಮುಂತಾದ ಹೆಲಿಕಾಪ್ಟರ್ ಅನ್ನು ನೀಡಿದೆ. ಹಾಗೂ ಎಲ್.ಸಿ.ಎ, ಎಚ್ ಟಿಟಿ-40, ಐಜೆಟಿ ನಂತಹ ಯುದ್ಧ ವಿಮಾನಗಳನ್ನೂ ಕೊಡೆಗೆಯಾಗಿ ನೀಡಿದೆ. ಇದಲ್ಲದೆ ಫೈಟರ್ ಜೆಟ್, ಪವರ್ ಪ್ಲಾಂಟ್, ಹಲವಾರು ಬೇರೆ ಬೇರೆ ಉಪಕರಣಗಳನ್ನು ನೀಡಿದೆ.

ಸದ್ಯಕ್ಕೆ 32,108 (2014 ರ ಗಣತಿ) ಜನರು ಈ ಸರ್ಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಐತಿಹಾಸಿಕ ಸಂಸ್ಥೆ ನಮ್ಮ ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆಯೇ ಸರಿ. (ರಾಫೇಲ್ ಒಪ್ಪಂದದ ಚರ್ಚೆಯಲ್ಲಿ ಕೇಂದ್ರದ ಮಂತ್ರಿಗಳು ಎಚ್.ಎ.ಎಲ್ ಕಾರ್ಯಕ್ಷಮತೆ ಚೆನ್ನಾಗಿಲ್ಲ ಹಾಗಾಗಿ ಅಂಬಾನಿಗೆ ಈ ಒಪ್ಪಂದ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅಂಬಾನಿ ತನ್ನ ಜೀವನದಲ್ಲಿ ಒಂದೂ ಯುದ್ಧ ವಿಮಾನವನ್ನು ತಯಾರು ಮಾಡಿಲ್ಲ ಹಾಗು ಅಂತಹ ಘಟಕ ಆತನ ಬಳಿ ಇಲ್ಲ ಎನ್ನುವುದು ವಾಸ್ತವ. ಇತಿಹಾಸ ತಿಳಿಯದ ಮುಗ್ಧರು ಇದನ್ನೇ ಸತ್ಯವೆಂದು ತಿಳಿದು ವಾದಿಸುವುದು ದುರಂತ) ಇಂತಹ ಎಚ್.ಎ.ಎಲ್ ಸಂಸ್ಥೆ ಇತಿಹಾಸದಲ್ಲೇ ಪ್ರಥಮ ಬಾರಿಗೆ (ಜನವರಿ, 2019) ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲದೆ 1,000 ಕೋಟಿ ರೂ ಸಾಲವನ್ನು ಮಾಡಿತ್ತು! ಈಗಲೂ ಒಟ್ಟಾರೆ ಆದಾಯ ಏರಿಕೆ ಕಂಡಿಲ್ಲ. ಈ ಸಂಸ್ಥೆಯನ್ನು ಸೋಮಾರಿ ಸಂಸ್ಥೆ ಎಂದರೆ ಆತ್ಮವಂಚನೆಯ ಕೆಲಸವಲ್ಲದೆ ಮತ್ತೇನು?

ಬಿ.ಎಸ್.ಎನ್.ಎಲ್: 2000 ನೇ ಇಸವಿಯಲ್ಲಿ ಶುರುವಾಗಿರುವ ಈ ಸಂಸ್ಥೆಯ ವಾರಸುದಾರರು ಭಾರತ ಸರ್ಕಾರವಾಗಿದೆ. 1,74,216 ಸಿಬ್ದಂದಿಗಳಿರುವ ಈ ಸಂಸ್ಥೆ ಹಳ್ಳಿ ಹಳ್ಳಿಗೂ ದೂರವಾಣಿ ಸಂಪರ್ಕವನ್ನು ನೀಡಿದ ಮೊಟ್ಟ ಮೊದಲ ಸಂಸ್ಥೆಯಾಗಿದೆ. ಈ ಸಂಸ್ಥೆಯ ಬಲವರ್ಧನೆಗೆ ಕೆಲಸ ಮಾಡದ ಸರ್ಕಾರ ಜಿಯೋ ಎನ್ನುವ ಖಾಸಗೀ ವ್ಯಕ್ತಿಯೊಬ್ಬನ ಟೆಲಿಕಾಂ ಪ್ರಚಾರಕ್ಕಾಗಿ ದೇಶದ ಪ್ರಧಾನ ಮಂತ್ರಿಗಳೇ ಅಧಿಕೃತ ರಾಯಭಾರಿ ಆಗಿದ್ದು ನಿಜಕ್ಕೂ ದೇಶದ ಬಹುದೊಡ್ಡ ದುರಂತ. ಈಗ ಬಿ.ಎಸ್.ಎನ್.ಎಲ್ ಸಂಸ್ಥೆ ನಷ್ಟದಲ್ಲಿದ್ದು ವರಮಾನ ಇಳಿಮುಖ ಕಾಣುತ್ತಿದೆ. ಇದರ ಆಪರೇಷನಲ್ ಇನ್ಕಂ -14,000 ಕೋಟಿ (ಮೈನಸ್). ಹೀಗಾಗಿ ಸಿಬ್ಬಂದಿಗಳ ವೇತನಕ್ಕೂ ತೊಂದರೆಯಾಗುತ್ತಿದೆ. ಈಗ ಸಂಸ್ಥೆಯ ಬಲವರ್ಧನೆಗೆ ದುಡಿಯದ ಸರ್ಕಾರವನ್ನು ಬಿಟ್ಟು 1,74,216 ಜನರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ?

2013ರಲ್ಲಿ ನಂ.1 ಬ್ರಾಂಡ್ ಆಗಿದ್ದ ಭಾರತದ ಪಾರ್ಲೇಜಿ ಕಂಪನಿ 1939 ರಿಂದಲೂ ಕೆಲಸ ಮಾಡುತ್ತಿದೆ. ಅಲ್ಲದೆ ಇದು ಹಾಲು ಉತ್ಪಾದಕ ರೈತರಿಗೂ ಸಂಜೀವಿನಿಯಾಗಿತ್ತು. ಇದೀಗ ಪಾರ್ಲೆಜಿ ಕಂಪನಿಯೂ ನಷ್ಟದಲ್ಲಿದ್ದು 10,000 ನೌಕರರನ್ನು ಕಿತ್ತುಹಾಕಿದೆ. ಜಿ.ಎಸ್.ಟಿ ಮತ್ತು ನೋಟು ರದ್ಧತಿಯೇ ತಮ್ಮ ನಷ್ಟಕ್ಕೆ ಕಾರಣ ಎಂದು ಕಂಪನಿಯ ಆಡಳಿತಾಧಿಕಾರಿಗಳು ಹೇಳಿದ್ದಾರೆ. ಆದರೆ ಇಂತಹ ದೀರ್ಘ ಇತಿಹಾಸವಿರುವ ಕಂಪನಿಯನ್ನು “ಇದು ಭಾರತದ ಕಂಪನಿಯಲ್ಲ, ಅಲ್ಲಿ ಕೇವಲ 4 ಸಾವಿರ ಸಿಬ್ಬಂದಿ ಅಷ್ಟೇ ಇರೋದು, 10 ಸಾವಿರ ಎಲ್ಲಿಂದ?” ಎನ್ನುವ ಸುಳ್ಳು ಸಂದೇಶವನ್ನು ಬಿಜೆಪಿಯ ವಕ್ತಾರರೇ ಹಂಚುತ್ತಿದ್ದಾರೆ. ಅಂದರೆ ಬ್ರಿಟಾನಿಯ ಕಂಪನಿಯ 4 ಸಾವಿರ ಸಿಬ್ಬಂದಿಯನ್ನು ತೋರಿಸಿ ಪಾರ್ಲೆಜಿಗೆ ಹೋಲಿಸುವ ಸುಳ್ಳನ್ನು ಬಿತ್ತುತ್ತಿದ್ದಾರೆ. ಇದನ್ನು ನಂಬಿದ ಮುಗ್ದರು ಪಾರ್ಲೆಜಿಯನ್ನೂ ಸೋಮಾರಿಗಳು ಎನ್ನುತ್ತಿದ್ದಾರೆ.

ಇನ್ನೂ ನೂರಾರು ವರ್ಷಗಳ ಇತಿಹಾಸವಿರುವ ನೇಯ್ಗೆ ಕ್ಷೇತ್ರದ ತಮಿಳುನಾಡಿನಲ್ಲಿ ಒಂದೇ ಬಾರಿ 200 ಕಾರ್ಖಾನೆಗಳು ಮುಚ್ಚಿದವು, ಟೀ ಉತ್ಪಾದನಾ ಕ್ಷೇತ್ರವೂ ನಷ್ಟದಲ್ಲಿದೆ. ಈ ಎರಡು ಕ್ಷೇತ್ರಗಳು ಇತಿಹಾಸದಲ್ಲಿ ಮೊದಲ ಬಾರಿಗೆ “ನಾವು ನಷ್ಟದಲ್ಲಿದ್ದೇವೆ ನಮ್ಮನ್ನು ಕಾಪಾಡಿ” ಎನ್ನುವ ಪತ್ರಿಕಾ ಜಾಹೀರಾತನ್ನೇ ನೀಡಿದವು. ಈ ಗಂಭೀರತಯನ್ನು ಅರ್ಥ ಮಾಡಿಕೊಳ್ಳದೆ ಆ ನೇಕಾರ ಹಾಗೂ ರೈತ ಕಾರ್ಮಿಕರನ್ನೂ ಸೋಮಾರಿಗಳು ಎಂದರೆ ಅಂಬಾನಿಯ ಟ್ರಾಪ್ ಗೆ ನಾವು ಬಿದ್ದಂತೆಯೇ ಸರಿ.

ಇದೀಗ ಅತಿದೊಡ್ಡ ನಷ್ಟ ಹಾಗೂ ತಿಂಗಳಿಗೆ 15-20 ವರ್ಷಗಳ ಅನುಭವವಿದ್ದರೂ ನೂರಾರು ಕಾರ್ಮಿಕರನ್ನು ಕೆಲಸದಿಂದ ಕಿತ್ತುಹಾಕುತ್ತಿರುವ ಆಟೋಮೊಬೈಲ್ ಕ್ಷೇತ್ರಗಳಿಗೆ ಹತ್ತಾರು ವರ್ಷದ ಇತಿಹಾಸವಿದೆ ಹಾಗೂ ಲಕ್ಷಾಂತರ ಕಾರ್ಮಿಕರು/ಸಿಬ್ಬಂದಿಗಳು ಜಪಾನ್ ಟೆಕ್ನಾಲಜಿಯ ಅನುಸಾರ ಅಮಾನವೀಯವಾಗಿ ಸೆಕೆಂಡ್ ಲೆಕ್ಕದಲ್ಲಿ ಮಾನೇಸಾರ್, ಹೊಂಡಾ, ಟಿವಿಎಸ್, ಹಿರೋ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ? ಟಿವಿಎಸ್, ಟಾಟಾ ಕಂಪನಿಗಳು ಸಹ ನಷ್ಟಕ್ಕೆ ಸಿಲುಕಿವೆ. ಅದಕ್ಕೆ ಸೋಮಾರಿತನ ಕಾರಣವೇ?

ಹೀಗೆ ನಷ್ಟ ಅನುಭವಿಸುತ್ತಿರುವ ಎಲ್ಲರನ್ನು ಸೋಮಾರಿಗಳು ಎನ್ನುತ್ತಾ ಮುಖೇಶ್ ಅಂಬಾನಿ ಅಥವಾ ಇನ್ನೊಬ್ಬ ವ್ಯಕ್ತಿ ಮಾತ್ರ ‘ಕ್ರೀಯಾಶೀಲ’ ಎಂದು ನಾವು ಹೇಳುವುದಾದರೆ ಅದು ಮೋಸ ಎಂತಲೇ ಅರ್ಥ. ಏಕೆಂದರೆ ಅಂಬಾನಿಗೆ ಸರ್ಕಾರಗಳು ಲಕ್ಷ ಕೋಟಿಗಳ ಲೆಕ್ಕದಲ್ಲಿ ತೆರಿಗೆ ವಿನಾಯಿತಿ ನೀಡಿವೆ. ಅವರ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿವೆ. ಪುಕ್ಕಟೆಯಾಗಿ ಆತನ ಜಿಯೊ ಟೆಲಿಕಾಂಗೆ ಪ್ರಧಾನಿಗಳು ಜಾಹಿರಾತು ಕೊಟ್ಟಿದ್ದಾರೆ. ಆದರೆ ಇದನ್ನೆ ಸರ್ಕಾರಿ ಸಂಸ್ಥೆಗಳಿಗೆ ಅಥವಾ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಸಂಸ್ಥೆಗಳಿಗೆ ಏಕೆ ಮಾಡಲಿಲ್ಲ? ಕರ್ನಾಟಕ ಸಿದ್ದಾರ್ಥ್ ರವರ ಕಾಫಿಡೇ ಗೆ ಏಕೆ ನೆರವು ನೀಡಲಿಲ್ಲ? ಈ ಪ್ರಶ್ನೆಗೆ ಉತ್ತರಿಸುತ್ತೀರಾ?

ಹೀಗೆ ಸೋಮಾರಿ ಕಂಪನಿಗಳು ಎಂಬ ಸುಳ್ಳನ್ನು ಹಂಚುವುದರಿಂದ ನಾವು “ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕೃಷಿ, ಸಣ್ಣ ವ್ಯಾಪಾರಗಳು ಹಾಗೂ ಗುಡಿ ಕೈಗಾರಿಕೆಗಳನ್ನು ನಾಶ ಮಾಡುತ್ತೇವೆ, ಉದ್ಯೋಗವೇ ಸೃಷ್ಟಿಯಾಗದ ಏಕಸ್ವಾಮ್ಯ ಬಂಡವಾಳವಾದವನ್ನು ಬೆಳೆಸುವ ಮತ್ತು ನಿರುದ್ಯೋಗದ ಪರ ವಹಿಸಿದಂತಾಗುತ್ತದೆ.”

ಹಾಗಾದರೇ ಸೋಮಾರಿತನ ಇಲ್ಲವೇ? ಖಂಡಿತವಾಗಿಯೂ ಇದೆ! ಆರ್ಥಿಕತೆ ಹಿಂಜರಿತ, ನಿರುದ್ಯೋಗಕ್ಕೆ ಕಾರಣಗಳನ್ನು, ಅದರ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ, ತರ್ಕಬದ್ದವಾಗಿ ಓದುವುದರಲ್ಲಿ, ಸ್ವಂತ ವಿಚಾರ ಮಾಡುವುದರಲ್ಲಿ ಸೋಮಾರಿತನ ಇದ್ದೇಯಿದೆ. ಇದರಿಂದ ಹೊರಬರಬೇಕಿದೆ. ದೇಶಕ್ಕೆ ಎದುರಾಗಲಿರುವ ಅಪಾಯದಿಂದ ಉಳಿಸಬೇಕಿದೆ. ಮುನ್ನೋಟವನ್ನು ಕಟ್ಟಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಾರ್ವಜನಿಕ ವಲಯದ ಕಂಪೆನಿಗಳಾದ ಬಿ.ಇ.ಎಂ.ಎಲ್ , ಸೇರಿದಂತೆ ಅನೇಕ ಕಂಪೆನಿಗಳನ್ನು ಇಂದು ಖಾಸಗೀಯವರಿಗೆ ಪರಭಾರೆ ಮಾಡಿ ಸರಕಾರ ಕೈ ತೊಳೆದು ಕೊಳ್ಳಲು ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದೆ, ಅವರು ನೀಡುವ ಕಾರಣ ಹೆಚ್.ಎ.ಎಲ್ ಸೇರಿದಂತೆ ಎಲ್ಲವೂ ಕೂಡ ಒಂದೋ ನಷ್ಟದಲ್ಲಿ ಇದ್ದಾವೆ ಹಾಗೂ ಅವುಗಳ ಕಾರ್ಯಕ್ಷಮತೆ ಖಾಸಗೀಯವರ ತರಹ ಇಲ್ಲ ಎಂದು. ದುರಂತ ಎಂದರೆ ಸಾರ್ವಜನಿಕ ಉದ್ದಿಮೆಗಳಲ್ಲಿ ಇರುವ ನಮೋ ಭಕ್ತರು ಈ ಕಂಪೆನಿಗಳನ್ನು ಖಾಸಗೀ ಒಡೆತನಕ್ಕೆ ಮಾರಲು ತುದಿಗಾಲಿನಲ್ಲಿ ಕಾದಿದ್ದಾರೆ, ಆ ಮೂಲಕ ಪ್ರಧಾನ ಸೇವಕ ರ ಕೈ ಬಲಪಡಿಸುತ್ತಾರಂತೆ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...