Homeಎಕಾನಮಿಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

ಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

- Advertisement -
- Advertisement -

ಭಾರತದ ಆರ್ಥಿಕತೆ ಬೀಳುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ, ಆರ್.ಬಿ.ಐ. ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು “ಈ ದೇಶ ನಿರುದ್ಯೋಗದ ಟೈಂ ಬಾಂಬ್ ಮೇಲೆ ಕೂತಿದೆ” ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಈ ಟೈಂ ಬಾಂಬ್ ಸಿಡಿಯದೇ ದೇಶ ರಕ್ಷಣೆ ಹೇಗೆ ಮಾಡಬೇಕು ಎಂದು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ “ಕೆಲಸ ಮಾಡದ ಸೋಮಾರಿಗಳ ಕಂಪನಿಗಳು ಮಾತ್ರ ಮುಚ್ಚುತ್ತಿವೆ, ಅವುಗಳು ಇದ್ದೂ ಏನೂ ಪ್ರಯೋಜನವಿಲ್ಲ ಹೋಗ್ಲಿ ಬಿಡಿ, ದೇಶಕ್ಕೆ ಯಾವುದೇ ಅಪಾಯವಿಲ್ಲ” ಎಂದು ಮೋದಿಯ ಅಭಿಮಾನಿಗಳು ವಾದಿಸುತ್ತಿದ್ದಾರೆ. ಹಾಗಾದರೆ ನಷ್ಟದಲ್ಲಿರುವ ಕಂಪನಿಗಳು/ಕಾರ್ಖಾನೆಗಳೆಲ್ಲಾ ಸೋಮಾರಿಗಳಾ? ನಷ್ಟದಲ್ಲಿರುವ ಕಂಪನಿಗಳು ಈಗ ಮೂರಂಕೆಯ ಸಂಖ್ಯೆ ದಾಟಿವೆಯಾದರೂ ಇಲ್ಲಿ ಕೆಲವನ್ನು ಮಾತ್ರ ನೋಡೋಣ.

ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರ ಕೃಷಿ. ಇದೀಗ ಕೃಷಿ ಲಾಭದಾಯಕದ ಮಾತು ಹಾಗಿರಲಿ ಕೃಷಿಯಲ್ಲಿ ತೊಡಗಿರುವ ಮುಂದೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಹಾಗೂ ರೈತ ಕಾರ್ಮಿಕರ ಬದುಕನ್ನು ಉಳಿಸಿಕೊಳ್ಳಲು ನಾವೆಲ್ಲಾ ಪರದಾಡುತ್ತಿರುವ ಸಂದರ್ಭದಲ್ಲಿದ್ದೇವೆ. ರೈತರನ್ನು ಸೋಮಾರಿಗಳು ಕಷ್ಟಪಟ್ಟು ದುಡಿಯದವರು ಎಂದು ವಾದ ಮಾಡುವುದಾದರೆ ಇದು ಆತ್ಮವಂಚನೆ ಅಲ್ಲವೇ? ‘ಕೃಷಿ ಆತ್ಮಹತ್ಯೆ ಕ್ಷೇತ್ರ’ವಾಗಿದ್ದು ಮೋದಿಯ ಕಾಲದಲ್ಲೇ ಅಲ್ಲ. ಇದಕ್ಕೆ ಕಾಂಗ್ರೆಸ್ ಆಡಳಿತವೂ ಸೇರಿ ಕಾರಣವಾಗಿದೆ. ಆದರೆ ದುರಾದೃಷ್ಟವಶಾತ್ ಹೋಲಿಸಿ ನೋಡಲು ರೈತರ ಆತ್ಮಹತ್ಯೆಯ ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಲೇ ಇಲ್ಲ! ಇಂದಿಗೂ ಸಾಪೇಕ್ಷವಾಗಿ ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಹಿಂದಿನ ಸರ್ಕಾರಗಳು ಕಾರಣವಾಗಿರುವುದು ನಿಜವೇ ಆದರೂ ಮೋದಿ ‘ಆಳ್ವಿಕೆಯಲ್ಲಿ’ ನಷ್ಟ ಕಂಡ/ಕಾಣುತ್ತಿರುವ ಸಂಸ್ಥೆಯ ಬಗ್ಗೆ ಗಮನಹರಿಸೋಣ.

ಎಚ್.ಎ.ಎಲ್: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು 1940 ರಿಂದಲೂ ಬಾಹ್ಯಾಕಾಶಕ್ಕೆ ಕೊಡುಗೆ ನೀಡುತ್ತಾ ಬಂದಿದೆ. 1964 ರಿಂದ ಹಿಂದುಸ್ತಾನ್ ಏರ್ ಕ್ರಾಫ್ಟ್ ನಿಂದ ಎಚ್.ಎ.ಎಲ್ ಎಂದು ಮರುನಾಮಕರಣಗೊಂಡು ಬಾಹ್ಯಾಕಾಶ ಹಾಗೂ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸೇನೆಗೆ ಧೃವ್, ಚೇತಕ್, ಲ್ಯಾನ್ಸರ್ ಇನ್ನೂ ಮುಂತಾದ ಹೆಲಿಕಾಪ್ಟರ್ ಅನ್ನು ನೀಡಿದೆ. ಹಾಗೂ ಎಲ್.ಸಿ.ಎ, ಎಚ್ ಟಿಟಿ-40, ಐಜೆಟಿ ನಂತಹ ಯುದ್ಧ ವಿಮಾನಗಳನ್ನೂ ಕೊಡೆಗೆಯಾಗಿ ನೀಡಿದೆ. ಇದಲ್ಲದೆ ಫೈಟರ್ ಜೆಟ್, ಪವರ್ ಪ್ಲಾಂಟ್, ಹಲವಾರು ಬೇರೆ ಬೇರೆ ಉಪಕರಣಗಳನ್ನು ನೀಡಿದೆ.

ಸದ್ಯಕ್ಕೆ 32,108 (2014 ರ ಗಣತಿ) ಜನರು ಈ ಸರ್ಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಐತಿಹಾಸಿಕ ಸಂಸ್ಥೆ ನಮ್ಮ ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆಯೇ ಸರಿ. (ರಾಫೇಲ್ ಒಪ್ಪಂದದ ಚರ್ಚೆಯಲ್ಲಿ ಕೇಂದ್ರದ ಮಂತ್ರಿಗಳು ಎಚ್.ಎ.ಎಲ್ ಕಾರ್ಯಕ್ಷಮತೆ ಚೆನ್ನಾಗಿಲ್ಲ ಹಾಗಾಗಿ ಅಂಬಾನಿಗೆ ಈ ಒಪ್ಪಂದ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅಂಬಾನಿ ತನ್ನ ಜೀವನದಲ್ಲಿ ಒಂದೂ ಯುದ್ಧ ವಿಮಾನವನ್ನು ತಯಾರು ಮಾಡಿಲ್ಲ ಹಾಗು ಅಂತಹ ಘಟಕ ಆತನ ಬಳಿ ಇಲ್ಲ ಎನ್ನುವುದು ವಾಸ್ತವ. ಇತಿಹಾಸ ತಿಳಿಯದ ಮುಗ್ಧರು ಇದನ್ನೇ ಸತ್ಯವೆಂದು ತಿಳಿದು ವಾದಿಸುವುದು ದುರಂತ) ಇಂತಹ ಎಚ್.ಎ.ಎಲ್ ಸಂಸ್ಥೆ ಇತಿಹಾಸದಲ್ಲೇ ಪ್ರಥಮ ಬಾರಿಗೆ (ಜನವರಿ, 2019) ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲದೆ 1,000 ಕೋಟಿ ರೂ ಸಾಲವನ್ನು ಮಾಡಿತ್ತು! ಈಗಲೂ ಒಟ್ಟಾರೆ ಆದಾಯ ಏರಿಕೆ ಕಂಡಿಲ್ಲ. ಈ ಸಂಸ್ಥೆಯನ್ನು ಸೋಮಾರಿ ಸಂಸ್ಥೆ ಎಂದರೆ ಆತ್ಮವಂಚನೆಯ ಕೆಲಸವಲ್ಲದೆ ಮತ್ತೇನು?

ಬಿ.ಎಸ್.ಎನ್.ಎಲ್: 2000 ನೇ ಇಸವಿಯಲ್ಲಿ ಶುರುವಾಗಿರುವ ಈ ಸಂಸ್ಥೆಯ ವಾರಸುದಾರರು ಭಾರತ ಸರ್ಕಾರವಾಗಿದೆ. 1,74,216 ಸಿಬ್ದಂದಿಗಳಿರುವ ಈ ಸಂಸ್ಥೆ ಹಳ್ಳಿ ಹಳ್ಳಿಗೂ ದೂರವಾಣಿ ಸಂಪರ್ಕವನ್ನು ನೀಡಿದ ಮೊಟ್ಟ ಮೊದಲ ಸಂಸ್ಥೆಯಾಗಿದೆ. ಈ ಸಂಸ್ಥೆಯ ಬಲವರ್ಧನೆಗೆ ಕೆಲಸ ಮಾಡದ ಸರ್ಕಾರ ಜಿಯೋ ಎನ್ನುವ ಖಾಸಗೀ ವ್ಯಕ್ತಿಯೊಬ್ಬನ ಟೆಲಿಕಾಂ ಪ್ರಚಾರಕ್ಕಾಗಿ ದೇಶದ ಪ್ರಧಾನ ಮಂತ್ರಿಗಳೇ ಅಧಿಕೃತ ರಾಯಭಾರಿ ಆಗಿದ್ದು ನಿಜಕ್ಕೂ ದೇಶದ ಬಹುದೊಡ್ಡ ದುರಂತ. ಈಗ ಬಿ.ಎಸ್.ಎನ್.ಎಲ್ ಸಂಸ್ಥೆ ನಷ್ಟದಲ್ಲಿದ್ದು ವರಮಾನ ಇಳಿಮುಖ ಕಾಣುತ್ತಿದೆ. ಇದರ ಆಪರೇಷನಲ್ ಇನ್ಕಂ -14,000 ಕೋಟಿ (ಮೈನಸ್). ಹೀಗಾಗಿ ಸಿಬ್ಬಂದಿಗಳ ವೇತನಕ್ಕೂ ತೊಂದರೆಯಾಗುತ್ತಿದೆ. ಈಗ ಸಂಸ್ಥೆಯ ಬಲವರ್ಧನೆಗೆ ದುಡಿಯದ ಸರ್ಕಾರವನ್ನು ಬಿಟ್ಟು 1,74,216 ಜನರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ?

2013ರಲ್ಲಿ ನಂ.1 ಬ್ರಾಂಡ್ ಆಗಿದ್ದ ಭಾರತದ ಪಾರ್ಲೇಜಿ ಕಂಪನಿ 1939 ರಿಂದಲೂ ಕೆಲಸ ಮಾಡುತ್ತಿದೆ. ಅಲ್ಲದೆ ಇದು ಹಾಲು ಉತ್ಪಾದಕ ರೈತರಿಗೂ ಸಂಜೀವಿನಿಯಾಗಿತ್ತು. ಇದೀಗ ಪಾರ್ಲೆಜಿ ಕಂಪನಿಯೂ ನಷ್ಟದಲ್ಲಿದ್ದು 10,000 ನೌಕರರನ್ನು ಕಿತ್ತುಹಾಕಿದೆ. ಜಿ.ಎಸ್.ಟಿ ಮತ್ತು ನೋಟು ರದ್ಧತಿಯೇ ತಮ್ಮ ನಷ್ಟಕ್ಕೆ ಕಾರಣ ಎಂದು ಕಂಪನಿಯ ಆಡಳಿತಾಧಿಕಾರಿಗಳು ಹೇಳಿದ್ದಾರೆ. ಆದರೆ ಇಂತಹ ದೀರ್ಘ ಇತಿಹಾಸವಿರುವ ಕಂಪನಿಯನ್ನು “ಇದು ಭಾರತದ ಕಂಪನಿಯಲ್ಲ, ಅಲ್ಲಿ ಕೇವಲ 4 ಸಾವಿರ ಸಿಬ್ಬಂದಿ ಅಷ್ಟೇ ಇರೋದು, 10 ಸಾವಿರ ಎಲ್ಲಿಂದ?” ಎನ್ನುವ ಸುಳ್ಳು ಸಂದೇಶವನ್ನು ಬಿಜೆಪಿಯ ವಕ್ತಾರರೇ ಹಂಚುತ್ತಿದ್ದಾರೆ. ಅಂದರೆ ಬ್ರಿಟಾನಿಯ ಕಂಪನಿಯ 4 ಸಾವಿರ ಸಿಬ್ಬಂದಿಯನ್ನು ತೋರಿಸಿ ಪಾರ್ಲೆಜಿಗೆ ಹೋಲಿಸುವ ಸುಳ್ಳನ್ನು ಬಿತ್ತುತ್ತಿದ್ದಾರೆ. ಇದನ್ನು ನಂಬಿದ ಮುಗ್ದರು ಪಾರ್ಲೆಜಿಯನ್ನೂ ಸೋಮಾರಿಗಳು ಎನ್ನುತ್ತಿದ್ದಾರೆ.

ಇನ್ನೂ ನೂರಾರು ವರ್ಷಗಳ ಇತಿಹಾಸವಿರುವ ನೇಯ್ಗೆ ಕ್ಷೇತ್ರದ ತಮಿಳುನಾಡಿನಲ್ಲಿ ಒಂದೇ ಬಾರಿ 200 ಕಾರ್ಖಾನೆಗಳು ಮುಚ್ಚಿದವು, ಟೀ ಉತ್ಪಾದನಾ ಕ್ಷೇತ್ರವೂ ನಷ್ಟದಲ್ಲಿದೆ. ಈ ಎರಡು ಕ್ಷೇತ್ರಗಳು ಇತಿಹಾಸದಲ್ಲಿ ಮೊದಲ ಬಾರಿಗೆ “ನಾವು ನಷ್ಟದಲ್ಲಿದ್ದೇವೆ ನಮ್ಮನ್ನು ಕಾಪಾಡಿ” ಎನ್ನುವ ಪತ್ರಿಕಾ ಜಾಹೀರಾತನ್ನೇ ನೀಡಿದವು. ಈ ಗಂಭೀರತಯನ್ನು ಅರ್ಥ ಮಾಡಿಕೊಳ್ಳದೆ ಆ ನೇಕಾರ ಹಾಗೂ ರೈತ ಕಾರ್ಮಿಕರನ್ನೂ ಸೋಮಾರಿಗಳು ಎಂದರೆ ಅಂಬಾನಿಯ ಟ್ರಾಪ್ ಗೆ ನಾವು ಬಿದ್ದಂತೆಯೇ ಸರಿ.

ಇದೀಗ ಅತಿದೊಡ್ಡ ನಷ್ಟ ಹಾಗೂ ತಿಂಗಳಿಗೆ 15-20 ವರ್ಷಗಳ ಅನುಭವವಿದ್ದರೂ ನೂರಾರು ಕಾರ್ಮಿಕರನ್ನು ಕೆಲಸದಿಂದ ಕಿತ್ತುಹಾಕುತ್ತಿರುವ ಆಟೋಮೊಬೈಲ್ ಕ್ಷೇತ್ರಗಳಿಗೆ ಹತ್ತಾರು ವರ್ಷದ ಇತಿಹಾಸವಿದೆ ಹಾಗೂ ಲಕ್ಷಾಂತರ ಕಾರ್ಮಿಕರು/ಸಿಬ್ಬಂದಿಗಳು ಜಪಾನ್ ಟೆಕ್ನಾಲಜಿಯ ಅನುಸಾರ ಅಮಾನವೀಯವಾಗಿ ಸೆಕೆಂಡ್ ಲೆಕ್ಕದಲ್ಲಿ ಮಾನೇಸಾರ್, ಹೊಂಡಾ, ಟಿವಿಎಸ್, ಹಿರೋ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ? ಟಿವಿಎಸ್, ಟಾಟಾ ಕಂಪನಿಗಳು ಸಹ ನಷ್ಟಕ್ಕೆ ಸಿಲುಕಿವೆ. ಅದಕ್ಕೆ ಸೋಮಾರಿತನ ಕಾರಣವೇ?

ಹೀಗೆ ನಷ್ಟ ಅನುಭವಿಸುತ್ತಿರುವ ಎಲ್ಲರನ್ನು ಸೋಮಾರಿಗಳು ಎನ್ನುತ್ತಾ ಮುಖೇಶ್ ಅಂಬಾನಿ ಅಥವಾ ಇನ್ನೊಬ್ಬ ವ್ಯಕ್ತಿ ಮಾತ್ರ ‘ಕ್ರೀಯಾಶೀಲ’ ಎಂದು ನಾವು ಹೇಳುವುದಾದರೆ ಅದು ಮೋಸ ಎಂತಲೇ ಅರ್ಥ. ಏಕೆಂದರೆ ಅಂಬಾನಿಗೆ ಸರ್ಕಾರಗಳು ಲಕ್ಷ ಕೋಟಿಗಳ ಲೆಕ್ಕದಲ್ಲಿ ತೆರಿಗೆ ವಿನಾಯಿತಿ ನೀಡಿವೆ. ಅವರ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿವೆ. ಪುಕ್ಕಟೆಯಾಗಿ ಆತನ ಜಿಯೊ ಟೆಲಿಕಾಂಗೆ ಪ್ರಧಾನಿಗಳು ಜಾಹಿರಾತು ಕೊಟ್ಟಿದ್ದಾರೆ. ಆದರೆ ಇದನ್ನೆ ಸರ್ಕಾರಿ ಸಂಸ್ಥೆಗಳಿಗೆ ಅಥವಾ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಸಂಸ್ಥೆಗಳಿಗೆ ಏಕೆ ಮಾಡಲಿಲ್ಲ? ಕರ್ನಾಟಕ ಸಿದ್ದಾರ್ಥ್ ರವರ ಕಾಫಿಡೇ ಗೆ ಏಕೆ ನೆರವು ನೀಡಲಿಲ್ಲ? ಈ ಪ್ರಶ್ನೆಗೆ ಉತ್ತರಿಸುತ್ತೀರಾ?

ಹೀಗೆ ಸೋಮಾರಿ ಕಂಪನಿಗಳು ಎಂಬ ಸುಳ್ಳನ್ನು ಹಂಚುವುದರಿಂದ ನಾವು “ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕೃಷಿ, ಸಣ್ಣ ವ್ಯಾಪಾರಗಳು ಹಾಗೂ ಗುಡಿ ಕೈಗಾರಿಕೆಗಳನ್ನು ನಾಶ ಮಾಡುತ್ತೇವೆ, ಉದ್ಯೋಗವೇ ಸೃಷ್ಟಿಯಾಗದ ಏಕಸ್ವಾಮ್ಯ ಬಂಡವಾಳವಾದವನ್ನು ಬೆಳೆಸುವ ಮತ್ತು ನಿರುದ್ಯೋಗದ ಪರ ವಹಿಸಿದಂತಾಗುತ್ತದೆ.”

ಹಾಗಾದರೇ ಸೋಮಾರಿತನ ಇಲ್ಲವೇ? ಖಂಡಿತವಾಗಿಯೂ ಇದೆ! ಆರ್ಥಿಕತೆ ಹಿಂಜರಿತ, ನಿರುದ್ಯೋಗಕ್ಕೆ ಕಾರಣಗಳನ್ನು, ಅದರ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ, ತರ್ಕಬದ್ದವಾಗಿ ಓದುವುದರಲ್ಲಿ, ಸ್ವಂತ ವಿಚಾರ ಮಾಡುವುದರಲ್ಲಿ ಸೋಮಾರಿತನ ಇದ್ದೇಯಿದೆ. ಇದರಿಂದ ಹೊರಬರಬೇಕಿದೆ. ದೇಶಕ್ಕೆ ಎದುರಾಗಲಿರುವ ಅಪಾಯದಿಂದ ಉಳಿಸಬೇಕಿದೆ. ಮುನ್ನೋಟವನ್ನು ಕಟ್ಟಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಾರ್ವಜನಿಕ ವಲಯದ ಕಂಪೆನಿಗಳಾದ ಬಿ.ಇ.ಎಂ.ಎಲ್ , ಸೇರಿದಂತೆ ಅನೇಕ ಕಂಪೆನಿಗಳನ್ನು ಇಂದು ಖಾಸಗೀಯವರಿಗೆ ಪರಭಾರೆ ಮಾಡಿ ಸರಕಾರ ಕೈ ತೊಳೆದು ಕೊಳ್ಳಲು ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದೆ, ಅವರು ನೀಡುವ ಕಾರಣ ಹೆಚ್.ಎ.ಎಲ್ ಸೇರಿದಂತೆ ಎಲ್ಲವೂ ಕೂಡ ಒಂದೋ ನಷ್ಟದಲ್ಲಿ ಇದ್ದಾವೆ ಹಾಗೂ ಅವುಗಳ ಕಾರ್ಯಕ್ಷಮತೆ ಖಾಸಗೀಯವರ ತರಹ ಇಲ್ಲ ಎಂದು. ದುರಂತ ಎಂದರೆ ಸಾರ್ವಜನಿಕ ಉದ್ದಿಮೆಗಳಲ್ಲಿ ಇರುವ ನಮೋ ಭಕ್ತರು ಈ ಕಂಪೆನಿಗಳನ್ನು ಖಾಸಗೀ ಒಡೆತನಕ್ಕೆ ಮಾರಲು ತುದಿಗಾಲಿನಲ್ಲಿ ಕಾದಿದ್ದಾರೆ, ಆ ಮೂಲಕ ಪ್ರಧಾನ ಸೇವಕ ರ ಕೈ ಬಲಪಡಿಸುತ್ತಾರಂತೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...