Homeಮುಖಪುಟನರೇಗ ಕಾರ್ಮಿಕರಿಗೆ ದುಡಿಮೆಯ ಹಣ ತಲುಪಿಸುವಲ್ಲಿ ವಿಳಂಬ: ಸಂಶೋಧನಾ ವರದಿ

ನರೇಗ ಕಾರ್ಮಿಕರಿಗೆ ದುಡಿಮೆಯ ಹಣ ತಲುಪಿಸುವಲ್ಲಿ ವಿಳಂಬ: ಸಂಶೋಧನಾ ವರದಿ

ದುಡಿಮೆಯ ಹಣ ಸಿಗದವರಲ್ಲಿ 70% ಜನರಿಗೆ ಹಣ ತಲಪದೆ ಇರುವುದಕ್ಕೆ ಕಾರಣ ಕೂಡಾ ತಿಳಿದಿಲ್ಲ

- Advertisement -
- Advertisement -

ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಪಾವತಿ ವಿಳಂಬವಾಗುತ್ತಿದೆ, ಕಾರ್ಮಿಕರು ತಮ್ಮ ದುಡಿಮೆಯ ಹಣವನ್ನು ಪಡೆಯಲು ಕಷ್ಟಪಡುತ್ತಿದ್ದಾರೆ, ಎಷ್ಟೋ ಜನಕ್ಕೆ ಈ ಹಣ ಕೊನೆಯ ಹಂತದಲ್ಲಿ ಸರಿಯಾಗಿ ತಲುಪದೆ ವಾಪಾಸಾಗುತ್ತಿದೆ, ದುಡಿಮೆಯ ಹಣ ಸಿಗದವರಲ್ಲಿ 70% ಜನರಿಗೆ ಹಣ ತಲಪದೆ ಇರುವುದಕ್ಕೆ ಕಾರಣ ಕೂಡಾ ತಿಳಿದಿಲ್ಲ ಹೀಗೆ ಹತ್ತು ಹಲವು ಸಂಗತಿಗಳನ್ನು ಬಿಚ್ಚಿಡುತ್ತದೆ ಇತ್ತೀಚೆಗಿನ ಸಂಶೋಧನಾ ವರದಿ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(MNREGA)ಯ ಈ ಯೋಜನೆಯಡಿ ಭಾರತದ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ವರ್ಷಕ್ಕೆ 100 ದಿನಗಳ ಉದ್ಯೋಗವನ್ನು ಒದಗಿಸುತ್ತದೆ. ಕೇಂದ್ರದ ಈ ಜನಪ್ರಿಯ ಯೋಜನೆಯಿಂದ ಹಳ್ಳಿಯಿಂದ ಕೆಲಸ ಹುಡುಕಿ ನಗರಕ್ಕೆ ವಲಸೆ ಬರುವ ಅನಿಶ್ಚಿತತೆ ಸೇರಿದಂತೆ ನಿರುದ್ಯೋಗ ಸಮಸ್ಯೆಗೆ ಕೂಡಾ ತುಸು ಪರಿಹಾರ ಸಿಕ್ಕಿತ್ತು. ಈ ಯೋಜನೆಯಡಿ ದುಡಿದವರಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ) ಉಪಕ್ರಮದಡಿಯಲ್ಲಿ ಭಾರತ ಸರ್ಕಾರವು ಪರಿಹಾರವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ.

ಇದನ್ನೂ ಓದಿ:ಉದ್ಯೋಗ ಖಾತ್ರಿ ಕೆಲಸಕ್ಕೆ ಕತ್ತರಿ, ರೊಕ್ಕಾ ಇಲ್ರಿ, ಜೀವನ ತ್ರಾಸರೀ 

ಈ ಕಾರ್ಮಿಕರ ಬಗ್ಗೆ ಲಿಬ್‌ಟೆಕ್ ಇಂಡಿಯಾ ಸಂಸ್ಥೆ, ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಅನುದಾನದಿಂದ ಸಮೀಕ್ಷೆಯನ್ನು ನಡೆಸಿದ್ದು “ಲೆಂತ್‌ ಆಫ್‌ ದಿ ಲಾಸ್ಟ್ ಮೈಲ್- ನರೇಗ ಪಾವತಿಯಲ್ಲಿನ ವಿಳಂಬ ಮತ್ತು ಅಡಚಣೆಗಳು” ಎಂಬ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆ 2018 ರ ಸಪ್ಟೆಂಬರ್‌ ಮತ್ತು ನವೆಂಬರ್‌ ನಡುವೆ ಆಂಧ್ರಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನಗಳಲ್ಲಿ ಒಟ್ಟು 1947 ನರೇಗ ಕಾರ್ಮಿಕರನ್ನು ಸಮೀಕ್ಷೆಯಲ್ಲಿ ಒಳಗೊಂಡಿದೆ.

ಸರ್ಕಾರ ಪಾವತಿಸುವ ಹಣವನ್ನು ಪಡೆಯಲು ಬ್ಯಾಂಕು, ಗ್ರಾಹಕ ಸೇವಾಕೇಂದ್ರ, ಇತರ ವ್ಯವಹಾರ ಕೇಂದ್ರ, ಅಂಚೆ ಕಚೇರಿ ಸೇರಿದಂತೆ ಎಟಿಎಂಗಳಲ್ಲಿ ಉದ್ಯೋಗಿಗಳು ಪಡುವ ಕಷ್ಟಗಳ ಬಗ್ಗೆ ಕೂಡಾ ಸಮೀಕ್ಷ ನಡೆಸಲಾಗಿದೆ. ಒಟ್ಟಾರೆಯಾಗಿ, ಪರಿಹಾರ ವಿತರಣೆಯ ಸಮಯದಲ್ಲಿ, ಆಂಧ್ರ ಪ್ರದೇಶದ ಕಾರ್ಮಿಕರು ಕಡಿಮೆ ಕಷ್ಟಗಳನ್ನು ಅನುಭವಿಸಿದರೆ, ಜಾರ್ಖಂಡ್‌‌ನಲ್ಲಿರುವವರು ಹೆಚ್ಚು ಕಷ್ಟಗಳನ್ನು ಎದುರಿಸುತ್ತಾರೆ ಎಂದು ಸಮೀಕ್ಷೆಯು ತಿಳಿಸುತ್ತದೆ.

ಮೂರು ರಾಜ್ಯಗಳಲ್ಲಿ ಆಂಧ್ರಪ್ರದೇಶದಲ್ಲಿ ಮಾತ್ರ ಅಂಚೆ ಕಚೇರಿಗಳನ್ನು ಬಳಕೆ ಮಾಡುತ್ತಿದ್ದು, ಅಲ್ಲಿನ ಸೇವೆಗಳ ಗುಣಮಟ್ಟದಲ್ಲಿದ್ದು ಕಾರ್ಮಿಕರು ಹೆಚ್ಚು ತೃಪ್ತರಾಗಿದ್ದಾರೆ. ಮೂರೂ ರಾಜ್ಯಗಳಲ್ಲಿರುವ ಗ್ರಾಮೀಣ ಬ್ಯಾಂಕುಗಳಲ್ಲೇ ಹೆಚ್ಚು ಜನದಟ್ಟಣೆ ಇರುತ್ತವೆ. ಬ್ಯಾಂಕುಗಳು ತಮ್ಮ ಪಂಚಾಯತ್‌ನಿಂದ ದೂರದಲ್ಲಿರುವುದು ಕಾರ್ಮಿಕರಿಗೆ ಹಣ ಪಡೆಯುವುದು ತ್ರಾಸದಾಯಕವಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಕಾರ್ಮಿಕರು ತಮ್ಮ ವೇತನವನ್ನು ಪಡೆಯಲು ಅನೇಕ ಸಾರಿ ಅಲೆದಾಡಬೇಕಾಗುತ್ತದೆ.

ಇದನ್ನೂ ಓದಿ: ಜುಲೈ ತಿಂಗಳೊಂದರಲ್ಲೇ 50 ಲಕ್ಷ ಉದ್ಯೋಗಗಳು ನಷ್ಟ: CMIE

ಜಾರ್ಖಂಡ್‌‌ನಲ್ಲಿ 42% ಮತ್ತು ರಾಜಸ್ಥಾನದಲ್ಲಿ 38% ಜನರು ಬ್ಯಾಂಕುಗಳಿಂದ ತಮ್ಮ ವೇತನವನ್ನು ಪಡೆಯಲು 4 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಇದಕ್ಕೆ ವಿರುದ್ಧವಾಗಿ, ಇದು ಆಂಧ್ರಪ್ರದೇಶದಲ್ಲಿ ಕೇವಲ 2% ಜನರಿಗಷ್ಟೇ ಆಗುತ್ತದೆ. ಒಟ್ಟಾರೆಯಾಗಿ, ಅಂದಾಜು 45% ಜನರು ತಮ್ಮ ಹಣ ಪಡೆಯಲು ಬ್ಯಾಂಕ್‌ಗೆ ಅನೇಕ ಬಾರಿ ಭೇಟಿ ನೀಡಬೇಕಾಗುತ್ತದೆ.

ಗ್ರಾಹಕ ಸೇವಾ ಕೇಂದ್ರ ಹಾಗೂ ಇತರ ವ್ಯವಹಾರ ಕೇಂದ್ರಗಳು ಬ್ಯಾಂಕಿಗಿಂತಲೂ ಉತ್ತಮ ಪರ್ಯಾಯವಾಗಿ ಕಾಣಿಸಿಕೊಂಡಿದ್ದರೂ, ಅಂದಾಜು 40% ಜನರು ಬಯೋ ಮೆಟ್ರಿಕ್ ವೈಫಲ್ಯದಿಂದಾಗಿ ಅನೇಕ ಬಾರಿ ಅಲ್ಲಿಗೆ ಭೇಟಿ ನೀಡಬೇಕಾಗುತ್ತದೆ. ಈ ಕೇಂದ್ರಗಳಲ್ಲಿ ಪಾಸ್‌ಬುಕ್ ಅಪ್ಡೇಟ್ ಸೌಲಭ್ಯವನ್ನು ಹೊಂದಿಲ್ಲ. ಇದಕ್ಕೆ ಹೋಲಿಸಿದರೆ, ಆಂದ್ರ ಪ್ರದೇಶದಲ್ಲಿ ಅಂಚೆ ಖಾತೆಗಳನ್ನು ಹೊಂದಿರುವ ಜನರು ತಮ್ಮ ಪ್ರತಿ ವಹಿವಾಟಿಗೆ ಪಾಸ್‌ಬುಕ್‌ಗಳನ್ನು ನವೀಕರಿಸುತ್ತಾರೆ. ಆಂಧ್ರ ಪ್ರದೇಶದಲ್ಲಿ ಗ್ರಾಹಕ ಸೇವಾ ಕೇಂದ್ರದಲ್ಲಿ ಹಣ ಪಡೆದಾಗ ರಶೀದಿಗಳನ್ನು ಪಡೆದರೆ, ಜಾರ್ಖಂಡ್ ಮತ್ತು ರಾಜಸ್ಥಾನ್‌ಗಳಲ್ಲಿ ರಶೀದಿಗಳನ್ನು ವಿರಳವಾಗಿ ನೀಡಲಾಗುತ್ತದೆ.

ಈ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಕೆಲವು ಕಾರ್ಮಿಕರಿಂದ ಅಲ್ಲಿ ವಹಿವಾಟು ನಡೆಸಲು ಶುಲ್ಕ ಪಡೆಯುತ್ತಾರೆ. ಜಾರ್ಖಂಡ್‌ನಲ್ಲಿ ಇದು ಅತ್ಯಧಿಕವಾಗಿದ್ದು, ಅಲ್ಲಿ 45% ಜನರಿಗೆ ಶುಲ್ಕ ವಿಧಿಸಲಾಗುತ್ತದೆ. ಇದರಾಚೆಗೂ ಕಾರ್ಮಿಕರು ಹೆಚ್ಚು ನಂಬಿಕೆ ಉಳಿಸಿರುವ ಸಂಸ್ಥೆಯಾಗಿ ಬ್ಯಾಂಕುಗಳು ಉಳಿದಿವೆ ಎಂದು ಸಮೀಕ್ಷಯು ಉಲ್ಲೇಖಿಸಿದೆ.

ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು – ಡಾ. ಬಿ.ಸಿ.ಬಸವರಾಜ್

 

ನರೇಗ
PC: PTI

ಆಧಾರ್ ಆಧಾರಿತ ಪಾವತಿ ಮತ್ತು ಕೇಂದ್ರೀಕರಣ ವ್ಯವಸ್ಥೆಯಿಂದಾಗಿ ಕಾರ್ಮಿಕರಿಗೆ ಕೆಲವೊಮ್ಮೆ ತಮ್ಮ ವೇತನ ಎಲ್ಲಿ ಬರುತ್ತದೆ ಎಂಬ ಮಾಹಿತಿಯಾಗಲೀ ಮತ್ತು ಅವರ ಪಾವತಿಗಳನ್ನು ತಿರಸ್ಕರಿಸುವುದರ ಬಗ್ಗೆ ಸ್ವಲ್ಪವು ಸುಳಿವು ಹೊಂದಿರುವುದಿಲ್ಲ ಎಂದು ಸಮೀಕ್ಷೆಯು ಹೇಳುತ್ತದೆ. ಸರಿಯಾದ ಖಾತೆ ಸಂಖ್ಯೆಗಳು ಇಲ್ಲದಿರುವುದು ಹಾಗೂ ಈ ಸಂಖ್ಯೆಗಳಿಗೆ ಆಧಾರ್‌‌ ಮ್ಯಾಪಿಂಗ್‌‌ನ ತಾಂತ್ರಿಕ ಅಡಚಣೆಯಿಂದಾಗಿ ಇವರ ಪಾವತಿಯನ್ನು ತಿರಸ್ಕರಿಸಲಾಗುತ್ತಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಜುಲೈ 2020 ರಂತೆ, ಕಳೆದ ಐದು ವರ್ಷಗಳಲ್ಲಿ, ಸುಮಾರು ರೂ. 4,800 ಕೋಟಿ ಮೌಲ್ಯದ ಪಾವತಿಗಳನ್ನು ಭಾರತದಾದ್ಯಂತ ತಿರಸ್ಕರಿಸಲಾಗಿದೆ ಮತ್ತು ಸುಮಾರು 1,274 ಕೋಟಿ ರೂ.ಗಳನ್ನು ಕಾರ್ಮಿಕರಿಗೆ ಪಾವತಿಸಲು ಬಾಕಿ ಇದೆ. ಒಟ್ಟಾರೆ ಬ್ಯಾಂಕಿಂಗ್ ಬಗ್ಗೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಇವರಲ್ಲಿ ಜಾಗೃತಿ ಕಡಿಮೆಯಾಗಿದೆ. ಈ ಎಲ್ಲಾ ಅನಾನುಕೂಲತೆಗಳ ಹೊರತಾಗಿಯೂ ಕಾರ್ಮಿಕರು ಬ್ಯಾಂಕ್‌ಗಳಿಗೆ ತಮ್ಮ ಆದ್ಯತೆ ನೀಡುತ್ತಾರೆ. ಸಂಬಳ ಪಡೆಯುವಲ್ಲಿ ತೊಂದರೆ ಆದವರಲ್ಲಿ ಕೇವಲ 28% ಜನರಷ್ಟೇ ದೂರು ನೀಡುತ್ತಾರೆ ಎಂದು ಸಮೀಕ್ಷೆ ತಿಳಿಸುತ್ತದೆ. ಬಹುತೇಕ ಮಂದಿ ಕಾರ್ಮಿಕರಿಗೆ ಮೌಖಿಕ ದೂರು ನೀಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಕೂಡ ವರದಿ ತಿಳಿಸಿದೆ.

ಇದನ್ನೂ ಓದಿ: ಮಹಿಳಾ ರೈತರ ಹಿತದೃಷ್ಟಿಗೆ ಮಾರಕವಾದ ಕೃಷಿ ಕಾಯ್ದೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...