Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್ : ಮದ್ಯದ ನಶೆಯಲ್ಲಿ ಹುಲಿಯ ತಲೆ ಸವರಿಸಿದ ವ್ಯಕ್ತಿ...ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ಫ್ಯಾಕ್ಟ್‌ಚೆಕ್ : ಮದ್ಯದ ನಶೆಯಲ್ಲಿ ಹುಲಿಯ ತಲೆ ಸವರಿಸಿದ ವ್ಯಕ್ತಿ…ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

- Advertisement -
- Advertisement -

ರಾತ್ರಿ ಹೊತ್ತು ರಸ್ತೆಯಲ್ಲಿ ಕುಳಿತಿರುವ ಹುಲಿಯೊಂದರ ತಲೆ ಸವರುವ ವ್ಯಕ್ತಿ, ತನ್ನ ಕೈಯ್ಯಲ್ಲಿದ್ದ ಮದ್ಯದ ಬಾಟಲಿಯಿಂದ ಹುಲಿಗೆ ಮದ್ಯ ಕುಡಿಸಲು ಯತ್ನಿಸಿದ 6 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇದು ಮಧ್ಯಪ್ರದೇಶದಲ್ಲಿ ನಡೆದ ಘಟನೆ ಎಂದು ಈ ವಿಡಿಯೋ ಕುರಿತು ಕೆಲ ಮುಖ್ಯ ವಾಹಿನಿ ಮಾಧ್ಯಮಗಳು ಕೂಡ ಸುದ್ದಿ ಮಾಡಿವೆ. ಅನೇಕ ಪ್ರಮುಖ ವ್ಯಕ್ತಿಗಳೇ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಲು ಸಿಸಿಟಿವಿ ಕ್ಯಾಮಾರದಲ್ಲಿ ರೆಕಾರ್ಡ್ ಆದ ದೃಶ್ಯದಂತಿದೆ.

“ರಾಜು ಎಂಬ 52 ವರ್ಷದ ವ್ಯಕ್ತಿ ತಡರಾತ್ರಿ ಮದ್ಯಪಾನ ಮಾಡಿ, ಇಸ್ಪೀಟ್ ಆಡಿದ ಬಳಿಕ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹರಡಿಕೊಂಡಿರುವ ಪೆಂಚ್ ಹುಲಿ ಅಭಯಾರಣ್ಯದಿಂದ ಅಲೆದಾಡುತ್ತಾ ಬಂದ ಹುಲಿ ರಸ್ತೆ ಮಧ್ಯೆ ಕುಳಿತಿತ್ತು. ಅದನ್ನು ದೊಡ್ಡ ಬೆಕ್ಕು ಎಂದುಕೊಂಡ ರಾಜು ತಲೆ ಸವರಿ ಮದ್ಯ ಕುಡಿಸಿದ್ದಾರೆ. ಕೊನೆಗೆ ಅರಣ್ಯ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹುಲಿಗೆ ಮದ್ಯ ಕುಡಿಸಿದ ರಾಜು ಸ್ಥಳೀಯ ಮಟ್ಟದಲ್ಲಿ ಹೀರೋ ಆಗಿದ್ದಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡ ಕೆಲವರು ಬರೆದುಕೊಂಡಿದ್ದಾರೆ.

@808constituent ಎಂಬ ಎಕ್ಸ್ ಬಳಕೆದಾರ ಅಕ್ಟೋಬರ್ 23, 2025ರಂದು ವೈರಲ್ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದರು. ಈ ವರದಿ ಬರೆಯುವ ಹೊತ್ತಿಗೆ ಆ ಪೋಸ್ಟ್ 68 ಸಾವಿರ ವೀಕ್ಷಣೆಗಳನ್ನು ಪಡೆದಿತ್ತು. ಅವರು ಪೋಸ್ಟ್ ಮಾಡಿರುವ ವಿಡಿಯೋ ಈಗಲೂ ಎಕ್ಸ್‌ನಲ್ಲಿ ಇದೆ. ಎಕ್ಸ್‌ ಇದುವರೆಗೆ ವಿಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಒಳಗೊಂಡ ಸುದ್ದಿ ಪೋರ್ಟಲ್ ‘ಗ್ರೇಟರ್ ಆಂಧ್ರ ನ್ಯೂಸ್’ ಕೂಡ ಅಕ್ಟೋಬರ್ 29ರಂದು ವೈರಲ್ ವಿಡಿಯೋವನ್ನು ಹಂಚಿಕೊಂಡಿತ್ತು. ಇದೂ ಕೂಡ ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನವನದ ಸಿಸಿಟಿವಿ ದೃಶ್ಯ ಎಂದು ಹೇಳಿತ್ತು.

ರಿದ್ಧಿ ರಣಥಂಬೋರ್ ಸಫಾರಿ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವೈರಲ್ ಕ್ಲಿಪ್ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿರುವುದರಿಂದ ನಾವು ಇದರ ಸತ್ಯಾಸತ್ಯತೆ ತಿಳಿಯಲು ಮುಂದಾದೆವು. ಮೊದಲು ನಾವು ಈ ವಿಡಿಯೋ ಕುರಿತು ಯಾವುದಾದರು ಮಾಧ್ಯಮಗಳಲ್ಲಿ ಸುದ್ದಿ ಆಗಿದೆಯೇ ಎಂದು ಪರಿಶೀಲಿಸಿದೆವು.

ಈ ವೇಳೆ ಕೆಲ ಕನ್ನಡ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಿರುವುದು ಕಂಡು ಬಂದಿದೆ. ಇತರ ಭಾಷೆಗಳ ಮಾಧ್ಯಮಗಳ ಪೇಜ್‌ಗಳಲ್ಲೂ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಆದರೂ, ನಮಗೆ ಆ ಮಾಧ್ಯಮಗಳ ಸುದ್ದಿಯ ನಿಖರತೆಯ ಬಗ್ಗೆ ಅನುಮಾನ ಮೂಡಿತು. ಹಾಗಾಗಿ, ವಿಡಿಯೋದ ಸತ್ಯಾಸತ್ಯತೆ ಕುರಿತು ಹೆಚ್ಚಿನ ಮಾಹಿತಿ ಹುಡುಕಾಡಿದೆವು.

ಈ ವೇಳೆ ಆಲ್ಟ್ ನ್ಯೂಸ್, ಫ್ಯಾಕ್ಟ್‌ಲೀ ಸೇರಿದಂತೆ ಅನೇಕ ಫ್ಯಾಕ್ಟ್ ಚೆಕ್ ಸುದ್ದಿ ಸಂಸ್ಥೆಗಳು ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ಮಾಡಿರುವುದು ಕಂಡು ಬಂದಿದೆ.

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಲವಾರು ದೃಶ್ಯ ವ್ಯತ್ಯಾಸಗಳು ಕಂಡು ಬರುತ್ತವೆ. ಇದು ವಿಡಿಯೋವನ್ನು ಕೃತಕವಾಗಿ ರಚಿಸಿರುವುದನ್ನು ಸೂಚಿಸುತ್ತದೆ. ಉದಾಹರಣೆಗೆ : ಮನುಷ್ಯ ಹುಲಿಯನ್ನು ಮುದ್ದಿಸುತ್ತಿದ್ದಂತೆ, ಮದ್ಯದ ಬಾಟಲಿಯ ಕುತ್ತಿಗೆಯ ಗಾತ್ರ ಕಡಿಮೆಯಾಗುತ್ತದೆ ಮತ್ತು ನಂತರ ಅದರ ಮೂಲ ಗಾತ್ರಕ್ಕೆ ಮರಳುತ್ತದೆ. ಇದಲ್ಲದೆ, ಹಿಂದುಗಡೆ ಮನೆಯ ವರಾಂಡಾದಲ್ಲಿ ಕುಳಿತಿರುವ ಇಬ್ಬರು ವ್ಯಕ್ತಿಗಳ ಚಲನೆಯು ವಿರೂಪಗೊಂಡಂತೆ ಕಾಣುತ್ತದೆ. ಇದು ಕೃತಕವಾಗಿ ರಚಿಸಲಾದ ಕ್ಲಿಪ್‌ಗಳ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ ಎಂದು ಅಲ್ಟ್‌ ನ್ಯೂಸ್ ಹೇಳಿದೆ.

ವೈರಲ್ ವಿಡಿಯೋ ಕುರಿತು ಮಾಹಿತಿ ಪಡೆಯಲು ನಾವು ಪೆಂಚ್ ಹುಲಿ ಸಂರಕ್ಷಿತ ಅಭಯಾರಣ್ಯದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ನಮ್ಮ ಸಂಪರ್ಕಕ್ಕೆ ಅವರು ಸಿಕ್ಕಿಲ್ಲ. ಆದರೆ, ಅಕ್ಟೋಬರ್ 29ರಂದು ‘ದಿ ಸೂತ್ರ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ವರದಿಯಲ್ಲಿ, “ಮೀಸಲು ಅರಣ್ಯ ಪ್ರದೇಶದ ಉಪ ನಿರ್ದೇಶಕ ರಜನೀಶ್ ಸಿಂಗ್ ಅವರು ವೈರಲ್ ವಿಡಿಯೋ ಪೆಂಚ್ ಅಭಯಾರಣ್ಯದ ಪ್ರದೇಶದ್ದು ಎಂಬುವುದನ್ನು ತಳ್ಳಿ ಹಾಕಿದ್ದನ್ನು ಉಲ್ಲೇಖಿಸಲಾಗಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.

ನಮಗೆ ಲಭ್ಯವಾದ ಮಾಹಿತಿ, ವಿಡಿಯೋದಲ್ಲಿ ಕಾಣುವ ಕೆಲ ಸೂಕ್ಷ ವ್ಯತ್ಯಾಸಗಳಿಂದ ವೈರಲ್ ವಿಡಿಯೋ ಕೃತಕ ಬುದ್ದಿಮತ್ತೆ (ಎಐ) ಮೂಲಕ ಸೃಷ್ಟಿಸಿದ್ದು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇನೆ. ಅಲ್ಲದೆ, ಅಕ್ಟೋಬರ್ 4ರಂದು ಪೆಂಚ್ ಅರಣ್ಯದಿಂದ ಹುಲಿ ತಪ್ಪಿಸಿಕೊಂಡ ಬಗ್ಗೆ ಎಲ್ಲೂ ಅಧಿಕೃತ ವರದಿಯಾಗಿಲ್ಲ ಎಂದು ಅಲ್ಟ್ ನ್ಯೂಸ್ ಹೇಳಿದೆ.

ವೈರಲ್ ವಿಡಿಯೋ ನಕಲಿ ಎಂದು ಪೆಂಚ್ ಟೈಗರ್ ರಿಸರ್ವ್ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂಬ ಭಾಸ್ಕರ್ ಇಂಗ್ಲಿಷ್ ವರದಿ ನಮಗೆ ಲಭ್ಯವಾಗಿದೆ ಎಂದು ಫ್ಯಾಕ್ಟ್‌ಚೆಕ್ ಸುದ್ದಿ ವೆಬ್‌ಸೈಟ್ ಫ್ಯಾಕ್ಟ್‌ಲೀ ಹೇಳಿದೆ.

ನಾವು ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕ ರಜನೀಶ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ವೈರಲ್ ವಿಡಿಯೋ ನಕಲಿ ಎಂದು ದೃಢಪಡಿಸಿದ್ದಾರೆ. ಇತ್ತೀಚೆಗೆ ಹುಲಿಗೆ ಸಂಬಂಧಿಸಿದ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಫ್ಯಾಕ್ಟ್‌ಲೀ ತಿಳಿಸಿದೆ.

ಎಐ ವಿಷಯಗಳ ಪತ್ತೆ ಸಾಧನ ‘ಹೈವ್ ಮಾಡರೇಶನ್‌’ ಮೂಲಕ ನಾವು ವಿಡಿಯೋವನ್ನು ಪರಿಶೀಲಿಸಿದ್ದೇವೆ. ಅದು ವೈರಲ್ ವಿಡಿಯೋ ಶೇಕಡ 99ರಷ್ಟು ಎಐ ರಚಿತ ಎಂದು ಹೇಳಿದೆ. ವಿಡಿಯೋ ಕೃತವಾಗಿ ರಚಿತವಾಗಿದ್ದು ಎಂಬುವುದನ್ನು ಬಲವಾಗಿ ಹೇಳಿದೆ ಎಂದು ಫ್ಯಾಕ್ಟ್‌ಲೀ ತಿಳಿಸಿದೆ. ಹಾಗಾಗಿ, ವೈರಲ್ ವಿಡಿಯೋ ಎಐ ರಚಿತ ಎಂದಿದೆ.

FACT CHECK | ಆರ್‌ಎಸ್ಎಸ್ ಶತಮಾನೋತ್ಸವ ಪ್ರಯುಕ್ತ ನೆದರ್‌ಲ್ಯಾಂಡ್‌ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿರುವುದು ನಿಜಾನಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ಅಂತರ್ಜಾತಿ ವಿವಾಹ, ಸೊಸೆಯ ಕುಟುಂಬದವರಿಂದ ದಲಿತ ವ್ಯಕ್ತಿ ಕೊಲೆ.

ವಧುವಿನ ಕುಟುಂಬವು ಈ ಹಿಂದೆ ವರನ ತಂದೆಯನ್ನು ಬೆದರಿಸಿ ಸೊಸೆಯನ್ನು ತಮ್ಮ ಮನೆಗೆ ವಾಪಸ್‌ ಕಳುಹಿಸಲು ಒತ್ತಾಯಿಸಿತ್ತು ಎಂದು ವರನ ಕುಟುಂಬದವರು ಆರೋಪಿಸಿದ್ದಾರೆ. ಗುಜರಾತ್‌ ನ ನರೋಲ್‌ ಬಳಿ ಅಂತರ್ಜಾತಿ ವಿವಾಹವಾದ ನಂತರ ಮೇಲ್ಜಾತಿಗೆ...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ-ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ಬಿಹಾರದ ಒಂದೇ ಎಂಜಿನ್ ಸರ್ಕಾರ ಕೇಂದ್ರದಿಂದ ನಡೆಸಲ್ಪಡುತ್ತಿದೆ: ಪ್ರಿಯಾಂಕಾ ಗಾಂಧಿ

ಮುಂಬರುವ ರಾಜ್ಯ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಬಿಹಾರದ ಜನರಲ್ಲಿ ಮನವಿ ಮಾಡಿದರು. ಬೇಗುಸರಾಯ್‌ನಲ್ಲಿ ನಡೆದ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಬಿಹಾರದ ಎನ್‌ಡಿಎ ಸರ್ಕಾರದ ಉದ್ದೇಶಗಳು...

‘ನನ್ನ ಮಾತು ಕೇಳಿದ್ದರೆ ಯಡಿಯೂರಪ್ಪ ಜೈಲಿಗೆ ಹೋಗುತ್ತಿರಲಿಲ್ಲ’: ಜಮೀರ್ ಅಹಮದ್ ಖಾನ್

ಹೊಸಪೇಟೆ: ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ, ಹಣಕಾಸು ನಿರ್ವಹಣೆ ವಿಚಾರಣೆಯಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯುವಂತೆ ಸೂಚಿಸಿದ್ದೆ, ನನ್ನ ಮಾತನ್ನು ತಿರಸ್ಕರಿಸಿ, ಯಡಿಯೂರಪ್ಪನವರು ಜೈಲಿಗೆ ಹೋಗುವಂತಾಯಿತು. ನನ್ನ ಮಾತು...

ಮಸೀದಿ ಧ್ವಂಸಕ್ಕೆ ‘ಜೈಶ್ರೀರಾಮ್-ಜೈ ಬಜರಂಗಬಲಿ’ ಘೋಷಣೆ ಸಾಧನವಾಗಿ ಬಳಸಲಾಗುತ್ತಿದೆ: ಸ್ವಾಮಿ ಪ್ರಸಾದ್ ಮೌರ್ಯ

ಬಿಜೆಪಿ ಆಡಳಿತದಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಈಗ ಜೈ ಶ್ರೀ...

ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಕಾಲ್ತುಳಿತ: ಆಯೋಜಕರ ಮೇಲೆ ಆರೋಪ ಹೊರಿಸಿದ ಆಂಧ್ರ ಮುಖ್ಯಮಂತ್ರಿ

ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗಾ ಪ್ರದೇಶದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹತ್ತು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡ ಘಟನೆಯ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವು ಖಾಸಗಿ ವ್ಯಕ್ತಿಗೆ ಸೇರಿದ್ದು,...

ದೆಹಲಿ ವಿಷಕಾರಿ ಗಾಳಿ: ಪ್ರತಿ ಏಳು ಸಾವುಗಳಲ್ಲಿ ಒಂದು ಮಾಲಿನ್ಯಕ್ಕೆ ಸಂಬಂಧಿಸಿದ್ದು

ಆರೋಗ್ಯ ಮಾಪನ ಮತ್ತು ಮೌಲ್ಯಮಾಪನ ಸಂಸ್ಥೆ (ಐಎಚ್‌ಎಂಇ) ನಡೆಸಿದ ವಿಶ್ಲೇಷಣೆಯ ಪ್ರಕಾರ, ವಾಯು ಮಾಲಿನ್ಯವು ದೆಹಲಿಗೆ ಅತ್ಯಂತ ಮಾರಕ ಆರೋಗ್ಯ ಸಮಸ್ಯೆಯಾಗಿ ಮುಂದುವರೆದಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಬೊಜ್ಜುಗಿಂತ ಹೆಚ್ಚಿನ ಜೀವಗಳನ್ನು...

ಕನ್ನಡ ವಿರೋಧಿ ಚಟುವಟಿಕೆ: ಎಂಇಎಸ್ ನಿಷೇಧಕ್ಕೆ ಗಂಭೀರ ಚರ್ಚೆ: ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸ ದಿನದಂದೆ ನಾಡ ವಿರೋಧಿ ಘೋಷಣೆ ಹಾಕಿದ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ನಗರದಲ್ಲಿ ಶನಿವಾರ ರಾಜ್ಯೋತ್ಸವ...

ದೆಹಲಿಯನ್ನು ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಿ: ಕೇಂದ್ರಕ್ಕೆ ಬಿಜೆಪಿ ಸಂಸದನ ಒತ್ತಾಯ

ರಾಷ್ಟ್ರ ರಾಜಧಾನಿ ದೆಹಲಿಯನ್ನು ಮಹಾಭಾರತ ಯುಗದಲ್ಲಿ ಪಾಂಡವರು ಸ್ಥಾಪಿಸಿದರು ಎಂದು ನಂಬಲಾದ ಪ್ರಾಚೀನ ನಗರದ ಹೆಸರಾದ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಕೇಂದ್ರ ಗೃಹ ಸಚಿವ...

ಗುಜರಾತ್ ಮರ್ಯಾದೆಗೇಡು ಹತ್ಯೆ: ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವಕನ ತಂದೆ ಕೊಲೆ

ಗುಜರಾತ್‌ನ ನರೋಲ್‌ನಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಅಂತರ್ಜಾತಿ ವಿವಾಹದಿಂದ ಕೋಪಗೊಂಡ ವಧುವಿನ ಕುಟುಂಬವು ಆಕೆಯ 60 ವರ್ಷದ ದಲಿತ ಮಾವನನ್ನು ಕೊಂದ ಆರೋಪವಿದೆ. ಪೊಲೀಸರು ಕೊಲೆ ಪ್ರಕರಣ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ)...